ETV Bharat / state

ಮುಂದೆ ನಾವೇ ಅಧಿಕಾರಕ್ಕೆ ಬಂದು ಗ್ರೇಟರ್ ಬೆಂಗಳೂರು ಕಾಯ್ದೆ ವಾಪಸ್: ಸಚಿವ ಸೋಮಣ್ಣ - V SOMANNA

ಮುಂದಿನ ಸಲ ಕಾಂಗ್ರೆಸ್ ಗೆಲ್ಲೋದಿಲ್ಲ, ನಾವೇ ಅಧಿಕಾರಕ್ಕೆ ಬರ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

BENGALURU  MINISTER V SOMANNA PRESS MEET  GREATER BENGALURU  ಬಿಬಿಎಂಪಿ ಚುನಾವಣೆ
ಸುದ್ದಿಗೋಷ್ಠಿಯಲ್ಲಿ ಸಚಿವ ಸೋಮಣ್ಣ (ETV Bharat)
author img

By ETV Bharat Karnataka Team

Published : April 26, 2025 at 10:05 AM IST

3 Min Read

ಬೆಂಗಳೂರು: "ಮುಂದಿನ ಸಲ ಕಾಂಗ್ರೆಸ್​​​​​​​​​ ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ" ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರೇಟರ್​​ ಬೆಂಗಳೂರು ಕಾಯ್ದೆ ವಾಪಸ್​​ ಪಡೆಯುವ ಸುಳಿವು ಕೊಟ್ಟಿದ್ದಾರೆ.

ನಗರದ ಪ್ರೆಸ್​​​ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ರೇಟರ್​​​​ ಬೆಂಗಳೂರು ಕಾಯ್ದೆಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಇಲ್ಲದಿರೋದನ್ನು ಇದೆ ಅಂತ ತೋರಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಗ್ರೇಟರ್​​ ಬೆಂಗಳೂರು ಕಾಯ್ದೆ ಮೂಲಕ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬ ಮಾಡಲು ಹೊರಟಿದ್ದಾರೆ. ಇವರು ಬಂದ ನಂತರ ಕನಿಷ್ಠ ರಸ್ತೆ ಗುಂಡಿ ಮುಚ್ಚಿಲ್ಲ, ಅಭಿವೃದ್ಧಿ ಇಲ್ವೇ ಇಲ್ಲ. ಇದೆಲ್ಲ ಡಿಕೆಶಿ ನಿರ್ಧಾರಗಳು. ಅವರೇ ಈ ಕಾಯ್ದೆ ತರಲು ಹೊರಟಿರುವ ಬಾಸ್​​. ಮುಂದಿನ ಸಲ ಇವರು ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸ್ತೇವೆ" ಎಂದು ತಿಳಿಸಿದರು.

ಎಲ್ಲವೂ ಒಂದೇ ಕಡೆ ಇದ್ದರೆ ಒಳ್ಳೆಯದು: ಎರಡು ಏರ್ ಪೋರ್ಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ. ದೆಹಲಿ ರಾಷ್ಟ್ರದ ರಾಜಧಾನಿ. ಅಲ್ಲಿಯ ಏರ್‌ಪೋರ್ಟ್‌ನಲ್ಲಿ ಎಲ್ಲ ಒಂದೇ ಕಡೆ ಇಲ್ವಾ?. ಟರ್ಮಿನಲ್ 1-2-3 ಎಲ್ಲಾ ಇಲ್ವಾ?. ಎಲ್ಲಾ ಒಂದೇ ಕಡೆ ಇದ್ದರೆ ಒಳ್ಳೆದಾಗುತ್ತದೆ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಿದ್ದಾಗ ಇಷ್ಟು ಅನುಭವ ಇರಲಿಲ್ಲ. ಈಗಿರುವ ಅನುಭವ ಆಗಿದ್ದರೆ ಕಥೆಯೇ ಬೇರೆ ಆಗೋದು" ಎಂದು ಸೂಚ್ಯವಾಗಿ ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಈ ವಿಚಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರ ಗಮನದಲ್ಲಿದೆ. ಈಗಾಗಲೇ ಅವರೂ ಕೂಡ ಇದರ ಸಭೆ ನಡೆಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ಮೆಟ್ರೋ ಯೋಜನೆ ಕೂಡಾ ಬರುತ್ತಿದೆ. ಇದರ ಜೊತೆ ರೈಲು ಸೇವೆಯೂ ಬೇಕಾ ಬೇಡವಾ ಅಂತ ಚರ್ಚೆ ಮಾಡುತ್ತೇವೆ. ಎರಡೆರಡು ಸಂಪರ್ಕ ಬೇಕಾ ಅಂತ ಪರಿಶೀಲನೆ ಮಾಡ್ತೇವೆ" ಎಂದು ಹೇಳಿದರು.

