ETV Bharat / state

ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ಆದೇಶದಿಂದ ಇತರ ಆರೋಪಿಗಳ ವಿಚಾರಣೆ ಕಷ್ಟವಾಗುತ್ತದೆ: ಇ.ಡಿ ವಾದ - HIGH COURT

ಮುಡಾ ಮಾಜಿ ಆಯುಕ್ತ ನಟೇಶ್‌ ವಿರುದ್ಧ ಸಮನ್ಸ್‌ ರದ್ದು ಆದೇಶ ಇತರ ಪ್ರಕರಣಗಳಲ್ಲಿಯೂ ಉಲ್ಲೇಖಿಸಲಾಗುತ್ತಿದ್ದು, ಇ.ಡಿ ತನ್ನ ಕಾರ್ಯಮಾಡುವುದಕ್ಕೆ ಕಷ್ಟ ಸಾಧ್ಯವಾಗಲಿದೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಪೀಠದ ಮುಂದೆ ವಾದ ಮಂಡಿಸಿದೆ.

HIGH COURT
ಹೈಕೋರ್ಟ್​ (ETV Bharat)
author img

By ETV Bharat Karnataka Team

Published : March 26, 2025 at 9:29 PM IST

4 Min Read

ಬೆಂಗಳೂರು: ಮುಡಾದಿಂದ ಅಕ್ರಮವಾಗಿ ನಿವೇಶನ ಮಂಜೂರು ಮಾಡಿದ್ದ ಆರೋಪದಲ್ಲಿ ಮಾಜಿ ಆಯುಕ್ತ ನಟೇಶ್‌ಗೆ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿರುವ ಏಕಸದಸ್ಯ ಪೀಠದ ಆದೇಶದಿಂದ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಪಾರ್ವತಿ ಅವರನ್ನು ವಿಚಾರಣೆಗೊಳಪಡಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮ್ಮ ಕೈಗಳನ್ನು ಕಟ್ಟಿಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ ವಾದ ಮಂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿದ್ದ ಆರೋಪದಲ್ಲಿ ಮುಡಾದ ಮಾಜಿ ಆಯುಕ್ತರ ವಿರುದ್ಧ ಸಮನ್ಸ್‌ ಜಾರಿ ಮಾಡಿದ್ದ ಜಾರಿ ನಿರ್ದೇಶನಾಲಯ(ಇಡಿ) ಕ್ರಮ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರಿದ್ದ ನ್ಯಾಯಪೀಠಕ್ಕೆ ಇಡಿ ಪರ ವಕೀಲರು ವಿವರಿಸಿದರು.

ED ಪರ ಅಡಿಷನಲ್​ ಸಾಲಿಸಿಟರ್​​​​​ ಜನರಲ್​​ ಎಸ್​​​ ವಿ ರಾಜು: ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ಅಡಿಷನಲ್‌ ಸಾಲಿಸಿಟರ್‌ ಜನರಲ್ ಎಸ್‌ ವಿ ರಾಜು, ನಟೇಶ್‌ ಪ್ರಕರಣದಲ್ಲಿ ಏಕಸದಸ್ಯ ಪೀಠ ನೀಡಿರುವ ಆದೇಶವು ಜಾರಿ ನಿರ್ದೇಶನಾಲಯದ ಇತರ ಪ್ರಕರಣಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಆದೇಶವನ್ನು ಇತರ ಪ್ರಕರಣಗಳಲ್ಲಿಯೂ ಉಲ್ಲೇಖಿಸಲಾಗುತ್ತಿದ್ದು, ಇ.ಡಿ ತನ್ನ ಕಾರ್ಯಮಾಡುವುದಕ್ಕೆ ಕಷ್ಟ ಸಾಧ್ಯವಾಗಲಿದೆ ಎಂದರು.

