ETV Bharat / state

ಬೆಂಗಳೂರಿನಲ್ಲಿ ಬೀದಿ ಕಾಳಗ ಪ್ರಕರಣಗಳು ಹೆಚ್ಚಳ: ಇದರ ಹಿಂದಿನ ಕಾರಣಗಳೇನು? - ROAD RAGE

ರಸ್ತೆಯಲ್ಲಿ ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಅನವಶ್ಯಕವಾಗಿ ಜಟಾಪಟಿ ನಡೆಸಿ, ಅವಾಚ್ಯ ಶಬ್ದದಿಂದ ನಿಂದನೆ, ಹಲ್ಲೆ ಮಾಡಿ ವಾಹನಗಳನ್ನು ಹಾನಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ.

ROAD RAGE
ಬೆಂಗಳೂರಿನಲ್ಲಿ ಬೀದಿ ಕಾಳಗ (ETV Bharat)
author img

By ETV Bharat Karnataka Team

Published : April 29, 2025 at 8:26 PM IST

4 Min Read

ವಿಶೇಷ ವರದಿ: ಭರತ್​ ರಾವ್​

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಬೀದಿ ಕಾಳಗ (ರೋಡ್ ರೇಜ್) ಗಲಾಟೆ ಮಿತಿ ಮೀರುತ್ತಿದೆ. ಮಾತಿನ ಚಕಮಕಿಯಲ್ಲಿ ಕೊನೆಯಾಗುತ್ತಿದ್ದ ಸಂಘರ್ಷಗಳು ಇಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ. ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದ ಬಳಿಕವಂತೂ ವರದಿಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿವೆ.

ಇದಕ್ಕೆ ಪೂರಕವೆಂಬಂತೆ ಬೈಕ್ ಸವಾರನ ಮೇಲೆ ಐಎಎಫ್ ವಿಂಗ್ ಕಮಾಂಡರ್ ಹಲ್ಲೆ ಮಾಡಿದ್ದು, ರಾಷ್ಟ್ರದೆಲ್ಲೆಡೆ ಸುದ್ದಿಯಾಗಿತ್ತು. ವಿವಿಧ ಕಾರಣಗಳಿಂದ ರಸ್ತೆಯಲ್ಲಿ ಪರಸ್ಪರ ವ್ಯಕ್ತಿಗಳು ಬಡಿದಾಡಿಕೊಂಡು ನಂತರ ಸುಮ್ಮನಾಗುತ್ತಿದ್ದ ಕಾಲವೊಂದಿತ್ತು. ಇದೀಗ ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಅನವಶ್ಯಕವಾಗಿ ಜಟಾಪಟಿ ನಡೆಸಿ, ಅವಾಚ್ಯ ಶಬ್ದದಿಂದ ನಿಂದನೆ, ಹಲ್ಲೆ ಮಾಡಿ ವಾಹನಗಳನ್ನು ಹಾನಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆ ದಿನೇ ದಿನೇ ಬಿಗಡಾಯಿಸುತ್ತಿದೆ. ಟ್ರಾಫಿಕ್ ಜಾಮ್​ನಿಂದ ಕಿಲೋಮೀಟರ್ ಗಟ್ಟಲೇ ರಸ್ತೆಯಲ್ಲಿ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೆಚ್ಚು ಟ್ರಾಫಿಕ್ ಜಾಮ್, ಬೆರಳೆಣಿಕೆ ಕಿಲೋ ಮೀಟರ್​ ಗಳಷ್ಟು ತೆರಳಬೇಕಾದರೂ ಗಂಟೆಗಟ್ಟಲೇ ಪ್ರಯಾಣದಿಂದಾಗಿ ಒತ್ತಡಕ್ಕೊಳಗಾಗುವ ಸವಾರರು ಸಹ ಪ್ರಯಾಣಿಕರು ಅರಿವಿಲ್ಲದೆ ಸಣ್ಣಪುಟ್ಟ ತಪ್ಪು ಮಾಡಿದರೂ ಕೈ-ಕೈ ಮಿಲಾಸುವುದಕ್ಕೆ ಹಿಂದೆ-ಮುಂದು ನೋಡುತ್ತಿಲ್ಲ. ಇನ್ನೂ ಕೆಲವರು ಕುಡಿದ ಮತ್ತಿನಲ್ಲೋ ಅಥವಾ ಉದ್ದೇಶಪೂರ್ವಕವಾಗಿಯೇ ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಕಳೆದ ವಾರ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಬೈಕ್ ಸವಾರನನ್ನು ರಸ್ತೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ಕಾರಿಗೆ ಟಚ್ ಆಗಿದೆ ಎಂದು ಕ್ಷುಲ್ಲಕ ಕಾರಣವೊಡ್ಡಿ ದಾಳಿ ಮಾಡಿದ್ದ. ಬಳಿಕ ವಿಡಿಯೋ ಮಾಡಿ ಭಾಷೆ ವಿಚಾರಕ್ಕೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುಳ್ಳು ಹೇಳಿದ್ದ. ಘಟನೆ ನಡೆದ ಸ್ಥಳದ ಸಿಸಿಟಿವಿ ತುಣುಕು ಪರಿಶೀಲಿಸಿದಾಗ ಕಮಾಂಡರ್ ಅಸಲಿಯತ್ತು ಬೆಳಕಿಗೆ ಬಂದಿತ್ತು. ಈ ಬೆಳವಣಿಗೆಯು ರಾಷ್ಟ್ರದೆಲ್ಲೆಡೆ ಸುದ್ದಿಯಾಗಿತ್ತು.

