ETV Bharat / sports

'ಚಹ ಕುಡಿದು ಹೋಗಿ': ಪಹಲ್ಗಾಮ್‌ ದಾಳಿ ಬಗ್ಗೆ ಧವನ್ - ಅಫ್ರಿದಿ ​ನಡುವೆ ವಾಕ್ಸಮರ - VERBAL SKIRMISH

Pahalgam Attack: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ಭಾರತದ ಮಾಜಿ ಕ್ರಿಕೆಟರ್​​ ಶಿಖರ್​ ಧವನ್​ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಮಧ್ಯೆ ಮಾತಿನ ಯುದ್ಧ ನಡೆದಿದೆ.

VERBAL SKIRMISH BETWEEN CRICKETERS  SHAHID AFRIDI SHIKHAR DHAWAN  PAHALGAM TERROR ATTACK  SHIKHAR DHAWAN COUNTER TO AFRIDI
ಶಿಖರ್​ ಧವನ್​, ಶಾಹಿದ್​ ಅಫ್ರಿದಿ (Source : IANS)
author img

By ETV Bharat Karnataka Team

Published : April 30, 2025 at 7:50 AM IST

2 Min Read

Pahalgam Attack: ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಹಾಗೂ ಶಾಹಿದ್ ಅಫ್ರಿದಿ ನಡುವಿನ ಮಾತಿನ ಚಕಮಕಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಅಫ್ರಿದಿ ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ ಈ ವಾಕ್ಸಮರ ಶುರುವಾಗಿದೆ.

ದಾಳಿಯ ನಂತರ ಪಾಕಿಸ್ತಾನಿ ಸುದ್ದಿ ವಾಹಿನಿಯಲ್ಲಿ ಹೇಳಿಕೆ ನೀಡಿದ್ದ ಅಫ್ರಿದಿ, ತನ್ನದೇ ಜನರ ಸಾವಿಗೆ ಭಾರತೀಯ ಸೇನೆಯೇ ಪರೋಕ್ಷವಾಗಿ ಕಾರಣವಾಗಿದ್ದು, ಆ ಪ್ರದೇಶದಲ್ಲಿ ಸೇನೆ ಇಲ್ಲದಿರುವುದು ಈ ಘಟನೆಗೆ ಕಾರಣ. ಕಾಶ್ಮೀರದಲ್ಲಿ 8,00,000 ಸೈನ್ಯವಿದ್ದರೂ ದಾಳಿಯನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಭಾರತವು ಇಂತಹ ಘಟನೆಗಳಿಗೆ ಯಾವುದೇ ಪುರಾವೆಗಳಿಲ್ಲದೆ ಪಾಕಿಸ್ತಾನವನ್ನು ದೂಷಿಸುತ್ತದೆ ಮತ್ತು ಭಾರತದಲ್ಲಿ ಪಟಾಕಿ ಸಿಡಿದರೂ ಅವರು ಪಾಕಿಸ್ತಾನವನ್ನು ದೂಷಿಸುತ್ತಾರೆ ಎಂದು ಅಫ್ರಿದಿ ಆರೋಪಿಸಿದ್ದರು. ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಶಿಖರ್ ಧವನ್, 'ಟೈಮ್ಸ್ ಆಫ್ ಇಂಡಿಯಾ' ಲೇಖನವನ್ನು ಉಲ್ಲೇಖಿಸಿ, ಜನರು ಆಧಾರರಹಿತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದಿದ್ದರು. ಅಲ್ಲದೆ, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ವಿಜಯವನ್ನು ಧವನ್ ನೆನಪಿಸಿದ್ದರು. ''ಕಾರ್ಗಿಲ್ ಮೇ ಭೀ ಹಾರಯಾ ಥಾ, ಆಲ್ರೆಡಿ ಇತ್ನಾ ಗಿರೆ ಹುಯೆ ಹೋ ಔರ್ ಕಿತ್ನಾ ಗಿರೋಗೆ, ಬೇವಾಜಾ ಕಾಮೆಂಟ್ಸ್ ಪಾಸ್ ಕರ್ನೆ ಸೆ ಅಚ್ಚಾ ಹೈ ಅಪ್ನೆ ದೇಶ್ ಕಿ ತಾರಕ್ಕಿ ಮೈ ದಿಮಾಗ್ ಲಗಾವೋ @SAfridiOfficial. ಹುಮೇನ್ ಹಮಾರಿ ಇಂಡಿಯನ್ ಆರ್ಮಿ ಪಾರ್ ಜಾಯ್ ಭಾರತ್! "ಗರ್ತಾ ಮಾತಾ ಗರ್ತಾ!" (ಕಾರ್ಗಿಲ್‌ನಲ್ಲೂ ನಾವು ನಿಮ್ಮನ್ನು ಸೋಲಿಸಿದೆವು. ನೀವು ಈಗಾಗಲೇ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ, ನೀವು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ? ಅನಗತ್ಯ ಕಾಮೆಂಟ್‌ಗಳನ್ನು ಮಾಡುವ ಬದಲು, ನಿಮ್ಮ ದೇಶದ ಪ್ರಗತಿಯತ್ತ ಗಮನಹರಿಸಿ. ನಮ್ಮ ಭಾರತೀಯ ಸೇನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ)' ಎಂದು ಗಬ್ಬರ್​ ಖ್ಯಾತಿಯ ಧವನ್ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿದ್ದರು.

