ಚಾಮರಾಜನಗರ : ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಗುರುವಾರ (ಏಪ್ರಿಲ್) ಅಧಿಕಾರಿ ಮತ್ತು ಸಫಾರಿ ವಾಹನದ ನಡುವೆಯೇ ಹೆಜ್ಜೆ ಹಾಕುವ ಮೂಲಕ ಪ್ರವಾಸಿಗರನ್ನು ರೋಮಾಂಚಿತರಾಗುವಂತೆ ಮಾಡಿದ್ದಾನೆ.
ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೆ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೆ ದೂರ ಓಡದೆ ಹತ್ತಿರಕ್ಕೆ ಬರುತ್ತಿತ್ತು. ಅದೇ ರೀತಿ ಇಂದು ಭೀಮ ಎಂಬ ಹುಲಿಯು ಜೀಪಿನ ಮುಂದೆಯೇ ನಿರಾತಂಕವಾಗಿ ಹೆಜ್ಜೆ ಹಾಕಿದೆ. ಜೊತೆಗೆ, ತೀರಾ ಸನಿಹದಲ್ಲೇ ನೀರಿಗಿಳಿದು ರಿಲ್ಯಾಕ್ಸ್ಗೆ ಜಾರಿದ್ದನ್ನು ಕಂಡ ಪ್ರವಾಸಿಗರು ಫಿದಾ ಆಗಿದ್ದಾರೆ. ಹುಲಿಯ ಖದರ್ ನಡಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಂಡೀಪುರದ ಸಫಾರಿ ವಲಯದ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತದೆ. ಜೊತೆಗೆ, ಪ್ರವಾಸಿಗರನ್ನು ಕಂಡರೆ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ.

ಇದನ್ನೂ ಓದಿ : ಬಂಡೀಪುರದಲ್ಲಿ 4 ಮರಿಗಳೊಂದಿಗೆ ಹುಲಿ ವಾಕಿಂಗ್: ಅಪರೂಪದ ದೃಶ್ಯ ನೋಡಿ ಪ್ರವಾಸಿಗರು ಥ್ರಿಲ್- ವಿಡಿಯೋ - TIGER SPOTTED WITH FOUR CUBS