ಬೀದಿ ಕಾಳಗಕ್ಕೆ ಕಾರಣವೇನು?: ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಎರಡನೇ ಹಂತದ ನಗರಗಳಲ್ಲಿಯೂ ರೋಡ್ ರೇಜ್ ಗಲಾಟೆಗಳು ವರದಿಯಾಗುತ್ತಿವೆ. ಬೆಂಗಳೂರು ನಗರದಲ್ಲಂತೂ ಪ್ರತಿದಿನ ಬೀದಿ ಕಾಳಗgಳು ಹೆಚ್ಚಾಗುತ್ತಿವೆ. ವರದಿಯಾಗುವ ಬಹುತೇಕ ಪ್ರಕರಣಗಳನ್ನು ಅವಲೋಕಿಸಿದಾಗ ಕ್ಷುಲ್ಲಕ ಕಾರಣಗಳಿಗಾಗಿ ಕಿಡಿಗೇಡಿಗಳು ಗಲಾಟೆ ಮಾಡಿರುವುದು ಗೊತ್ತಾಗಿದೆ. ಸಂಚಾರದಟ್ಟಣೆ ಒತ್ತಡ, ಮಾನಸಿಕ ಕಿರಿಕಿರಿ, ಆಕ್ರಮಣಕಾರಿ ವಾಹನ ಚಾಲನೆ, ಸ್ವಪ್ರತಿಷ್ಠೆ ಹಾಗೂ ವೈಯಕ್ತಿಕ ನ್ಯೂನತೆಗಳು ಬೀದಿ ಕಾಳಗಕ್ಕೆ ಕಾರಣವಾಗುತ್ತಿವೆ ಎಂದು ವರದಿಯಾಗಿದೆ.

ಟ್ರಾಫಿಕ್ ಜಾಮ್ ಕಿರಿಕಿರಿ: ಬೃಹತ್​ ಬೆಂಗಳೂರು ನಗರದ 1.5 ಕೋಟಿ ಜನರಿದ್ದು, 1.2 ಕೋಟಿ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರವಾಹನಗಳಾಗಿವೆ. ವಾಹನಗಳ ಸಂಖ್ಯೆ ಅಧಿಕವಾಗುತ್ತಿದ್ದಂತೆ ರಸ್ತೆ ಅಗಲೀಕರಣ ಸೇರಿದಂತೆ ಸುಗಮ ಸಂಚಾರಕ್ಕೆ ಒತ್ತು ಕೊಡದ ಪರಿಣಾಮ ವಿಶ್ವಮಟ್ಟದಲ್ಲಿ ಬೆಂಗಳೂರು ಟ್ರಾಫಿಕ್​ಗೆ ಕುಖ್ಯಾತಿ ಪಡೆದಿದೆ.