ಶಿಖರ್ ಧವನ್ ಪೋಸ್ಟ್​ಗೆ ಮತ್ತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅಫ್ರಿದಿ, "ಚೋಡೋ ಜೀತ್​ ಹಾರ್​ ಕೋ.. ಆವೋ ತುಮೇ ಚಹಾ ಪಿಲ್ತಾಹೂಂ ಶಿಖರ್ #Fantastictia" ಎಂದು ಅವರು ಎಕ್ಸ್​ನಲ್ಲಿ ತಿರುಗೇಟು ನೀಡಿದ್ದರು. ಅಂದರೆ 'ಗೆಲುವು ಅಥವಾ ಸೋಲು ಮರೆತುಬಿಡಿ, ಬನ್ನಿ ಶಿಖರ್ ನಾನು ನಿನಗೆ ಚಹಾ ಕುಡಿಸುತ್ತೇನೆ" ಎಂದಿದ್ದರು.

2019ರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೆರೆಹಿಡಿದಿದ್ದನ್ನು ಉಲ್ಲೇಖಿಸಿ, ಈ ಕಾಮೆಂಟ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಫ್ರಿದಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಅಂದು ವಿಚಾರಣೆಯ ಸಮಯದಲ್ಲಿ, ಅಭಿನಂದನ್ ಶಾಂತರಾಗಿ 'ಚಹಾ ಅದ್ಭುತವಾಗಿದೆ' ಎಂದು ಹೇಳಿದ್ದರು. ಇದು ಒತ್ತಡದಲ್ಲಿ ಭಾರತೀಯ ಧೈರ್ಯ ಮತ್ತು ಶಾಂತತೆಯ ಸಂಕೇತವಾಗಿದೆ ಎಂದು ಕಿಡಿಕಾರಿದ್ದಾರೆ. ಅಫ್ರಿದಿ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆಂದು ಟೀಕೆ ವ್ಯಕ್ತವಾಗುತ್ತಿದೆ.

ಓದಿ: 35 ಬಾಲ್​, 11 ಸಿಕ್ಸ್​, 7 ಬೌಂಡರಿ: ಭಾರತ ತಂಡಕ್ಕೆ ಮತ್ತೊಬ್ಬ ರನ್​ ಮಷಿನ್​ ಸಿಕ್ಕಂತಾಯ್ತಾ!?

Pahalgam Attack: ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಹಾಗೂ ಶಾಹಿದ್ ಅಫ್ರಿದಿ ನಡುವಿನ ಮಾತಿನ ಚಕಮಕಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಅಫ್ರಿದಿ ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ ಈ ವಾಕ್ಸಮರ ಶುರುವಾಗಿದೆ.

