ETV Bharat / sports

ಮುಂಬೈ ಎದುರು​ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಕನ್ನಡಿಗ! - MI VS DC MATCH

ಮುಂಬೈ ಇಂಡಿಯನ್ಸ್​ ಮತ್ತ ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯದದಲ್ಲಿ ಕನ್ನಡಿಗ ಕರುಣ್​ ನಾಯರ್​ ಅದ್ಭುತ ಪ್ರದರ್ಶನ ನೀಡಿದ್ದಾರೆ.

Karun Nair  Delhi Capitals  Karn Nair Innings  IPL 2025
ಅಭಿಮಾನಿಗಳ ಹೃದಯ ಗೆದ್ದ ಕನ್ನಡಿಗ (IANS)
author img

By ETV Bharat Sports Team

Published : April 14, 2025 at 1:41 PM IST

1 Min Read

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋಲನ್ನು ಕಂಡಿದ್ದು ನಮಗೆಲ್ಲ ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ನೆರೆದಿದ್ದವರ ಗಮನ ಸೆಳೆದಿದ್ದಾರೆ.

ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಮೈದಾನಕ್ಕೆ ಆಗಮಿಸಿದ ಕರುಣ್​ ನಾಯರ್​ ಆಕರ್ಷಕ ಬ್ಯಾಟಿಂಗ್ ಮೂಲಕ ದೆಹಲಿಯ ಗೆಲುವಿಗೆ ಬಲವಾದ ಅಡಿಪಾಯ ಹಾಕಿದರು. ಮೊದಲ ಎಸೆತದಲ್ಲೇ ಜೇಕ್ ಫ್ರೇಸರ್ ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ತಂಡ ಕರುಣ್ ಅವರ ಅದ್ಭುತ ಪ್ರದರ್ಶನದಿಂದಾಗಿ ಚೇತರಿಸಿಕೊಂಡಿತು. ನಾಯರ್​ ಆರಂಭದಿಂದಲೇ ಅಬ್ಬರಿಸಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ, ಕೇವಲ 40 ಎಸೆತಗಳಲ್ಲಿ 89 ರನ್ ಬಾರಿಸಿದರು.

ಅದರಲ್ಲೂ ವಿಶ್ವದ ಅತ್ಯುತ್ತಮ ವೇಗಿ ಬುಮ್ರಾ ಬೌಲ್​ ಎದರುರಿಸಲು ಉಳಿದ ಬ್ಯಾಟರ್​ಗಳು ಹೆಣಗಾಡುತ್ತಿದ್ದರೇ ನಾಯರ್​ ಸಲಿಸಾಗಿ ಬ್ಯಾಟ್​ ಬೀಸಿದರು. ಬುಮ್ರಾ ಎಸೆದ ಓವರ್​ ಒಂದರಲ್ಲಿ ಬರೋಬ್ಬರಿ 18 ರನ್​ ಬಾರಿಸಿದ್ದಾರೆ. ಹಿಂದೆಂದೂ ಕರುಣ್ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿರಲಿಲ್ಲ. ಇದೀಗ ಸೂಪರ್ ಫಾರ್ಮ್‌ನೊಂದಿಗೆ ಐಪಿಎಲ್‌ಗೆ ಪ್ರವೇಶಿಸಿದ್ದಾರೆ.

ನಾಯರ್​ ಸೂಪರ್​ ಫಾರ್ಮ್​: ಇತ್ತೀಚೆಗೆ ನಡೆದಿದ್ದ ದೇಶೀಯ ಋತುವಿನಲ್ಲೂ ನಾಯರ್​ ರನ್‌ಗಳ ಮೈದಾನದಲ್ಲಿ ರನ್​ ಪ್ರವಾಹವನ್ನೇ ಸೃಷ್ಟಿಸಿದ್ದರು. ವಿಜಯ್ ಹಜಾರೆ ಟೂರ್ನಮೆಂಟ್‌ನಲ್ಲಿ ಸತತ ಮೂರು ಶತಕಗಳನ್ನು ಗಳಿಸಿದ್ದಲ್ಲದೆ, ಔಟಾಗದೆ ಟೂರ್ನಿಯಲ್ಲಿ 542 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಅವರು ರಣಜಿ ಮತ್ತು ಮುಷ್ತಾಕ್ ಅಲಿ ಟ್ರೋಫಿಗಳಲ್ಲೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಭಾರತೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದರು ಆದರೆ ಅವಕಾಶ ಸಿಗುತ್ತಿಲ್ಲ.

ಆದಾಗ್ಯೂ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನಾಯರ್​ಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ನೀಡಿತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ನಾಯರ್​ ಯಾವುದೇ ಸ್ವರೂಪದ ಕ್ರಿಕೆಟ್​ ಆಡುವ ಸಮಾರ್ಥ್ಯ ತನ್ನಲಿದೆ ಎಂದು ಜಗತ್ತಿಗೆ ಸಾರಿದ್ದಾರೆ.

ಪಂದ್ಯದ ಹೈಲೆಟ್​: ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಮುಂಬೈ ಇಂಡಿಯನ್ಸ್​​ 5 ವಿಕೆಟ್​ ನಷ್ಟಕ್ಕೆ 205 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡ ಕೊನೆವರೆಗೂ ಹೋರಾಡಿತಾದರೂ ಗೆಲುವು ದಕ್ಕಲಿಲ್ಲ. ಅಂತಿಮವಾಗಿ 12 ರನ್​ಗಳಿಂದ ಸೋಲನುಭವಿಸಿತು.