ಕೆಲವೇ ಕಿಲೋಮೀಟರ್ ಪ್ರಯಾಣಿಸಬೇಕಾದರೂ ಟ್ರಾಫಿಕ್ ಸುಳಿಯಲ್ಲಿ ಸಿಲುಕಿಬೇಕಿದೆ. ಟ್ರಾಫಿಕ್ ಜಾಮ್ ಬಿಸಿಗೆ ಒತ್ತಡಕ್ಕೆ ಒಳಗಾಗುವ ಸವಾರರು ಬೇಗ ಗಮ್ಯ ಸ್ಥಳಗಳಿಗೆ ತಲುಪಲು ರ್‍ಯಾಶ್ ಡ್ರೈವಿಂಗ್, ಅನಗತ್ಯ ಹಾರ್ನ್ ಮಾಡುವುದು, ಏಕಮುಖ ಸಂಚಾರ, ಮದ್ಯಪಾನ ಮಾಡಿ ವಾಹನ ಚಾಲನೆಗಳಿಂದಾಗಿ ಅನ್ಯ ವಾಹನ ಸವಾರರ ಮೇಲೆ ರಸ್ತೆಯಲ್ಲೆ ಮಾತಿನ ಚಕಮಕಿಗೆ ಇಳಿದು ಹಲ್ಲೆಗೆ ಕಾರಣರಾಗುತ್ತಾರೆ. ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಅನಗತ್ಯವಾಗಿ ವಾಹನಗಳನ್ನ ಹಿಂಬಾಲಿಸಿ ಅಪಘಾತದ ನೆಪವೊಡ್ಡಿ ಅಡ್ಡಗಟ್ಟಿ ಬೆದರಿಸಿ ಅಪರಾಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೌಟುಂಬಿಕ ಕಲಹ, ನಿರುದ್ಯೋಗ ಸೇರಿದಂತೆ ವೈಯಕಿಕ್ತ ಕಾರಣಗಳಿಂದ ಇನ್ನಿತರ ಮೇಲೆ ಸುಖಾಸುಮ್ಮನೆ ಜಗಳ ಮಾಡುವವರ ಸಂಖ್ಯೆ ಕಡಿಮೆಯಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸುತ್ತಾರೆ.

ಹೆಚ್ಚು ಕೋಪ ಹಾಗೂ ಅಕ್ರಮಣಕಾರಿ ನಡೆ: ಬೆಂಗಳೂರು ಮಾತ್ರವಲ್ಲದೆ, ದೇಶದ ಅನೇಕ ನಗರಗಳಲ್ಲಿಯೂ ರೋಡ್ ರೇಜ್ ಗಲಾಟೆ ಹೆಚ್ಚಾಗಿವೆ. ಸಮೀಕ್ಷೆಯೊಂದರ ಪ್ರಕಾರ, ಶೇ.70ರಷ್ಟು ಸವಾರರು ಕೋಪದಲ್ಲಿ ವಾಹನ ಚಲಾಯಿಸಿದರೆ ಶೇ.30ರಷ್ಟು ಮಂದಿ ಆಕ್ರಮಣಕಾರಿ ಪ್ರತಿಕ್ರಿಯೆಯಿಂದಾಗಿ ನಡುರಸ್ತೆಯಲ್ಲಿ ನಡೆಯುವ ಬೀದಿ ಕಾಳಗಕ್ಕೆ ಕಾರಣರಾಗುತ್ತಾರೆ ಎಂದು ತಿಳಿದುಬಂದಿದೆ. ದೈನಂದಿನ ಬದುಕಿನ ಜಂಜಾಟ, ವಿಪರೀತ ಸಂಚಾರ ದಟ್ಟಣೆಗೆ ಸವಾರರು ನಿತ್ಯ ಸಂಘರ್ಷಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸುಗಮ ಸಂಚಾರದಿಂದ ಶೇ.15ರಷ್ಟು ರೋಡ್ ರೇಜ್ ಗಲಾಟೆ ಕಡಿಮೆಯಾಗಿವೆ ಎಂದು ಸಮೀಕ್ಷೆ ಹೇಳಿದೆ.

ಮಾನಸಿಕ ಒತ್ತಡದಿಂದಲೋ, ಸಂಚಾರ ದಟ್ಟಣೆ ಕಿರಿಕಿರಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಗಲಿನಲ್ಲಿ ರೋಡ್ ರೇಜ್​ ಗಲಾಟೆಯಾದರೆ ರಾತ್ರಿ ವೇಳೆ ಇಂತಹ ಘಟನೆಗಳು ಹೆಚ್ಚು ತೀವ್ರವಾಗಿರಲಿವೆ. ಜನ- ವಾಹನ ದಟ್ಟಣೆಯಿಲ್ಲದಿರುವಾಗ ಕ್ಷುಲ್ಲಕ ಕಾರಣಗಳಿಗಾಗಿ ವಾಹನಗಳನ್ನು ಅಡ್ಡಗಟ್ಟುವ ಕಿಡಿಗೇಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ.