ಹೊಸ ಸಮೀಕ್ಷೆ ಮಾಡಲಿ: ಜಾತಿ ಜನಗಣತಿ ವರದಿ ವಿಚಾರವಾಗಿ ಮಾತನಾಡುತ್ತಾ, "ಈಗಿನ ವರದಿ ಪಾರದರ್ಶಕವಾಗಿ ಮಾಡಿಲ್ಲ. ರಾಜ್ಯದ ಜನರ ಭಾವನೆಗಳಿಗೆ ಈ ವರದಿ ನೋವು ತಂದಿದೆ. ಈ ವರದಿ ಮೂಲಕ ರಾಜ್ಯದ ಜನರ ಜತೆ ಸರ್ಕಾರ ಆಟ ಆಡುವ ಕೆಲಸ ಮಾಡೋದು ಬೇಡ. ಈ ವರದಿಗೆ ಕಾಂತರಾಜ್ ಅವರು ಸಹಿ ಹಾಕದೇ ಓಡಿ ಹೋದರು. ಇದು ಮಕ್ಕಿ‌ ಕಾ ಮಕ್ಕಿ ವರದಿ. ಸಿದ್ದರಾಮಯ್ಯ ಅವರು ವರದಿ ವಾಪಸ್ ಪಡೆದು ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲಿ" ಎಂದರು.

"ಸಿಎಂ ಸಿದ್ದರಾಮಯ್ಯ ಜೊತೆ ನಾವೆಲ್ಲ ಬೆಳೆದವರು. ಕಾಂತರಾಜು ಸಹಿಯೇ ಹಾಕದಿರುವ ವರದಿ. ಕರ್ನಾಟಕದ‌ ಜನರ ಭಾವನಾತ್ಮಕತೆ ಮೇಲೆ ಆಟ ಆಡೋದು‌ಬೇಡ. ಪ್ರತಿಸಾರಿ ಹೀಗೆ ಮುಂದೂಡುವ ಕೆಲಸ ಮಾಡುವ‌ ಬದಲು. ಈ ವರದಿಯನ್ನು ಕೈ ಬಿಟ್ಟು ಬೇರೆ ವರದಿ ಮಾಡಿ. ಹೊಸ ವರದಿ ಸಿದ್ದಪಡಿಸಿ ಜಾರಿಗೆ ತರುವಂತೆ" ಆಗ್ರಹಿಸಿದರು.

ನನ್ನ ಕೊನೆಯ ಇನ್ನಿಂಗ್ಸ್ ಇದು: "ನಾನು ಇಷ್ಟು ಕೆಲಸ ಮಾಡುತ್ತೇನೆ ಎಂದು ಕೊಂಡಿರಲಿಲ್ಲ. ನನ್ನ ಕೊನೆಯ ಇನ್ನಿಂಗ್ಸ್​ ಇದು. ಕೊನೆಯ ಇನಿಂಗ್ಸ್‌ನಲ್ಲಿ ಒಳ್ಳೆಯ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ROB-RUBಗಳ ನಿರ್ಮಾಣ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಚಿನ್ನದಂತಹ ಅಧಿಕಾರಿಗಳಿದ್ದಾರೆ. ಕೆಲಸ ಮಾಡಿಸಬೇಕು ಅಷ್ಟೇ" ಎಂದರು.

ಸಂಸತ್ ಭವನದಲ್ಲಿ ಬಸವ ಜಯಂತಿ: "ದೆಹಲಿಯ ಸಂಸತ್​ ಭವನದ ಆವರಣದಲ್ಲಿ ಬಸವ ಜಯಂತಿಯನ್ನು ಏಪ್ರಿಲ್​ 30 ರಂದು ಬೆಳಗ್ಗೆ 8 ಗಂಟೆಗೆ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕುಮಾರಸ್ವಾಮಿ, ಸಿ.ಆರ್.ಪಾಟೀಲ್, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಅಶ್ವಿನಿ ವೈಷ್ಣವ್ ಸೇರಿದಂತೆ ಹಿರಿಯ ಗಣ್ಯರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.

"ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸ ಸಂಸತ್​​ ಭವನದ ಮೇಲೆ ಬಸವಣ್ಣವನರ ವಚನ ಬರೆಸಿದ್ದಾರೆ. ಅವರ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ತತ್ವ ಬೇರೆ ಅಲ್ಲ, ಬಸವಣ್ಣನವರ "ಇವ ನಾರವ ಇವ ನಾರವ ಇವ ನಮ್ಮವ" ಎಂಬ ವಚನವನ್ನು ಹೋಲುತ್ತದೆ ಎಂದು ತಿಳಿಸಿದರು.

"ರಾಜ್ಯದ ಇತಿಹಾಸವನ್ನು ದೇಶಕ್ಕೆ ಮತ್ತು ಜಗತ್ತಿಗೆ ಪರಿಚಯಿಸಬೇಕಾಗಿದೆ. ಸಂಸತ್ ಭವನದಲ್ಲಿ ಬಸವ ಜಯಂತಿ ಆಚರಣೆಯು ಒಂದು ಸಣ್ಣ ಪ್ರಯತ್ನವಷ್ಟೇ. ಬೇರೆ ರಾಜ್ಯಗಳಲ್ಲಿ ಆಯಾ ನಾಯಕರ ಹೆಸರಿನ ವಿಶ್ವವಿದ್ಯಾಲಯಗಳಿವೆ. ಆದರೆ ಕರ್ನಾಟಕದಲ್ಲಿ ಬಸವಣ್ಣನವರ ಹೆಸರಿನ ಒಂದು ವಿಶ್ವವಿದ್ಯಾಲಯ ಇರಬೇಕು. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಟ್ಟರೆ ಸೂಕ್ತ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

"ಗುಲ್ಬರ್ಗಾ ವಿವಿಗೆ ಬಸವಣ್ಣ ಹೆಸರು ಇಡುವ ಪ್ರಸ್ತಾವನೆ ಜೆ.ಹೆಚ್. ಪಟೇಲ್ ಅವರ ಕಾಲದಲ್ಲೇ ಇತ್ತು. ಆದರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅದು ಆಗಲಿಲ್ಲ. ಇದುವರೆಗೆ ರಾಜ್ಯದ ಯಾವುದೇ ವಿವಿಗೆ ಬಸವಣ್ಣನ ಹೆಸರಿಟ್ಟಿಲ್ಲ. ಕಳೆದ 40 ವರ್ಷದ ಬೇಡಿಕೆ ಇದು. ಈಗಿನ ಸರ್ಕಾರ ಕಲಬುರ್ಗಿ ವಿವಿಗೆ ಬಸವಣ್ಣನ ಹೆಸರಿಡುವಂತೆ ಒತ್ತಾಯಿಸುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಕೆಆರ್‌ಎಸ್‌ ಕಾವೇರಿ ಆರತಿಗೆ 98 ಕೋಟಿ ಮೀಸಲು; ಡ್ಯಾಂ ಸ್ಥಳ ಪರಿಶೀಲಿಸಿದ ಡಿಸಿಎಂ

ಬೆಂಗಳೂರು: "ಮುಂದಿನ ಸಲ ಕಾಂಗ್ರೆಸ್​​​​​​​​​ ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ" ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರೇಟರ್​​ ಬೆಂಗಳೂರು ಕಾಯ್ದೆ ವಾಪಸ್​​ ಪಡೆಯುವ ಸುಳಿವು ಕೊಟ್ಟಿದ್ದಾರೆ.

ನಗರದ ಪ್ರೆಸ್​​​ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ರೇಟರ್​​​​ ಬೆಂಗಳೂರು ಕಾಯ್ದೆಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಇಲ್ಲದಿರೋದನ್ನು ಇದೆ ಅಂತ ತೋರಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಗ್ರೇಟರ್​​ ಬೆಂಗಳೂರು ಕಾಯ್ದೆ ಮೂಲಕ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬ ಮಾಡಲು ಹೊರಟಿದ್ದಾರೆ. ಇವರು ಬಂದ ನಂತರ ಕನಿಷ್ಠ ರಸ್ತೆ ಗುಂಡಿ ಮುಚ್ಚಿಲ್ಲ, ಅಭಿವೃದ್ಧಿ ಇಲ್ವೇ ಇಲ್ಲ. ಇದೆಲ್ಲ ಡಿಕೆಶಿ ನಿರ್ಧಾರಗಳು. ಅವರೇ ಈ ಕಾಯ್ದೆ ತರಲು ಹೊರಟಿರುವ ಬಾಸ್​​. ಮುಂದಿನ ಸಲ ಇವರು ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸ್ತೇವೆ" ಎಂದು ತಿಳಿಸಿದರು.

