ETV Bharat / state

ಭಯದ ವಾತಾವರಣ; ಗನ್ ಮ್ಯಾನ್​ಗಾಗಿ ಮನವಿ ಮಾಡಿದರೂ ನೀಡಿಲ್ಲ - ಮಾಜಿ ಶಾಸಕಿ ರೂಪಾಲಿ ನಾಯ್ಕ - APPEAL FOR GUNMAN

ಕಾರವಾರದಲ್ಲಿ ಭಯದ ವಾತಾವರಣವಿದ್ದು, ಮನವಿ ಮಾಡಿದ ಬಳಿಕವೂ ನಮಗೆ ಗನ್​ ಮ್ಯಾನ್​ ನೀಡಿಲ್ಲ. ಏನೋ ಪಿತೂರಿ ಇದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ದೂರಿದ್ದಾರೆ.

FORMER MLA ROOPALI NAIK
ಮಾಜಿ ಶಾಸಕಿ ರೂಪಾಲಿ ನಾಯ್ಕ (ETV Bharat)
author img

By ETV Bharat Karnataka Team

Published : June 11, 2025 at 7:33 AM IST

1 Min Read

ಕಾರವಾರ: ಭಯದ ವಾತಾವರಣ ಇರುವ ಕಾರಣ ಗನ್ ಮ್ಯಾನ್ ನೀಡುವಂತೆ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಿರುವಾಗ ಭಯದ ವಾತಾವರಣ ಇರುವ ಬಗ್ಗೆ ತಿಳಿಸಿದಾಗ ಭದ್ರತೆಗೆ ಗನ್ ಮೆನ್ ನೀಡಲಾಗಿತ್ತು. ಚುನಾವಣೆ ಬಳಿಕ ಮತ್ತೆ ವಾಪಸ್ ಪಡೆಯಲಾಗಿದೆ. ಇಂದಿಗೂ ಭಯದ ವಾತಾವರಣ ಇರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ, ಗೃಹಮಂತ್ರಿಗೆ ಮನವಿ ನೀಡಿದ್ದೆವು. ಆದರೆ, ಈವರೆಗೂ ನೀಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮಗೆ ಒಂದು ತಿಂಗಳು ಮಾತ್ರ ಗನ್ ಮ್ಯಾನ್ ನೀಡಲು ಅವಕಾಶ ಇರುವ ಬಗ್ಗೆ ತಿಳಿಸಿದ್ದರು. ಅದರಂತೆ ಒಂದು ತಿಂಗಳು ನೀಡಲೂ ಕೋರಲಾಗಿತ್ತು. ಇತ್ತೀಚೆಗೆ ಕಾರವಾರದಲ್ಲಿ ಕೊಲೆಯಾದಾಗಲೂ ಭಯದ ವಾತಾವರಣ ಇರುವ ಬಗ್ಗೆ ತಿಳಿಸಿ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಿದ್ದರೂ ಗನ್‌ಮ್ಯಾನ್ ನೀಡಿಲ್ಲ. ಇದರಲ್ಲಿ ಏನೋ ಪಿತೂರಿ ಇದೆ. ರಾಜಕೀಯವಾಗಿ ಹಾಗೂ ವ್ಯವಹಾರಿಕವಾಗಿ ಇರುವ ವಿರೋಧಿಗಳಿಂದ ನಮಗೆ ಬೆದರಿಕೆ ಇದೆ ಎಂದು ದೂರಿದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ (ETV Bharat)

ಬೆಂಗಳೂರು ಕಾಲ್ತುಳಿತದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರೂಪಾಲಿ ನಾಯ್ಕ, ಆರ್​ಸಿಬಿ ಜಯ‌ ಗಳಿಸಿದ ಬಳಿಕ ಕಾಂಗ್ರೆಸ್ ಸರ್ಕಾರ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕ್ಕೊಳ್ಳದೇ ಇರುವುದು ದುರ್ಘಟನೆಗೆ ಕಾರಣ ಎಂದು ಇದೇ ವೇಳೆ ಅವರು ಆರೋಪಿಸಿದರು.