ಅಲ್ಲದೆ, ಇ.ಡಿ ಶೋಧನೆ ಮಾಡುವುದು ಕಾನೂನು ಬಾಹಿರ ಎಂದು ಘೋಷಣೆ ಮಾಡಿದರೆ ಇದೇ ಪ್ರಕರಣದ ಇತರೆ ಆರೋಪಿಗಳ ಮೇಲೆ ಪರಿಣಾಮ ಬೀರಲಿದ್ದು, ಅವರಿಗೆ ನ್ಯಾಯಾಲಯಗಳು ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಪೀಠ ಎಷ್ಟು ಮಂದಿ ಆರೋಪಿಗಳಿದ್ದಾರೆಂದು ಪ್ರಶ್ನಿಸಿತು, ಇದಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳಿದ್ದಾರೆ. ಪ್ರಕರಣದ 2ನೇ ಆರೋಪಿಗೂ ಇ.ಡಿ ಸಮನ್ಸ್‌ ಜಾರಿ ಮಾಡಿದ್ದು, ಅದನ್ನು ಹೈಕೋರ್ಟ್‌ ರದ್ದುಪಡಿಸಿದೆಂದು ಪೀಠಕ್ಕೆ ತಿಳಿಸಿದರು.

ವಾದ ಮುಂದುವರೆಸಿದ ಎಸ್‌ ವಿ ರಾಜು, ಏಕಸದಸ್ಯ ಪೀಠದ ಆದೇಶವು ಆರೋಪಿಗಳ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಜಾರಿ ನಿರ್ದೇಶನಾಲಯದ ಮುಂದಿನ ಎಲ್ಲ ಪ್ರಕರಣಗಳಿಗೂ ಪರಿಣಾಮ ಬೀರಲಿದೆ. ಹೈಕೋರ್ಟ್‌ನ ಆದೇಶವು ಪ್ರಮುಖವಾಗಿ ಎರಡು ಅಂಶಗಳಿದ್ದು, ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗಲಿದೆ. ಜತೆಗೆ, ಆರೋಪಿಗಳ ಜಾಮೀನು ನೀಡುವುದನ್ನು ವಿರೋಧಿಸಲು ಜಾರಿ ನಿರ್ದೇಶನಾಯಕ್ಕೆ ಅವಕಾಶವಿಲ್ಲದಂತಾಗಲಿದೆ. ಇದು ಸುಪ್ರೀಂಕೋರ್ಟ್‌ ಆದೇಶಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.

ಇ.ಡಿ ಸಮನ್ಸ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಟೇಶ್, ಮುಡಾದ ಆಯುಕ್ತರಾಗಿದ್ದು, ಸ್ವತಃ ಬದಲಿ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ವೈಯಕ್ತಿಕವಾಗಿ ಪರಿಶೀಲನೆ ನಡೆಸಿದ್ದರು. ನಿಯಮಗಳನ್ನು ಮೀರಿ ಪ್ರಭಾವಿಗಳಿಗೆ ಹಂಚಿಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆಗೆ ಕಾರಣವಾಗಿರಬಹುದಾಗಿದೆ. 56 ಕೋಟಿ ರೂ.ಗಳ ಅಕ್ರಮ ವರ್ಗಾವಣೆಯಾಗಿದ್ದು, ನಟೇಶ್‌ ಅವರ ಮೇಲೆ ಸಂಶಯಕ್ಕೆ ಕಾರಣವಾಗಿದೆ. ಈ ರೀತಿಯ ಆರೋಪಗಳಲ್ಲಿ ಮೊದಲ ಹಂತದಲ್ಲಿ ಅವರ ಆಸ್ತಿಗಳ ಮೇಲೆ ದಾಳಿ ಮಾಡಿ ಶೋಧನಾ ಕಾರ್ಯ ಮಾಡಲಿದ್ದು, ಬಳಿಕ ಬಂಧನಕ್ಕೆ ಮುಂದಾಗಬೇಕಾಗುತ್ತದೆ. ಆದರೆ, ಏಕಸದಸ್ಯ ಪೀಠ, ಹಸ್ತಕ್ಷೇಪ ಮಾಡಿದೆ. ಇದು ಸುಪ್ರೀಂಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದರು.