ಎಲ್ಲವೂ ಒಂದೇ ಕಡೆ ಇದ್ದರೆ ಒಳ್ಳೆಯದು: ಎರಡು ಏರ್ ಪೋರ್ಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ. ದೆಹಲಿ ರಾಷ್ಟ್ರದ ರಾಜಧಾನಿ. ಅಲ್ಲಿಯ ಏರ್‌ಪೋರ್ಟ್‌ನಲ್ಲಿ ಎಲ್ಲ ಒಂದೇ ಕಡೆ ಇಲ್ವಾ?. ಟರ್ಮಿನಲ್ 1-2-3 ಎಲ್ಲಾ ಇಲ್ವಾ?. ಎಲ್ಲಾ ಒಂದೇ ಕಡೆ ಇದ್ದರೆ ಒಳ್ಳೆದಾಗುತ್ತದೆ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಿದ್ದಾಗ ಇಷ್ಟು ಅನುಭವ ಇರಲಿಲ್ಲ. ಈಗಿರುವ ಅನುಭವ ಆಗಿದ್ದರೆ ಕಥೆಯೇ ಬೇರೆ ಆಗೋದು" ಎಂದು ಸೂಚ್ಯವಾಗಿ ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಈ ವಿಚಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರ ಗಮನದಲ್ಲಿದೆ. ಈಗಾಗಲೇ ಅವರೂ ಕೂಡ ಇದರ ಸಭೆ ನಡೆಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ಮೆಟ್ರೋ ಯೋಜನೆ ಕೂಡಾ ಬರುತ್ತಿದೆ. ಇದರ ಜೊತೆ ರೈಲು ಸೇವೆಯೂ ಬೇಕಾ ಬೇಡವಾ ಅಂತ ಚರ್ಚೆ ಮಾಡುತ್ತೇವೆ. ಎರಡೆರಡು ಸಂಪರ್ಕ ಬೇಕಾ ಅಂತ ಪರಿಶೀಲನೆ ಮಾಡ್ತೇವೆ" ಎಂದು ಹೇಳಿದರು.

ಹೊಸ ಸಮೀಕ್ಷೆ ಮಾಡಲಿ: ಜಾತಿ ಜನಗಣತಿ ವರದಿ ವಿಚಾರವಾಗಿ ಮಾತನಾಡುತ್ತಾ, "ಈಗಿನ ವರದಿ ಪಾರದರ್ಶಕವಾಗಿ ಮಾಡಿಲ್ಲ. ರಾಜ್ಯದ ಜನರ ಭಾವನೆಗಳಿಗೆ ಈ ವರದಿ ನೋವು ತಂದಿದೆ. ಈ ವರದಿ ಮೂಲಕ ರಾಜ್ಯದ ಜನರ ಜತೆ ಸರ್ಕಾರ ಆಟ ಆಡುವ ಕೆಲಸ ಮಾಡೋದು ಬೇಡ. ಈ ವರದಿಗೆ ಕಾಂತರಾಜ್ ಅವರು ಸಹಿ ಹಾಕದೇ ಓಡಿ ಹೋದರು. ಇದು ಮಕ್ಕಿ‌ ಕಾ ಮಕ್ಕಿ ವರದಿ. ಸಿದ್ದರಾಮಯ್ಯ ಅವರು ವರದಿ ವಾಪಸ್ ಪಡೆದು ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲಿ" ಎಂದರು.

"ಸಿಎಂ ಸಿದ್ದರಾಮಯ್ಯ ಜೊತೆ ನಾವೆಲ್ಲ ಬೆಳೆದವರು. ಕಾಂತರಾಜು ಸಹಿಯೇ ಹಾಕದಿರುವ ವರದಿ. ಕರ್ನಾಟಕದ‌ ಜನರ ಭಾವನಾತ್ಮಕತೆ ಮೇಲೆ ಆಟ ಆಡೋದು‌ಬೇಡ. ಪ್ರತಿಸಾರಿ ಹೀಗೆ ಮುಂದೂಡುವ ಕೆಲಸ ಮಾಡುವ‌ ಬದಲು. ಈ ವರದಿಯನ್ನು ಕೈ ಬಿಟ್ಟು ಬೇರೆ ವರದಿ ಮಾಡಿ. ಹೊಸ ವರದಿ ಸಿದ್ದಪಡಿಸಿ ಜಾರಿಗೆ ತರುವಂತೆ" ಆಗ್ರಹಿಸಿದರು.

