ETV Bharat / state

ರಾಯಚೂರು: ಬೊಲೆರೊ ಪಿಕಪ್ ಅಪಘಾತ; ಸ್ಥಳದಲ್ಲೇ ನಾಲ್ವರ ದುರ್ಮರಣ - FOUR KILLED IN ROAD ACCIDENT

ಬೊಲೆರೊ ಪಿಕಪ್​​ ವಾಹನವು ಅಪಘಾತಕ್ಕೀಡಾಗಿ ಸ್ಥಳದಲ್ಲೇ ನಾಲ್ವರು ಅಸುನೀಗಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ತಡರಾತ್ರಿ ಸಂಭವಿಸಿದೆ.

four-people-killed-after-bolero-pickup-met-with-an-accident-near-devadurga
ಅಪಘಾತಕ್ಕೀಡಾದ ಬೊಲೆರೊ ಪಿಕಪ್ (ETV Bharat)
author img

By ETV Bharat Karnataka Team

Published : April 18, 2025 at 9:06 AM IST

1 Min Read

ರಾಯಚೂರು: ಕುರಿಗಳ ಖರೀದಿಗೆಂದು ಸಂತೆಗೆ ಹೊರಟಿದ್ದ ಬೊಲೆರೊ ಪಿಕಪ್​​ ವಾಹನವು ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ.

ಪಿಕಪ್ ವಾಹನದಲ್ಲಿದ್ದ ನಾಗರಾಜ್, ಸೋಮ, ನಾಗಭೂಷಣ ಹಾಗೂ ಮುರಳಿ ಮೃತರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆನಂದ್​ ಎಂಬಾತನಿಗೆ ಗಾಯಗಳಾಗಿದ್ದು, ರಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ತೆಲಂಗಾಣದ ಹಿಂದೂಪುರ ಮೂಲದವರು ಎಂದು ತಿಳಿದುಬಂದಿದೆ.

four people killed after Bolero pickup met with an accident near devadurga
ಅಪಘಾತಕ್ಕೀಡಾದ ವಾಹನ (ETV Bharat)

ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಾಪುರದ ಸಂತೆಗೆ ತೆರಳುವ ವೇಳೆ ಮಾರ್ಗ ಮಧ್ಯ ಈ ದುರ್ಘಟನೆ ಜರುಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗಬ್ಬೂರು ಪೊಲೀಸರು ಭೇಟಿ ನೀಡಿ, ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

four people killed after Bolero pickup met with an accident near devadurga
ಅಪಘಾತಕ್ಕೀಡಾದ ವಾಹನ (ETV Bharat)

ಪ್ರತ್ಯೇಕ ಘಟನೆ, ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಸಾವು: ಗುರುರಾಯರ ಏಕಶಿಲಾ ಬೃಂದಾವನ ದರ್ಶನಕ್ಕೆ ಬಂದಿದ್ದ ಯುವಕರಿಬ್ಬರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

youth drowned in tungabhadra river
ನದಿಯಲ್ಲಿ ಮುಳುಗಿದವರನ್ನು ಹುಡುಕುತ್ತಿರುವುದು (ETV Bharat)

ಮೃತರನ್ನು ಮುತ್ತುರಾಜ್(24) ಹಾಗೂ ಮದನ್ (20) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲದವರಾಗಿದ್ದಾರೆ. 15 ಜನರ ತಂಡ ಎಲೆಬಿಚ್ಚಾಲಿ ಗುರುರಾಯರ ಏಕಶಿಲಾ ಬೃಂದಾವನ ದರ್ಶನಕ್ಕೆ ಬಂದಿದ್ದರು. ಈ ಸಮಯದಲ್ಲಿ ನದಿಯಲ್ಲಿ ಈಜಲು ಹೋಗಿದ್ದಾಗ ಇಬ್ಬರು ನೀರಿನಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶವಗಳನ್ನು ನದಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಲಾರಿಯಲ್ಲಿ ಹಠಾತ್ ಬೆಂಕಿ: ಪೀಣ್ಯ ಸಂಚಾರ ಬಂದ್

ರಾಯಚೂರು: ಕುರಿಗಳ ಖರೀದಿಗೆಂದು ಸಂತೆಗೆ ಹೊರಟಿದ್ದ ಬೊಲೆರೊ ಪಿಕಪ್​​ ವಾಹನವು ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ.

ಪಿಕಪ್ ವಾಹನದಲ್ಲಿದ್ದ ನಾಗರಾಜ್, ಸೋಮ, ನಾಗಭೂಷಣ ಹಾಗೂ ಮುರಳಿ ಮೃತರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆನಂದ್​ ಎಂಬಾತನಿಗೆ ಗಾಯಗಳಾಗಿದ್ದು, ರಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ತೆಲಂಗಾಣದ ಹಿಂದೂಪುರ ಮೂಲದವರು ಎಂದು ತಿಳಿದುಬಂದಿದೆ.

four people killed after Bolero pickup met with an accident near devadurga
ಅಪಘಾತಕ್ಕೀಡಾದ ವಾಹನ (ETV Bharat)

ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಾಪುರದ ಸಂತೆಗೆ ತೆರಳುವ ವೇಳೆ ಮಾರ್ಗ ಮಧ್ಯ ಈ ದುರ್ಘಟನೆ ಜರುಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗಬ್ಬೂರು ಪೊಲೀಸರು ಭೇಟಿ ನೀಡಿ, ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

four people killed after Bolero pickup met with an accident near devadurga
ಅಪಘಾತಕ್ಕೀಡಾದ ವಾಹನ (ETV Bharat)

ಪ್ರತ್ಯೇಕ ಘಟನೆ, ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಸಾವು: ಗುರುರಾಯರ ಏಕಶಿಲಾ ಬೃಂದಾವನ ದರ್ಶನಕ್ಕೆ ಬಂದಿದ್ದ ಯುವಕರಿಬ್ಬರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

youth drowned in tungabhadra river
ನದಿಯಲ್ಲಿ ಮುಳುಗಿದವರನ್ನು ಹುಡುಕುತ್ತಿರುವುದು (ETV Bharat)

ಮೃತರನ್ನು ಮುತ್ತುರಾಜ್(24) ಹಾಗೂ ಮದನ್ (20) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲದವರಾಗಿದ್ದಾರೆ. 15 ಜನರ ತಂಡ ಎಲೆಬಿಚ್ಚಾಲಿ ಗುರುರಾಯರ ಏಕಶಿಲಾ ಬೃಂದಾವನ ದರ್ಶನಕ್ಕೆ ಬಂದಿದ್ದರು. ಈ ಸಮಯದಲ್ಲಿ ನದಿಯಲ್ಲಿ ಈಜಲು ಹೋಗಿದ್ದಾಗ ಇಬ್ಬರು ನೀರಿನಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶವಗಳನ್ನು ನದಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಲಾರಿಯಲ್ಲಿ ಹಠಾತ್ ಬೆಂಕಿ: ಪೀಣ್ಯ ಸಂಚಾರ ಬಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.