ಮುಡಾದಲ್ಲಿ ಹಗರಣ ನಡೆದ ಸಂದರ್ಭದಲ್ಲಿ ನಟೇಶ್‌ ಆಯುಕ್ತರಾಗಿದ್ದಾರೆ. ಅವರ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳು ಪತ್ತೆಯಾಗುವುದಿಲ್ಲ ಎಂದು ಅನುಮಾನಿಸುವುದು ತಪ್ಪಾಗಲಿದಿಯೇ? ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್‌ ಜಾರಿ ಮಾಡಿರುವುದರಲ್ಲಿ ತಪ್ಪೇನಿದೆ ಎಂದು ಪೀಠಕ್ಕೆ ಪ್ರಶ್ನಿಸಿದ ರಾಜು, ಏಕ ಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.

ನಟೇಶ್​ ಪರ ವಾದ ಮಂಡಿಸಿದ ದುಶ್ಯಂತ ದವೆ: ನಟೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್‌ ದವೆ, ಕಾನೂನು ಬಾಹಿರವಾಗಿ ನಟೇಶ್‌ಗೆ ಇಡಿ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿರುವುದು ಸುಪ್ರೀಕೋರ್ಟ್‌ ಆದೇಶಕ್ಕೆ ಅನುಗುಣವಾಗಿದ್ದು, ಕಾನೂನು ಬದ್ಧವಾಗಿದೆ. ಹೈಕೋರ್ಟ್‌ ಮತ್ತು ಸುಪ್ರೀಕೋರ್ಟ್‌ಗಳಿಗೆ ಸರ್ಕಾರಗಳ ಯಾವುದೇ ಆದೇಶ ಪರಿಶೀಲಿಸುವುದು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಅವಕಾಶವಿದೆ.

ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರು ಸಿದ್ದರಾಮಯ್ಯ ಪತ್ನಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಯಾವುದೇ ಆರೋಪವಿಲ್ಲ. ಆದರೂ ನಟೇಶ್‌ ಮನೆ ಮೇಲೆ ದಾಳಿ ನಡೆಸಿ ಸಮನ್ಸ್‌ ಜಾರಿ ಮಾಡಿರುವುದು ಕಾನೂನು ಬಾಹಿರ ಎಂದರು.

ಮುಖ್ಯಮಂತ್ರಿಗಳ ಪತ್ನಿಗೆ ನಿವೇಶನಗಳ ಹಂಚಿಕೆ ಮಾಡಿರುವುದು ಶಾಸನ ಬದ್ಧ ಯೋಜನೆಯಿಂದಾಗಿದೆ. ಇದೇ ರೀತಿಯ ಇತರೆ 11 ಪ್ರಕರಣಗಳಲ್ಲಿ ಮುಡಾ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಯಾವುದೇ ಅಕ್ರಮವಿಲ್ಲದಿದ್ದರೂ, ಇ.ಡಿ ಮುಖ್ಯಮಂತ್ರಿಗಳ ಪತ್ನಿ ಸೇರಿ ಹಲವರಿಗೆ ಸಮನ್ಸ್‌ ಜಾರಿ ಮಾಡುತ್ತಿದೆ ಎಂದು ವಿವರಿಸಿದರು.

ಈ ವೇಳೆ ಪೀಠ, ಇ.ಡಿ ಪರ ವಕೀಲರನ್ನು ಉದ್ದೇಶಿಸಿ, ಪ್ರಸ್ತುತ ಏಕದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದೀರಿ, ಈ ಅರ್ಜಿಯನ್ನು ಪುರಸ್ಕರಿಸಿದಲ್ಲಿ ಈ ರೀತಿಯ ಇತರ ಪ್ರಕರಣಗಳು ಈಗಾಗಲೇ ರದ್ದುಗೊಂಡಿರುವ ಪ್ರಕರಣಗಳು ಏನಾಗುತ್ತವೆ ಎಂದು ಪ್ರಶ್ನಿಸಿತು.

