ETV Bharat / state

ಬೆಳಗಾವಿಯಲ್ಲಿ ಮೋದಿ: ಜಗದೀಶ್​ ಶೆಟ್ಟರ್​ ಪತ್ನಿ, ಸೊಸೆಯಂದಿರು ಹೇಳಿದ್ದೇನು ಗೊತ್ತಾ? - Modi In Belagavi - MODI IN BELAGAVI

ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸಿರುವ ಕುರಿತು ಜಗದೀಶ್​ ಶೆಟ್ಟರ್​ ಕುಟುಂಬ ಸಂತಸ ವ್ಯಕ್ತಪಡಿಸಿದ್ದು ಶೆಟ್ಟರ್​ ಪತ್ನಿ, ಸೊಸೆಯಂದಿರ ಹೇಳಿಕೆಗಳು ಇಲ್ಲಿವೆ.

ಜಗದೀಶ್​ ಶೆಟ್ಟರ್ ಕುಟುಂಬ ಪ್ರತಿಕ್ರಿಯೆ
ಜಗದೀಶ್​ ಶೆಟ್ಟರ್ ಕುಟುಂಬ ಪ್ರತಿಕ್ರಿಯೆ
author img

By ETV Bharat Karnataka Team

Published : April 28, 2024 at 12:24 PM IST

Updated : April 28, 2024 at 2:15 PM IST

1 Min Read
ಜಗದೀಶ್​ ಶೆಟ್ಟರ್ ಕುಟುಂಬ ಪ್ರತಿಕ್ರಿಯೆ

ಬೆಳಗಾವಿ: ಕುಂದಾನಗರಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ ಮತಬೇಟಿ ನಡೆಸಿದರು. ಸಮಾವೇಶದ ವೇದಿಕೆಗೆ ಮೋದಿ ಆಗಮನಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಪತ್ನಿ ಹಾಗೂ ಸೊಸೆಯಂದಿರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದರು.

ಜಗದೀಶ್​ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಮಾತನಾಡಿ, "ಮೋದಿ ಅವರು ಬರುತ್ತಿರುವುದು ಮತ್ತು ಲಕ್ಷಾಂತರ ಜನ ಸೇರಿದ್ದು ತುಂಬಾ ಖುಷಿ ತಂದಿದೆ. ಪ್ರಧಾನಿಗೆ ಆತ್ಮೀಯ ಸ್ವಾಗತ ಕೋರುತ್ತೇವೆ. ನಾವು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ" ಎಂದರು.

ಸೊಸೆ ಶ್ರದ್ಧಾ ಶೆಟ್ಟರ್ ಮಾತನಾಡಿ, "ಜನರ ಅಭಿಮಾನ ಕಂಡು ತುಂಬಾ ಸಂತೋಷವಾಗುತ್ತಿದೆ. ಇವತ್ತೇ ನಾವು ಗೆಲುವು ಸಾಧಿಸಿದ್ದೇವೆ ಎಂದು ನಮಗನ್ನಿಸುತ್ತಿದೆ. ನಾನು ಕೂಡ ಮೋದಿ ಅವರನ್ನು ನೋಡಲು ಕಾತುರಳಾಗಿದ್ದೇನೆ. ಹಿಂದೆಯೂ ಜನ ನಮ್ಮ ಕೈ ಹಿಡಿದಿದ್ದಾರೆ, ಈ ಬಾರಿಯೂ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

ಮತ್ತೋರ್ವ ಸೊಸೆ ಅಂಚಲ್ ಶೆಟ್ಟರ್ ಮಾತನಾಡಿ, "ನಾನು ವೈಯಕ್ತಿಕವಾಗಿ ಮೋದಿ ಅವರ ಅಭಿಮಾನಿ. ಹಾಗಾಗಿ, ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲ. ಬೆಳಗಾವಿಯಲ್ಲೇ ಮಾವನವರ ಪ್ರಚಾರದಲ್ಲಿ ತೊಡಗಿದ್ದೇನೆ" ಎಂದು ತಿಳಿಸಿದರು.

ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಮೋದಿ ಭಾಷಣ ಮಾಡುತ್ತಿದ್ದಾರೆ. ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಬಿಜೆಪಿ ಕಾರ್ಯಕರ್ತರು ಮೋದಿ ಭಾವಚಿತ್ರಗಳನ್ನು ಹಿಡಿದು ಮೋದಿ, ಮೋದಿ ಎಂಬ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಓರ್ವ ಮೋದಿ ಅಭಿಮಾನಿ ಪ್ರತಿಕ್ರಿಯಿಸಿ, "ಎರಡನೇ ಬಾರಿ ಮೋದಿ ಅವರನ್ನು ನೋಡಲು ಬಂದಿದ್ದೇನೆ. ಯಾವಾಗ ಮೋದಿ ನೋಡುತ್ತೇನೋ ಎಂದು ಕಾಯುತ್ತಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಂದು ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ - Modi Rally In Davanagere

ಜಗದೀಶ್​ ಶೆಟ್ಟರ್ ಕುಟುಂಬ ಪ್ರತಿಕ್ರಿಯೆ

ಬೆಳಗಾವಿ: ಕುಂದಾನಗರಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ ಮತಬೇಟಿ ನಡೆಸಿದರು. ಸಮಾವೇಶದ ವೇದಿಕೆಗೆ ಮೋದಿ ಆಗಮನಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಪತ್ನಿ ಹಾಗೂ ಸೊಸೆಯಂದಿರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದರು.

ಜಗದೀಶ್​ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಮಾತನಾಡಿ, "ಮೋದಿ ಅವರು ಬರುತ್ತಿರುವುದು ಮತ್ತು ಲಕ್ಷಾಂತರ ಜನ ಸೇರಿದ್ದು ತುಂಬಾ ಖುಷಿ ತಂದಿದೆ. ಪ್ರಧಾನಿಗೆ ಆತ್ಮೀಯ ಸ್ವಾಗತ ಕೋರುತ್ತೇವೆ. ನಾವು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ" ಎಂದರು.

ಸೊಸೆ ಶ್ರದ್ಧಾ ಶೆಟ್ಟರ್ ಮಾತನಾಡಿ, "ಜನರ ಅಭಿಮಾನ ಕಂಡು ತುಂಬಾ ಸಂತೋಷವಾಗುತ್ತಿದೆ. ಇವತ್ತೇ ನಾವು ಗೆಲುವು ಸಾಧಿಸಿದ್ದೇವೆ ಎಂದು ನಮಗನ್ನಿಸುತ್ತಿದೆ. ನಾನು ಕೂಡ ಮೋದಿ ಅವರನ್ನು ನೋಡಲು ಕಾತುರಳಾಗಿದ್ದೇನೆ. ಹಿಂದೆಯೂ ಜನ ನಮ್ಮ ಕೈ ಹಿಡಿದಿದ್ದಾರೆ, ಈ ಬಾರಿಯೂ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

ಮತ್ತೋರ್ವ ಸೊಸೆ ಅಂಚಲ್ ಶೆಟ್ಟರ್ ಮಾತನಾಡಿ, "ನಾನು ವೈಯಕ್ತಿಕವಾಗಿ ಮೋದಿ ಅವರ ಅಭಿಮಾನಿ. ಹಾಗಾಗಿ, ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲ. ಬೆಳಗಾವಿಯಲ್ಲೇ ಮಾವನವರ ಪ್ರಚಾರದಲ್ಲಿ ತೊಡಗಿದ್ದೇನೆ" ಎಂದು ತಿಳಿಸಿದರು.

ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಮೋದಿ ಭಾಷಣ ಮಾಡುತ್ತಿದ್ದಾರೆ. ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಬಿಜೆಪಿ ಕಾರ್ಯಕರ್ತರು ಮೋದಿ ಭಾವಚಿತ್ರಗಳನ್ನು ಹಿಡಿದು ಮೋದಿ, ಮೋದಿ ಎಂಬ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಓರ್ವ ಮೋದಿ ಅಭಿಮಾನಿ ಪ್ರತಿಕ್ರಿಯಿಸಿ, "ಎರಡನೇ ಬಾರಿ ಮೋದಿ ಅವರನ್ನು ನೋಡಲು ಬಂದಿದ್ದೇನೆ. ಯಾವಾಗ ಮೋದಿ ನೋಡುತ್ತೇನೋ ಎಂದು ಕಾಯುತ್ತಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಂದು ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ - Modi Rally In Davanagere

Last Updated : April 28, 2024 at 2:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.