ETV Bharat / bharat

'ನಾನು ಪ್ರಾಮಾಣಿಕ'; ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಯಾದ ಬಳಿಕ ಕೇಜ್ರಿವಾಲ್ ಮೊದಲ ಪ್ರತಿಕ್ರಿಯೆ​!

ಆಮ್​ ಆದ್ಮಿ ಪಕ್ಷದ ಪ್ರಮುಖ ಐದು ನಾಯಕರನ್ನು ಜೈಲಿಗೆ ಹಾಕುವ ಮೂಲಕ ಪಕ್ಷವನ್ನು ಮುಗಿಸಲು ಯೋಜಿಸಿದೆ. ಆದರೆ, ಸತ್ಯವೂ ಅಂತಿಮವಾಗಿ ಗೆಲ್ಲುತ್ತದೆ ಎಂದು ನಾವು ಮೊದಲಿನಿಂದ ಹೇಳುತ್ತಾ ಬಂದಿದ್ದೇವೆ ಎಂದು ಭಾವುಕರಾದರು.

kejriwal-breaks-down-after-court-discharges-him-in-delhi-excise-policy-case-says-i-am-kattar-imandaar
ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ (ANI)
author img

By ETV Bharat Karnataka Team

Published : February 27, 2026 at 1:46 PM IST

2 Min Read
Choose ETV Bharat

ನವದೆಹಲಿ: ನಾನು ಮತ್ತು ಮನೀಶ್​ ಸಿಸೋಡಿಯಾ ಇಬ್ಬರು ಪ್ರಮಾಣಿಕರು ಎಂದು ಎಎಪಿ ಸಂಚಾಲಕ, ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಶುಕ್ರವಾರ ರೋಸ್​ ಅವೆನ್ಯೂ ಕೋರ್ಟ್ ಖುಲಾಸೆಗೊಂಡ ಬಳಿಕ ಮಾಧ್ಯಮಗಳಿಗೆ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾದೇಶದಲ್ಲಿ ಅತಿ ದೊಡ್ಡ ರಾಜಕೀಯ ಪಿತೂರಿಯನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಮ್​ ಆದ್ಮಿ ಪಕ್ಷದ ಪ್ರಮುಖ ಐದು ನಾಯಕರನ್ನು ಜೈಲಿಗೆ ಹಾಕುವ ಮೂಲಕ ಪಕ್ಷವನ್ನು ಮುಗಿಸಲು ಯೋಜಿಸಿದೆ. ಆದರೆ, ಸತ್ಯವೂ ಅಂತಿಮವಾಗಿ ಗೆಲ್ಲುತ್ತದೆ ಎಂದು ನಾವು ಮೊದಲಿನಿಂದ ಹೇಳುತ್ತಾ ಬಂದಿದ್ದೇವೆ ಎಂದರು.

ನಾನು ಭ್ರಷ್ಟನಲ್ಲ. ನ್ಯಾಯಾಲಯ ಕೇಜ್ರಿವಾಲ್​ ಮತ್ತು ಮನೀಶ್​ ಸಿಸೋಡಿಯಾ ಪ್ರಯಾಣಿಕರು ಎಂದಿದೆ. ಇಂದು ಕೋರ್ಟ್​ ಈ ಪ್ರಕರಣದಲ್ಲಿ ನಮ್ಮನ್ನು ಖುಲಾಸೆಗೊಳಿಸಿದೆ. ಯಾವಾಗಲೂ ಸತ್ಯಕ್ಕೆ ಜಯ. ಭಾರತದ ಕಾನೂನು ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದರು.

ಮನೀಶ್​ ಸಿಸೋಡಿಯಾ ಕೂಡ ನ್ಯಾಯಾಲಯದ ನಿರ್ಧಾರವನ್ನು ಪ್ರಶಂಸಿದ್ದು, ಸತ್ಯವೂ ಜಯಿಸುತ್ತದೆ. ಇಂದು ಮತ್ತೊಮ್ಮೆ ಸತ್ಯವೇ ಗೆದ್ದಿದೆ. ನಾನು ಈ ದಿನ ಅಂಬೇಡ್ಕರ್​ ಅವರ ದೂರದೃಷ್ಟಿ ಚಿಂತನೆ ಮತ್ತು ಸಂವಿಧಾನದ ರಚನೆ ಬಗ್ಗೆ ಹೆಮ್ಮೆ ಹೊಂದಿದ್ದೇನೆ. ಮೋದಿ ಮತ್ತು ಅವರ ಪಕ್ಷ ಮತ್ತು ಇತರ ಅವರ ಎಲ್ಲಾ ಏಜೆನ್ಸಿಗಳು ನಮ್ಮನ್ನು ಅಪ್ರಮಾಣಿಕರು ಎಂದು ಸಾಬೀತು ಮಾಡಲು ಹೋದರು. ಆ ಎಲ್ಲಾ ಪ್ರಯತ್ನಗಳ ಹೊರತಾಗಿ ಇಂದು ನಾವು ಪ್ರಮಾಣಿಕರು ಎಂದು ನ್ಯಾಯಾಲಯ ತಿಳಿಸಿದೆ ಎಂದರು.

ದೆಹಲಿ ಅಬಕಾರಿ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದದ್​ ಕೇಜ್ರಿವಾಲ್​ ಮತ್ತು ಡಿಸಿಎಂ ಮನೀಶ್​ ಸಿಸೋಡಿಯಾ ಪಿತೂರಿ ಪಾತ್ರವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಆರೋಪಗಳು ನ್ಯಾಯಾಂಗ ಪರಿಶೀಲನೆಯಲ್ಲಿ ವಿಫಲವಾಗಿವೆ ಮತ್ತು ಮನೀಶ್ ಸಿಸೋಡಿಯಾ ಅವರ ಕಡೆಯಿಂದ ಯಾವುದೇ ಕ್ರಿಮಿನಲ್ ಉದ್ದೇಶ ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಆರೋಪಗಳು ನ್ಯಾಯಾಂಗ ಪರಿಶೀಲನೆಯಲ್ಲಿ ವಿಫಲವಾಗಿವೆ. ಮನೀಶ್ ಸಿಸೋಡಿಯಾ ಅವರ ಕಡೆಯಿಂದ ಯಾವುದೇ ಕ್ರಿಮಿನಲ್ ಉದ್ದೇಶ ಕಂಡುಬಂದಿಲ್ಲ ಎಂದು ಅವರನ್ನು ಪ್ರಕರಣದಿಂದ ಖುಲಾಸೆ ಮಾಡಿದೆ.

ಈ ತೀರ್ಪನ್ನು ಕೇಜ್ರಿವಾಲ್​ ಪತ್ನಿ ಸುನೀತಾ ಕೂಡ ಸ್ವಾಗತಿಸಿದ್ದು, ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇವುಗಳನ್ನೂ ಓದಿ :

ದೆಹಲಿ ಅಬಕಾರಿ ನೀತಿ ಪ್ರಕರಣ; ಕವಿತಾ ವಿಚಾರಣೆಗೆ ಹಾಜರಾಗುತ್ತಿಲ್ಲ, ಸುಪ್ರೀಂಗೆ ಇಡಿ ವಿವರಣೆ

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾರನ್ನು ಖುಲಾಸೆಗೊಳಿಸಿದ ನ್ಯಾಯಾಲಯ: ಸತ್ಯಕ್ಕೆ ಜಯ ಎಂದ ಸುನಿತಾ ಕೇಜ್ರಿವಾಲ್​