ಇದನ್ನೂ ಓದಿ: ಸೆಲೆಬ್ರಿಟಿಗಲ್ಲ, ರಾಜಕಾರಣಿಗಲ್ಲ, ಶಾಲಾ ಮಕ್ಕಳಿಗೆ ಗನ್​ಮ್ಯಾನ್​ ನೀಡಿದ ಸರ್ಕಾರ: ಎಲ್ಲಿ ಗೊತ್ತಾ? - SECURITY FOR SCHOOL CHILDREN

ಕಾರವಾರ: ಭಯದ ವಾತಾವರಣ ಇರುವ ಕಾರಣ ಗನ್ ಮ್ಯಾನ್ ನೀಡುವಂತೆ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಿರುವಾಗ ಭಯದ ವಾತಾವರಣ ಇರುವ ಬಗ್ಗೆ ತಿಳಿಸಿದಾಗ ಭದ್ರತೆಗೆ ಗನ್ ಮೆನ್ ನೀಡಲಾಗಿತ್ತು. ಚುನಾವಣೆ ಬಳಿಕ ಮತ್ತೆ ವಾಪಸ್ ಪಡೆಯಲಾಗಿದೆ. ಇಂದಿಗೂ ಭಯದ ವಾತಾವರಣ ಇರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ, ಗೃಹಮಂತ್ರಿಗೆ ಮನವಿ ನೀಡಿದ್ದೆವು. ಆದರೆ, ಈವರೆಗೂ ನೀಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮಗೆ ಒಂದು ತಿಂಗಳು ಮಾತ್ರ ಗನ್ ಮ್ಯಾನ್ ನೀಡಲು ಅವಕಾಶ ಇರುವ ಬಗ್ಗೆ ತಿಳಿಸಿದ್ದರು. ಅದರಂತೆ ಒಂದು ತಿಂಗಳು ನೀಡಲೂ ಕೋರಲಾಗಿತ್ತು. ಇತ್ತೀಚೆಗೆ ಕಾರವಾರದಲ್ಲಿ ಕೊಲೆಯಾದಾಗಲೂ ಭಯದ ವಾತಾವರಣ ಇರುವ ಬಗ್ಗೆ ತಿಳಿಸಿ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಿದ್ದರೂ ಗನ್‌ಮ್ಯಾನ್ ನೀಡಿಲ್ಲ. ಇದರಲ್ಲಿ ಏನೋ ಪಿತೂರಿ ಇದೆ. ರಾಜಕೀಯವಾಗಿ ಹಾಗೂ ವ್ಯವಹಾರಿಕವಾಗಿ ಇರುವ ವಿರೋಧಿಗಳಿಂದ ನಮಗೆ ಬೆದರಿಕೆ ಇದೆ ಎಂದು ದೂರಿದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ (ETV Bharat)

ಬೆಂಗಳೂರು ಕಾಲ್ತುಳಿತದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರೂಪಾಲಿ ನಾಯ್ಕ, ಆರ್​ಸಿಬಿ ಜಯ‌ ಗಳಿಸಿದ ಬಳಿಕ ಕಾಂಗ್ರೆಸ್ ಸರ್ಕಾರ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕ್ಕೊಳ್ಳದೇ ಇರುವುದು ದುರ್ಘಟನೆಗೆ ಕಾರಣ ಎಂದು ಇದೇ ವೇಳೆ ಅವರು ಆರೋಪಿಸಿದರು.

ಇದನ್ನೂ ಓದಿ: ಸೆಲೆಬ್ರಿಟಿಗಲ್ಲ, ರಾಜಕಾರಣಿಗಲ್ಲ, ಶಾಲಾ ಮಕ್ಕಳಿಗೆ ಗನ್​ಮ್ಯಾನ್​ ನೀಡಿದ ಸರ್ಕಾರ: ಎಲ್ಲಿ ಗೊತ್ತಾ? - SECURITY FOR SCHOOL CHILDREN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.