ಶುಕ್ರವಾರದ ಪಂಚಾಂಗ, ಭವಿಷ್ಯ: ನಿಮಗಿಂದು ಅನಿರೀಕ್ಷಿತ ಲಾಭ, ಅಚ್ಚರಿಯ ದಿನ
ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Published : February 27, 2026 at 5:01 AM IST
ಪಂಚಾಂಗ
ದಿನಾಂಕ : 27-02-2026
ವಾರ : ಶುಕ್ರವಾರ
ಸಂವತ್ಸರ : ವಿಶ್ವವಸು
ಆಯನ : ಉತ್ತರಾಯಣ
ಪಕ್ಷ : ಶುಕ್ಲ
ತಿಥಿ : ಏಕಾದಶಿ
ನಕ್ಷತ್ರ : ಆದ್ರ
ಸೂರ್ಯೋದಯ : ಮುಂಜಾನೆ 06:17 ಗಂಟೆಗೆ
ಅಮೃತ ಕಾಲ : ಬೆಳಗ್ಗೆ 08:04 ರಿಂದ 09:33ರ ವರೆಗೆ
ದುರ್ಮುಹೂರ್ತ : ಬೆಳಗ್ಗೆ 08:59 ರಿಂದ 09:47 & ಮಧ್ಯಾಹ್ನ 03:23 ರಿಂದ 04:11ರ ತನಕ
ರಾಹುಕಾಲ : ಬೆಳಗ್ಗೆ 11:02 ರಿಂದ 12:30ರ ವರೆಗೆ
ಸೂರ್ಯಾಸ್ತ : ಸಂಜೆ 06:29 ಗಂಟೆಗೆ
ರಾಶಿ ಭವಿಷ್ಯ
ಮೇಷ : ಇಂದು ಯಾವುದೇ ದಿನದಂತೆ ಒಪ್ಪಬಲ್ಲ ದಿನವಾಗಿದೆ. ನೀವು ನಿಮ್ಮಲ್ಲಿ ಏನಿದೆಯೋ ಅದರಿಂದ ಸಂತೃಪ್ತರಾಗುತ್ತೀರಿ. ಅಲ್ಲದೆ, ನೀವು ಏನು ಬಯಸುತ್ತೀರಿ ಎಂದು ಯೋಜಿಸಿದ್ದೀರಿ ಮತ್ತು ಅದರತ್ತ ಹೊರಳುತ್ತೀರಿ. ಪ್ರಣಯದ ಜೊತೆ ಆಸಕ್ತಿದಾಯಕವಾಗಬಹುದು ಅಥವಾ ಅದು ವಿವಾದಕ್ಕೆ ಎಡೆ ಮಾಡಿಕೊಡಬಹುದು; ನೀವು ಅದನ್ನು ನಿರ್ಧರಿಸಬೇಕು.
ವೃಷಭ : ನಿಮ್ಮ ಕಾರ್ಯದೊತ್ತಡದಿಂದ ಕೊಂಚ ಬಿಡುವು ಪಡೆದು ಕೊಂಚ ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ. ಆದ್ದರಿಂದ, ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನು ವಿನೋದ ತುಂಬಿದ ಸಂಜೆಗೆ ಮತ್ತು ನಂತರ ಡಿನ್ನರ್ ಹಾಗೂ ತಡರಾತ್ರಿಯ ಚಲನಚಿತ್ರಕ್ಕೆ ಕೊಂಡೊಯ್ಯುತ್ತೀರಿ. ಬಿಸಿ, ಮಸಾಲೆ ಮತ್ತು ಸ್ವಾದಿಷ್ಟ ತಿನಿಸು ತಿನ್ನುವ ಬಯಕೆ ನಿಮಗೆ ಒಳ್ಳೆಯದನ್ನೇ ತರುತ್ತದೆ. ಆದ್ದರಿಂದ ಮುನ್ನುಗ್ಗಿರಿ ಆನಂದಿಸಿರಿ.