ಹಲ್ಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುವ ದೂರುಗಳನ್ನು ಆಧರಿಸಿ ಸತ್ಯಾಸತ್ಯತೆ ಅರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. 2024ರಲ್ಲಿ ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ 29 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಬರುವ ಘಟನೆಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಪದೇ ಪದೇ ಗಲಾಟೆ ಪ್ರಕರಣಗಳಲ್ಲಿ ಆರೋಪಿಗಳಾಗುವವರ ವಿರುದ್ಧ ರೌಡಿಶೀಟ್​ ತೆರೆಯಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ರೋಡ್ ರೇಜ್​ಗಳು:

  • ಏ.25 ಮಧ್ಯ ರಸ್ತೆಯಲ್ಲಿ ಚಾಲಕ ಆಟೋ ನಿಲ್ಲಿಸಿ, ಲಿಂಗರಾಜಪುರ ಅಂಡರ್ ಪಾಸ್ ಕಾರಿನ ಚಾಲಕನೊಂದಿಗೆ ದುರ್ವರ್ತನೆ.
  • ಏ.26 ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ತೆಗೆದು ಮಹಿಳೆಯಿಂದ ಯುವಕನಿಗೆ ಹಲ್ಲೆ, ಜೀವನ್ ಭೀಮಾನಗರದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ.
  • ಏ.21 ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ನಿಂದ ಹಲ್ಲೆ, ದೂರು-ಪ್ರತಿದೂರು ದಾಖಲು.
  • ಏ.21 ಹಾರ್ನ್ ಮಾಡಿದ್ದಕ್ಕೆ ಕಾರು ಅಡ್ಡಗಟ್ಟಿ ಆಟೋ ಚಾಲಕನಿಂದ ಅಸಭ್ಯ ವರ್ತನೆ, ಮಧ್ಯದ ಬೆರಳು ತೋರಿಸಿ ನಿಂದನೆ, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
  • 2024 ಡಿ.28ರಂದು ಕಾರಿನ ಬಾನೆಟ್​ಗೆ ಹತ್ತಿ ಕಾರಿನ ವಿಂಡ್ ಶೀಲ್ಡ್​ಗೆ ಒದ್ದು ಪುಂಡಾಟ ತೋರಿದ್ದ ಮೂವರು ಯುವಕರು.
  • 2024 ಆ.22 ಕಾರಿಗೆ ಟಚ್ ಮಾಡಿದ ಕಾರಣಕ್ಕಾಗಿ ಬೈಕ್ ಸವಾರನನ್ನು ಹಿಂಬಾಲಿಸಿ ಅಪಘಾತ ಎಸಗಿದ್ದ ಇಬ್ಬರು ಆರೋಪಿಗಳ ಬಂಧನ, ಚಿಕಿತ್ಸೆ ಫಲಕಾರಿಯಾಗದೆ ಡೆಲಿವರಿ ಬಾಯ್ ಮಹೇಶ್ ಸಾವು.

ರೋಡ್ ರೇಜ್​ಗೆ ಪ್ರಚೋದನೆಯಾಗುವ ಅಂಶಗಳು:

  • ನಗರದಲ್ಲಿ ಹೆಚ್ಚಾದ ಸಂಚಾರದಟ್ಟಣೆ
  • ಆಕ್ರಮಣಕಾರಿ ವಾಹನ ಚಾಲನೆ
  • ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ
  • ವೈಯಕ್ತಿಕ ಕಾರಣಗಳು

ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, "ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋ, ಫೋಟೋಗಳನ್ನು ಪ್ರಕಟಿಸುವ ಅಧಿಕಾರವಿದೆ. ಆದರೆ ಸಾರ್ವಜನಿಕ ವಲಯದಲ್ಲಿ ನಡೆಯುವ ಅಪರಾಧ ಕೃತ್ಯಗಳು, ರೋಡ್ ರೇಜ್ ಮತ್ತಿತರ ಸಂದರ್ಭಗಳಲ್ಲಿ ಆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಪೊಲೀಸರ ಗಮನಕ್ಕೆ ತಂದರೆ ಪ್ರಕರಣ ದಾಖಲಿಸಿಕೊಂಡು ತ್ವರಿತಗತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರನ ಮೇಲೆ ಹಲ್ಲೆ ನಡೆಸಿದ ಆರೋಪ: ವಿಂಗ್ ಕಮಾಂಡರ್ ಶಿಲಾದಿತ್ಯ ವಿರುದ್ಧ ಬಲವಂತದ ಕ್ರಮ ಬೇಡ : ಹೈಕೋರ್ಟ್

ಇದನ್ನೂ ಓದಿ: ಹಲ್ಲೆ ಆರೋಪ ಮಾಡಿದ್ದ ವಿಂಗ್ ಕಮಾಂಡರ್ ನಾಪತ್ತೆ: ಜಾಮೀನಿನ ಮೇಲೆ ಹೊರಬಂದ ಬೈಕ್ ಸವಾರ ಹೇಳಿದ್ದೇನು?

