ETV Bharat / state

ಆಸ್ತಿ ರಕ್ಷಣೆಗಾಗಿ ಚಾಮರಾಜನಗರ ಡಿಸಿಗೆ ಪತ್ರ ಬರೆದ ಪ್ರಮೋದಾದೇವಿ ಒಡೆಯರ್ - PRAMODA DEVI WADIYAR WRITES TO DC

ಆಸ್ತಿ ರಕ್ಷಣೆ ಕೋರಿ ಚಾಮರಾಜನಗರ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದಾರೆ.

pramoda-devi-wadiyar
ಪ್ರಮೋದಾದೇವಿ ಒಡೆಯರ್ (ETV Bharat)
author img

By ETV Bharat Karnataka Team

Published : April 7, 2025 at 1:11 PM IST

2 Min Read

ಚಾಮರಾಜನಗರ : ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ (ಖಾಸಗಿ ಸ್ವತ್ತು) ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮತ್ತು ಚಾಮರಾಜನಗರ ತಹಶೀಲ್ದಾರ್​ಗೆ ಮಾ. 21ರಂದು ರಾಜವಂಶಸ್ಥೆ ಪ್ರಮೋದಾದೇವಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವೆ 1950ರ ಜ.6ರಲ್ಲಿ ನಡೆದ ಒಪ್ಪಂದದ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿನ ಸ್ವತ್ತುಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಒಪ್ಪಂದವಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ (ETV Bharat)

ಇದರಂತೆ ಅಟ್ಟಗೂಳಿಪುರ (ವಿಸ್ತೀರ್ಣ & 4445&33), ಹರದನಹಳ್ಳಿ (ಸರ್ವೆ ನಂ & 125, ವಿಸ್ತೀರ್ಣ &40&18), ಹರದನಹಳ್ಳಿ (ಸರ್ವೆ ನಂ&124, ವಿಸ್ತೀರ್ಣ&3&16), ಹರದನಹಳ್ಳಿ (ಸರ್ವೆ ನಂ&134, ವಿಸ್ತೀರ್ಣ&2&19), ಹರದನಹಳ್ಳಿ(ಸರ್ವೆ ನಂ&135, ವಿಸ್ತೀರ್ಣ&1&35), ಹರದನಹಳ್ಳಿ(ಸರ್ವೆ ನಂ&133, ವಿಸ್ತೀರ್ಣ&67&20), ಹರದನಹಳ್ಳಿ(ಸರ್ವೆ ನಂ&463, ವಿಸ್ತೀರ್ಣ&11&08), ಹರದನಹಳ್ಳಿ(ಸರ್ವೆ ನಂ&169, ವಿಸ್ತೀರ್ಣ&2&04), ಹರದನಹಳ್ಳಿ(ಸರ್ವೆ ನಂ&184, ವಿಸ್ತೀರ್ಣ&1&03), ಬೂದಿತಿಟ್ಟು(ಸರ್ವೆ ನಂ&117, ವಿಸ್ತೀರ್ಣ&63&39), ಕರಡಿಹಳ್ಳ(ಸರ್ವೆ ನಂ&1, ವಿಸ್ತೀರ್ಣ&13&36), ಕರಡಿ ಹಳ್ಳ(ಸರ್ವೆ ನಂ&2, ವಿಸ್ತೀರ್ಣ&24&16), ಕರಡಿಹಳ್ಳ(ಸರ್ವೆ ನಂ&3, ವಿಸ್ತೀರ್ಣ&38&11), ಕನ್ನಿಕೆರೆ (ಸರ್ವೆ ನಂ&1, ವಿಸ್ತೀರ್ಣ&32&35), ಕನ್ನಿಕೆರೆ(ಸರ್ವೆ ನಂ&2, ವಿಸ್ತೀರ್ಣ&67&10), ಕನ್ನಿಕೆರೆ(ಸರ್ವೆ ನಂ&3, ವಿಸ್ತೀರ್ಣ&89&39), ಉಮ್ಮತ್ತೂರು(ಸರ್ವೆ ನಂ&563, ವಿಸ್ತೀರ್ಣ&199&27) ಇಷ್ಟೂ ಸ್ವತ್ತಿನ ಷರಾ ಮಹಾರಾಣಿಯವರ ಆಸ್ತಿಯಾಗಿದೆ. ಕಸಬಾ ಚಾಮರಾಜನಗರ(ಷರಾ&ಜನನ ಮಂಟಪ ಮತ್ತು ಗಾರ್ಡನ್), ಬಸವಪುರ(ಸರ್ವೆ ನಂ&143, ವಿಸ್ತೀರ್ಣ&13&00) ಈ ಸ್ವತ್ತುಗಳು 1950 ಜ.26ರ ಒಪ್ಪಂದ ಪ್ರಕಾರ ಮಹಾರಾಜರ ಖಾಸಗಿ ಸ್ವತ್ತಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

