ETV Bharat / state

ಮೈಸೂರು: ಮಹಿಳೆಯ ಗಾಲ್‍ಬ್ಲಾಡರ್​​ನಿಂದ 861 ಕಲ್ಲು ಹೊರ ತೆಗೆದ ವೈದ್ಯರು - GALLSTONES REMOVED

ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು 55 ವರ್ಷದ ಮಹಿಳೆಯೊಬ್ಬರ ಗಾಲ್‍ಬ್ಲಾಡರ್​​ನಿಂದ 861 ಕಲ್ಲುಗಳನ್ನು ಹೊರ ತೆಗೆದಿದ್ದಾರೆ.

861 GALLSTONES REMOVED
ಗಾಲ್‍ಬ್ಲಾಡರ್​​ನಿಂದ ಹೊರ ತೆಗೆದ ಕಲ್ಲುಗಳು (ETV Bharat)
author img

By ETV Bharat Karnataka Team

Published : June 7, 2025 at 1:53 PM IST

1 Min Read

ಮೈಸೂರು: ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೊಬ್ಬರ ಗಾಲ್‍ಬ್ಲಾಡರ್​​ನಿಂದ 861 ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಜಾಂಡೀಸ್​ನೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆಯ ಬಳಿಕ, ಅವರ ಗಾಲ್‍ಬ್ಲಾಡರ್ ಹಾಗೂ ಬೈಲ್​​ಡಕ್ಟ್ ಎರಡರಲ್ಲಿ ಕೂಡ ಕಲ್ಲುಗಳು ಇರುವುದು ದೃಢಪಟ್ಟಿತು.

ಗ್ಯಾಸ್ಟ್ರೋಎಂಟರೋಲಾಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೋಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್.ಎಂ. ಡಾ.ಅರವಿಂದ್ ಅವರ ನೇತೃತ್ವದಲ್ಲಿ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್​ಕೊಲೆಂಜಿಯೊಪ್ಯಾಂಕ್ರಿಯಾಟೋಗ್ರಫಿ (ERCP) ವಿಧಾನದಿಂದ ಬೈಲ್ ಡಕ್ಟ್‌ನಲ್ಲಿದ್ದ ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಮರುದಿನ ಲ್ಯಾಪರೋಸ್ಕೋಪಿಕ್ ಗಾಲ್‌ಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಯಿತು.

ಆಪರೇಷನ್ ಸಮಯದಲ್ಲಿ ತೀವ್ರ ಆಶ್ಚರ್ಯ ಮೂಡಿಸುವಂತ ರೀತಿಯಲ್ಲಿ 861 ಕಲ್ಲುಗಳು ಗಾಲ್‍ಬ್ಲಾಡರ್​​ನಿಂದ ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆ ಕಿರಿಯ ಆಕ್ರಮಣ ತಂತ್ರದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ವೈದ್ಯರ ಶ್ರೇಷ್ಠ ನಿರ್ವಹಣೆಯಿಂದ ರೋಗಿ ಶೀಘ್ರ ಗುಣಮುಖಳಾಗಿ ಮರು ದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರು: ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೊಬ್ಬರ ಗಾಲ್‍ಬ್ಲಾಡರ್​​ನಿಂದ 861 ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಜಾಂಡೀಸ್​ನೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆಯ ಬಳಿಕ, ಅವರ ಗಾಲ್‍ಬ್ಲಾಡರ್ ಹಾಗೂ ಬೈಲ್​​ಡಕ್ಟ್ ಎರಡರಲ್ಲಿ ಕೂಡ ಕಲ್ಲುಗಳು ಇರುವುದು ದೃಢಪಟ್ಟಿತು.

ಗ್ಯಾಸ್ಟ್ರೋಎಂಟರೋಲಾಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೋಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್.ಎಂ. ಡಾ.ಅರವಿಂದ್ ಅವರ ನೇತೃತ್ವದಲ್ಲಿ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್​ಕೊಲೆಂಜಿಯೊಪ್ಯಾಂಕ್ರಿಯಾಟೋಗ್ರಫಿ (ERCP) ವಿಧಾನದಿಂದ ಬೈಲ್ ಡಕ್ಟ್‌ನಲ್ಲಿದ್ದ ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಮರುದಿನ ಲ್ಯಾಪರೋಸ್ಕೋಪಿಕ್ ಗಾಲ್‌ಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಯಿತು.

ಆಪರೇಷನ್ ಸಮಯದಲ್ಲಿ ತೀವ್ರ ಆಶ್ಚರ್ಯ ಮೂಡಿಸುವಂತ ರೀತಿಯಲ್ಲಿ 861 ಕಲ್ಲುಗಳು ಗಾಲ್‍ಬ್ಲಾಡರ್​​ನಿಂದ ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆ ಕಿರಿಯ ಆಕ್ರಮಣ ತಂತ್ರದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ವೈದ್ಯರ ಶ್ರೇಷ್ಠ ನಿರ್ವಹಣೆಯಿಂದ ರೋಗಿ ಶೀಘ್ರ ಗುಣಮುಖಳಾಗಿ ಮರು ದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹೀಮೋಫೀಲಿಯಾ ಬಾಧಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ತಾಯಿ ಮಗುವಿನ ಪ್ರಾಣರಕ್ಷಣೆ

ಇದನ್ನೂ ಓದಿ: ಶ್ವಾಸನಾಳದ ಗಡ್ಡೆ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಾಲಕ ಸೇರಿ ಮೂವರಿಗೆ ಚಿಕಿತ್ಸೆ ಯಶಸ್ವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.