ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ: ಕೇರಳ - ಕರ್ನಾಟಕದ ನಡುವೆ ಭಾಷಾ ಗುದ್ದಾಟ
ಕೇರಳ ಮತ್ತು ಕರ್ನಾಟಕದ ನಡುವೆ ಭಾಷಾ ಸಮಸ್ಯೆ ಏರ್ಪಟ್ಟಿದೆ. ಗಡಿ ಭಾಗದಲ್ಲಿನ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಮಾಡಲು ಅಲ್ಲಿನ ಸರ್ಕಾರ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

Published : January 10, 2026 at 7:58 PM IST
ಕಾಸರಗೋಡು (ಕೇರಳ): ಕರ್ನಾಟಕ ಮತ್ತು ಕೇರಳದ ನಡುವೆ ಹಗ್ಗಜಗ್ಗಾಟ ಜೋರಾಗಿದೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಮೊದಲ ಭಾಷೆಯಾಗಿ ಬಳಸಲು ಭಾಷಾ ಮಸೂದೆ- 2025 ತರಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.
ಕೇರಳ ಸರ್ಕಾರವು ಪ್ರಸ್ತಾಪಿಸಿದ ಶಾಸನ ಮತ್ತು ಭಾಷಾ ಅಲ್ಪಸಂಖ್ಯಾತರು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಅದರ ಪರಿಣಾಮಗಳ ಮೇಲೆ ಈ ವಿವಾದ ಕೇಂದ್ರೀಕೃತವಾಗಿದೆ. ಇದು ಎರಡೂ ರಾಜ್ಯಗಳ ನಾಯಕರಿಂದ ಹೇಳಿಕೆ- ಪ್ರತಿ ಹೇಳಿಕೆಗಳು ದಾಖಲಾಗುತ್ತಿವೆ.
ಮಸೂದೆಯನ್ನು ಟೀಕಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಕೇರಳ ಕಾನೂನು ಸಚಿವ ಪಿ. ರಾಜೀವ್ ಟೀಕಿಸಿದರು. ಮಸೂದೆಯು ತಮಿಳು ಮತ್ತು ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆಗಳಲ್ಲಿ ಅಧ್ಯಯನ ಮಾಡಲು ಮತ್ತು ಅವು ಪ್ರಚಲಿತದಲ್ಲಿರುವ ಪ್ರದೇಶಗಳಲ್ಲಿ ಈ ಭಾಷೆಗಳಲ್ಲಿ ಅಧಿಕೃತ ಸಂವಹನಗಳೊಂದಿಗೆ ಅಧ್ಯಯನ ಮಾಡಲು ಅವಕಾಶ ನೀಡುವ ಗುರಿಯನ್ನು ಹೊಂದಿದೆ. ಭಾಷಾ ವೈವಿಧ್ಯತೆಯ ಬಗ್ಗೆ ಸೂಕ್ಷ್ಮತೆ ಪ್ರತಿಬಿಂಬಿಸುವ ಮೂಲಕ ಅಂತಹ ಪ್ರದೇಶಗಳ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ಐಚ್ಛಿಕವಾಗಿ ಅಧ್ಯಯನ ಮಾಡಲು ಮಸೂದೆಯು ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.
ಹೊಸ ಮಸೂದೆ ಬಗ್ಗೆ ಕಳವಳ ಬೇಡ: ಹೊಸ ಮಸೂದೆಯು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತದೆ. ರಾಜ್ಯದ ಅಧಿಕೃತ ಭಾಷೆಯಾಗಿರುವ ಮಲಯಾಳಂಗೆ ಯಾವುದೇ ಬೆದರಿಕೆ ಇರುವುದಿಲ್ಲ. ಹೊಸ ಮಸೂದೆಯ ಹಳೆಯ ಕರಡನ್ನು ಅವಲಂಬಿಸಿರುವುದರಿಂದ ಕರ್ನಾಟಕ ಮುಖ್ಯಮಂತ್ರಿಯ ಕಳವಳಗಳು ಆಧಾರರಹಿತವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕವು, ಕೇರಳದ ಕಾಸರಗೋಡಿನಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಯ ಬಗ್ಗೆ ಇನ್ನೂ ಆತಂಕದಲ್ಲಿದೆ. ಗಡಿ ಜಿಲ್ಲೆಯಲ್ಲಿ ಸುಮಾರು 169 ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಂದಾಜಿಸಿದೆ. ಹೊಸ ಮಸೂದೆಯು ಈ ಶಾಲೆಗಳ ಮೇಲೆ ಪರಿಣಾಮ ಬೀರಬಹುದು ಭೀತಿ ಹೊಂದಿದೆ. ಆ ಶಾಲೆಗಳಲ್ಲಿ ಕನ್ನಡ ಬಳಕೆಯನ್ನು ದುರ್ಬಲಗೊಳಿಸಬಹುದು, ಕಾಸರಗೋಡಿನಲ್ಲಿ ವಾಸಿಸುವ ಕನ್ನಡ ಭಾಷಿಕರ ಭಾಷಾ ಹಕ್ಕುಗಳಿಗೆ ಬೆದರಿಕೆ ಹಾಕಬಹುದು ಎಂಬುದು ಕರ್ನಾಟಕದ ವಾದವಾಗಿದೆ.