ಇದನ್ನೂ ಓದಿ: RCB ಆಟಗಾರರನ್ನು ಅಭಿನಂದಿಸಲು ಕುಂಟುತ್ತಲೇ ಮೈದಾನಕ್ಕೆ ಬಂದ ದ್ರಾವಿಡ್​: ಗುರುವಿನ ಬೆನ್ನಿಗೆ ನಿಂತ​ ಕೊಹ್ಲಿ!

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋಲನ್ನು ಕಂಡಿದ್ದು ನಮಗೆಲ್ಲ ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ನೆರೆದಿದ್ದವರ ಗಮನ ಸೆಳೆದಿದ್ದಾರೆ.

ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಮೈದಾನಕ್ಕೆ ಆಗಮಿಸಿದ ಕರುಣ್​ ನಾಯರ್​ ಆಕರ್ಷಕ ಬ್ಯಾಟಿಂಗ್ ಮೂಲಕ ದೆಹಲಿಯ ಗೆಲುವಿಗೆ ಬಲವಾದ ಅಡಿಪಾಯ ಹಾಕಿದರು. ಮೊದಲ ಎಸೆತದಲ್ಲೇ ಜೇಕ್ ಫ್ರೇಸರ್ ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ತಂಡ ಕರುಣ್ ಅವರ ಅದ್ಭುತ ಪ್ರದರ್ಶನದಿಂದಾಗಿ ಚೇತರಿಸಿಕೊಂಡಿತು. ನಾಯರ್​ ಆರಂಭದಿಂದಲೇ ಅಬ್ಬರಿಸಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ, ಕೇವಲ 40 ಎಸೆತಗಳಲ್ಲಿ 89 ರನ್ ಬಾರಿಸಿದರು.

ಅದರಲ್ಲೂ ವಿಶ್ವದ ಅತ್ಯುತ್ತಮ ವೇಗಿ ಬುಮ್ರಾ ಬೌಲ್​ ಎದರುರಿಸಲು ಉಳಿದ ಬ್ಯಾಟರ್​ಗಳು ಹೆಣಗಾಡುತ್ತಿದ್ದರೇ ನಾಯರ್​ ಸಲಿಸಾಗಿ ಬ್ಯಾಟ್​ ಬೀಸಿದರು. ಬುಮ್ರಾ ಎಸೆದ ಓವರ್​ ಒಂದರಲ್ಲಿ ಬರೋಬ್ಬರಿ 18 ರನ್​ ಬಾರಿಸಿದ್ದಾರೆ. ಹಿಂದೆಂದೂ ಕರುಣ್ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿರಲಿಲ್ಲ. ಇದೀಗ ಸೂಪರ್ ಫಾರ್ಮ್‌ನೊಂದಿಗೆ ಐಪಿಎಲ್‌ಗೆ ಪ್ರವೇಶಿಸಿದ್ದಾರೆ.

ನಾಯರ್​ ಸೂಪರ್​ ಫಾರ್ಮ್​: ಇತ್ತೀಚೆಗೆ ನಡೆದಿದ್ದ ದೇಶೀಯ ಋತುವಿನಲ್ಲೂ ನಾಯರ್​ ರನ್‌ಗಳ ಮೈದಾನದಲ್ಲಿ ರನ್​ ಪ್ರವಾಹವನ್ನೇ ಸೃಷ್ಟಿಸಿದ್ದರು. ವಿಜಯ್ ಹಜಾರೆ ಟೂರ್ನಮೆಂಟ್‌ನಲ್ಲಿ ಸತತ ಮೂರು ಶತಕಗಳನ್ನು ಗಳಿಸಿದ್ದಲ್ಲದೆ, ಔಟಾಗದೆ ಟೂರ್ನಿಯಲ್ಲಿ 542 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಅವರು ರಣಜಿ ಮತ್ತು ಮುಷ್ತಾಕ್ ಅಲಿ ಟ್ರೋಫಿಗಳಲ್ಲೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಭಾರತೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದರು ಆದರೆ ಅವಕಾಶ ಸಿಗುತ್ತಿಲ್ಲ.

ಆದಾಗ್ಯೂ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನಾಯರ್​ಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ನೀಡಿತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ನಾಯರ್​ ಯಾವುದೇ ಸ್ವರೂಪದ ಕ್ರಿಕೆಟ್​ ಆಡುವ ಸಮಾರ್ಥ್ಯ ತನ್ನಲಿದೆ ಎಂದು ಜಗತ್ತಿಗೆ ಸಾರಿದ್ದಾರೆ.

ಪಂದ್ಯದ ಹೈಲೆಟ್​: ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಮುಂಬೈ ಇಂಡಿಯನ್ಸ್​​ 5 ವಿಕೆಟ್​ ನಷ್ಟಕ್ಕೆ 205 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡ ಕೊನೆವರೆಗೂ ಹೋರಾಡಿತಾದರೂ ಗೆಲುವು ದಕ್ಕಲಿಲ್ಲ. ಅಂತಿಮವಾಗಿ 12 ರನ್​ಗಳಿಂದ ಸೋಲನುಭವಿಸಿತು.

ಇದನ್ನೂ ಓದಿ: RCB ಆಟಗಾರರನ್ನು ಅಭಿನಂದಿಸಲು ಕುಂಟುತ್ತಲೇ ಮೈದಾನಕ್ಕೆ ಬಂದ ದ್ರಾವಿಡ್​: ಗುರುವಿನ ಬೆನ್ನಿಗೆ ನಿಂತ​ ಕೊಹ್ಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.