ವಾದ ಮುಂದುವರೆಸಿದ ದವೆ, 2004ರಲ್ಲಿ ದೇವರಾಜು ಎಂಬುವರು ಜಮೀನನ್ನು ಮುಖ್ಯಮಂತ್ರಿಗಳ ಬಾವಮೈದುನನಿಗೆ ಮಾರಾಟ ಮಾಡಿದ್ದರು. ಇದಕ್ಕೆ ಬದಲಿಯಾಗಿ 2020ರಲ್ಲಿ ಬವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿವೇಶನ ನೀಡಲು ಮೂಡಾ ನಿರ್ಣಯ ಕೈಗೊಂಡು ಅಂಗೀಕರಿಸಿದೆ. ಮೂಡ ಕೈಗೊಂಡ ನಿರ್ಣಯ ಕಾನೂನು ಬಾಹಿರವೇ ಎಂದು ಪ್ರಶ್ನಿಸಿದರು.

ಇ.ಡಿ ಲೋಕಾಯುಕ್ತ ಪೊಲೀಸರ ದಾಖಲಿಸಿದ್ದ ಎಫ್‌ಐಆರ್‌ ಆಧಾರದಲ್ಲಿ ಪಿಎಂಎಲ್‌ಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಕಾಯಿದೆಯನ್ನು ಎಲ್ಲ ಪ್ರಕರಣಗಳಲ್ಲಿಯೂ ಬಳಸಲಾಗುತ್ತಿದೆ. ಅಲ್ಲದೆ, ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ 14 ನಿವೇಶನಗಳಲ್ಲಿ ಹಿಂದಿರುಗಿಸಿದ್ದು, ಅದರಲ್ಲಿ ಅಕ್ರಮದ ಆದಾಯ ಏನು ಎಂಬುದೇ ಗೊತ್ತಿಲ್ಲ. ಇದೊಂದು ಮೂಡಾ ನಿರ್ಣಯವಾಗಿದ್ದು, ಅದನ್ನು ಕ್ರಿಮಿನಲ್‌ ಚಟುವಟಿಕೆ ಎನ್ನಲಾಗುವುದೇ ಎಂದು ಪ್ರಶ್ನಿಸಿದರು. ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆ(ಗುರುವಾರ)ಗೆ ಮುಂದೂಡಿತು.

ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಪತ್ನಿಗೆ ಇ.ಡಿ ಜಾರಿ ಮಾಡಿದ್ದ ಸಮನ್ಸ್​​ ರದ್ದುಗೊಳಿಸಿದ ಹೈಕೋರ್ಟ್ - HIGH COURT QUASHES ED SUMMONS

ಬೆಂಗಳೂರು: ಮುಡಾದಿಂದ ಅಕ್ರಮವಾಗಿ ನಿವೇಶನ ಮಂಜೂರು ಮಾಡಿದ್ದ ಆರೋಪದಲ್ಲಿ ಮಾಜಿ ಆಯುಕ್ತ ನಟೇಶ್‌ಗೆ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿರುವ ಏಕಸದಸ್ಯ ಪೀಠದ ಆದೇಶದಿಂದ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಪಾರ್ವತಿ ಅವರನ್ನು ವಿಚಾರಣೆಗೊಳಪಡಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮ್ಮ ಕೈಗಳನ್ನು ಕಟ್ಟಿಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ ವಾದ ಮಂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿದ್ದ ಆರೋಪದಲ್ಲಿ ಮುಡಾದ ಮಾಜಿ ಆಯುಕ್ತರ ವಿರುದ್ಧ ಸಮನ್ಸ್‌ ಜಾರಿ ಮಾಡಿದ್ದ ಜಾರಿ ನಿರ್ದೇಶನಾಲಯ(ಇಡಿ) ಕ್ರಮ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರಿದ್ದ ನ್ಯಾಯಪೀಠಕ್ಕೆ ಇಡಿ ಪರ ವಕೀಲರು ವಿವರಿಸಿದರು.