ರಾಜ್ಯಪಾಲರ ಭೇಟಿ: ಪ್ರಸ್ತಾವಿತ ಮಸೂದೆಯು ಭಾಷಾ ಸ್ವಾತಂತ್ರ್ಯವನ್ನು ಅತಿಕ್ರಮಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಶಾಸನವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕೇರಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕಾಸರಗೋಡಿನಲ್ಲಿ ವಿವಿಧ ಸಂಘಟನೆಗಳು ಭೇಟಿ ಮಾಡಿವೆ. ಕನ್ನಡ ಸಂಘಟನೆಗಳು ಮಸೂದೆಯ ವಿರುದ್ಧ ಪ್ರತಿಭಟನೆಗಳಿಗೆ ಸಿದ್ಧತೆ ನಡೆಸಿವೆ. ಕನ್ನಡ ಮಾಧ್ಯಮ ಶಿಕ್ಷಣವನ್ನು ರಕ್ಷಿಸಲು ಬಿಜೆಪಿ ಕೂಡ ಪ್ರತಿಭಟನೆಗೆ ಸಜ್ಜಾಗಿದೆ.
ಬಿಜೆಪಿಯ ಕೋಯಿಕ್ಕೋಡ್ ವಲಯ ಅಧ್ಯಕ್ಷ ಅಡ್ವ ಶ್ರೀಕಾಂತ್ ಅವರು, ಸ್ಥಳೀಯ ಶಾಸಕರು ಭಾಷಾ ಅಲ್ಪಸಂಖ್ಯಾತರ ವಿಷಯದಲ್ಲಿ ಮಧ್ಯಪ್ರವೇಶಿಸಿಲ್ಲ. ಕೇರಳ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾದಾಗ ಮಂಜೇಶ್ವರಂ ಶಾಸಕರು ಗೈರುಹಾಜರಾಗಿದ್ದರು. ಕೇರಳ ಸರ್ಕಾರ ತನ್ನ ನಿರ್ಧಾರವನ್ನು ಪುನರ್ವಿಮರ್ಶಿಸಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ. ಇದು ಕನ್ನಡ ಭಾಷೆಯ ಮಹತ್ವವನ್ನು ಕುಗ್ಗಿಸಬಹುದು ಎಂಬ ಭೀತಿಯಿದೆ ಎಂದಿದ್ದಾರೆ.
ಹೊಸ ಶಾಸನವು ಶಾಲೆಗಳಲ್ಲಿ ಕನ್ನಡ ಮತ್ತು ಮಲಯಾಳಂ ಬಳಕೆಯನ್ನು ಕುಗ್ಗಿಸಲಿದೆ ಎಂದು ಎರಡೂ ರಾಜ್ಯಗಳ ಭಾಷಾ ತಜ್ಞರು ಎಚ್ಚರಿಸಿದ್ದಾರೆ. 1 ರಿಂದ 10 ನೇ ತರಗತಿಯವರೆಗೆ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯವಾಗಿದೆ. ಇದು ಗಡಿ ಭಾಗದಲ್ಲಿ ಜಾರಿ ಮಾಡಿದರೆ, ಕನ್ನಡದ ಸ್ಥಾನಮಾನ ದುರ್ಬಲವಾಗುತ್ತದೆ. ಬಾಲ್ಯದಿಂದಲೂ ಕನ್ನಡ ಕಲಿಯುತ್ತಿರುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇವುಗಳನ್ನೂ ಓದಿ:

