ಮುಂಬೈನ ಮಂಕಿ ಹಿಲ್ನಲ್ಲಿ ಭೂಕುಸಿತ: ಪುಣೆ- ಮುಂಬೈ ನಡುವೆ ಸಂಚರಿಸುವ 16 ರೈಲುಗಳ ಸಂಚಾರ ರದ್ದು
ಮುಂಬೈನಲ್ಲಿ ಭಾರಿ ಮಳೆಯಿಂದ ಮಂಕಿ ಹಿಲ್ನಲ್ಲಿ ಭೂಕುಸಿತ. ಪುಣೆ- ಮುಂಬೈ ನಡುವೆ ರೈಲು ಸಂಚಾರ ಬಂದ್.

Published : July 6, 2026 at 2:56 PM IST
ಮುಂಬೈ (ಮಹಾರಾಷ್ಟ್ರ): ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಬೈ ವಿಭಾಗದ ಮಂಕಿ ಹಿಲ್ನ ಘಾಟ್ ವಿಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಪುಣೆ ಮತ್ತು ಮುಂಬೈ ನಡುವೆ ಸಂಚರಿಸುವ 16 ರೈಲುಗಳ ಸಂಚಾರ ರದ್ದುಗೊಂಡಿದೆ. ಜೊತೆಗೆ, 6 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲು ಹಳಿಗಳಿಗೆ ಭಾರಿ ಹಾನಿ: ಮಳೆ ಮತ್ತು ಭೂಕುಸಿತದಿಂದ ರೈಲು ಹಳಿಗಳು ಹಾನಿಗೀಡಾಗಿವೆ. ಅವಶೇಷಗಳು ಬಿದ್ದ ಕಾರಣ ಸಂಚಾರವೇ ಬಂದ್ ಆಗಿದೆ. ಇಂದು ಮುಂಬೈನಿಂದ ಹೊರಡಬೇಕಿದ್ದ ಕೆಲವು ರೈಲುಗಳು ತಡವಾಗಿ ಮಾರ್ಗ ಬದಲಾವಣೆ ಮಾಡಿಕೊಂಡು ಸಂಚರಿಸಿವೆ.
ಯಾವೆಲ್ಲಾ ರೈಲು ಸಂಚಾರ ರದ್ದು
22105 /22106: ಸಿಎಸ್ಎಂಟಿ - ಪುಣೆ - ಸಿಎಸ್ಎಂಟಿ ಇಂದ್ರಯಾನಿ ಎಕ್ಸ್ಪ್ರೆಸ್
12169 /12170: ಪುಣೆ - ಸೋಲಾಪುರ - ಪುಣೆ ಇಂಟರ್ಸಿಟಿ ಎಕ್ಸ್ಪ್ರೆಸ್
12127 / 12128: ಸಿಎಸ್ಎಂಟಿ - ಪುಣೆ - ಸಿಎಸ್ಎಂಟಿ ಇಂಟರ್ಸಿಟಿ ಎಕ್ಸ್ಪ್ರೆಸ್
11007 /11008: ಸಿಎಸ್ಎಂಟಿ - ಪುಣೆ - ಸಿಎಸ್ಎಂಟಿ ಡೆಕ್ಕನ್ ಎಕ್ಸ್ಪ್ರೆಸ್
12123 / 12124: ಸಿಎಸ್ಎಂಟಿ - ಪುಣೆ - ಸಿಎಸ್ಎಂಟಿ ಡೆಕ್ಕನ್ ಕ್ವೀನ್ ಎಕ್ಸ್ಪ್ರೆಸ್
12125 / 12126: ಸಿಎಸ್ಎಂಟಿ - ಪುಣೆ - ಸಿಎಸ್ಎಂಟಿ ಪ್ರಗತಿ ಎಕ್ಸ್ಪ್ರೆಸ್
11009/ 11010: ಸಿಎಸ್ಎಂಟಿ - ಪುಣೆ - ಸಿಎಸ್ಎಂಟಿ ಸಿಂಹಗಡ್ ಎಕ್ಸ್ಪ್ರೆಸ್
11011: ಸಿಎಸ್ಎಂಟಿ - ಧುಲೆ ಎಕ್ಸ್ಪ್ರೆಸ್
11012: ಧುಲೆ - ಮುಂಬೈ ಧುಲೆ ಎಕ್ಸ್ಪ್ರೆಸ್
11009: ಮುಂಬೈ - ಪುಣೆ ಸಿನ್ಹಗಡ್ ಎಕ್ಸ್ಪ್ರೆಸ್
ತಾತ್ಕಾಲಿಕ ಸಂಚಾರ ಬಂದ್:
ಹೈದರಾಬಾದ್ನಿಂದ ಮುಂಬೈ ಹುಸೇನ್ ಸಾಗರ್ಗೆ ಸಂಪರ್ಕ ಕಲ್ಪಿಸುವ 22731 ಸಂಖ್ಯೆಯ ರೈಲು ತಾತ್ಕಾಲಿಕವಾಗಿ ಸಂಚಾರ ಬಂದ್ ಮಾಡಲಾಗಿದೆ. ಈ ರೈಲು ಮುಂಬೈ ಬದಲಿಗೆ ಪುಣೆ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ಅದೇ ರೈಲು ಪುಣೆಯಿಂದ 12701 ಸಂಖ್ಯೆಯಲ್ಲಿ ತೆರಳುತ್ತದೆ.
ಇನ್ನೊಂದು, 12701 ಸಂಖ್ಯೆಯ ಮುಂಬೈ - ಹೈದರಾಬಾದ್ ಹುಸೇನ್ ಸಾಗರ್ ಎಕ್ಸ್ಪ್ರೆಸ್ ರೈಲು ಮುಂಬೈ ನಿಲ್ದಾಣದ ಬದಲಿಗೆ ಪುಣೆ ನಿಲ್ದಾಣದಿಂದ ಹೈದರಾಬಾದ್ಗೆ ಹೊರಡುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಇವುಗಳನ್ನೂ ಓದಿ:
- ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ಮುಂಬೈ-ಗೋವಾ ಹೆದ್ದಾರಿ ಜಲಾವೃತ, ಸಂಚಾರ ಅಸ್ತವ್ಯಸ್ತ
- ಮುಂಬೈನಲ್ಲಿ ವರುಣಾರ್ಭಟ: ಕಟ್ಟಡ ಕುಸಿದು 6 ಜನ ಸಾವು; ಮಹಾರಾಷ್ಟ್ರದಲ್ಲಿ ಶಾಲೆಗೆ ರಜೆ ಘೋಷಣೆ
ಪಶ್ಚಿಮ ಕರಾವಳಿಯಲ್ಲಿ ತೀವ್ರ ಮಾನ್ಸೂನ್ ಮಳೆ ಮುನ್ಸೂಚನೆ ನೀಡಿದ IMD: ಕೊಂಕಣ ಮತ್ತು ಗೋವಾ, ಗುಜರಾತ್ ಪ್ರದೇಶ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಸೌರಾಷ್ಟ್ರ ಮತ್ತು ಕಚ್ನಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 6–7 ರ ಅವಧಿಯಲ್ಲಿ ಕೊಂಕಣ ಮತ್ತು ಗೋವಾ ಮತ್ತು ಗುಜರಾತ್ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಮನೆಯಿಂದ ಹೊರಡುವ ಮುನ್ನ ಎಲ್ಲ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದೆ.