ED ಪರ ಅಡಿಷನಲ್​ ಸಾಲಿಸಿಟರ್​​​​​ ಜನರಲ್​​ ಎಸ್​​​ ವಿ ರಾಜು: ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ಅಡಿಷನಲ್‌ ಸಾಲಿಸಿಟರ್‌ ಜನರಲ್ ಎಸ್‌ ವಿ ರಾಜು, ನಟೇಶ್‌ ಪ್ರಕರಣದಲ್ಲಿ ಏಕಸದಸ್ಯ ಪೀಠ ನೀಡಿರುವ ಆದೇಶವು ಜಾರಿ ನಿರ್ದೇಶನಾಲಯದ ಇತರ ಪ್ರಕರಣಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಆದೇಶವನ್ನು ಇತರ ಪ್ರಕರಣಗಳಲ್ಲಿಯೂ ಉಲ್ಲೇಖಿಸಲಾಗುತ್ತಿದ್ದು, ಇ.ಡಿ ತನ್ನ ಕಾರ್ಯಮಾಡುವುದಕ್ಕೆ ಕಷ್ಟ ಸಾಧ್ಯವಾಗಲಿದೆ ಎಂದರು.

ಅಲ್ಲದೆ, ಇ.ಡಿ ಶೋಧನೆ ಮಾಡುವುದು ಕಾನೂನು ಬಾಹಿರ ಎಂದು ಘೋಷಣೆ ಮಾಡಿದರೆ ಇದೇ ಪ್ರಕರಣದ ಇತರೆ ಆರೋಪಿಗಳ ಮೇಲೆ ಪರಿಣಾಮ ಬೀರಲಿದ್ದು, ಅವರಿಗೆ ನ್ಯಾಯಾಲಯಗಳು ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಪೀಠ ಎಷ್ಟು ಮಂದಿ ಆರೋಪಿಗಳಿದ್ದಾರೆಂದು ಪ್ರಶ್ನಿಸಿತು, ಇದಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳಿದ್ದಾರೆ. ಪ್ರಕರಣದ 2ನೇ ಆರೋಪಿಗೂ ಇ.ಡಿ ಸಮನ್ಸ್‌ ಜಾರಿ ಮಾಡಿದ್ದು, ಅದನ್ನು ಹೈಕೋರ್ಟ್‌ ರದ್ದುಪಡಿಸಿದೆಂದು ಪೀಠಕ್ಕೆ ತಿಳಿಸಿದರು.

ವಾದ ಮುಂದುವರೆಸಿದ ಎಸ್‌ ವಿ ರಾಜು, ಏಕಸದಸ್ಯ ಪೀಠದ ಆದೇಶವು ಆರೋಪಿಗಳ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಜಾರಿ ನಿರ್ದೇಶನಾಲಯದ ಮುಂದಿನ ಎಲ್ಲ ಪ್ರಕರಣಗಳಿಗೂ ಪರಿಣಾಮ ಬೀರಲಿದೆ. ಹೈಕೋರ್ಟ್‌ನ ಆದೇಶವು ಪ್ರಮುಖವಾಗಿ ಎರಡು ಅಂಶಗಳಿದ್ದು, ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗಲಿದೆ. ಜತೆಗೆ, ಆರೋಪಿಗಳ ಜಾಮೀನು ನೀಡುವುದನ್ನು ವಿರೋಧಿಸಲು ಜಾರಿ ನಿರ್ದೇಶನಾಯಕ್ಕೆ ಅವಕಾಶವಿಲ್ಲದಂತಾಗಲಿದೆ. ಇದು ಸುಪ್ರೀಂಕೋರ್ಟ್‌ ಆದೇಶಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.

