ಮೈಸೂರು: ಮುಡಾ ಪ್ರಕರಣದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ನಡೆದಿದೆ ಎನ್ನಲಾದ ಹಣ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಹೆಚ್ಚು ದಾಖಲೆಗಳನ್ನು ನೀಡುವಂತೆ ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಮುಡಾ ಹಗರಣದಲ್ಲಿ 50:50 ಅನುಪಾತದಲ್ಲಿ ಹಿಂದಿನ ಆಯುಕ್ತರು ಕಾನೂನು ಉಲ್ಲಂಘನೆ ಮಾಡಿ ಹಂಚಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಇಡಿ ತನಿಖೆಗೆ ಮತ್ತಷ್ಟು ದಾಖಲೆ ನೀಡುವಂತೆ ಮೇ 9 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದೆ.
ಶೇ.50:50 ಅನುಪಾತದಡಿ ಅಭಿವೃದ್ಧಿಗೊಂಡಿರುವ ಬಡಾವಣೆಗಳಲ್ಲಿ ಅನಧಿಕೃತವಾಗಿ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವ ಆರೋಪ ಎದುರಿಸುತ್ತಿರುವ ಮುಡಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಹೆಚ್ಚುವರಿ ಮಾಹಿತಿ ನೀಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳಿಗೆ ಸೂಚಿಸಿದೆ.
ಈ ಸಂಬಂಧ ಮೇ 9 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ವಿ.ಮುರಳಿ ಕಣ್ಣನ್ ದೇವನೂರು ಗ್ರಾಮದ ಸರ್ವೆ ನಂಬರೆ 81/2 ರಲ್ಲಿ 2 ಎಕರೆ 22 ಗುಂಟೆ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಸಂಬಂಧ ಭೂಮಾಲೀಕರಿಗೆ ನೀಡಿರುವ ಪರಿಹಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಭೂಸ್ವಾದೀನಕ್ಕೆ ಅಧಿಸೂಚನೆ ಹೊರಡಿಸಿರುವ ಪ್ರತಿ, ಆ ಭೂಮಿಯ ಮಾಲೀಕರು ಯಾರು?. ಈ ಪ್ರಕರಣದಲ್ಲಿ ಹಂಚಿಕೆ ಮಾಡಲಾದ ಕಡತ ಸಲ್ಲಿಸುವಂತೆ ಇಡಿ ತಿಳಿಸಿದೆ.
ಹೆಬ್ಬಾಳು ಗ್ರಾಮದ ಸರ್ವೆ ನಂ.88/2ರ 2ಎಕರೆ ಭೂಮಿಗೆ ಪರಿಹಾರ ನೀಡಿದ ಬಗ್ಗೆ ನೋಟಿಫಿಕೇಷನ್ ಮಾಡಿದ್ದರೆ ಅದರ ಪ್ರತಿ ಅದರ ಮಾಲೀಕರು ಯಾರು ಹಂಚಿಕೆ ಕಡತವನ್ನು ಸಲ್ಲಿಸುವಂತೆಯೂ ಜಾರಿ ನಿರ್ದೇಶನಾಲಯವು ಮುಡಾ ಆಯುಕ್ತರಿಗೆ ಸೂಚನೆ ನೀಡಿದೆ. ದಟ್ಟಗಳ್ಳಿ ಸರ್ವೆ ನಂಬರ್ 168,169, 176 ಮತ್ತು 183/1ರ ಭೂಮಿಗೆ ಪರಿಹಾರವಾಗಿ 28 ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ನಗರ ಯೋಜನಾ ಶಾಖೆಯ ಇಂಜಿನಿಯರಿಂಗ್ ಶಾಖೆಗಳಿಂದ ವರದಿ ಅಭಿಪ್ರಾಯ ಪಡೆಯಲಾಗಿತ್ತೇ, ಪಡೆದಿದ್ದರೆ ಅದರ ಪ್ರತಿಯನ್ನೂ ಸಲ್ಲಿಸುವಂತೆಯೂ ಇಡಿ ಅಧಿಕಾರಿಗಳು ಪತ್ರದಲ್ಲಿ ಸೂಚಿಸಿದ್ದಾರೆ.
ಇದನ್ನು ಓದಿ:ದೇಶದಲ್ಲೇ ಅತ್ಯಂತ ಸುರಕ್ಷಿತ ನಗರ ಬೆಂಗಳೂರು: ಯೂನಿವರ್ಸಿಟಿ ಆಫ್ ಹೈದರಾಬಾದ್ ಸಮೀಕ್ಷೆಯಲ್ಲಿ ಬಹಿರಂಗ