ETV Bharat / state

'ಅಂತಾರಾಷ್ಟ್ರೀಯ ಮನ್ನಣೆಗಾಗಿ': ಮೈಸೂರು ಸ್ಯಾಂಡಲ್ ಸೋಪ್​ಗೆ ತಮನ್ನಾ ರಾಯಭಾರಿ ವಿವಾದಕ್ಕೆ ಸಚಿವರ ಸ್ಪಷ್ಟನೆ - MINISTER MB PATIL

'ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲೆಂಬ ಉದ್ದೇಶದೊಂದಿಗೆ ಮೈಸೂರು ಸ್ಯಾಂಡಲ್ ಸೋಪ್​ಗೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿ ಮಾಡಿದ್ದೇವೆ' ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

Minister MB Patil
ಸಚಿವ ಎಂ.ಬಿ.ಪಾಟೀಲ್‌, ನಟಿ ತಮನ್ನಾ (Photo: ETV Bharat, ANI)
author img

By ETV Bharat Entertainment Team

Published : May 23, 2025 at 1:17 PM IST

2 Min Read

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್​ಡಿಎಲ್) ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಬಹುತೇಕ ನೆಟ್ಟಿಗರು ತಮನ್ನಾ ಭಾಟಿಯಾ ನೇಮಕದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಸೋಷಿಯಲ್ ಮೀಡಿಯಾದಲ್ಲಿ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿದ್ದು, ಈ ನಿರ್ಧಾರ ಅವಿವೇಕದ, ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ್‌ (ETV Bharat)

ಸಚಿವರ ಸ್ಪಷ್ಟನೆ ಹೀಗಿದೆ: ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ''ಕೆಎಸ್​​ಡಿಎಲ್ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲೆಂಬ ಉದ್ದೇಶದಿಂದ ನಾವು ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ. ಅದಕ್ಕೆ ಕಾರಣ ಕೂಡಾ ಇದೆ. ಕೆಎಸ್​ಡಿಎಲ್ ಕನ್ನಡದ ಹೆಮ್ಮೆಯ ಸಂಸ್ಥೆ. ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸಂಸ್ಥೆ. ಮೊದಲು ಅವ್ಯವಹಾರ, ಅಶಿಸ್ತು ಇತ್ತು. ಆದ್ರೀಗ ಎಲ್ಲವನ್ನೂ ಬದಲಾವಣೆ ಮಾಡಲಾಗಿದೆ. ಮೊದಲು ಒಂದೇ ಶಿಫ್ಟ್​​ನಲ್ಲಿ ಕೆಲಸ ಆಗುತ್ತಿತ್ತು. ಆದ್ರೀಗ 3 ಶಿಫ್ಟ್​​ನಲ್ಲಿ ಕೆಲಸ ನಡೆಯುತ್ತಿದೆ. ಅನೇಕ ಅವ್ಯವಹಾರಗಳನ್ನು ತಡೆಯಲಾಗಿದೆ'' ಎಂದರು.

''ನಾನು ಕನ್ನಡದ ಅಸ್ಮಿತೆ ಬಗ್ಗೆ ಗೌರವವುಳ್ಳವನು. ಇದೊಂದು‌ ಟ್ರೇಡ್ ಬ್ಯುಸಿನೆಸ್ ಇದ್ದಂತೆ. ಇದನ್ನು ವಿಶ್ವಕ್ಕೆ ಪ್ರಮೋಟ್ ಮಾಡಬೇಕಿದೆ. ಯುರೋಪ್​ನಲ್ಲಿ ಜಾಸ್ಮಿನ್​ಗೆ ಬೇಡಿಕೆ ಇದೆ. ಶೇ.23ರಷ್ಟು ಬೇಡಿಕೆ ಅಚೀವ್ ಮಾಡಲಾಗಿದೆ. ನಮ್ಮ ನಿರೀಕ್ಷೆ 5 ಸಾವಿರ ಕೋಟಿಗೆ ತಲುಪಬೇಕೆಂಬುದು. ತಮನ್ನಾ ಭಾಟಿಯಾ ಆಯ್ಕೆ ವಿಚಾರದಲ್ಲಿ ಕಮಿಟಿ ಮಾಡಲಾಗಿತ್ತು. ನಾವು ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಅವರನ್ನು ಕೇಳಿದ್ವಿ. ಆದ್ರೆ ಅವರು ಒಪ್ಪಲಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ: 'ದಯವಿಟ್ಟು ವದಂತಿ ಹರಡಬೇಡಿ': ವಿಘ್ನಗಳ ಬೆನ್ನಲ್ಲೇ ಕಾಂತಾರ ರಿಲೀಸ್​ ಡೇಟ್ ಮುಂದೂಡಿಕೆ?; ರಿಷಬ್​ ಶೆಟ್ಟಿ ಸ್ಪಷ್ಟನೆ ಏನು?

