ETV Bharat / state

ಹಾವೇರಿ: ನಗರದಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ತಾಯಿ ಮಡಿಲಿಗೆ ಸೇರಿಸಿದ ಸಾಮಾಜಿಕ ಕಾರ್ಯಕರ್ತ - MOTHER AND DAUGHTER REUNION

ಮಾನಸಿಕ ಅಸ್ವಸ್ಥ ಯುವತಿಯನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.

MOTHER AND DAUGHTER REUNION
ಮಾನಸಿಕ ಅಸ್ವಸ್ಥೆಯನ್ನು ತಾಯಿ ಮಡಿಲಿಗೆ ಸೇರಿಸಿದ ಸಾಮಾಜಿಕ ಕಾರ್ಯಕರ್ತ (ETV Bharat)
author img

By ETV Bharat Karnataka Team

Published : June 15, 2025 at 9:58 PM IST

1 Min Read

ಹಾವೇರಿ: ನಗರದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ತಾಯಿಯ ಮಡಿಲಿಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ಮೂಲದ ಯುವತಿ ಮುಮ್ತಾಜ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಮುಮ್ತಾಜ್ ಗುರುವಾರ ಹಾವೇರಿ ನಗರದಲ್ಲಿ ಅಲೆದಾಡುತ್ತಿದ್ದನ್ನು ಕಂಡ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ಗೆ ಮಾಹಿತಿ ನೀಡಿದ್ದರು. ನಂತರ ಖಾದರ್, ಮಾನಸಿಕ ಅಸ್ವಸ್ಥ ಯುವತಿಯನ್ನು​ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ವೈದ್ಯರಿಗೆ ತೋರಿಸಿದ್ದರು. ಮಾನಸಿಕ ರೋಗ ತಜ್ಞೆ ಡಾ.ಲೀಲಾ ಯುವತಿಗೆ ಚಿಕಿತ್ಸೆ ನೀಡಿದ್ದರು.

ಸಾಮಾಜಿಕ ಕಾರ್ಯರ್ಕ ಅಬ್ದುಲ್ ಖಾದರ್ (ETV Bharat)

ನಂತರ ಅಬ್ದುಲ್ ಖಾದರ್​​, ಯುವತಿಯನ್ನು ತಮ್ಮ ಪೋಷಕರಿಗೆ ಸೇರಿಲು ಆಕೆಯ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್​ ಮತ್ತು ವಾಟ್ಯ್​ಆ್ಯಪ್​ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು, ಮುಮ್ತಾಜ್ ತಾಯಿಗೆ ಮಾಹಿತಿ ನೀಡಿದ್ದರು. ನಂತರ ಮುಮ್ತಾಜ್ ತಾಯಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ ಅನ್ನು ಸಂಪರ್ಕಿಸಿ ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು.

ಜಿಲ್ಲಾಸ್ಪತ್ರೆಯ ಮಹಿಳಾ ಸಾಂತ್ವನ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ ಅವರ ಸಮ್ಮುಖದಲ್ಲಿ ಯುವತಿಯನ್ನು ಆಕೆಯ ತಾಯಿಗೆ ಒಪ್ಪಿಸಲಾಯಿತು. ಮುಮ್ತಾಜ್​ಳನ್ನು ಕಂಡ ತಾಯಿಯ ಖುಷಿಗೆ ಪಾರವೇ ಇರಲಿಲ್ಲ, ನಂತರ ಮಗಳನ್ನು ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: 9ನೇ ವಯಸ್ಸಿನಲ್ಲಿ ಕಾಣೆ, 38ನೇ ವಯಸ್ಸಿನಲ್ಲಿ ಪತ್ತೆ!; ಗೂಗಲ್ ಮ್ಯಾಪ್ ಸಹಾಯದಿಂದ 29 ವರ್ಷಗಳ ಬಳಿಕ ತನ್ನ ಮನೆ ಸೇರಿದ ವ್ಯಕ್ತಿ

ಹಾವೇರಿ: ನಗರದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ತಾಯಿಯ ಮಡಿಲಿಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ಮೂಲದ ಯುವತಿ ಮುಮ್ತಾಜ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಮುಮ್ತಾಜ್ ಗುರುವಾರ ಹಾವೇರಿ ನಗರದಲ್ಲಿ ಅಲೆದಾಡುತ್ತಿದ್ದನ್ನು ಕಂಡ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ಗೆ ಮಾಹಿತಿ ನೀಡಿದ್ದರು. ನಂತರ ಖಾದರ್, ಮಾನಸಿಕ ಅಸ್ವಸ್ಥ ಯುವತಿಯನ್ನು​ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ವೈದ್ಯರಿಗೆ ತೋರಿಸಿದ್ದರು. ಮಾನಸಿಕ ರೋಗ ತಜ್ಞೆ ಡಾ.ಲೀಲಾ ಯುವತಿಗೆ ಚಿಕಿತ್ಸೆ ನೀಡಿದ್ದರು.

ಸಾಮಾಜಿಕ ಕಾರ್ಯರ್ಕ ಅಬ್ದುಲ್ ಖಾದರ್ (ETV Bharat)

ನಂತರ ಅಬ್ದುಲ್ ಖಾದರ್​​, ಯುವತಿಯನ್ನು ತಮ್ಮ ಪೋಷಕರಿಗೆ ಸೇರಿಲು ಆಕೆಯ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್​ ಮತ್ತು ವಾಟ್ಯ್​ಆ್ಯಪ್​ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು, ಮುಮ್ತಾಜ್ ತಾಯಿಗೆ ಮಾಹಿತಿ ನೀಡಿದ್ದರು. ನಂತರ ಮುಮ್ತಾಜ್ ತಾಯಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ ಅನ್ನು ಸಂಪರ್ಕಿಸಿ ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು.

ಜಿಲ್ಲಾಸ್ಪತ್ರೆಯ ಮಹಿಳಾ ಸಾಂತ್ವನ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ ಅವರ ಸಮ್ಮುಖದಲ್ಲಿ ಯುವತಿಯನ್ನು ಆಕೆಯ ತಾಯಿಗೆ ಒಪ್ಪಿಸಲಾಯಿತು. ಮುಮ್ತಾಜ್​ಳನ್ನು ಕಂಡ ತಾಯಿಯ ಖುಷಿಗೆ ಪಾರವೇ ಇರಲಿಲ್ಲ, ನಂತರ ಮಗಳನ್ನು ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: 9ನೇ ವಯಸ್ಸಿನಲ್ಲಿ ಕಾಣೆ, 38ನೇ ವಯಸ್ಸಿನಲ್ಲಿ ಪತ್ತೆ!; ಗೂಗಲ್ ಮ್ಯಾಪ್ ಸಹಾಯದಿಂದ 29 ವರ್ಷಗಳ ಬಳಿಕ ತನ್ನ ಮನೆ ಸೇರಿದ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.