ETV Bharat / state

ಮಾಜಿ ಶಾಸಕರು, ಸಂಸದರು ರಾಷ್ಟ್ರೀಯ ಲಾಂಛನ, ಧ್ವಜ ಬಳಕೆಗೆ ಹೈಕೋರ್ಟ್​ ಗರಂ: ಮಾರ್ಗಸೂಚಿ ರಚಿಸಿ ಆದೇಶ - GUIDELINES FOR NATIONAL EMBLEMS

ರಾಷ್ಟ್ರೀಯ ಲಾಂಛನಗಳ ಬಳಕೆಗೆ ಮಾರ್ಗಸೂಚಿ ರಚಿಸಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರಿದ್ದ ​ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

karnataka-high-court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : April 25, 2025 at 7:38 AM IST

3 Min Read

ಬೆಂಗಳೂರು: ಮಾಜಿ ಶಾಸಕರು, ಸಂಸದರು ರಾಷ್ಟ್ರೀಯ ಲಾಂಛನಗಳು ಮತ್ತು ಧ್ವಜಗಳನ್ನು ತಮ್ಮ ಲೆಟರ್‌ಹೆಡ್‌ ಹಾಗೂ ವಾಹನಗಳಿಗೆ ಬಳಕೆ ಮಾಡುತ್ತಿರುವುದು ನಿಜಕ್ಕೂ ದುರುದೃಷ್ಠಕರ ಎಂದಿರುವ ಹೈಕೋರ್ಟ್‌, ರಾಷ್ಟ್ರೀಯ ಲಾಂಛನಗಳ ಬಳಕೆಗೆ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಷ್ಟ್ರೀಯ ಲಾಂಚನಗಳು ಮತ್ತು ಧ್ವಜದ ಹೆಸರುಗಳನ್ನು ಬಳಕೆ ತಡೆಯಲು ಕೋರಿ ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಧಿಕಾರದಲ್ಲಿಲ್ಲದಿದ್ದರೂ, ಮಾಜಿ ಶಾಸಕರು ಮತ್ತು ಸಂಸದರು ರಾಷ್ಟ್ರೀಯ ಲಾಂಛನ ಮತ್ತು ಧ್ವಜಗಳನ್ನು ಲೆಟರ್​​ಹೆಡ್‌ ಮತ್ತು ವಾಹನಗಳ ಮೇಲೆ ಬಳಕೆ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇದೊಂದು ತಪ್ಪು ಸಂದೇಶ ನೀಡುತ್ತಿದ್ದು, ಇದನ್ನು ತಡೆಯಬೇಕಾಗಿದೆ. ಕಾನೂನು ಜಾರಿ ಸಂಸ್ಥೆಗಳು ತಕ್ಷಣ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಕಾಯಿದೆಗಳ ಕಟ್ಟುನಿಟ್ಟಿನ ಕಾರಿಗೆ ನಿರ್ದೇಶನ: ಸಾರ್ವಜನಿಕ ಸ್ಥಳಗಳು ಮತ್ತು ವಾಹನಗಳಲ್ಲಿ ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳನ್ನು ಅನಧಿಕೃತ ಬಳಕೆ ಮತ್ತು ದುರುಪಯೋಗ ತಡೆಗಟ್ಟಲು 1950ರ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆ ಮತ್ತು 1982ರ ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ, ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ, 2005, ಮತ್ತು ಭಾರತದ ರಾಜ್ಯ ಲಾಂಛನ (ಬಳಕೆ ನಿಯಂತ್ರಣ) ನಿಯಮಗಳು, 2007, 2010ರ ನಿಯಮಗಳು ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ರ ಎಲ್ಲ ಕಾಯಿದೆಗಳಲ್ಲಿ ಅನ್ವಯವಾಗುವ ನಿಯಮಗಳು, ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989, ವಿಶೇಷವಾಗಿ 145-A (ರಾಜ್ಯ ಲಾಂಛನದ ಅನುಚಿತ ಬಳಕೆಯನ್ನು ನಿಷೇಧಿಸುವುದು) ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್​ ಸೂಚಿಸಿದೆ.

ಈ ಸಂಬಂಧದ ಕಾನೂನುಗಳನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಕೇಂದ್ರ ಗೃಹ ವ್ಯವಹಾರಗಳು, ರಸ್ತೆ ಸಾರಿಗೆ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ನಿರ್ದೇಶಕರು, ರಾಜ್ಯ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್​ ಪರಮಾದೇಶ ಹೊರಡಿಸಿದೆ.

ಇದನ್ನೂ ಓದಿ: ಸ್ಮಾರ್ಟ್​ ವಿದ್ಯುತ್​ ಮೀಟರ್​ಗಳಿಗೆ ಹೆಚ್ಚುವರಿ ಮೊತ್ತ ನಿಗದಿ: ಸರ್ಕಾರಕ್ಕೆ ನೋಟಿಸ್​

ಅಲ್ಲದೆ, ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಲಾಂಛನಗಳು ನಮ್ಮ ರಾಷ್ಟ್ರ ಮತ್ತು ದೇಶದ ಹೆಮ್ಮೆ ಹಾಗೂ ಗೌರರವನ್ನು ಪ್ರತಿನಿಧಿಸುತ್ತವೆ. ಅವು ದೇಶದ ಸಾರ್ವಭೌಮತ್ವವನ್ನು ಸೂಚಿಸಲಿವೆ. ಅಷ್ಟೇ ಅಲ್ಲದೆ, ಈ ಚಿಹ್ನೆಗಳು ಲಾಂಛನಗಳು ಮತ್ತು ಹೆಸರುಗಳು ರಾಷ್ಟ್ರದ ಪ್ರಕಾಶಮಾನವಾದ ಕಥೆಗಳನ್ನು ತಿಳಿಸುತ್ತವೆ. ಜೊತೆಗೆ ನಮ್ಮ ಭವ್ಯ ಇತಿಹಾಸ ಆದರ್ಶಗಳು, ಸಂಸ್ಕೃತಿ, ಮೂಲಭೂತ ಮೌಲ್ಯಗಳು ಹಾಗೂ ರಾಷ್ಟ್ರೀಯ ನೀತಿಗಳನ್ನು ಬೋಧಿಸುತ್ತವೆ. ಅವುಗಳ ರಚನೆಯ ಶೈಲಿ ಭಾರತೀಯ ನಾಗರಿಕತೆ ಮತ್ತು ಇತಿಹಾಸದ ಹೆಗ್ಗುರುತುಗಳನ್ನು ಪ್ರತಿಬಿಂಭಿಸುತ್ತವೆ. ರಾಷ್ಟ್ರದ ಸ್ಥಾನಮಾನ ಮತ್ತು ಘನತೆಯನ್ನು ಎತ್ತಿ ತೋರಿಸಲು ಇರುವು ಗುರುತುಗಳಾಗಿವೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಮಾರ್ಗಸೂಚಿಗಳು:

  • ಪ್ರಸ್ತುತ ನಿಷೇಧಿಸಲಾದ ಧ್ವಜಗಳು, ಲಾಂಛನಗಳು, ಚಿಹ್ನೆಗಳು, ಲೋಗೋಗಳು ತಕ್ಷಣ ತೆರವು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿ, ನಾಲ್ಕು ವಾರಗಳಲ್ಲಿ ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು.
  • ವಿವಿಧ ರೂಪದಲ್ಲಿರುವ ರಾಷ್ಟ್ರೀಯ ಲಾಂಛನ ಮತ್ತು ರಾಷ್ಟ್ರೀಯ ಚಿಹ್ನೆಗಳ ದುರುಪಯೋಗವಾಗದಂತೆ ತಡೆಗಟ್ಟಬೇಕು. ಈ ಸಂಬಂಧ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿಸುವುದಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  • ಅನಧಿಕೃತವಾಗಿ ಬಳಕೆ ಮಾಡುವುದು ಕಂಡು ಬಂದರೆ ಕಠಿಣ ಕ್ರಮಕ್ಕೆ ಮುಂದಾಗಬೇಕು.
  • ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಲ್ಲಿ ಅದನ್ನು ದಾಖಲಿಸಿಕೊಂಡು, ಕ್ರಮ ಕೈಗೊಳ್ಳುವುದಕ್ಕಾಗಿ ಅಧಿಕಾರಿಗಳಿಗೆ ಅಗತ್ಯ ಸುತ್ತೋಲೆಗಳನ್ನು ಹೊರಡಿಸಬೇಕು.
  • ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಸ್ಥೆಯಿಂದ ರಾಷ್ಟ್ರೀಯ ಚಿಹ್ನೆಗಳು ದುರುಪಯೋಗ ಮತ್ತು ಅನಧಿಕೃತವಾಗಿ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳು ಮತ್ತು ಕಾನೂನು ಪದವಿ ವಿದ್ಯಾರ್ಥಿಗಳನ್ನು ಭಾಗಿಯಾಗುವಂತೆ ಮಾಡಬೇಕು.
  • ಅಂತಹ ದುರ್ಬಳಕೆ ಮಾಡಿಕೊಳ್ಳುವ ವಾಹನಗಳಿಗೆ ದಂಡ ವಿಧಿಸುವುದು ಮತ್ತು ಆ ವಾಹನದ ಚಾಲಕನ ಚಾಲನಾ ಪರವಾನಿಗೆ ರದ್ದುಗೊಳಿಸುವುದಕ್ಕಾಗಿ ನಿಯಮಗಳನ್ನು ರೂಪಿಸಬೇಕು.
  • ರಾಷ್ಟ್ರೀಯ ಲಾಂಛನಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಚಾರ ಪೊಲೀಸರು ಕ್ರಮಕೈಗೊಳ್ಳುವುದಕ್ಕಾಗಿ ತರಬೇತಿ ನೀಡಬೇಕು ಎಂದು ನ್ಯಾಯಪೀಠ ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ನೌಕರಿಗೆ ಕ್ರಿಮಿನಲ್‌ ಅಪರಾಧ ಅಡ್ಡಿಯಾದರೆ, ಆರೋಪ ಹೊತ್ತವರನ್ನು ಸೇವೆಯಿಂದ ತೆಗೆಯಬಹುದು: ಹೈಕೋರ್ಟ್

ಬೆಂಗಳೂರು: ಮಾಜಿ ಶಾಸಕರು, ಸಂಸದರು ರಾಷ್ಟ್ರೀಯ ಲಾಂಛನಗಳು ಮತ್ತು ಧ್ವಜಗಳನ್ನು ತಮ್ಮ ಲೆಟರ್‌ಹೆಡ್‌ ಹಾಗೂ ವಾಹನಗಳಿಗೆ ಬಳಕೆ ಮಾಡುತ್ತಿರುವುದು ನಿಜಕ್ಕೂ ದುರುದೃಷ್ಠಕರ ಎಂದಿರುವ ಹೈಕೋರ್ಟ್‌, ರಾಷ್ಟ್ರೀಯ ಲಾಂಛನಗಳ ಬಳಕೆಗೆ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಷ್ಟ್ರೀಯ ಲಾಂಚನಗಳು ಮತ್ತು ಧ್ವಜದ ಹೆಸರುಗಳನ್ನು ಬಳಕೆ ತಡೆಯಲು ಕೋರಿ ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಧಿಕಾರದಲ್ಲಿಲ್ಲದಿದ್ದರೂ, ಮಾಜಿ ಶಾಸಕರು ಮತ್ತು ಸಂಸದರು ರಾಷ್ಟ್ರೀಯ ಲಾಂಛನ ಮತ್ತು ಧ್ವಜಗಳನ್ನು ಲೆಟರ್​​ಹೆಡ್‌ ಮತ್ತು ವಾಹನಗಳ ಮೇಲೆ ಬಳಕೆ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇದೊಂದು ತಪ್ಪು ಸಂದೇಶ ನೀಡುತ್ತಿದ್ದು, ಇದನ್ನು ತಡೆಯಬೇಕಾಗಿದೆ. ಕಾನೂನು ಜಾರಿ ಸಂಸ್ಥೆಗಳು ತಕ್ಷಣ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಕಾಯಿದೆಗಳ ಕಟ್ಟುನಿಟ್ಟಿನ ಕಾರಿಗೆ ನಿರ್ದೇಶನ: ಸಾರ್ವಜನಿಕ ಸ್ಥಳಗಳು ಮತ್ತು ವಾಹನಗಳಲ್ಲಿ ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳನ್ನು ಅನಧಿಕೃತ ಬಳಕೆ ಮತ್ತು ದುರುಪಯೋಗ ತಡೆಗಟ್ಟಲು 1950ರ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆ ಮತ್ತು 1982ರ ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ, ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ, 2005, ಮತ್ತು ಭಾರತದ ರಾಜ್ಯ ಲಾಂಛನ (ಬಳಕೆ ನಿಯಂತ್ರಣ) ನಿಯಮಗಳು, 2007, 2010ರ ನಿಯಮಗಳು ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ರ ಎಲ್ಲ ಕಾಯಿದೆಗಳಲ್ಲಿ ಅನ್ವಯವಾಗುವ ನಿಯಮಗಳು, ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989, ವಿಶೇಷವಾಗಿ 145-A (ರಾಜ್ಯ ಲಾಂಛನದ ಅನುಚಿತ ಬಳಕೆಯನ್ನು ನಿಷೇಧಿಸುವುದು) ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್​ ಸೂಚಿಸಿದೆ.

ಈ ಸಂಬಂಧದ ಕಾನೂನುಗಳನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಕೇಂದ್ರ ಗೃಹ ವ್ಯವಹಾರಗಳು, ರಸ್ತೆ ಸಾರಿಗೆ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ನಿರ್ದೇಶಕರು, ರಾಜ್ಯ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್​ ಪರಮಾದೇಶ ಹೊರಡಿಸಿದೆ.

ಇದನ್ನೂ ಓದಿ: ಸ್ಮಾರ್ಟ್​ ವಿದ್ಯುತ್​ ಮೀಟರ್​ಗಳಿಗೆ ಹೆಚ್ಚುವರಿ ಮೊತ್ತ ನಿಗದಿ: ಸರ್ಕಾರಕ್ಕೆ ನೋಟಿಸ್​

ಅಲ್ಲದೆ, ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಲಾಂಛನಗಳು ನಮ್ಮ ರಾಷ್ಟ್ರ ಮತ್ತು ದೇಶದ ಹೆಮ್ಮೆ ಹಾಗೂ ಗೌರರವನ್ನು ಪ್ರತಿನಿಧಿಸುತ್ತವೆ. ಅವು ದೇಶದ ಸಾರ್ವಭೌಮತ್ವವನ್ನು ಸೂಚಿಸಲಿವೆ. ಅಷ್ಟೇ ಅಲ್ಲದೆ, ಈ ಚಿಹ್ನೆಗಳು ಲಾಂಛನಗಳು ಮತ್ತು ಹೆಸರುಗಳು ರಾಷ್ಟ್ರದ ಪ್ರಕಾಶಮಾನವಾದ ಕಥೆಗಳನ್ನು ತಿಳಿಸುತ್ತವೆ. ಜೊತೆಗೆ ನಮ್ಮ ಭವ್ಯ ಇತಿಹಾಸ ಆದರ್ಶಗಳು, ಸಂಸ್ಕೃತಿ, ಮೂಲಭೂತ ಮೌಲ್ಯಗಳು ಹಾಗೂ ರಾಷ್ಟ್ರೀಯ ನೀತಿಗಳನ್ನು ಬೋಧಿಸುತ್ತವೆ. ಅವುಗಳ ರಚನೆಯ ಶೈಲಿ ಭಾರತೀಯ ನಾಗರಿಕತೆ ಮತ್ತು ಇತಿಹಾಸದ ಹೆಗ್ಗುರುತುಗಳನ್ನು ಪ್ರತಿಬಿಂಭಿಸುತ್ತವೆ. ರಾಷ್ಟ್ರದ ಸ್ಥಾನಮಾನ ಮತ್ತು ಘನತೆಯನ್ನು ಎತ್ತಿ ತೋರಿಸಲು ಇರುವು ಗುರುತುಗಳಾಗಿವೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಮಾರ್ಗಸೂಚಿಗಳು:

  • ಪ್ರಸ್ತುತ ನಿಷೇಧಿಸಲಾದ ಧ್ವಜಗಳು, ಲಾಂಛನಗಳು, ಚಿಹ್ನೆಗಳು, ಲೋಗೋಗಳು ತಕ್ಷಣ ತೆರವು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿ, ನಾಲ್ಕು ವಾರಗಳಲ್ಲಿ ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು.
  • ವಿವಿಧ ರೂಪದಲ್ಲಿರುವ ರಾಷ್ಟ್ರೀಯ ಲಾಂಛನ ಮತ್ತು ರಾಷ್ಟ್ರೀಯ ಚಿಹ್ನೆಗಳ ದುರುಪಯೋಗವಾಗದಂತೆ ತಡೆಗಟ್ಟಬೇಕು. ಈ ಸಂಬಂಧ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿಸುವುದಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  • ಅನಧಿಕೃತವಾಗಿ ಬಳಕೆ ಮಾಡುವುದು ಕಂಡು ಬಂದರೆ ಕಠಿಣ ಕ್ರಮಕ್ಕೆ ಮುಂದಾಗಬೇಕು.
  • ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಲ್ಲಿ ಅದನ್ನು ದಾಖಲಿಸಿಕೊಂಡು, ಕ್ರಮ ಕೈಗೊಳ್ಳುವುದಕ್ಕಾಗಿ ಅಧಿಕಾರಿಗಳಿಗೆ ಅಗತ್ಯ ಸುತ್ತೋಲೆಗಳನ್ನು ಹೊರಡಿಸಬೇಕು.
  • ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಸ್ಥೆಯಿಂದ ರಾಷ್ಟ್ರೀಯ ಚಿಹ್ನೆಗಳು ದುರುಪಯೋಗ ಮತ್ತು ಅನಧಿಕೃತವಾಗಿ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳು ಮತ್ತು ಕಾನೂನು ಪದವಿ ವಿದ್ಯಾರ್ಥಿಗಳನ್ನು ಭಾಗಿಯಾಗುವಂತೆ ಮಾಡಬೇಕು.
  • ಅಂತಹ ದುರ್ಬಳಕೆ ಮಾಡಿಕೊಳ್ಳುವ ವಾಹನಗಳಿಗೆ ದಂಡ ವಿಧಿಸುವುದು ಮತ್ತು ಆ ವಾಹನದ ಚಾಲಕನ ಚಾಲನಾ ಪರವಾನಿಗೆ ರದ್ದುಗೊಳಿಸುವುದಕ್ಕಾಗಿ ನಿಯಮಗಳನ್ನು ರೂಪಿಸಬೇಕು.
  • ರಾಷ್ಟ್ರೀಯ ಲಾಂಛನಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಚಾರ ಪೊಲೀಸರು ಕ್ರಮಕೈಗೊಳ್ಳುವುದಕ್ಕಾಗಿ ತರಬೇತಿ ನೀಡಬೇಕು ಎಂದು ನ್ಯಾಯಪೀಠ ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ನೌಕರಿಗೆ ಕ್ರಿಮಿನಲ್‌ ಅಪರಾಧ ಅಡ್ಡಿಯಾದರೆ, ಆರೋಪ ಹೊತ್ತವರನ್ನು ಸೇವೆಯಿಂದ ತೆಗೆಯಬಹುದು: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.