ವಿಶೇಷ ವರದಿ: ಭರತ್​ ರಾವ್​

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಬೀದಿ ಕಾಳಗ (ರೋಡ್ ರೇಜ್) ಗಲಾಟೆ ಮಿತಿ ಮೀರುತ್ತಿದೆ. ಮಾತಿನ ಚಕಮಕಿಯಲ್ಲಿ ಕೊನೆಯಾಗುತ್ತಿದ್ದ ಸಂಘರ್ಷಗಳು ಇಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ. ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದ ಬಳಿಕವಂತೂ ವರದಿಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿವೆ.

ಇದಕ್ಕೆ ಪೂರಕವೆಂಬಂತೆ ಬೈಕ್ ಸವಾರನ ಮೇಲೆ ಐಎಎಫ್ ವಿಂಗ್ ಕಮಾಂಡರ್ ಹಲ್ಲೆ ಮಾಡಿದ್ದು, ರಾಷ್ಟ್ರದೆಲ್ಲೆಡೆ ಸುದ್ದಿಯಾಗಿತ್ತು. ವಿವಿಧ ಕಾರಣಗಳಿಂದ ರಸ್ತೆಯಲ್ಲಿ ಪರಸ್ಪರ ವ್ಯಕ್ತಿಗಳು ಬಡಿದಾಡಿಕೊಂಡು ನಂತರ ಸುಮ್ಮನಾಗುತ್ತಿದ್ದ ಕಾಲವೊಂದಿತ್ತು. ಇದೀಗ ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಅನವಶ್ಯಕವಾಗಿ ಜಟಾಪಟಿ ನಡೆಸಿ, ಅವಾಚ್ಯ ಶಬ್ದದಿಂದ ನಿಂದನೆ, ಹಲ್ಲೆ ಮಾಡಿ ವಾಹನಗಳನ್ನು ಹಾನಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆ ದಿನೇ ದಿನೇ ಬಿಗಡಾಯಿಸುತ್ತಿದೆ. ಟ್ರಾಫಿಕ್ ಜಾಮ್​ನಿಂದ ಕಿಲೋಮೀಟರ್ ಗಟ್ಟಲೇ ರಸ್ತೆಯಲ್ಲಿ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೆಚ್ಚು ಟ್ರಾಫಿಕ್ ಜಾಮ್, ಬೆರಳೆಣಿಕೆ ಕಿಲೋ ಮೀಟರ್​ ಗಳಷ್ಟು ತೆರಳಬೇಕಾದರೂ ಗಂಟೆಗಟ್ಟಲೇ ಪ್ರಯಾಣದಿಂದಾಗಿ ಒತ್ತಡಕ್ಕೊಳಗಾಗುವ ಸವಾರರು ಸಹ ಪ್ರಯಾಣಿಕರು ಅರಿವಿಲ್ಲದೆ ಸಣ್ಣಪುಟ್ಟ ತಪ್ಪು ಮಾಡಿದರೂ ಕೈ-ಕೈ ಮಿಲಾಸುವುದಕ್ಕೆ ಹಿಂದೆ-ಮುಂದು ನೋಡುತ್ತಿಲ್ಲ. ಇನ್ನೂ ಕೆಲವರು ಕುಡಿದ ಮತ್ತಿನಲ್ಲೋ ಅಥವಾ ಉದ್ದೇಶಪೂರ್ವಕವಾಗಿಯೇ ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಕಳೆದ ವಾರ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಬೈಕ್ ಸವಾರನನ್ನು ರಸ್ತೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ಕಾರಿಗೆ ಟಚ್ ಆಗಿದೆ ಎಂದು ಕ್ಷುಲ್ಲಕ ಕಾರಣವೊಡ್ಡಿ ದಾಳಿ ಮಾಡಿದ್ದ. ಬಳಿಕ ವಿಡಿಯೋ ಮಾಡಿ ಭಾಷೆ ವಿಚಾರಕ್ಕೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುಳ್ಳು ಹೇಳಿದ್ದ. ಘಟನೆ ನಡೆದ ಸ್ಥಳದ ಸಿಸಿಟಿವಿ ತುಣುಕು ಪರಿಶೀಲಿಸಿದಾಗ ಕಮಾಂಡರ್ ಅಸಲಿಯತ್ತು ಬೆಳಕಿಗೆ ಬಂದಿತ್ತು. ಈ ಬೆಳವಣಿಗೆಯು ರಾಷ್ಟ್ರದೆಲ್ಲೆಡೆ ಸುದ್ದಿಯಾಗಿತ್ತು.