ದಾಳಿಯ ನಂತರ ಪಾಕಿಸ್ತಾನಿ ಸುದ್ದಿ ವಾಹಿನಿಯಲ್ಲಿ ಹೇಳಿಕೆ ನೀಡಿದ್ದ ಅಫ್ರಿದಿ, ತನ್ನದೇ ಜನರ ಸಾವಿಗೆ ಭಾರತೀಯ ಸೇನೆಯೇ ಪರೋಕ್ಷವಾಗಿ ಕಾರಣವಾಗಿದ್ದು, ಆ ಪ್ರದೇಶದಲ್ಲಿ ಸೇನೆ ಇಲ್ಲದಿರುವುದು ಈ ಘಟನೆಗೆ ಕಾರಣ. ಕಾಶ್ಮೀರದಲ್ಲಿ 8,00,000 ಸೈನ್ಯವಿದ್ದರೂ ದಾಳಿಯನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಭಾರತವು ಇಂತಹ ಘಟನೆಗಳಿಗೆ ಯಾವುದೇ ಪುರಾವೆಗಳಿಲ್ಲದೆ ಪಾಕಿಸ್ತಾನವನ್ನು ದೂಷಿಸುತ್ತದೆ ಮತ್ತು ಭಾರತದಲ್ಲಿ ಪಟಾಕಿ ಸಿಡಿದರೂ ಅವರು ಪಾಕಿಸ್ತಾನವನ್ನು ದೂಷಿಸುತ್ತಾರೆ ಎಂದು ಅಫ್ರಿದಿ ಆರೋಪಿಸಿದ್ದರು. ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಶಿಖರ್ ಧವನ್, 'ಟೈಮ್ಸ್ ಆಫ್ ಇಂಡಿಯಾ' ಲೇಖನವನ್ನು ಉಲ್ಲೇಖಿಸಿ, ಜನರು ಆಧಾರರಹಿತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದಿದ್ದರು. ಅಲ್ಲದೆ, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ವಿಜಯವನ್ನು ಧವನ್ ನೆನಪಿಸಿದ್ದರು. ''ಕಾರ್ಗಿಲ್ ಮೇ ಭೀ ಹಾರಯಾ ಥಾ, ಆಲ್ರೆಡಿ ಇತ್ನಾ ಗಿರೆ ಹುಯೆ ಹೋ ಔರ್ ಕಿತ್ನಾ ಗಿರೋಗೆ, ಬೇವಾಜಾ ಕಾಮೆಂಟ್ಸ್ ಪಾಸ್ ಕರ್ನೆ ಸೆ ಅಚ್ಚಾ ಹೈ ಅಪ್ನೆ ದೇಶ್ ಕಿ ತಾರಕ್ಕಿ ಮೈ ದಿಮಾಗ್ ಲಗಾವೋ @SAfridiOfficial. ಹುಮೇನ್ ಹಮಾರಿ ಇಂಡಿಯನ್ ಆರ್ಮಿ ಪಾರ್ ಜಾಯ್ ಭಾರತ್! "ಗರ್ತಾ ಮಾತಾ ಗರ್ತಾ!" (ಕಾರ್ಗಿಲ್‌ನಲ್ಲೂ ನಾವು ನಿಮ್ಮನ್ನು ಸೋಲಿಸಿದೆವು. ನೀವು ಈಗಾಗಲೇ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ, ನೀವು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ? ಅನಗತ್ಯ ಕಾಮೆಂಟ್‌ಗಳನ್ನು ಮಾಡುವ ಬದಲು, ನಿಮ್ಮ ದೇಶದ ಪ್ರಗತಿಯತ್ತ ಗಮನಹರಿಸಿ. ನಮ್ಮ ಭಾರತೀಯ ಸೇನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ)' ಎಂದು ಗಬ್ಬರ್​ ಖ್ಯಾತಿಯ ಧವನ್ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿದ್ದರು.

ಶಿಖರ್ ಧವನ್ ಪೋಸ್ಟ್​ಗೆ ಮತ್ತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅಫ್ರಿದಿ, "ಚೋಡೋ ಜೀತ್​ ಹಾರ್​ ಕೋ.. ಆವೋ ತುಮೇ ಚಹಾ ಪಿಲ್ತಾಹೂಂ ಶಿಖರ್ #Fantastictia" ಎಂದು ಅವರು ಎಕ್ಸ್​ನಲ್ಲಿ ತಿರುಗೇಟು ನೀಡಿದ್ದರು. ಅಂದರೆ 'ಗೆಲುವು ಅಥವಾ ಸೋಲು ಮರೆತುಬಿಡಿ, ಬನ್ನಿ ಶಿಖರ್ ನಾನು ನಿನಗೆ ಚಹಾ ಕುಡಿಸುತ್ತೇನೆ" ಎಂದಿದ್ದರು.

2019ರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೆರೆಹಿಡಿದಿದ್ದನ್ನು ಉಲ್ಲೇಖಿಸಿ, ಈ ಕಾಮೆಂಟ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಫ್ರಿದಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಅಂದು ವಿಚಾರಣೆಯ ಸಮಯದಲ್ಲಿ, ಅಭಿನಂದನ್ ಶಾಂತರಾಗಿ 'ಚಹಾ ಅದ್ಭುತವಾಗಿದೆ' ಎಂದು ಹೇಳಿದ್ದರು. ಇದು ಒತ್ತಡದಲ್ಲಿ ಭಾರತೀಯ ಧೈರ್ಯ ಮತ್ತು ಶಾಂತತೆಯ ಸಂಕೇತವಾಗಿದೆ ಎಂದು ಕಿಡಿಕಾರಿದ್ದಾರೆ. ಅಫ್ರಿದಿ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆಂದು ಟೀಕೆ ವ್ಯಕ್ತವಾಗುತ್ತಿದೆ.

ಓದಿ: 35 ಬಾಲ್​, 11 ಸಿಕ್ಸ್​, 7 ಬೌಂಡರಿ: ಭಾರತ ತಂಡಕ್ಕೆ ಮತ್ತೊಬ್ಬ ರನ್​ ಮಷಿನ್​ ಸಿಕ್ಕಂತಾಯ್ತಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.