ETV Bharat / bharat

OSM ವಿವಾದ; ಸಿಬಿಎಸ್​ಇ ಚೇರ್ಮನ್​, ಕಾರ್ಯದರ್ಶಿ ವರ್ಗಾವಣೆ

ಸಿಬಿಎಸ್​ಇ ಆನ್​ ಸ್ಕ್ರೀನ್​ ಮಾರ್ಕಿಂಗ್​ ವಿವಾದ ತೀವ್ರ ಚರ್ಚೆ ಆಗುತ್ತಿರುವ ಮಧ್ಯೆ ಸಿಬಿಎಸ್​ಇ ಚೇರ್ಮನ್​ ಮತ್ತು ಕಾರ್ಯದರ್ಶಿ ಅವರನ್ನು ಗರ್ವಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

CBSE
ಸಿಬಿಎಸ್​ಇ (IANS)
author img

By ETV Bharat Karnataka Team

Published : June 2, 2026 at 7:13 PM IST

2 Min Read
Choose ETV Bharat

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ನಡೆಸುತ್ತಿರುವ ಆನ್​ ಸ್ಕ್ರೀನ್​ ಮಾರ್ಕಿಂಗ್(OSM​) ವ್ಯವಸ್ಥೆ ಬಗ್ಗೆ ವಿವಾದ ಭುಗಿಲೆದ್ದಿದೆ. ಈ ನಡುವೆ ಮಂಗಳವಾರ (ಜೂ.2) ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಿಬಿಎಸ್​ಇ ಚೇರ್ಮನ್​ ಮತ್ತು ಕಾರ್ಯದರ್ಶಿ ಅವರನ್ನು ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಏಕಸದಸ್ಯ ತನಿಖಾ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿರುವ ಬಗ್ಗೆ ಕೇಂದ್ರ ಸರ್ಕಾರದ (ಸಂಪುಟ) ಹೆಚ್ಚುವರಿ ಕಾರ್ಯದರ್ಶಿ ಸತೇಂದ್ರ ಸಿಂಗ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CBSE Chairman Secretary Transferred
ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹೊರಡಿಸಿರುವ ಆದೇಶ ಪ್ರತಿ (ETV Bharat)

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಚೇರ್ಮನ್​ ರಾಹುಲ್​ ಸಿಂಗ್​ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಈ ಒಎಸ್​ಎಂ ವ್ಯವಸ್ಥೆಯ ಖರೀದಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಬಗ್ಗೆ ವ್ಯಕ್ತವಾಗಿರುವ ವಿವಾದ ಮತ್ತು ಕೇಳಿಬಂದಿರುವ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಏಕ ಸದಸ್ಯ ಸಮಿತಿಯನ್ನು ನೇಮಿಸಿರುವ ಬಗ್ಗೆ ಮಾಧ್ಯಮ ಪ್ರಕರಟಣೆಯಲ್ಲಿ ವಿವರಿಸಲಾಗಿದೆ.

ಕೇಂದ್ರ ಸಂಪುಟ ಕಾರ್ಯದರ್ಶಿ ಸತೇಂದ್ರ ಸಿಂಗ್​ ಅವರು ಇಂದು ಈ ಮಹತ್ವದ ಆದೇಶ ಹೊರಡಿಸಿದ್ದು, ಎಸ್​. ರಾಧಾ ಚೌಹಾಣ್​ ಅವರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ. OSM ಸಿಬಿಎಸ್​ಇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆಯಾಗಿದೆ. ಈ ಬಗ್ಗೆ ಕಮಿಟಿ ಸಮಗ್ರ ತನಿಖೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.

ಈ ಆದೇಶದ ಪ್ರಕಾರ, ಅಗತ್ಯವಿದ್ದರೆ ಇತರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಸಹಾಯ ಪಡೆಯಲು ಸಮಿತಿಗೆ ಅಧಿಕಾರ ನೀಡಲಾಗಿದೆ. ಸಾಮರ್ಥ್ಯ ಸುಧಾರಣಾ ಆಯೋಗವು ಈ ಸಮಿತಿಗೆ ಆಡಳಿತಾಧಿಕಾರಿಯ ಬೆಂಬಲವನ್ನು ನೀಡಲಿದ್ದು, ಒಂದು ತಿಂಗಳೊಳಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ತನ್ನ ವಿವರಣಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

ಏನಿದು ವಿವಾದ: ಸಿಬಿಎಸ್​ಇ 10 ಮತ್ತು 12 ನೇ ತರಗತಿಯ ಪರೀಕ್ಷಾ ಫಲಿತಾಂಶಗಳ ಘೋಷಣೆಯ ನಂತರ ಸಿಬಿಎಸ್‌ಇಯ ಮೌಲ್ಯಮಾಪನ ಮತ್ತು ಫಲಿತಾಂಶದ ಬಳಿಕ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಒಎಸ್​ಎಂ ತೀವ್ರ ಆತಂಕ ವ್ಯಕ್ತವಾಗಿದೆ. ಅಲ್ಲದೆ, ಹಲವು ಆರೋಪಗಳು ಕೇಳಿಬಂದಿವೆ. ಹಲವಾರು ವಿದ್ಯಾರ್ಥಿಗಳು ಮಂಡಳಿಯ ಆನ್‌ಲೈನ್ ಸೇವೆಗಳನ್ನು ಬಳಸುವಾಗ ಮಸುಕಾದ ಚಿತ್ರಗಳು, ಪುಟಗಳು ಕಾಣೆ ಆಗಿರುವುದು ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳನ್ನು ಎದುರಿಸಿದ ಬಗ್ಗೆ ಹೇಳಿಕೊಂಡಿದ್ದರು.

ಇವುಗಳನ್ನು ಓದಿ: