ETV Bharat / state

ಕಸ ಸಂಗ್ರಹ ವಾಹನಕ್ಕೆ ಮಂಜುಳಾ ಸಾರಥಿ: ಮಹಿಳಾ ಸ್ವಸಹಾಯ ಸಂಘದಿಂದಲೇ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ - LADY DRIVER

ಜಕ್ಕಲಿ ಗ್ರಾಮದ ಕಸ ಸಂಗ್ರಹಣಾ ವಾಹನದ ಸಾರಥ್ಯವನ್ನು ಮಹಿಳೆಯೇ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಮಹಿಳೆಯರೇ ಸ್ವಚ್ಛ ವಾಹಿನಿಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Gadag  Garbage vehicle driver  woman driver  ಕಸ ಸಂಗ್ರಹ ವಾಹನಕ್ಕೆ ಮಹಿಳೆ ಚಾಲಕಿ
ಸ್ವಚ್ಛ ವಾಹಿನಿಯ ಮಹಿಳಾ ಚಾಲಕಿ ಮಂಜುಳಾ ಮತ್ತು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ (ETV Bharat)
author img

By ETV Bharat Karnataka Team

Published : April 18, 2025 at 5:48 PM IST

3 Min Read

ಗದಗ: ಸಾರಿಗೆ ವಾಹನಗಳನ್ನು ಪುರುಷರಷ್ಟೇ ಚಲಾಯಿಸುವ ಸಂಪ್ರದಾಯ ಕರಗುತ್ತಾ ಬಂದಿದೆ. ಇತ್ತೀಚೆಗೆ ಅಲ್ಲಲ್ಲಿ ಮಹಿಳೆಯರು ಬಸ್, ಲಾರಿ ಮೊದಲಾದ ಭಾರಿ ವಾಹನಗಳನ್ನು ವೃತ್ತಿಪರವಾಗಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಹಾಗೆಯೇ, ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸ್ವಚ್ಛ ವಾಹಿನಿ ಚಾಲಕಿಯಾಗಿ ಕೆಲಸ ಮಾಡುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೌದು, ಜಕ್ಕಲಿ ಗ್ರಾಮ ಪಂಚಾಯತಿಯಲ್ಲಿ ಸ್ವಸಹಾಯ ಸಂಘದ ಮೂಲಕ ಚಾಲನಾ ತರಬೇತಿ ಪಡೆದು ಮಂಜುಳಾ ಯಲ್ಲಪ್ಪ ಮಾದರ ಎಂಬವರು ಸ್ವಚ್ಛ ವಾಹಿನಿ ಚಾಲಕಿಯಾಗಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಇನ್ನು ವಿಶೇಷವೆಂದ್ರೆ, ಗ್ರಾಮದ ಕಸ ವಿಂಗಡನೆಯ ಜವಾಬ್ದಾರಿಯನ್ನೂ ನಾರಿಯರೇ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮಲ್ಲವ್ವ ಭರಮಪ್ಪ ಮಾದರ, ಶಿವವ್ವ ಈರಪ್ಪ ಮಾದರ, ರೇಣುಕಾ ಪ್ರಶಾಂತ ಮಾದರ ಇವರು ಕಸ ವಿಂಗಡನೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಹಿಳೆಯರೆ ಸ್ವಚ್ಛ ವಾಹಿನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಕಸ ಸಂಗ್ರಹ ವಾಹನಕ್ಕೆ ಮಂಜುಳಾ ಸಾರಥಿ (ETV Bharat)

ಮಹಿಳಾ ಸ್ವಸಹಾಯ ಸಂಘದಿಂದಲೇ ಸ್ವಚ್ಛ ವಾಹಿನಿ ನಿರ್ವಹಣೆ: ಗ್ರಾಮ ಪಂಚಾಯತಿ ವತಿಯಿಂದ ಮನೆ ಮನೆಗೆ ತೆರಳಿ ಒಣ ಕಸವಾದ ಪ್ಲಾಸ್ಟಿಕ್ ಬಾಟಲಿ, ಗಾಜಿನ ಬಾಟಲಿ, ಪ್ಲಾಸ್ಟಿಕ್ ಚೀಲ, ಬಳಸಿ ಬಿಸಾಡುವ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಕಸ ವಿಲೇವಾರಿ ಘಟಕದಲ್ಲಿ ವಿಂಗಡಿಸಿ, ವರ್ಷಾಂತ್ಯದಲ್ಲಿ ಅವುಗಳನ್ನು ಹರಾಜು ಹಾಕುವ ಮೂಲಕ ಆದಾಯ ಗಳಿಸುವ ಯೋಚನೆಯಲ್ಲಿಯೂ ಸ್ವಸಹಾಯ ಸಂಘದ ಮಹಿಳೆಯರು ತೊಡಗಿದ್ದಾರೆ. ಅಲ್ಲದೆ ಪ್ರತಿ ಮನೆಗೆ ತಿಂಗಳಿಗೆ ರೂ. 30 ಮತ್ತು ಅಂಗಡಿಗಳಿಗೆ ರೂ.100 ಗಳನ್ನು ಸಂಗ್ರಹಿಸಿ ಅದರಲ್ಲೇ ತಮ್ಮ ವೇತನ ಪಾವತಿ ಮಾಡಿಕೊಂಡು, ಉಳಿದ ಹಣವನ್ನು ಉಳಿತಾಯ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಜಕ್ಕಲಿ ಗ್ರಾಮದ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಇವರ ಕಾರ್ಯಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಪಿಡಿಒ, ಸಿಬ್ಬಂದಿ ಬೆಂಬಲವಾಗಿ ನಿಂತಿದ್ದಾರೆ.

ತಾ.ಪಂ. ಇಒ ಮೆಚ್ಚುಗೆ: ಇಂದು ಜಕ್ಕಲಿ ಗ್ರಾಮ ಪಂಚಾಯತಿಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾವೇ ಸ್ವತಃ ವಾಹನ ಚಲಾಯಿಸಿ ಮಹಿಳೆಯರೊಂದಿಗೆ ಕಸ ಸಂಗ್ರಹ ಕಾರ್ಯದಲ್ಲಿ ಭಾಗಿಯಾದರು. ಅಲ್ಲದೆ ಶೇಂಗಾ ಎಣ್ಣೆ, ಕುಸುಬೆ ಎಣ್ಣೆ, ಗಾಣದ ಮೂಲಕ ಸಹ ಸ್ವಸಹಾಯ ಸಂಘದ ಮಹಿಳೆಯರು ಆದಾಯ ಗಳಿಸುತ್ತಿರುವ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸ್ವಸಹಾಯ ಸಂಘದವರನ್ನು ಪ್ರೋತ್ಸಾಹಿಸಲು ಗ್ರಾಮ ಪಂಚಾಯತಿ ಯೋಜನೆ ರೂಪಿಸಲಾಗುತ್ತಿದೆ. ಗ್ರಾಮದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಹಿನ್ನೆಲೆ ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸಬಲ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯ ಜೊತೆಗೂಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕ ಪಂಚಾಯತಿಯೂ ಕೂಡ ಹಲವು ಯೋಜನೆ ರೂಪಿಸಲಾಗುತ್ತಿದೆ ಅಂತಾ ಮಹಿಳೆಯರ ಜೊತೆಗೆ ಚರ್ಚೆ ನಡೆಸಿದರು.

ಜಕ್ಕಲಿ ಗ್ರಾಮದಲ್ಲಿ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರದಿಂದ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವಸಹಾಯ ಸಂಘಗಳು ಸಬಲೀಕರಣಗೊಳ್ಳುತ್ತಿವೆ. ಮೇಲಾಧಿಕಾರಿಗಳ ಸಲಹೆ, ಮಾರ್ಗದರ್ಶನ ಮೂಲಕ ಇದು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಯೋಗಿ ರಿತ್ತಿ ತಿಳಿಸಿದ್ದಾರೆ.

ಸ್ವಸಹಾಯ ಸಂಘದ ಮೂಲಕ ಡ್ರೈವಿಂಗ್ ಟ್ರೈನಿಂಗ್ ಪಡೆದುಕೊಂಡು ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಮುಂಜಾನೆ ಕಸ ಸಂಗ್ರಹಿಸಿ ಗ್ರಾಮವನ್ನು ಸ್ವಚ್ಛಗೊಳಿಸುವಲ್ಲಿ ಖುಷಿ ಇದೆ. ಇದರಿಂದ ಸ್ವಂತ ದುಡಿಮೆ ಮತ್ತು ಆದಾಯ ಗಳಿಸುವ ಖುಷಿ ಇದೆ ಎಂದು ಸ್ವಚ್ಛ ವಾಹಿನಿ ಚಾಲಕಿ ಮಂಜುಳಾ ಯಲ್ಲಪ್ಪ ಮಾದರ ಸಂತಸ ಹಂಚಿಕೊಂಡಿದ್ದಾರೆ.

ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಈಗಾಗಲೇ ಡ್ರೈವಿಂಗ್ ತರಬೇತಿ ಕೊಡಲಾಗಿದೆ. ಹಂತಹಂತವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾ.ಪಂ.ಗಳಲ್ಲೂ ಸ್ವಚ್ಛ ವಾಹಿನಿಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ - ಚಂದ್ರಶೇಖರ ಬಿ ಕಂದಕೂರ, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್, ರೋಣ

ಇದನ್ನೂ ಓದಿ: ಒಂದಲ್ಲ, ಎರಡಲ್ಲ 50 ಬಾರಿ ದೇಹಕ್ಕೆ ರಕ್ತ ವರ್ಗಾವಣೆ; ಜೀವ ಹಿಂಡುವ ಖಾಯಿಲೆಯ ನಡುವೆ 5 ಸರ್ಕಾರಿ ನೌಕರಿ ಪಡೆದ ಛಲಗಾತಿ

ಇದನ್ನೂ ಓದಿ: ಎರಡು ಜೀವ, ಒಂದು ಪಯಣ: ಒಮ್ಮೆಲೆ 4 - 2 ಸರ್ಕಾರಿ ನೌಕರಿ ಪಡೆದು ಮಿಂಚಿದ ಜೋಡಿ; ಇಲ್ಲಿದೆ ದಂಪತಿ ಯಶಸ್ಸಿನ ಪಯಣ

ಗದಗ: ಸಾರಿಗೆ ವಾಹನಗಳನ್ನು ಪುರುಷರಷ್ಟೇ ಚಲಾಯಿಸುವ ಸಂಪ್ರದಾಯ ಕರಗುತ್ತಾ ಬಂದಿದೆ. ಇತ್ತೀಚೆಗೆ ಅಲ್ಲಲ್ಲಿ ಮಹಿಳೆಯರು ಬಸ್, ಲಾರಿ ಮೊದಲಾದ ಭಾರಿ ವಾಹನಗಳನ್ನು ವೃತ್ತಿಪರವಾಗಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಹಾಗೆಯೇ, ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸ್ವಚ್ಛ ವಾಹಿನಿ ಚಾಲಕಿಯಾಗಿ ಕೆಲಸ ಮಾಡುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೌದು, ಜಕ್ಕಲಿ ಗ್ರಾಮ ಪಂಚಾಯತಿಯಲ್ಲಿ ಸ್ವಸಹಾಯ ಸಂಘದ ಮೂಲಕ ಚಾಲನಾ ತರಬೇತಿ ಪಡೆದು ಮಂಜುಳಾ ಯಲ್ಲಪ್ಪ ಮಾದರ ಎಂಬವರು ಸ್ವಚ್ಛ ವಾಹಿನಿ ಚಾಲಕಿಯಾಗಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಇನ್ನು ವಿಶೇಷವೆಂದ್ರೆ, ಗ್ರಾಮದ ಕಸ ವಿಂಗಡನೆಯ ಜವಾಬ್ದಾರಿಯನ್ನೂ ನಾರಿಯರೇ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮಲ್ಲವ್ವ ಭರಮಪ್ಪ ಮಾದರ, ಶಿವವ್ವ ಈರಪ್ಪ ಮಾದರ, ರೇಣುಕಾ ಪ್ರಶಾಂತ ಮಾದರ ಇವರು ಕಸ ವಿಂಗಡನೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಹಿಳೆಯರೆ ಸ್ವಚ್ಛ ವಾಹಿನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಕಸ ಸಂಗ್ರಹ ವಾಹನಕ್ಕೆ ಮಂಜುಳಾ ಸಾರಥಿ (ETV Bharat)

ಮಹಿಳಾ ಸ್ವಸಹಾಯ ಸಂಘದಿಂದಲೇ ಸ್ವಚ್ಛ ವಾಹಿನಿ ನಿರ್ವಹಣೆ: ಗ್ರಾಮ ಪಂಚಾಯತಿ ವತಿಯಿಂದ ಮನೆ ಮನೆಗೆ ತೆರಳಿ ಒಣ ಕಸವಾದ ಪ್ಲಾಸ್ಟಿಕ್ ಬಾಟಲಿ, ಗಾಜಿನ ಬಾಟಲಿ, ಪ್ಲಾಸ್ಟಿಕ್ ಚೀಲ, ಬಳಸಿ ಬಿಸಾಡುವ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಕಸ ವಿಲೇವಾರಿ ಘಟಕದಲ್ಲಿ ವಿಂಗಡಿಸಿ, ವರ್ಷಾಂತ್ಯದಲ್ಲಿ ಅವುಗಳನ್ನು ಹರಾಜು ಹಾಕುವ ಮೂಲಕ ಆದಾಯ ಗಳಿಸುವ ಯೋಚನೆಯಲ್ಲಿಯೂ ಸ್ವಸಹಾಯ ಸಂಘದ ಮಹಿಳೆಯರು ತೊಡಗಿದ್ದಾರೆ. ಅಲ್ಲದೆ ಪ್ರತಿ ಮನೆಗೆ ತಿಂಗಳಿಗೆ ರೂ. 30 ಮತ್ತು ಅಂಗಡಿಗಳಿಗೆ ರೂ.100 ಗಳನ್ನು ಸಂಗ್ರಹಿಸಿ ಅದರಲ್ಲೇ ತಮ್ಮ ವೇತನ ಪಾವತಿ ಮಾಡಿಕೊಂಡು, ಉಳಿದ ಹಣವನ್ನು ಉಳಿತಾಯ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಜಕ್ಕಲಿ ಗ್ರಾಮದ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಇವರ ಕಾರ್ಯಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಪಿಡಿಒ, ಸಿಬ್ಬಂದಿ ಬೆಂಬಲವಾಗಿ ನಿಂತಿದ್ದಾರೆ.