ನನ್ನ ಕೊನೆಯ ಇನ್ನಿಂಗ್ಸ್ ಇದು: "ನಾನು ಇಷ್ಟು ಕೆಲಸ ಮಾಡುತ್ತೇನೆ ಎಂದು ಕೊಂಡಿರಲಿಲ್ಲ. ನನ್ನ ಕೊನೆಯ ಇನ್ನಿಂಗ್ಸ್​ ಇದು. ಕೊನೆಯ ಇನಿಂಗ್ಸ್‌ನಲ್ಲಿ ಒಳ್ಳೆಯ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ROB-RUBಗಳ ನಿರ್ಮಾಣ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಚಿನ್ನದಂತಹ ಅಧಿಕಾರಿಗಳಿದ್ದಾರೆ. ಕೆಲಸ ಮಾಡಿಸಬೇಕು ಅಷ್ಟೇ" ಎಂದರು.

ಸಂಸತ್ ಭವನದಲ್ಲಿ ಬಸವ ಜಯಂತಿ: "ದೆಹಲಿಯ ಸಂಸತ್​ ಭವನದ ಆವರಣದಲ್ಲಿ ಬಸವ ಜಯಂತಿಯನ್ನು ಏಪ್ರಿಲ್​ 30 ರಂದು ಬೆಳಗ್ಗೆ 8 ಗಂಟೆಗೆ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕುಮಾರಸ್ವಾಮಿ, ಸಿ.ಆರ್.ಪಾಟೀಲ್, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಅಶ್ವಿನಿ ವೈಷ್ಣವ್ ಸೇರಿದಂತೆ ಹಿರಿಯ ಗಣ್ಯರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.

"ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸ ಸಂಸತ್​​ ಭವನದ ಮೇಲೆ ಬಸವಣ್ಣವನರ ವಚನ ಬರೆಸಿದ್ದಾರೆ. ಅವರ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ತತ್ವ ಬೇರೆ ಅಲ್ಲ, ಬಸವಣ್ಣನವರ "ಇವ ನಾರವ ಇವ ನಾರವ ಇವ ನಮ್ಮವ" ಎಂಬ ವಚನವನ್ನು ಹೋಲುತ್ತದೆ ಎಂದು ತಿಳಿಸಿದರು.

"ರಾಜ್ಯದ ಇತಿಹಾಸವನ್ನು ದೇಶಕ್ಕೆ ಮತ್ತು ಜಗತ್ತಿಗೆ ಪರಿಚಯಿಸಬೇಕಾಗಿದೆ. ಸಂಸತ್ ಭವನದಲ್ಲಿ ಬಸವ ಜಯಂತಿ ಆಚರಣೆಯು ಒಂದು ಸಣ್ಣ ಪ್ರಯತ್ನವಷ್ಟೇ. ಬೇರೆ ರಾಜ್ಯಗಳಲ್ಲಿ ಆಯಾ ನಾಯಕರ ಹೆಸರಿನ ವಿಶ್ವವಿದ್ಯಾಲಯಗಳಿವೆ. ಆದರೆ ಕರ್ನಾಟಕದಲ್ಲಿ ಬಸವಣ್ಣನವರ ಹೆಸರಿನ ಒಂದು ವಿಶ್ವವಿದ್ಯಾಲಯ ಇರಬೇಕು. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಟ್ಟರೆ ಸೂಕ್ತ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

"ಗುಲ್ಬರ್ಗಾ ವಿವಿಗೆ ಬಸವಣ್ಣ ಹೆಸರು ಇಡುವ ಪ್ರಸ್ತಾವನೆ ಜೆ.ಹೆಚ್. ಪಟೇಲ್ ಅವರ ಕಾಲದಲ್ಲೇ ಇತ್ತು. ಆದರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅದು ಆಗಲಿಲ್ಲ. ಇದುವರೆಗೆ ರಾಜ್ಯದ ಯಾವುದೇ ವಿವಿಗೆ ಬಸವಣ್ಣನ ಹೆಸರಿಟ್ಟಿಲ್ಲ. ಕಳೆದ 40 ವರ್ಷದ ಬೇಡಿಕೆ ಇದು. ಈಗಿನ ಸರ್ಕಾರ ಕಲಬುರ್ಗಿ ವಿವಿಗೆ ಬಸವಣ್ಣನ ಹೆಸರಿಡುವಂತೆ ಒತ್ತಾಯಿಸುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಕೆಆರ್‌ಎಸ್‌ ಕಾವೇರಿ ಆರತಿಗೆ 98 ಕೋಟಿ ಮೀಸಲು; ಡ್ಯಾಂ ಸ್ಥಳ ಪರಿಶೀಲಿಸಿದ ಡಿಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.