ಮಿಥುನ : ಇಂದು ನೀವು ಸಂಪೂರ್ಣ ಚೈತನ್ಯ ಮತ್ತು ಅತ್ಯಂತ ಉತ್ಸಾಹದಲ್ಲಿರುತ್ತೀರಿ. ನೀವು ವಿಷಯಗಳನ್ನು ಸಕಾರಾತ್ಮಕತೆ ಬೆಳಕಲ್ಲಿ ನೋಡುತ್ತೀರಿ ಅದು ನಿಮ್ಮನ್ನು ಯಶಸ್ಸಿನತ್ತ ನಡೆಯಲು ನೆರವಾಗುತ್ತದೆ. ನೀವು ಸಂಪೂರ್ಣ ಮುಕ್ತವಾಗಿ ಕಾರ್ಯ ನಿರ್ವಹಿಸಲು ಶಕ್ತರಾಗುತ್ತೀರಿ, ಆದ್ದರಿಂದ ನಿಮಗೆ ಇಷ್ಟವಾಗುವ ವಿಷಯಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಅತ್ಯಂತ ಒತ್ತಡವಿರಬಹುದು, ಆದರೆ ಅದು ಶಾಂತಿಯುತ ಮತ್ತು ಪುರಸ್ಕಾರಯುತ ಫಲಿತಾಂಶಗಳನ್ನು ನೀಡುತ್ತದೆ.
ಕರ್ಕಾಟಕ : ನಿಮ್ಮ ಮನಸ್ಥಿತಿ ಅಥವಾ ಮನಸ್ಸು ಅವಿಶ್ರಾಂತ ಮತ್ತು ಕೆರಳಿಸುವಂತಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳು ನಿಮ್ಮ ಮನೆಬಾಗಿಲು ತಟ್ಟುತ್ತವೆ, ಆದ್ದರಿಂದ ತಾಳ್ಮೆ ಇರಲಿ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿರಿ. ಈ ಧೈರ್ಯ ನಿಮ್ಮನ್ನು ಅಗೋಚರವಾದ ಯಶಸ್ಸಿನತ್ತ ಮುನ್ನಡೆಸುತ್ತದೆ. ಮುಂಗೋಪದ ಮನೋಭಾವದ ಮನಸ್ಸುಗಳು ಪ್ರತಿಕೂಲತೆಯನ್ನು ಎದುರಿಸಲು ಕಷ್ಟಪಡಬಹುದು.
ಸಿಂಹ : ಇಂದು ನಿಮ್ಮ ಆತ್ಮವಿಶ್ವಾಸ ಅತ್ಯಂತ ಹೆಚ್ಚಾಗಿದೆ. ನೀವು ಕೆಲಸದಲ್ಲಿ ಬಹಳ ಮಹತ್ವದ ನಿರ್ಧಾರಗಳನ್ನು ದೃಢವಾಗಿ ತೆಗೆದುಕೊಳ್ಳುತ್ತೀರಿ. ಇಂದು ಕೆಲಸ ಸುಸೂತ್ರವಾಗುವುದನ್ನು ಕಾಣುತ್ತೀರಿ ಮತ್ತು ಯಶಸ್ಸ ನಿಮ್ಮನ್ನು ಅನುಸರಿಸುತ್ತದೆ.
ಕನ್ಯಾ : ಬಿಡುವು ತೆಗೆದುಕೊಂಡು ನಿಮ್ಮೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅನುಕೂಲಕರ. ನೀವು ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ವಿರೋಧ ಎದುರಿಸುತ್ತೀರಿ. ಪರಿಸ್ಥಿತಿಗಳನ್ನು ನಿಯಂತ್ರಣದಲ್ಲಿಡಲು ತಾಳ್ಮೆಯ ಮುಖವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ಬೆಳವಣಿಗೆಯಾಗುತ್ತದೆ.
ತುಲಾ : ಕ್ಷುಲ್ಲಕ ವಿಷಯಗಳ ಕುರಿತು ನೀವು ತಲೆ ಕೆಡಿಸಿಕೊಳ್ಳುವುದು ಅಥವಾ ಆತಂಕಗೊಳ್ಳುವುದು ಅಗತ್ಯವಿಲ್ಲ. ಒತ್ತಡ ನಿವಾರಿಸಲು ಪ್ರಯತ್ನಿಸುವಾಗ ಧ್ಯಾನ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ನೀವು ಅತಿಯಾದ ಕೆಲಸದ ಒತ್ತಡಕ್ಕೆ ಸಿಲುಕಬಹುದು. ಆದ್ದರಿಂದ ಕೆಲಸದಲ್ಲಿ ಅಥವಾ ಮತ್ತಾವುದರಲ್ಲೇ ಆಗಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಅನನುಕೂಲಗಳನ್ನು ಅಳೆದು ತೂಗಿರಿ.