ಹಾಗೇ ಪೂಜಾ ಹೆಗ್ಡೆ, ಕಿಯಾರಾ ಅಡ್ವಾಣಿ ಆಗಲ್ಲ ಅಂದ್ರು. ದೀಪಿಕಾ ಪಡುಕೋಣೆ ನಮ್ಮ ಬಜೆಟ್​ಗೆ ಆಗ್ಲಿಲ್ಲ. ತಮನ್ನಾ ಭಾಟಿಯಾ 2.8 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಕನ್ನಡ ಕಲಾವಿದರ ಬಗ್ಗೆ ನಮಗೆ ಗೌರವ ಇದೆ. ಇದು ಟೆಂಡರ್ ವರ್ಕ್ ಅಲ್ಲ. ಎಲ್ಲರೂ ಅರ್ಥೖಸಿಕೊಳ್ಳಬೇಕು. 5 ಸಾವಿರ ಕೋಟಿಗೆ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು. ನಮ್ಮ ಕನ್ಮಡದ ಸಂಸ್ಥೆ ಬೆಳೆಯಲಿ ಎಂಬ ಕಾರಣಕ್ಕೆ ನಾವು‌ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: KSDL ಉತ್ಪನ್ನಗಳಿಗೆ ನಟಿ ತಮನ್ನಾ ಭಾಟಿಯಾ ಬ್ರ್ಯಾಂಡ್ ರಾಯಭಾರಿ: ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಮೈಸೂರು ಸ್ಯಾಂಡಲ್ ಸೋಪ್ ಕನ್ನಡದ ಹೆಮ್ಮೆ. ಗತವೈಭವ ಹೊಂದಿದ ನಿಗಮ. ಮೈಸೂರು ಸ್ಯಾಂಡಲ್ ಸಂಸ್ಥೆಯನ್ನು ಮತ್ತೆ ಕಟ್ಟಬೇಕು. ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ಶೇ.40ರಷ್ಟು ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಪ್ರಸ್ತುತ 1,788 ಕೋಟಿ ವ್ಯಾಪಾರ ಮಾಡಲಾಗಿದೆ. ಈ ಬಾರಿ 415 ಕೋಟಿ‌ ರೂ. ನಿವ್ವಳ ಲಾಭ ಮಾಡಿದ್ದೇವೆ. ಸಂಸ್ಥೆಯ ಗತವೈಭವವನ್ನು ಸ್ಥಾಪನೆ ಮಾಡ್ತೇವೆ. ವಚನ ಸಾಹಿತ್ಯದ ನೆಲೆಯಿಂದ‌ ಬಂದವನು. ಕನ್ನಡದ ಬಗ್ಗೆ ಹೆಮ್ಮೆ ಇರುವವರು ನಾವು. ನನ್ನ ಅಧಿಕಾರಾವಧಿಯಲ್ಲಿ ಏನಾದ್ರು ಸಾಧಿಸಬೇಕು. ಅದಕ್ಕೆ ಈ ಪ್ರಯತ್ನ ಮಾಡ್ತಿದ್ದೇವೆ. ಕೇರಳದವರು ನಮ್ಮ‌ ಮಾದರಿಯಲ್ಲೇ ಮಾಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಮಾದರಿ ಮಾಡಿದ್ದಾರೆ. ನಮ್ಮದನ್ನು ಕಾಪಿ ಮಾಡಿದ್ದಕ್ಕೆ ಸುಪ್ರೀಂ ಮೆಟ್ಟಿಲೇರುತ್ತೇವೆ. ಡೂಪ್ಲಿಕೇಟ್ ತಡೆಗೆ ಬದ್ಧರಾಗಿದ್ದೇವೆಂದು ತಿಳಿಸಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್​ಡಿಎಲ್) ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಬಹುತೇಕ ನೆಟ್ಟಿಗರು ತಮನ್ನಾ ಭಾಟಿಯಾ ನೇಮಕದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಸೋಷಿಯಲ್ ಮೀಡಿಯಾದಲ್ಲಿ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿದ್ದು, ಈ ನಿರ್ಧಾರ ಅವಿವೇಕದ, ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ್‌ (ETV Bharat)