ಬೀದಿ ಕಾಳಗಕ್ಕೆ ಕಾರಣವೇನು?: ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಎರಡನೇ ಹಂತದ ನಗರಗಳಲ್ಲಿಯೂ ರೋಡ್ ರೇಜ್ ಗಲಾಟೆಗಳು ವರದಿಯಾಗುತ್ತಿವೆ. ಬೆಂಗಳೂರು ನಗರದಲ್ಲಂತೂ ಪ್ರತಿದಿನ ಬೀದಿ ಕಾಳಗgಳು ಹೆಚ್ಚಾಗುತ್ತಿವೆ. ವರದಿಯಾಗುವ ಬಹುತೇಕ ಪ್ರಕರಣಗಳನ್ನು ಅವಲೋಕಿಸಿದಾಗ ಕ್ಷುಲ್ಲಕ ಕಾರಣಗಳಿಗಾಗಿ ಕಿಡಿಗೇಡಿಗಳು ಗಲಾಟೆ ಮಾಡಿರುವುದು ಗೊತ್ತಾಗಿದೆ. ಸಂಚಾರದಟ್ಟಣೆ ಒತ್ತಡ, ಮಾನಸಿಕ ಕಿರಿಕಿರಿ, ಆಕ್ರಮಣಕಾರಿ ವಾಹನ ಚಾಲನೆ, ಸ್ವಪ್ರತಿಷ್ಠೆ ಹಾಗೂ ವೈಯಕ್ತಿಕ ನ್ಯೂನತೆಗಳು ಬೀದಿ ಕಾಳಗಕ್ಕೆ ಕಾರಣವಾಗುತ್ತಿವೆ ಎಂದು ವರದಿಯಾಗಿದೆ.

ಟ್ರಾಫಿಕ್ ಜಾಮ್ ಕಿರಿಕಿರಿ: ಬೃಹತ್​ ಬೆಂಗಳೂರು ನಗರದ 1.5 ಕೋಟಿ ಜನರಿದ್ದು, 1.2 ಕೋಟಿ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರವಾಹನಗಳಾಗಿವೆ. ವಾಹನಗಳ ಸಂಖ್ಯೆ ಅಧಿಕವಾಗುತ್ತಿದ್ದಂತೆ ರಸ್ತೆ ಅಗಲೀಕರಣ ಸೇರಿದಂತೆ ಸುಗಮ ಸಂಚಾರಕ್ಕೆ ಒತ್ತು ಕೊಡದ ಪರಿಣಾಮ ವಿಶ್ವಮಟ್ಟದಲ್ಲಿ ಬೆಂಗಳೂರು ಟ್ರಾಫಿಕ್​ಗೆ ಕುಖ್ಯಾತಿ ಪಡೆದಿದೆ.

