ETV Bharat / sports

'ಬುಮ್ರಾ ದುರಂಹಕಾರಿ ಆಗುತ್ತಿದ್ದಾರೆ' ಅಂದು ನಾಯರ್​, ಈಗ ಅಭಿನವ್​; ಫ್ಯಾನ್ಸ್ ಅಸಮಾಧಾನ​! - JASPRIT BUMRAH

ಮುಂಬೈ ಇಂಡಿಯನ್ಸ್​ ವೇಗಿ ಜಸ್ಪ್ರೀತ ಬುಮ್ರಾ ವಿರುದ್ಧ ಫ್ಯಾನ್ಸ್​ಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

Jasprit Bumrah abhinav manohar  Why Fans Criticise Jasprit Bumrah  Abhinav Manohar Incident  SRH vs MI Match
ಜಸ್ಪ್ರೀತ್​ ಬುಮ್ರಾ (AFP)
author img

By ETV Bharat Sports Team

Published : April 24, 2025 at 5:04 PM IST

1 Min Read

ಉಪ್ಪಲ್​ ಮೈದಾನದಲ್ಲಿ ನಿನ್ನೆ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಜಸ್ಪ್ರೀತ್​ ಬುಮ್ರಾ ತೋರಿರುವ ವರ್ತನೆ ಫ್ಯಾನ್ಸ್​ಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್​​ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಬುಮ್ರಾ ಓವರ್​ನಲ್ಲಿ ಸಿಕ್ಸರ್ ಬಾರಿಸಿದರು. ಅದರ ನಂತರ, ಬುಮ್ರಾ ಫುಲ್-ಟಾಸ್ ಬೌಲ್​ ಮಾಡಿದರು. ಆಗ ಚೆಂಡು ನೇರವಾಗಿ ಅಭಿನವ್​ ಹೊಟ್ಟೆಗೆ ತಾಕಿತು. ಇದರಿಂದ ಅಭಿನವ್​ ಕುಸಿದು ಕೆಳಬಿದ್ದರು. ಬಳಿಕ ಚೇತರಿಸಿಕೊಂಡು ಬ್ಯಾಟಿಂಗ್ ಮಾಡಲು ಸಿದ್ಧರಾದರು. ಆದರೆ, ಅಭಿನವ್​ ಕೆಳಬಿದ್ದರೂ, ಬುಮ್ರಾ ಏನಾಯಿತು ಎಂದು ವಿಚಾರಿಸದೇ ಮತ್ತೆ ಬೌಲಿಂಗ್ ಮಾಡಲು ಹೋದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ಸ್​ಗಳ ಆಕ್ರೋಶಕ್ಕೆ ಕಾರಣವಾಗಿದೆ. ಬುಮ್ರಾ ಅವರ ವರ್ತನೆಯ ಬಗ್ಗೆ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನೆಟ್ಟಿಗರೊಬ್ಬರು 'ಬುಮ್ರಾ, ನೀವು ತೋರಿರುವ ವರ್ತನೆ ಸರಿಯಾಗಿಲ್ಲ. ನಿಮ್ಮ ಈ ವರ್ತನೆಯನ್ನು ಹಲವು ಬಾರಿ ಗಮನಿಸಿದ್ದೇವೆ. ಯಾರಾದರೂ ತಮ್ಮ ಬೌಲಿಂಗ್‌ನಲ್ಲಿ ಸಿಕ್ಸ್ ಬಾರಿಸಿದರೆ ಬುಮ್ರಾ ಕೋಪಗೊಳ್ಳುತ್ತಾರೆ. ಇದಕ್ಕೂ ಮೊದಲು, ಕರುಣ್ ನಾಯರ್ ವಿರುದ್ಧವೂ ಇದೇ ರೀತಿ ವರ್ತಿಸಿದ್ದರು.

ಮತ್ತೊಬ್ಬರು ''ಅಭಿನವ್ ಮನೋಹರ್ ಅವರನ್ನು ವಿಚಾರಿಸಬೇಕಿತ್ತು. ಎಲ್ಲಾ ಬೌಲರ್‌ಗಳು ಹೀಗಿದ್ದಾರೆಯೇ? ಅಥವಾ ಬುಮ್ರಾ ಮಾತ್ರ ಹೀಗಿದ್ದಾರ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬುಮ್ರಾ ದುರಹಂಕಾರಿಯಾಗಿದ್ದಾರೆ? ಅವರು ಎಸೆದ ಯಾರ್ಕರ್ ಅಭಿನವ್ ಮನೋಹರ್ ಹೊಟ್ಟೆಗೆ ಬಲವಾಗಿ ತಾಕಿದರು ಸ್ವಲ್ಪವೂ ವಿಚಾರಿಸದೇ ಹಿಂತಿರುಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: RCB vs RR ಪಂದ್ಯಕ್ಕೂ ಮೊದಲೇ ದೊಡ್ಡ ಆತಂಕ; ಏನಾಯ್ತು?