pramoda-devi-wadiyar-writes-to-chamarajanagar-dc-for-property-protection
ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಒಡೆಯರ್ ಅವರು ಪತ್ರ ಬರೆದಿರುವುದು (ETV Bharat)

ಈ ಸ್ವತ್ತುಗಳಲ್ಲಿ ಯಾವುದೇ ರೀತಿಯ ಖಾತೆ, ದುರಸ್ತಿ ಮತ್ತು ಯಾವುದೇ ರೀತಿಯ ವಹಿವಾಟುಗಳನ್ನು ನಡೆಸದಂತೆ ಈ ಮನವಿಯನ್ನೇ ತಕರಾರು ಮನವಿ ಎಂದು ಪರಿಗಣಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದಾರೆ.

ಇತ್ತೀಚಿನ ಮಾಹಿತಿಯಂತೆ ಈ ಗ್ರಾಮಗಳಲ್ಲಿ ಕಂದಾಯ ಗ್ರಾಮಗಳಾಗಿ ರಚನೆ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಸ್ವತ್ತುಗಳು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಯಾವುದೇ ರೀತಿಯ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸದಂತೆಯೂ ಸಹ ಈ ತಕರಾರು ಅರ್ಜಿಯನ್ನು ಸಲ್ಲಿಸುತ್ತಿದ್ದು, ಈ ಮನವಿಯನ್ನು ಪರಿಗಣಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೋರಿದ್ದಾರೆ.

pramoda-devi-wadiyar-writes-to-chamarajanagar-dc-for-property-protection
ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಒಡೆಯರ್ ಅವರು ಪತ್ರ ಬರೆದಿರುವುದು (ETV Bharat)

ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯೆ ನೀಡಿದ್ದು, ''ಈಗಾಗಲೇ ಜಂಟಿ ಸರ್ವೇಗಳನ್ನು ಮುಗಿಸಿ ಖಾತೆ ಮಾಡಿಕೊಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತಕರಾರು ಪತ್ರವನ್ನು ಪ್ರಮೋದಾದೇವಿ ಒಡೆಯರ್ ನೀಡಿದ್ದು, ಅದನ್ನು ಪರಿಶೀಲಿಸಲು ಕೊಳ್ಳೇಗಾಲ ಉಪ ವಿಭಾಧಿಕಾರಿ ಮತ್ತು ಚಾಮರಾಜನಗರ ತಹಸಿಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ತಕರಾರು ಪತ್ರದಲ್ಲಿ ನ್ಯಾಯಾಲಯದ ಯಾವುದೇ ಆದೇಶ, ಪೂರಕ ದಾಖಲೆಗಳನ್ನು ತಕರಾರು ಪತ್ರದ ಜೊತೆ ಅವರು ಲಗತ್ತಿಸಿಲ್ಲ'' ಎಂದರು.