ಕೆಲವೇ ಕಿಲೋಮೀಟರ್ ಪ್ರಯಾಣಿಸಬೇಕಾದರೂ ಟ್ರಾಫಿಕ್ ಸುಳಿಯಲ್ಲಿ ಸಿಲುಕಿಬೇಕಿದೆ. ಟ್ರಾಫಿಕ್ ಜಾಮ್ ಬಿಸಿಗೆ ಒತ್ತಡಕ್ಕೆ ಒಳಗಾಗುವ ಸವಾರರು ಬೇಗ ಗಮ್ಯ ಸ್ಥಳಗಳಿಗೆ ತಲುಪಲು ರ್‍ಯಾಶ್ ಡ್ರೈವಿಂಗ್, ಅನಗತ್ಯ ಹಾರ್ನ್ ಮಾಡುವುದು, ಏಕಮುಖ ಸಂಚಾರ, ಮದ್ಯಪಾನ ಮಾಡಿ ವಾಹನ ಚಾಲನೆಗಳಿಂದಾಗಿ ಅನ್ಯ ವಾಹನ ಸವಾರರ ಮೇಲೆ ರಸ್ತೆಯಲ್ಲೆ ಮಾತಿನ ಚಕಮಕಿಗೆ ಇಳಿದು ಹಲ್ಲೆಗೆ ಕಾರಣರಾಗುತ್ತಾರೆ. ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಅನಗತ್ಯವಾಗಿ ವಾಹನಗಳನ್ನ ಹಿಂಬಾಲಿಸಿ ಅಪಘಾತದ ನೆಪವೊಡ್ಡಿ ಅಡ್ಡಗಟ್ಟಿ ಬೆದರಿಸಿ ಅಪರಾಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೌಟುಂಬಿಕ ಕಲಹ, ನಿರುದ್ಯೋಗ ಸೇರಿದಂತೆ ವೈಯಕಿಕ್ತ ಕಾರಣಗಳಿಂದ ಇನ್ನಿತರ ಮೇಲೆ ಸುಖಾಸುಮ್ಮನೆ ಜಗಳ ಮಾಡುವವರ ಸಂಖ್ಯೆ ಕಡಿಮೆಯಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸುತ್ತಾರೆ.

ಹೆಚ್ಚು ಕೋಪ ಹಾಗೂ ಅಕ್ರಮಣಕಾರಿ ನಡೆ: ಬೆಂಗಳೂರು ಮಾತ್ರವಲ್ಲದೆ, ದೇಶದ ಅನೇಕ ನಗರಗಳಲ್ಲಿಯೂ ರೋಡ್ ರೇಜ್ ಗಲಾಟೆ ಹೆಚ್ಚಾಗಿವೆ. ಸಮೀಕ್ಷೆಯೊಂದರ ಪ್ರಕಾರ, ಶೇ.70ರಷ್ಟು ಸವಾರರು ಕೋಪದಲ್ಲಿ ವಾಹನ ಚಲಾಯಿಸಿದರೆ ಶೇ.30ರಷ್ಟು ಮಂದಿ ಆಕ್ರಮಣಕಾರಿ ಪ್ರತಿಕ್ರಿಯೆಯಿಂದಾಗಿ ನಡುರಸ್ತೆಯಲ್ಲಿ ನಡೆಯುವ ಬೀದಿ ಕಾಳಗಕ್ಕೆ ಕಾರಣರಾಗುತ್ತಾರೆ ಎಂದು ತಿಳಿದುಬಂದಿದೆ. ದೈನಂದಿನ ಬದುಕಿನ ಜಂಜಾಟ, ವಿಪರೀತ ಸಂಚಾರ ದಟ್ಟಣೆಗೆ ಸವಾರರು ನಿತ್ಯ ಸಂಘರ್ಷಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸುಗಮ ಸಂಚಾರದಿಂದ ಶೇ.15ರಷ್ಟು ರೋಡ್ ರೇಜ್ ಗಲಾಟೆ ಕಡಿಮೆಯಾಗಿವೆ ಎಂದು ಸಮೀಕ್ಷೆ ಹೇಳಿದೆ.

ಮಾನಸಿಕ ಒತ್ತಡದಿಂದಲೋ, ಸಂಚಾರ ದಟ್ಟಣೆ ಕಿರಿಕಿರಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಗಲಿನಲ್ಲಿ ರೋಡ್ ರೇಜ್​ ಗಲಾಟೆಯಾದರೆ ರಾತ್ರಿ ವೇಳೆ ಇಂತಹ ಘಟನೆಗಳು ಹೆಚ್ಚು ತೀವ್ರವಾಗಿರಲಿವೆ. ಜನ- ವಾಹನ ದಟ್ಟಣೆಯಿಲ್ಲದಿರುವಾಗ ಕ್ಷುಲ್ಲಕ ಕಾರಣಗಳಿಗಾಗಿ ವಾಹನಗಳನ್ನು ಅಡ್ಡಗಟ್ಟುವ ಕಿಡಿಗೇಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ.

