ETV Bharat / state

ಸರಕಾರಿ ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ - MAJOR TRAGEDY AVOIDED

ಚಾಲಕನ ಸಮಯಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರಿ ಅಪಾಯವೊಂದು ತಪ್ಪಿದೆ. ಹೀಗಾಗಿ ಬಸ್​ ನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

A major tragedy was averted due to the punctuality of a government bus driver.
ಸರಕಾರಿ ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ (ETV Bharat)
author img

By ETV Bharat Karnataka Team

Published : May 17, 2025 at 9:45 PM IST

1 Min Read

ಉಳ್ಳಾಲ, ದಕ್ಷಿಣ ಕನ್ನಡ: ಸ್ಟೇಟ್ ಬ್ಯಾಂಕ್ ನಿಂದ ತೊಕ್ಕೊಟ್ಟು- ಮಂಜುನಾಡಿ ಮಾರ್ಗವಾಗಿ ಹೊರಟಿದ್ದ ಬಸ್ ಬೇರಿಂಗ್ ಕಟ್ಟಾಗಿತ್ತು. ಈ ವೇಳೆ​​ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.

ತೊಕ್ಕೊಟ್ಟು- ಮಂಜುನಾಡಿ ಮಾಗರ್ವವಾಗಿ ಮುಡಿಪು ಸಂಚರಿಸುವ ಉರುಮಣೆಯ ಮೊದಲ ತಿರುವು ದಾಟಿ ಪಟ್ಲ ತಾರಿತೋಟ ಬಳಿಯ ತಿರುವು ಪಡೆದುಕೊಳ್ಳುವುದಕ್ಕೂ ಮುನ್ನ ಬೇರಿಂಗ್ ಕಟ್ಟಾಗಿತ್ತು. ಇದರಿಂದಾಗಿ ಬಸ್​​ ರಸ್ತೆಯನ್ನು ಬಿಟ್ಟು 6 ಅಡಿ ಕೆಳಗಿನ ಕಮರಿಗೆ ಉರುಳಿ ಬೀಳುತ್ತಿತ್ತು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದೊಡ್ಡ ಅಪಾಯ ತಪ್ಪಿದೆ.

A major tragedy was averted due to the punctuality of a government bus driver.
ಸರಕಾರಿ ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ (ETV Bharat)

ವಿಷಯ ತಿಳಿದು ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಸ್​​ ದುರಸ್ತಿ ಮಾಡಿ ಮೇಲೆತ್ತುವ ಕೆಲಸ ಮಾಡಿದರು. ಇದೇ ಸಮಯದಲ್ಲಿ ದಕ್ಷಿಣ ಕನ್ನಡ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು.

ಸ್ಥಳೀಯ ಕಲ್ಕಟ್ಟ ಬಳಿಯ ಮಂಜನಾಡಿ ಜಾತ್ರೆ ಕಡೆಯ ದಿನ ಆಗಿದ್ದು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು ಬಸ್​​​​ನಲ್ಲಿ ಅಂದಾಜು ಸುಮಾರು 80 ಜನರಿದ್ದರು ಎಂದು ತಿಳಿದು ಬಂದಿದೆ. ಇಷ್ಟು ಜನರ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ಪ್ರಯಾಣಿಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ಉಳ್ಳಾಲ, ದಕ್ಷಿಣ ಕನ್ನಡ: ಸ್ಟೇಟ್ ಬ್ಯಾಂಕ್ ನಿಂದ ತೊಕ್ಕೊಟ್ಟು- ಮಂಜುನಾಡಿ ಮಾರ್ಗವಾಗಿ ಹೊರಟಿದ್ದ ಬಸ್ ಬೇರಿಂಗ್ ಕಟ್ಟಾಗಿತ್ತು. ಈ ವೇಳೆ​​ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.

ತೊಕ್ಕೊಟ್ಟು- ಮಂಜುನಾಡಿ ಮಾಗರ್ವವಾಗಿ ಮುಡಿಪು ಸಂಚರಿಸುವ ಉರುಮಣೆಯ ಮೊದಲ ತಿರುವು ದಾಟಿ ಪಟ್ಲ ತಾರಿತೋಟ ಬಳಿಯ ತಿರುವು ಪಡೆದುಕೊಳ್ಳುವುದಕ್ಕೂ ಮುನ್ನ ಬೇರಿಂಗ್ ಕಟ್ಟಾಗಿತ್ತು. ಇದರಿಂದಾಗಿ ಬಸ್​​ ರಸ್ತೆಯನ್ನು ಬಿಟ್ಟು 6 ಅಡಿ ಕೆಳಗಿನ ಕಮರಿಗೆ ಉರುಳಿ ಬೀಳುತ್ತಿತ್ತು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದೊಡ್ಡ ಅಪಾಯ ತಪ್ಪಿದೆ.

A major tragedy was averted due to the punctuality of a government bus driver.
ಸರಕಾರಿ ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ (ETV Bharat)

ವಿಷಯ ತಿಳಿದು ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಸ್​​ ದುರಸ್ತಿ ಮಾಡಿ ಮೇಲೆತ್ತುವ ಕೆಲಸ ಮಾಡಿದರು. ಇದೇ ಸಮಯದಲ್ಲಿ ದಕ್ಷಿಣ ಕನ್ನಡ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು.

ಸ್ಥಳೀಯ ಕಲ್ಕಟ್ಟ ಬಳಿಯ ಮಂಜನಾಡಿ ಜಾತ್ರೆ ಕಡೆಯ ದಿನ ಆಗಿದ್ದು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು ಬಸ್​​​​ನಲ್ಲಿ ಅಂದಾಜು ಸುಮಾರು 80 ಜನರಿದ್ದರು ಎಂದು ತಿಳಿದು ಬಂದಿದೆ. ಇಷ್ಟು ಜನರ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ಪ್ರಯಾಣಿಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.