''ರಾಜವಂಶಸ್ಥೆ ಪ್ರಮೋದಾದೇವಿ ಅವರಿಂದ ಅರ್ಜಿ ಬಂದಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಇದನ್ನು ಪರಿಶೀಲನೆ ಮಾಡಲು ತಹಶೀಲ್ದಾರ್ ಗಿರಿಜಾ ಅವರಿಗೆ ಸೂಚನೆ ನೀಡಿದ್ದಾರೆ'' ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಅರಮನೆ ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ: ಪ್ರಮೋದಾದೇವಿ ಒಡೆಯರ್ - PRAMODA DEVI WADIYAR

ಚಾಮರಾಜನಗರ : ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ (ಖಾಸಗಿ ಸ್ವತ್ತು) ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮತ್ತು ಚಾಮರಾಜನಗರ ತಹಶೀಲ್ದಾರ್​ಗೆ ಮಾ. 21ರಂದು ರಾಜವಂಶಸ್ಥೆ ಪ್ರಮೋದಾದೇವಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವೆ 1950ರ ಜ.6ರಲ್ಲಿ ನಡೆದ ಒಪ್ಪಂದದ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿನ ಸ್ವತ್ತುಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಒಪ್ಪಂದವಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ (ETV Bharat)

ಇದರಂತೆ ಅಟ್ಟಗೂಳಿಪುರ (ವಿಸ್ತೀರ್ಣ & 4445&33), ಹರದನಹಳ್ಳಿ (ಸರ್ವೆ ನಂ & 125, ವಿಸ್ತೀರ್ಣ &40&18), ಹರದನಹಳ್ಳಿ (ಸರ್ವೆ ನಂ&124, ವಿಸ್ತೀರ್ಣ&3&16), ಹರದನಹಳ್ಳಿ (ಸರ್ವೆ ನಂ&134, ವಿಸ್ತೀರ್ಣ&2&19), ಹರದನಹಳ್ಳಿ(ಸರ್ವೆ ನಂ&135, ವಿಸ್ತೀರ್ಣ&1&35), ಹರದನಹಳ್ಳಿ(ಸರ್ವೆ ನಂ&133, ವಿಸ್ತೀರ್ಣ&67&20), ಹರದನಹಳ್ಳಿ(ಸರ್ವೆ ನಂ&463, ವಿಸ್ತೀರ್ಣ&11&08), ಹರದನಹಳ್ಳಿ(ಸರ್ವೆ ನಂ&169, ವಿಸ್ತೀರ್ಣ&2&04), ಹರದನಹಳ್ಳಿ(ಸರ್ವೆ ನಂ&184, ವಿಸ್ತೀರ್ಣ&1&03), ಬೂದಿತಿಟ್ಟು(ಸರ್ವೆ ನಂ&117, ವಿಸ್ತೀರ್ಣ&63&39), ಕರಡಿಹಳ್ಳ(ಸರ್ವೆ ನಂ&1, ವಿಸ್ತೀರ್ಣ&13&36), ಕರಡಿ ಹಳ್ಳ(ಸರ್ವೆ ನಂ&2, ವಿಸ್ತೀರ್ಣ&24&16), ಕರಡಿಹಳ್ಳ(ಸರ್ವೆ ನಂ&3, ವಿಸ್ತೀರ್ಣ&38&11), ಕನ್ನಿಕೆರೆ (ಸರ್ವೆ ನಂ&1, ವಿಸ್ತೀರ್ಣ&32&35), ಕನ್ನಿಕೆರೆ(ಸರ್ವೆ ನಂ&2, ವಿಸ್ತೀರ್ಣ&67&10), ಕನ್ನಿಕೆರೆ(ಸರ್ವೆ ನಂ&3, ವಿಸ್ತೀರ್ಣ&89&39), ಉಮ್ಮತ್ತೂರು(ಸರ್ವೆ ನಂ&563, ವಿಸ್ತೀರ್ಣ&199&27) ಇಷ್ಟೂ ಸ್ವತ್ತಿನ ಷರಾ ಮಹಾರಾಣಿಯವರ ಆಸ್ತಿಯಾಗಿದೆ. ಕಸಬಾ ಚಾಮರಾಜನಗರ(ಷರಾ&ಜನನ ಮಂಟಪ ಮತ್ತು ಗಾರ್ಡನ್), ಬಸವಪುರ(ಸರ್ವೆ ನಂ&143, ವಿಸ್ತೀರ್ಣ&13&00) ಈ ಸ್ವತ್ತುಗಳು 1950 ಜ.26ರ ಒಪ್ಪಂದ ಪ್ರಕಾರ ಮಹಾರಾಜರ ಖಾಸಗಿ ಸ್ವತ್ತಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