ಹಲ್ಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುವ ದೂರುಗಳನ್ನು ಆಧರಿಸಿ ಸತ್ಯಾಸತ್ಯತೆ ಅರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. 2024ರಲ್ಲಿ ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ 29 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಬರುವ ಘಟನೆಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಪದೇ ಪದೇ ಗಲಾಟೆ ಪ್ರಕರಣಗಳಲ್ಲಿ ಆರೋಪಿಗಳಾಗುವವರ ವಿರುದ್ಧ ರೌಡಿಶೀಟ್​ ತೆರೆಯಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ರೋಡ್ ರೇಜ್​ಗಳು:

  • ಏ.25 ಮಧ್ಯ ರಸ್ತೆಯಲ್ಲಿ ಚಾಲಕ ಆಟೋ ನಿಲ್ಲಿಸಿ, ಲಿಂಗರಾಜಪುರ ಅಂಡರ್ ಪಾಸ್ ಕಾರಿನ ಚಾಲಕನೊಂದಿಗೆ ದುರ್ವರ್ತನೆ.
  • ಏ.26 ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ತೆಗೆದು ಮಹಿಳೆಯಿಂದ ಯುವಕನಿಗೆ ಹಲ್ಲೆ, ಜೀವನ್ ಭೀಮಾನಗರದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ.
  • ಏ.21 ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ನಿಂದ ಹಲ್ಲೆ, ದೂರು-ಪ್ರತಿದೂರು ದಾಖಲು.
  • ಏ.21 ಹಾರ್ನ್ ಮಾಡಿದ್ದಕ್ಕೆ ಕಾರು ಅಡ್ಡಗಟ್ಟಿ ಆಟೋ ಚಾಲಕನಿಂದ ಅಸಭ್ಯ ವರ್ತನೆ, ಮಧ್ಯದ ಬೆರಳು ತೋರಿಸಿ ನಿಂದನೆ, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
  • 2024 ಡಿ.28ರಂದು ಕಾರಿನ ಬಾನೆಟ್​ಗೆ ಹತ್ತಿ ಕಾರಿನ ವಿಂಡ್ ಶೀಲ್ಡ್​ಗೆ ಒದ್ದು ಪುಂಡಾಟ ತೋರಿದ್ದ ಮೂವರು ಯುವಕರು.
  • 2024 ಆ.22 ಕಾರಿಗೆ ಟಚ್ ಮಾಡಿದ ಕಾರಣಕ್ಕಾಗಿ ಬೈಕ್ ಸವಾರನನ್ನು ಹಿಂಬಾಲಿಸಿ ಅಪಘಾತ ಎಸಗಿದ್ದ ಇಬ್ಬರು ಆರೋಪಿಗಳ ಬಂಧನ, ಚಿಕಿತ್ಸೆ ಫಲಕಾರಿಯಾಗದೆ ಡೆಲಿವರಿ ಬಾಯ್ ಮಹೇಶ್ ಸಾವು.

ರೋಡ್ ರೇಜ್​ಗೆ ಪ್ರಚೋದನೆಯಾಗುವ ಅಂಶಗಳು:

  • ನಗರದಲ್ಲಿ ಹೆಚ್ಚಾದ ಸಂಚಾರದಟ್ಟಣೆ
  • ಆಕ್ರಮಣಕಾರಿ ವಾಹನ ಚಾಲನೆ
  • ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ
  • ವೈಯಕ್ತಿಕ ಕಾರಣಗಳು

ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, "ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋ, ಫೋಟೋಗಳನ್ನು ಪ್ರಕಟಿಸುವ ಅಧಿಕಾರವಿದೆ. ಆದರೆ ಸಾರ್ವಜನಿಕ ವಲಯದಲ್ಲಿ ನಡೆಯುವ ಅಪರಾಧ ಕೃತ್ಯಗಳು, ರೋಡ್ ರೇಜ್ ಮತ್ತಿತರ ಸಂದರ್ಭಗಳಲ್ಲಿ ಆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಪೊಲೀಸರ ಗಮನಕ್ಕೆ ತಂದರೆ ಪ್ರಕರಣ ದಾಖಲಿಸಿಕೊಂಡು ತ್ವರಿತಗತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರನ ಮೇಲೆ ಹಲ್ಲೆ ನಡೆಸಿದ ಆರೋಪ: ವಿಂಗ್ ಕಮಾಂಡರ್ ಶಿಲಾದಿತ್ಯ ವಿರುದ್ಧ ಬಲವಂತದ ಕ್ರಮ ಬೇಡ : ಹೈಕೋರ್ಟ್

ಇದನ್ನೂ ಓದಿ: ಹಲ್ಲೆ ಆರೋಪ ಮಾಡಿದ್ದ ವಿಂಗ್ ಕಮಾಂಡರ್ ನಾಪತ್ತೆ: ಜಾಮೀನಿನ ಮೇಲೆ ಹೊರಬಂದ ಬೈಕ್ ಸವಾರ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.