ETV Bharat / sports

ಶಾಕಿಂಗ್​ ನ್ಯೂಸ್​: ಐಪಿಎಲ್​ನಿಂದ ₹18 ಕೋಟಿ ಬೆಲೆಯ ಸ್ಟಾರ್​ ಆಟಗಾರ ಔಟ್​!: ಏನಾಯ್ತು? - IPL 2025

ಮೊಣಕೈ ಗಾಯದಿಂದಾಗಿ ಸ್ಟಾರ್​ ಆಟಗಾರ ಐಪಿಎಲ್​ 2025ರಿಂದ ಹೊರಬಿದ್ದಿದ್ದಾರೆ.

CSK  MS DHONI  RUTURAJ GAIKWAD  ಚೆನ್ನೈ ಸೂಪರ್​ ಕಿಂಗ್ಸ್​ IPL 2025
MS Dhoni Virat Kohli and Ruturaj Gaikwad (IANS)
author img

By ETV Bharat Sports Team

Published : April 10, 2025 at 6:47 PM IST

Updated : April 10, 2025 at 7:16 PM IST

1 Min Read

ನವದೆಹಲಿ: ಐಪಿಎಲ್​ 2025ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್​ಕೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೊಣಕೈ ಗಾಯದಿಂದಾಗಿ ತಂಡದ ನಾಯಕ ಋತುರಾಜ್​ ಗಾಯಕ್ವಾಡ್​ ಈ ಋತುವಿನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದಿದ್ದ ಪಂದ್ಯದಿಂದಲೇ ರುತುರಾಜ್​ ಗಾಯಕ್ವಾಡ್​ ಹೊರಗುಳಿಯಲಿದ್ದಾರೆ ಎಂದು ವರದಿ ಆಗಿದ್ದವು. ಆದರೆ ರುತುರಾಜ್ ಗಾಯದಿಂದ ಚೇತರಿಸಿಕೊಂಡು ಪಂದ್ಯಕ್ಕೆ ಮರಳಿದ್ದರು. ಇದೀಗ ಗಾಯದ ತೀವ್ರತೆ ಹೆಚ್ಚಾದ ಕಾರಣ, ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಸಿಎಸ್​ಕೆ​ ಆಡಲಿರುವ ಮುಂದಿನ 9 ಪಂದ್ಯಗಳಿಗೆ ಧೋನಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ತಂಡದ ಮುಖ್ಯಕೋಚ್​ ಆಗಿರುವ ಸ್ಟೀಫನ್​ ಫ್ಲೆಮಿಂಗ್​ ದೃಢಪಡಿಸಿದ್ದಾರೆ.

ಧೋನಿ 2008 ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಇವರ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಚಾಂಪಿಯನ್​ ಪಟ್ಟಕ್ಕೇರಿದೆ. ಆದರೆ 2022ರ ಋತುವಿಗೂ ಮುನ್ನ ವಯಸ್ಸಿನ ಕಾರಣದಿಂದಾಗಿ ಧೋನಿ ನಾಯಕತ್ವ ತ್ಯಜಿಸಿದ್ದರು. ಈ ವೇಳೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡಿದ ಕಾರಣ ಋತುವಿನ ಮಧ್ಯದಲ್ಲೇ ಮರಳಿ ಧೋನಿ ಅವರಿಗೆ ನಾಯಕ್ತವ ಹಸ್ತಾಂತರಿಸಲಾಗಿತ್ತು.

2023ರಲ್ಲಿ ತಂಡವನ್ನು ಮತ್ತೆ ಚಾಂಪಿಯನ್​ ಪಟ್ಟಕ್ಕೇರಿಸಿದ ಧೋನಿ 2024ರ ಐಪಿಎಲ್‌ನಿಂದ ರುತುರಾಜ್ ಗಾಯಕ್ವಾಡ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದರು. ಸದ್ಯ ನಡೆಯುತ್ತಿರುವ ಋತುವಿನಲ್ಲಿ ಚೆನ್ನೈ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತು 9ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತನ್ನ ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್​ 11ರಂದು ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: ಕನ್ನಡ ಗೊತ್ತಿರದ ಅಭಿಮಾನಿಗಳಿಗಾಗಿ ಜಿಲೇಬಿ ಅಭಿಯಾನ ಆರಂಭಿಸಿದ RCB!

ನವದೆಹಲಿ: ಐಪಿಎಲ್​ 2025ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್​ಕೆ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೊಣಕೈ ಗಾಯದಿಂದಾಗಿ ತಂಡದ ನಾಯಕ ಋತುರಾಜ್​ ಗಾಯಕ್ವಾಡ್​ ಈ ಋತುವಿನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದಿದ್ದ ಪಂದ್ಯದಿಂದಲೇ ರುತುರಾಜ್​ ಗಾಯಕ್ವಾಡ್​ ಹೊರಗುಳಿಯಲಿದ್ದಾರೆ ಎಂದು ವರದಿ ಆಗಿದ್ದವು. ಆದರೆ ರುತುರಾಜ್ ಗಾಯದಿಂದ ಚೇತರಿಸಿಕೊಂಡು ಪಂದ್ಯಕ್ಕೆ ಮರಳಿದ್ದರು. ಇದೀಗ ಗಾಯದ ತೀವ್ರತೆ ಹೆಚ್ಚಾದ ಕಾರಣ, ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಸಿಎಸ್​ಕೆ​ ಆಡಲಿರುವ ಮುಂದಿನ 9 ಪಂದ್ಯಗಳಿಗೆ ಧೋನಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ತಂಡದ ಮುಖ್ಯಕೋಚ್​ ಆಗಿರುವ ಸ್ಟೀಫನ್​ ಫ್ಲೆಮಿಂಗ್​ ದೃಢಪಡಿಸಿದ್ದಾರೆ.

ಧೋನಿ 2008 ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಇವರ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಚಾಂಪಿಯನ್​ ಪಟ್ಟಕ್ಕೇರಿದೆ. ಆದರೆ 2022ರ ಋತುವಿಗೂ ಮುನ್ನ ವಯಸ್ಸಿನ ಕಾರಣದಿಂದಾಗಿ ಧೋನಿ ನಾಯಕತ್ವ ತ್ಯಜಿಸಿದ್ದರು. ಈ ವೇಳೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡಿದ ಕಾರಣ ಋತುವಿನ ಮಧ್ಯದಲ್ಲೇ ಮರಳಿ ಧೋನಿ ಅವರಿಗೆ ನಾಯಕ್ತವ ಹಸ್ತಾಂತರಿಸಲಾಗಿತ್ತು.

2023ರಲ್ಲಿ ತಂಡವನ್ನು ಮತ್ತೆ ಚಾಂಪಿಯನ್​ ಪಟ್ಟಕ್ಕೇರಿಸಿದ ಧೋನಿ 2024ರ ಐಪಿಎಲ್‌ನಿಂದ ರುತುರಾಜ್ ಗಾಯಕ್ವಾಡ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದರು. ಸದ್ಯ ನಡೆಯುತ್ತಿರುವ ಋತುವಿನಲ್ಲಿ ಚೆನ್ನೈ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತು 9ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತನ್ನ ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್​ 11ರಂದು ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: ಕನ್ನಡ ಗೊತ್ತಿರದ ಅಭಿಮಾನಿಗಳಿಗಾಗಿ ಜಿಲೇಬಿ ಅಭಿಯಾನ ಆರಂಭಿಸಿದ RCB!

Last Updated : April 10, 2025 at 7:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.