ಸಚಿವರ ಸ್ಪಷ್ಟನೆ ಹೀಗಿದೆ: ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ''ಕೆಎಸ್​​ಡಿಎಲ್ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲೆಂಬ ಉದ್ದೇಶದಿಂದ ನಾವು ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ. ಅದಕ್ಕೆ ಕಾರಣ ಕೂಡಾ ಇದೆ. ಕೆಎಸ್​ಡಿಎಲ್ ಕನ್ನಡದ ಹೆಮ್ಮೆಯ ಸಂಸ್ಥೆ. ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸಂಸ್ಥೆ. ಮೊದಲು ಅವ್ಯವಹಾರ, ಅಶಿಸ್ತು ಇತ್ತು. ಆದ್ರೀಗ ಎಲ್ಲವನ್ನೂ ಬದಲಾವಣೆ ಮಾಡಲಾಗಿದೆ. ಮೊದಲು ಒಂದೇ ಶಿಫ್ಟ್​​ನಲ್ಲಿ ಕೆಲಸ ಆಗುತ್ತಿತ್ತು. ಆದ್ರೀಗ 3 ಶಿಫ್ಟ್​​ನಲ್ಲಿ ಕೆಲಸ ನಡೆಯುತ್ತಿದೆ. ಅನೇಕ ಅವ್ಯವಹಾರಗಳನ್ನು ತಡೆಯಲಾಗಿದೆ'' ಎಂದರು.

''ನಾನು ಕನ್ನಡದ ಅಸ್ಮಿತೆ ಬಗ್ಗೆ ಗೌರವವುಳ್ಳವನು. ಇದೊಂದು‌ ಟ್ರೇಡ್ ಬ್ಯುಸಿನೆಸ್ ಇದ್ದಂತೆ. ಇದನ್ನು ವಿಶ್ವಕ್ಕೆ ಪ್ರಮೋಟ್ ಮಾಡಬೇಕಿದೆ. ಯುರೋಪ್​ನಲ್ಲಿ ಜಾಸ್ಮಿನ್​ಗೆ ಬೇಡಿಕೆ ಇದೆ. ಶೇ.23ರಷ್ಟು ಬೇಡಿಕೆ ಅಚೀವ್ ಮಾಡಲಾಗಿದೆ. ನಮ್ಮ ನಿರೀಕ್ಷೆ 5 ಸಾವಿರ ಕೋಟಿಗೆ ತಲುಪಬೇಕೆಂಬುದು. ತಮನ್ನಾ ಭಾಟಿಯಾ ಆಯ್ಕೆ ವಿಚಾರದಲ್ಲಿ ಕಮಿಟಿ ಮಾಡಲಾಗಿತ್ತು. ನಾವು ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಅವರನ್ನು ಕೇಳಿದ್ವಿ. ಆದ್ರೆ ಅವರು ಒಪ್ಪಲಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ: 'ದಯವಿಟ್ಟು ವದಂತಿ ಹರಡಬೇಡಿ': ವಿಘ್ನಗಳ ಬೆನ್ನಲ್ಲೇ ಕಾಂತಾರ ರಿಲೀಸ್​ ಡೇಟ್ ಮುಂದೂಡಿಕೆ?; ರಿಷಬ್​ ಶೆಟ್ಟಿ ಸ್ಪಷ್ಟನೆ ಏನು?