ಇ.ಡಿ ಸಮನ್ಸ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಟೇಶ್, ಮುಡಾದ ಆಯುಕ್ತರಾಗಿದ್ದು, ಸ್ವತಃ ಬದಲಿ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ವೈಯಕ್ತಿಕವಾಗಿ ಪರಿಶೀಲನೆ ನಡೆಸಿದ್ದರು. ನಿಯಮಗಳನ್ನು ಮೀರಿ ಪ್ರಭಾವಿಗಳಿಗೆ ಹಂಚಿಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆಗೆ ಕಾರಣವಾಗಿರಬಹುದಾಗಿದೆ. 56 ಕೋಟಿ ರೂ.ಗಳ ಅಕ್ರಮ ವರ್ಗಾವಣೆಯಾಗಿದ್ದು, ನಟೇಶ್‌ ಅವರ ಮೇಲೆ ಸಂಶಯಕ್ಕೆ ಕಾರಣವಾಗಿದೆ. ಈ ರೀತಿಯ ಆರೋಪಗಳಲ್ಲಿ ಮೊದಲ ಹಂತದಲ್ಲಿ ಅವರ ಆಸ್ತಿಗಳ ಮೇಲೆ ದಾಳಿ ಮಾಡಿ ಶೋಧನಾ ಕಾರ್ಯ ಮಾಡಲಿದ್ದು, ಬಳಿಕ ಬಂಧನಕ್ಕೆ ಮುಂದಾಗಬೇಕಾಗುತ್ತದೆ. ಆದರೆ, ಏಕಸದಸ್ಯ ಪೀಠ, ಹಸ್ತಕ್ಷೇಪ ಮಾಡಿದೆ. ಇದು ಸುಪ್ರೀಂಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದರು.

ಮುಡಾದಲ್ಲಿ ಹಗರಣ ನಡೆದ ಸಂದರ್ಭದಲ್ಲಿ ನಟೇಶ್‌ ಆಯುಕ್ತರಾಗಿದ್ದಾರೆ. ಅವರ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳು ಪತ್ತೆಯಾಗುವುದಿಲ್ಲ ಎಂದು ಅನುಮಾನಿಸುವುದು ತಪ್ಪಾಗಲಿದಿಯೇ? ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್‌ ಜಾರಿ ಮಾಡಿರುವುದರಲ್ಲಿ ತಪ್ಪೇನಿದೆ ಎಂದು ಪೀಠಕ್ಕೆ ಪ್ರಶ್ನಿಸಿದ ರಾಜು, ಏಕ ಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.

ನಟೇಶ್​ ಪರ ವಾದ ಮಂಡಿಸಿದ ದುಶ್ಯಂತ ದವೆ: ನಟೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್‌ ದವೆ, ಕಾನೂನು ಬಾಹಿರವಾಗಿ ನಟೇಶ್‌ಗೆ ಇಡಿ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿರುವುದು ಸುಪ್ರೀಕೋರ್ಟ್‌ ಆದೇಶಕ್ಕೆ ಅನುಗುಣವಾಗಿದ್ದು, ಕಾನೂನು ಬದ್ಧವಾಗಿದೆ. ಹೈಕೋರ್ಟ್‌ ಮತ್ತು ಸುಪ್ರೀಕೋರ್ಟ್‌ಗಳಿಗೆ ಸರ್ಕಾರಗಳ ಯಾವುದೇ ಆದೇಶ ಪರಿಶೀಲಿಸುವುದು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಅವಕಾಶವಿದೆ.

ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರು ಸಿದ್ದರಾಮಯ್ಯ ಪತ್ನಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಯಾವುದೇ ಆರೋಪವಿಲ್ಲ. ಆದರೂ ನಟೇಶ್‌ ಮನೆ ಮೇಲೆ ದಾಳಿ ನಡೆಸಿ ಸಮನ್ಸ್‌ ಜಾರಿ ಮಾಡಿರುವುದು ಕಾನೂನು ಬಾಹಿರ ಎಂದರು.

