ETV Bharat / state

ಬೆಳಗಾವಿ ಕಿತ್ತೂರು ಚನ್ನಮ್ಮ ಮೃಗಾಲಯಕ್ಕೆ ಬಂತು ಹೊಸ ಹೆಣ್ಣುಲಿ: ನಿತ್ಯಾ ಆಗಮನದಿಂದ ಕೃಷ್ಣಾ, ಕನಿಷ್ಕಾ ಫುಲ್ ಖುಷ್..! - NEW FEMALE TIGER HAS ARRIVED

ಸದ್ಯಕ್ಕೆ 15 ದಿನ ಈ ಹುಲಿಯನ್ನು ಕ್ವಾರಂಟೈನ್ ನಲ್ಲಿ ಇಡುತ್ತೇವೆ. ಎರಡು ಗಂಡು ಹುಲಿಗಳ ಪೈಕಿ ಯಾವ ಹುಲಿ ಜೊತೆಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ನೋಡಿಕೊಂಡು ಸಫಾರಿಗೆ ಬಿಡುತ್ತೇವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : April 24, 2025 at 10:01 PM IST

1 Min Read

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ ಆಗಮನವಾಗಿದ್ದು, ಹುಲಿ ಪ್ರಿಯರ ಕಣ್ಮನ ಸೆಳೆಯಲಿದೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ 'ನಿತ್ಯ' ಹೆಸರಿನ 12 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಅಧಿಕಾರಿಗಳು ಗುರುವಾರ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಮೃಗಾಲಯಕ್ಕೆ ಕರೆ ತಂದಿದ್ದಾರೆ.

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಈಗಾಗಲೇ ಕೃಷ್ಣಾ, ಕನಿಷ್ಕಾ ಹೆಸರಿನ ಎರಡು ಗಂಡು ಹುಲಿಗಳು ಇದ್ದವು.‌ ಆದರೆ, ಹೆಣ್ಣು ಹುಲಿ ಇರಲಿಲ್ಲ. ಹಾಗಾಗಿ, ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆ ಮೇರೆಗೆ ಅರಣ್ಯ ಅಧಿಕಾರಿಗಳು ಮೈಸೂರಿನ ಮೃಗಾಲಯದಿಂದ ನಿತ್ಯಳನ್ನು ತೆಗೆದುಕೊಂಡು ಬರಲಾಗಿದೆ.

ಅರಣ್ಯ ಸಂರಕ್ಷಾಧಿಕಾರಿ ಹೇಳಿದ್ದೇನು?: ಈಟಿವಿ ಭಾರತ ಪ್ರತಿನಿಧಿಗೆ ಮಾಹಿತಿ ನೀಡಿದ ಮೃಗಾಲಯದ ವಲಯ ಅರಣ್ಯ ಸಂರಕ್ಷಾಧಿಕಾರಿ ಪವನ ಕುರನಿಂಗ, ಸದ್ಯಕ್ಕೆ 15 ದಿನ ಈ ಹುಲಿಯನ್ನು ಕ್ವಾರಂಟೈನ್ ನಲ್ಲಿ ಇಡುತ್ತೇವೆ. ಎರಡು ಗಂಡು ಹುಲಿಗಳ ಪೈಕಿ ಯಾವ ಹುಲಿ ಜೊತೆಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ನೋಡಿಕೊಂಡು ಸಫಾರಿಗೆ ಬಿಡುತ್ತೇವೆ. 15 ದಿನಗಳ ಬಳಿಕ ಈ ಹುಲಿಯನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು ಎಂದರು.

ಇದನ್ನು ಓದಿ:TCS ವರ್ಲ್ಡ್ 10K ರಾಯಭಾರಿ ದಲೀಹಾ ಮುಹಮ್ಮದ್ ಬೆಂಗಳೂರಿಗೆ ಆಗಮನ

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ ಆಗಮನವಾಗಿದ್ದು, ಹುಲಿ ಪ್ರಿಯರ ಕಣ್ಮನ ಸೆಳೆಯಲಿದೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ 'ನಿತ್ಯ' ಹೆಸರಿನ 12 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಅಧಿಕಾರಿಗಳು ಗುರುವಾರ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಮೃಗಾಲಯಕ್ಕೆ ಕರೆ ತಂದಿದ್ದಾರೆ.

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಈಗಾಗಲೇ ಕೃಷ್ಣಾ, ಕನಿಷ್ಕಾ ಹೆಸರಿನ ಎರಡು ಗಂಡು ಹುಲಿಗಳು ಇದ್ದವು.‌ ಆದರೆ, ಹೆಣ್ಣು ಹುಲಿ ಇರಲಿಲ್ಲ. ಹಾಗಾಗಿ, ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆ ಮೇರೆಗೆ ಅರಣ್ಯ ಅಧಿಕಾರಿಗಳು ಮೈಸೂರಿನ ಮೃಗಾಲಯದಿಂದ ನಿತ್ಯಳನ್ನು ತೆಗೆದುಕೊಂಡು ಬರಲಾಗಿದೆ.

ಅರಣ್ಯ ಸಂರಕ್ಷಾಧಿಕಾರಿ ಹೇಳಿದ್ದೇನು?: ಈಟಿವಿ ಭಾರತ ಪ್ರತಿನಿಧಿಗೆ ಮಾಹಿತಿ ನೀಡಿದ ಮೃಗಾಲಯದ ವಲಯ ಅರಣ್ಯ ಸಂರಕ್ಷಾಧಿಕಾರಿ ಪವನ ಕುರನಿಂಗ, ಸದ್ಯಕ್ಕೆ 15 ದಿನ ಈ ಹುಲಿಯನ್ನು ಕ್ವಾರಂಟೈನ್ ನಲ್ಲಿ ಇಡುತ್ತೇವೆ. ಎರಡು ಗಂಡು ಹುಲಿಗಳ ಪೈಕಿ ಯಾವ ಹುಲಿ ಜೊತೆಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ನೋಡಿಕೊಂಡು ಸಫಾರಿಗೆ ಬಿಡುತ್ತೇವೆ. 15 ದಿನಗಳ ಬಳಿಕ ಈ ಹುಲಿಯನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು ಎಂದರು.

ಇದನ್ನು ಓದಿ:TCS ವರ್ಲ್ಡ್ 10K ರಾಯಭಾರಿ ದಲೀಹಾ ಮುಹಮ್ಮದ್ ಬೆಂಗಳೂರಿಗೆ ಆಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.