ಹಾಗೇ ಪೂಜಾ ಹೆಗ್ಡೆ, ಕಿಯಾರಾ ಅಡ್ವಾಣಿ ಆಗಲ್ಲ ಅಂದ್ರು. ದೀಪಿಕಾ ಪಡುಕೋಣೆ ನಮ್ಮ ಬಜೆಟ್​ಗೆ ಆಗ್ಲಿಲ್ಲ. ತಮನ್ನಾ ಭಾಟಿಯಾ 2.8 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಕನ್ನಡ ಕಲಾವಿದರ ಬಗ್ಗೆ ನಮಗೆ ಗೌರವ ಇದೆ. ಇದು ಟೆಂಡರ್ ವರ್ಕ್ ಅಲ್ಲ. ಎಲ್ಲರೂ ಅರ್ಥೖಸಿಕೊಳ್ಳಬೇಕು. 5 ಸಾವಿರ ಕೋಟಿಗೆ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು. ನಮ್ಮ ಕನ್ಮಡದ ಸಂಸ್ಥೆ ಬೆಳೆಯಲಿ ಎಂಬ ಕಾರಣಕ್ಕೆ ನಾವು‌ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: KSDL ಉತ್ಪನ್ನಗಳಿಗೆ ನಟಿ ತಮನ್ನಾ ಭಾಟಿಯಾ ಬ್ರ್ಯಾಂಡ್ ರಾಯಭಾರಿ: ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಮೈಸೂರು ಸ್ಯಾಂಡಲ್ ಸೋಪ್ ಕನ್ನಡದ ಹೆಮ್ಮೆ. ಗತವೈಭವ ಹೊಂದಿದ ನಿಗಮ. ಮೈಸೂರು ಸ್ಯಾಂಡಲ್ ಸಂಸ್ಥೆಯನ್ನು ಮತ್ತೆ ಕಟ್ಟಬೇಕು. ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ಶೇ.40ರಷ್ಟು ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಪ್ರಸ್ತುತ 1,788 ಕೋಟಿ ವ್ಯಾಪಾರ ಮಾಡಲಾಗಿದೆ. ಈ ಬಾರಿ 415 ಕೋಟಿ‌ ರೂ. ನಿವ್ವಳ ಲಾಭ ಮಾಡಿದ್ದೇವೆ. ಸಂಸ್ಥೆಯ ಗತವೈಭವವನ್ನು ಸ್ಥಾಪನೆ ಮಾಡ್ತೇವೆ. ವಚನ ಸಾಹಿತ್ಯದ ನೆಲೆಯಿಂದ‌ ಬಂದವನು. ಕನ್ನಡದ ಬಗ್ಗೆ ಹೆಮ್ಮೆ ಇರುವವರು ನಾವು. ನನ್ನ ಅಧಿಕಾರಾವಧಿಯಲ್ಲಿ ಏನಾದ್ರು ಸಾಧಿಸಬೇಕು. ಅದಕ್ಕೆ ಈ ಪ್ರಯತ್ನ ಮಾಡ್ತಿದ್ದೇವೆ. ಕೇರಳದವರು ನಮ್ಮ‌ ಮಾದರಿಯಲ್ಲೇ ಮಾಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಮಾದರಿ ಮಾಡಿದ್ದಾರೆ. ನಮ್ಮದನ್ನು ಕಾಪಿ ಮಾಡಿದ್ದಕ್ಕೆ ಸುಪ್ರೀಂ ಮೆಟ್ಟಿಲೇರುತ್ತೇವೆ. ಡೂಪ್ಲಿಕೇಟ್ ತಡೆಗೆ ಬದ್ಧರಾಗಿದ್ದೇವೆಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.