pramoda-devi-wadiyar-writes-to-chamarajanagar-dc-for-property-protection
ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಒಡೆಯರ್ ಅವರು ಪತ್ರ ಬರೆದಿರುವುದು (ETV Bharat)

ಈ ಸ್ವತ್ತುಗಳಲ್ಲಿ ಯಾವುದೇ ರೀತಿಯ ಖಾತೆ, ದುರಸ್ತಿ ಮತ್ತು ಯಾವುದೇ ರೀತಿಯ ವಹಿವಾಟುಗಳನ್ನು ನಡೆಸದಂತೆ ಈ ಮನವಿಯನ್ನೇ ತಕರಾರು ಮನವಿ ಎಂದು ಪರಿಗಣಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದಾರೆ.

ಇತ್ತೀಚಿನ ಮಾಹಿತಿಯಂತೆ ಈ ಗ್ರಾಮಗಳಲ್ಲಿ ಕಂದಾಯ ಗ್ರಾಮಗಳಾಗಿ ರಚನೆ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಸ್ವತ್ತುಗಳು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಯಾವುದೇ ರೀತಿಯ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸದಂತೆಯೂ ಸಹ ಈ ತಕರಾರು ಅರ್ಜಿಯನ್ನು ಸಲ್ಲಿಸುತ್ತಿದ್ದು, ಈ ಮನವಿಯನ್ನು ಪರಿಗಣಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೋರಿದ್ದಾರೆ.

pramoda-devi-wadiyar-writes-to-chamarajanagar-dc-for-property-protection
ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಒಡೆಯರ್ ಅವರು ಪತ್ರ ಬರೆದಿರುವುದು (ETV Bharat)

ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯೆ ನೀಡಿದ್ದು, ''ಈಗಾಗಲೇ ಜಂಟಿ ಸರ್ವೇಗಳನ್ನು ಮುಗಿಸಿ ಖಾತೆ ಮಾಡಿಕೊಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತಕರಾರು ಪತ್ರವನ್ನು ಪ್ರಮೋದಾದೇವಿ ಒಡೆಯರ್ ನೀಡಿದ್ದು, ಅದನ್ನು ಪರಿಶೀಲಿಸಲು ಕೊಳ್ಳೇಗಾಲ ಉಪ ವಿಭಾಧಿಕಾರಿ ಮತ್ತು ಚಾಮರಾಜನಗರ ತಹಸಿಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ತಕರಾರು ಪತ್ರದಲ್ಲಿ ನ್ಯಾಯಾಲಯದ ಯಾವುದೇ ಆದೇಶ, ಪೂರಕ ದಾಖಲೆಗಳನ್ನು ತಕರಾರು ಪತ್ರದ ಜೊತೆ ಅವರು ಲಗತ್ತಿಸಿಲ್ಲ'' ಎಂದರು.

''ರಾಜವಂಶಸ್ಥೆ ಪ್ರಮೋದಾದೇವಿ ಅವರಿಂದ ಅರ್ಜಿ ಬಂದಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಇದನ್ನು ಪರಿಶೀಲನೆ ಮಾಡಲು ತಹಶೀಲ್ದಾರ್ ಗಿರಿಜಾ ಅವರಿಗೆ ಸೂಚನೆ ನೀಡಿದ್ದಾರೆ'' ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಅರಮನೆ ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ: ಪ್ರಮೋದಾದೇವಿ ಒಡೆಯರ್ - PRAMODA DEVI WADIYAR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.