ಉಪ್ಪಲ್​ ಮೈದಾನದಲ್ಲಿ ನಿನ್ನೆ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೆ ಇದೆ. ಆದರೆ ಈ ಪಂದ್ಯದಲ್ಲಿ ಜಸ್ಪ್ರೀತ್​ ಬುಮ್ರಾ ತೋರಿರುವ ವರ್ತನೆ ಫ್ಯಾನ್ಸ್​ಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್​​ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಬುಮ್ರಾ ಓವರ್​ನಲ್ಲಿ ಸಿಕ್ಸರ್ ಬಾರಿಸಿದರು. ಅದರ ನಂತರ, ಬುಮ್ರಾ ಫುಲ್-ಟಾಸ್ ಬೌಲ್​ ಮಾಡಿದರು. ಆಗ ಚೆಂಡು ನೇರವಾಗಿ ಅಭಿನವ್​ ಹೊಟ್ಟೆಗೆ ತಾಕಿತು. ಇದರಿಂದ ಅಭಿನವ್​ ಕುಸಿದು ಕೆಳಬಿದ್ದರು. ಬಳಿಕ ಚೇತರಿಸಿಕೊಂಡು ಬ್ಯಾಟಿಂಗ್ ಮಾಡಲು ಸಿದ್ಧರಾದರು. ಆದರೆ, ಅಭಿನವ್​ ಕೆಳಬಿದ್ದರೂ, ಬುಮ್ರಾ ಏನಾಯಿತು ಎಂದು ವಿಚಾರಿಸದೇ ಮತ್ತೆ ಬೌಲಿಂಗ್ ಮಾಡಲು ಹೋದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ಸ್​ಗಳ ಆಕ್ರೋಶಕ್ಕೆ ಕಾರಣವಾಗಿದೆ. ಬುಮ್ರಾ ಅವರ ವರ್ತನೆಯ ಬಗ್ಗೆ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನೆಟ್ಟಿಗರೊಬ್ಬರು 'ಬುಮ್ರಾ, ನೀವು ತೋರಿರುವ ವರ್ತನೆ ಸರಿಯಾಗಿಲ್ಲ. ನಿಮ್ಮ ಈ ವರ್ತನೆಯನ್ನು ಹಲವು ಬಾರಿ ಗಮನಿಸಿದ್ದೇವೆ. ಯಾರಾದರೂ ತಮ್ಮ ಬೌಲಿಂಗ್‌ನಲ್ಲಿ ಸಿಕ್ಸ್ ಬಾರಿಸಿದರೆ ಬುಮ್ರಾ ಕೋಪಗೊಳ್ಳುತ್ತಾರೆ. ಇದಕ್ಕೂ ಮೊದಲು, ಕರುಣ್ ನಾಯರ್ ವಿರುದ್ಧವೂ ಇದೇ ರೀತಿ ವರ್ತಿಸಿದ್ದರು.

ಮತ್ತೊಬ್ಬರು ''ಅಭಿನವ್ ಮನೋಹರ್ ಅವರನ್ನು ವಿಚಾರಿಸಬೇಕಿತ್ತು. ಎಲ್ಲಾ ಬೌಲರ್‌ಗಳು ಹೀಗಿದ್ದಾರೆಯೇ? ಅಥವಾ ಬುಮ್ರಾ ಮಾತ್ರ ಹೀಗಿದ್ದಾರ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬುಮ್ರಾ ದುರಹಂಕಾರಿಯಾಗಿದ್ದಾರೆ? ಅವರು ಎಸೆದ ಯಾರ್ಕರ್ ಅಭಿನವ್ ಮನೋಹರ್ ಹೊಟ್ಟೆಗೆ ಬಲವಾಗಿ ತಾಕಿದರು ಸ್ವಲ್ಪವೂ ವಿಚಾರಿಸದೇ ಹಿಂತಿರುಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: RCB vs RR ಪಂದ್ಯಕ್ಕೂ ಮೊದಲೇ ದೊಡ್ಡ ಆತಂಕ; ಏನಾಯ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.