ಮುಖ್ಯಮಂತ್ರಿಗಳ ಪತ್ನಿಗೆ ನಿವೇಶನಗಳ ಹಂಚಿಕೆ ಮಾಡಿರುವುದು ಶಾಸನ ಬದ್ಧ ಯೋಜನೆಯಿಂದಾಗಿದೆ. ಇದೇ ರೀತಿಯ ಇತರೆ 11 ಪ್ರಕರಣಗಳಲ್ಲಿ ಮುಡಾ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಯಾವುದೇ ಅಕ್ರಮವಿಲ್ಲದಿದ್ದರೂ, ಇ.ಡಿ ಮುಖ್ಯಮಂತ್ರಿಗಳ ಪತ್ನಿ ಸೇರಿ ಹಲವರಿಗೆ ಸಮನ್ಸ್‌ ಜಾರಿ ಮಾಡುತ್ತಿದೆ ಎಂದು ವಿವರಿಸಿದರು.

ಈ ವೇಳೆ ಪೀಠ, ಇ.ಡಿ ಪರ ವಕೀಲರನ್ನು ಉದ್ದೇಶಿಸಿ, ಪ್ರಸ್ತುತ ಏಕದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದೀರಿ, ಈ ಅರ್ಜಿಯನ್ನು ಪುರಸ್ಕರಿಸಿದಲ್ಲಿ ಈ ರೀತಿಯ ಇತರ ಪ್ರಕರಣಗಳು ಈಗಾಗಲೇ ರದ್ದುಗೊಂಡಿರುವ ಪ್ರಕರಣಗಳು ಏನಾಗುತ್ತವೆ ಎಂದು ಪ್ರಶ್ನಿಸಿತು.

ವಾದ ಮುಂದುವರೆಸಿದ ದವೆ, 2004ರಲ್ಲಿ ದೇವರಾಜು ಎಂಬುವರು ಜಮೀನನ್ನು ಮುಖ್ಯಮಂತ್ರಿಗಳ ಬಾವಮೈದುನನಿಗೆ ಮಾರಾಟ ಮಾಡಿದ್ದರು. ಇದಕ್ಕೆ ಬದಲಿಯಾಗಿ 2020ರಲ್ಲಿ ಬವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿವೇಶನ ನೀಡಲು ಮೂಡಾ ನಿರ್ಣಯ ಕೈಗೊಂಡು ಅಂಗೀಕರಿಸಿದೆ. ಮೂಡ ಕೈಗೊಂಡ ನಿರ್ಣಯ ಕಾನೂನು ಬಾಹಿರವೇ ಎಂದು ಪ್ರಶ್ನಿಸಿದರು.

ಇ.ಡಿ ಲೋಕಾಯುಕ್ತ ಪೊಲೀಸರ ದಾಖಲಿಸಿದ್ದ ಎಫ್‌ಐಆರ್‌ ಆಧಾರದಲ್ಲಿ ಪಿಎಂಎಲ್‌ಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಕಾಯಿದೆಯನ್ನು ಎಲ್ಲ ಪ್ರಕರಣಗಳಲ್ಲಿಯೂ ಬಳಸಲಾಗುತ್ತಿದೆ. ಅಲ್ಲದೆ, ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ 14 ನಿವೇಶನಗಳಲ್ಲಿ ಹಿಂದಿರುಗಿಸಿದ್ದು, ಅದರಲ್ಲಿ ಅಕ್ರಮದ ಆದಾಯ ಏನು ಎಂಬುದೇ ಗೊತ್ತಿಲ್ಲ. ಇದೊಂದು ಮೂಡಾ ನಿರ್ಣಯವಾಗಿದ್ದು, ಅದನ್ನು ಕ್ರಿಮಿನಲ್‌ ಚಟುವಟಿಕೆ ಎನ್ನಲಾಗುವುದೇ ಎಂದು ಪ್ರಶ್ನಿಸಿದರು. ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆ(ಗುರುವಾರ)ಗೆ ಮುಂದೂಡಿತು.

ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಪತ್ನಿಗೆ ಇ.ಡಿ ಜಾರಿ ಮಾಡಿದ್ದ ಸಮನ್ಸ್​​ ರದ್ದುಗೊಳಿಸಿದ ಹೈಕೋರ್ಟ್ - HIGH COURT QUASHES ED SUMMONS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.