ತಾ.ಪಂ. ಇಒ ಮೆಚ್ಚುಗೆ: ಇಂದು ಜಕ್ಕಲಿ ಗ್ರಾಮ ಪಂಚಾಯತಿಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾವೇ ಸ್ವತಃ ವಾಹನ ಚಲಾಯಿಸಿ ಮಹಿಳೆಯರೊಂದಿಗೆ ಕಸ ಸಂಗ್ರಹ ಕಾರ್ಯದಲ್ಲಿ ಭಾಗಿಯಾದರು. ಅಲ್ಲದೆ ಶೇಂಗಾ ಎಣ್ಣೆ, ಕುಸುಬೆ ಎಣ್ಣೆ, ಗಾಣದ ಮೂಲಕ ಸಹ ಸ್ವಸಹಾಯ ಸಂಘದ ಮಹಿಳೆಯರು ಆದಾಯ ಗಳಿಸುತ್ತಿರುವ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸ್ವಸಹಾಯ ಸಂಘದವರನ್ನು ಪ್ರೋತ್ಸಾಹಿಸಲು ಗ್ರಾಮ ಪಂಚಾಯತಿ ಯೋಜನೆ ರೂಪಿಸಲಾಗುತ್ತಿದೆ. ಗ್ರಾಮದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಹಿನ್ನೆಲೆ ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸಬಲ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯ ಜೊತೆಗೂಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕ ಪಂಚಾಯತಿಯೂ ಕೂಡ ಹಲವು ಯೋಜನೆ ರೂಪಿಸಲಾಗುತ್ತಿದೆ ಅಂತಾ ಮಹಿಳೆಯರ ಜೊತೆಗೆ ಚರ್ಚೆ ನಡೆಸಿದರು.

ಜಕ್ಕಲಿ ಗ್ರಾಮದಲ್ಲಿ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರದಿಂದ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವಸಹಾಯ ಸಂಘಗಳು ಸಬಲೀಕರಣಗೊಳ್ಳುತ್ತಿವೆ. ಮೇಲಾಧಿಕಾರಿಗಳ ಸಲಹೆ, ಮಾರ್ಗದರ್ಶನ ಮೂಲಕ ಇದು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಯೋಗಿ ರಿತ್ತಿ ತಿಳಿಸಿದ್ದಾರೆ.

ಸ್ವಸಹಾಯ ಸಂಘದ ಮೂಲಕ ಡ್ರೈವಿಂಗ್ ಟ್ರೈನಿಂಗ್ ಪಡೆದುಕೊಂಡು ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಮುಂಜಾನೆ ಕಸ ಸಂಗ್ರಹಿಸಿ ಗ್ರಾಮವನ್ನು ಸ್ವಚ್ಛಗೊಳಿಸುವಲ್ಲಿ ಖುಷಿ ಇದೆ. ಇದರಿಂದ ಸ್ವಂತ ದುಡಿಮೆ ಮತ್ತು ಆದಾಯ ಗಳಿಸುವ ಖುಷಿ ಇದೆ ಎಂದು ಸ್ವಚ್ಛ ವಾಹಿನಿ ಚಾಲಕಿ ಮಂಜುಳಾ ಯಲ್ಲಪ್ಪ ಮಾದರ ಸಂತಸ ಹಂಚಿಕೊಂಡಿದ್ದಾರೆ.

ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಈಗಾಗಲೇ ಡ್ರೈವಿಂಗ್ ತರಬೇತಿ ಕೊಡಲಾಗಿದೆ. ಹಂತಹಂತವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾ.ಪಂ.ಗಳಲ್ಲೂ ಸ್ವಚ್ಛ ವಾಹಿನಿಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ - ಚಂದ್ರಶೇಖರ ಬಿ ಕಂದಕೂರ, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್, ರೋಣ

ಇದನ್ನೂ ಓದಿ: ಒಂದಲ್ಲ, ಎರಡಲ್ಲ 50 ಬಾರಿ ದೇಹಕ್ಕೆ ರಕ್ತ ವರ್ಗಾವಣೆ; ಜೀವ ಹಿಂಡುವ ಖಾಯಿಲೆಯ ನಡುವೆ 5 ಸರ್ಕಾರಿ ನೌಕರಿ ಪಡೆದ ಛಲಗಾತಿ

ಇದನ್ನೂ ಓದಿ: ಎರಡು ಜೀವ, ಒಂದು ಪಯಣ: ಒಮ್ಮೆಲೆ 4 - 2 ಸರ್ಕಾರಿ ನೌಕರಿ ಪಡೆದು ಮಿಂಚಿದ ಜೋಡಿ; ಇಲ್ಲಿದೆ ದಂಪತಿ ಯಶಸ್ಸಿನ ಪಯಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.