ವೃಶ್ಚಿಕ : ಇಂದು ಕೆಲಸ ಅತಿಯಾಗಿರುತ್ತದೆ. ನೀವು ಇಂದು ಅತಿಯಾದ ಕಾರ್ಯದೊತ್ತಡ ಮತ್ತು ಜವಾಬ್ದಾರಿಗಳ ನಡುವೆ ಸಿಲುಕಿಕೊಳ್ಳುತ್ತೀರಿ. ಸಂಜೆ ನಿಮಗೆ ಹಗುರ ಹಾಗೂ ಶಾಂತಯುತವಾಗಿರಬಹುದು. ಮಿತ್ರರೊಂದಿಗೆ ಕಳೆದ ಕಾಲ ನವೋತ್ಸಾಹ ನೀಡುತ್ತದೆ.
ಧನು : ನಿಮ್ಮ ಪ್ರೀತಿ ಚಲನೆಯಲ್ಲಿರುವಂತೆ ಕಾಣುತ್ತಿದೆ. ನೀವು ಪ್ರಣಯದ ಅಥವಾ ತಾರೆಗಳ ಪ್ರಭಾವದಲ್ಲಿದ್ದೀರಿ ಮತ್ತು ಆದ್ದರಿಂದ ನೀವು ಸ್ಮಾರ್ಟ್ ವ್ಯಕ್ತಿಯನ್ನು ಸೆಳೆಯಬಹುದು. ಆದರೆ, ಅತ್ಯಂತ ಜಾಗರೂಕರಾಗಿರಿ ಮತ್ತು ನಿಮ್ಮ ಪ್ರೀತಿಯ ಆಸಕ್ತಿಯನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ತಪ್ಪಿಸಿ.
ಮಕರ : ನಿಮ್ಮ ದಿನಚರಿ ಅತ್ಯಂತ ಒತ್ತಡದಲ್ಲಿದೆ ಮತ್ತು ನೀವು ದಿನದ ಅಂತ್ಯಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬರಿದಾಗುತ್ತೀರಿ. ಹೊರಗಡೆ ಸ್ಪರ್ಧಾತ್ಮಕ ಜಗತ್ತು ಇದೆ, ಆದ್ದರಿಂದ ಅತ್ಯಂತ ಜಾಗರೂಕತೆ ವಹಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಕಾಲೆಳೆಯಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಜಾಣ್ಮೆಯಿಂದಿರಿ ಮತ್ತು ನಿಮ್ಮನ್ನು ಕೆಳಕ್ಕೆಳೆಯಲು ಪ್ರಯತ್ನಿಸಿದವರಿಗೆ ಎಲ್ಲವನ್ನೂ ಹಿಂದಿರುಗಿಸಿ ನೀಡಿ.
ಕುಂಭ : ಶೈಕ್ಷಣಿಕ ವಿಷಯಕ್ಕೆ ಬಂದರೆ ನಿಮಗೆ ಅಸಾಧಾರಣ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಡೈನಮೈಟ್ ನಂತೆ ಕಾರ್ಯ ನಿರ್ವಹಿಸುತ್ತೀರಿ ಮತ್ತು ನಿಮ್ಮ ಸುತ್ತಲಿನ ಬಹುತೇಕರನ್ನು ಪ್ರೇರೇಪಿಸುತ್ತೀರಿ. ನಿಮ್ಮ ಇಮೇಜ್ ಕುರಿತು ಎಚ್ಚರವಾಗಿರಿ, ಅತಿಯಾದ ಮಹತ್ವಾಕಾಂಕ್ಷೆಗೆ ಬೀಳಬೇಡಿ. ಜನರ ಕುರಿತಾಗಿ ನಮ್ರ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಿ.
ಮೀನ : ದಣಿವಿರದೆ ಹಾಗೂ ಅತ್ಯಂತ ಕಠಿಣ ಪರಿಶ್ರಮಪಡುವವರಿಗೆ, ಇದು ಅತ್ಯುತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸದಲ್ಲಿ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ತರುತ್ತೀರಿ. ದೇವರ ಆಶೀರ್ವಾದ ಯಶಸ್ಸಿಗೆ ದಾರಿಯಾಗುತ್ತದೆ, ಆದ್ದರಿಂದ ಶ್ರಮವಹಿಸಿ ಕೆಲಸ ಮಾಡಿ ಮತ್ತು ವೈಫಲ್ಯಗಳಿಂದ ಕಂಗೆಡಬೇಡಿರಿ.

