ETV Bharat / sports

ಐಪಿಎಲ್​ ನಿಂದ ಹೊರಬಿದ್ದ ಬೆನ್ನಲ್ಲೆ ಗಾಯಕ್ವಾಡ್​, ಧೋನಿ ಕುರಿತು ನೀಡಿರುವ ಹೇಳಿಕೆ​ ವೈರಲ್! - IPL 2025

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ರುತುರಾಜ್​ ಗಾಯಕ್ವಾಡ್​ ಐಪಿಎಲ್​ನಿಂದ ಹೊರ ಬೀಳುತ್ತಿದ್ದಂತೆ ಧೋನಿ ಬಗ್ಗೆ ಮಾತನಾಡಿದ್ದಾರೆ.

Ruturaj Gaikwad  Ms Dhoni  CSK New Captain  Ruturaj Gaikwad injury
Ruturaj Gaikwad and MS Dhoni (IANS)
author img

By ETV Bharat Sports Team

Published : April 12, 2025 at 10:39 AM IST

2 Min Read

Ruturaj Gaikwad on MS Dhoni: ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಇದರ ನಡುವೆಯೇ ನಾಯಕ ರುತುರಾಜ್​ ಗಾಯಕ್ವಾಡ್​ ಐಪಿಎಲ್​ನಿಂದ ಹೊರಬಿದ್ದಿರುವುದು ಮತ್ತೊಂದು ಹೊಡೆತ ಬಿದ್ದಂತಾಗಿದೆ. 2023 ರಿಂದ ಸಿಎಸ್​ಕೆ ತಂಡದ ಖಾಯಂ ನಾಯಕನಾಗಿರುವ ರುತುರಾಜ್​ ಮೊಣಕೈ ಗಾಯದಿಂದಾಗಿ ಈ ರುತುವಿನಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೆ ಹಿರಿಯ ಮತ್ತು ಅನುಭವಿ ಆಟಗಾರ ಎಮ್​ಎಸ್​ ಧೋನಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಇದರಿಂದ ಫ್ಯಾನ್ಸ್​ಗಳು ಮತ್ತೊಮ್ಮೆ ಧೋನಿ ಅವರನ್ನು ನಾಯಕನಾಗಿ ನೋಡುತ್ತಿರುವುದಕ್ಕೆ ಸಂಭ್ರಮಿಸಿದ್ದಾರೆ. ಏತನ್ಮಧ್ಯೆ, ಐಪಿಎಲ್​ ಟೂರ್ನಿಯಿಂದ ಹೊರ ಬಿದ್ದಿರುವ ನಾಯಕ ರುತುರಾಜ್​ ಗಾಯಕ್ವಾಡ್​ ಮೊದಲ ಪ್ರತಿಕ್ರಿಯೆ ನೀಡಿದ್ದು ಧೋನಿ ಬಗ್ಗೆಯೂ ಮಾತನಾಡಿದ್ದಾರೆ.

ರುತುರಾಜ್​ ಗಾಯಕ್ವಾಡ್​ ಫಸ್ಟ್​ ರಿಯಾಕ್ಷನ್​: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರುತುರಾಜ್​ ಗಾಯಕವಾಡ್ ಮಾತನಾಡಿರುವ ಅವರ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, "ಮೊಣಕೈ ಗಾಯಕ್ಕೆ ತುತ್ತಾಗಿ ಐಪಿಎಲ್‌ನಿಂದ ಹೊರಬಿದ್ದಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಈ ವರೆಗೂ ನೀವೂ ನೀಡಿರುವ ಬೆಂಬಲಕ್ಕೆ ಧನ್ಯವಾದಗಳು.

ಈ ಋತುವಿನಲ್ಲಿ ನಮ್ಮ ತಂಡ ಸಾಮಾನ್ಯ ಪ್ರದರ್ಶನ ನೀಡುತ್ತಿದೆ. ಇದೀಗ ತಂಡವನ್ನು ಯುವ ವಿಕೆಟ್​ ಕೀಪರ್​ (ಎಮ್​ಎಸ್​ ಧೋನಿ) ಮುನ್ನಡೆಸುತ್ತಾರೆ. ಪರಿಸ್ಥಿತಿ ಬದಲಾಗುತ್ತದೆ ಎಂದು ಆಶಿಸುತ್ತೇವೆ. ನಾನು ತಂಡದೊಂದಿಗೆ ಇರುತ್ತೇನೆ ಮತ್ತು ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ" ಎಂದಿದ್ದಾರೆ.

ನಾಯಕ ಬದಲಾದರೂ ಸಿಎಸ್​ಕೆಗೆ ಒಲಿಯದ ಗೆಲುವು

ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತಂಡ ಕೆಕೆಆರ್​ ವಿರುದ್ಧ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ತವರು ಮೈದಾನ ಚೆಪಾಕ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಚೆನ್ನೈ ತಂಡ 20 ಓವರ್​ಗಳಲ್ಲಿ 103ರನ್​ ಮಾತ್ರ ಕಲೆಹಾಕಿತು. ತಂಡದ ಪರ ವಿಜಯ್​ ಶಂಕರ್​ (29) ಮತ್ತು ಶಿವಂ ದುಬೆ (31) ಹೊರತು ಪಡಿಸಿ ಉಳಿದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಲಿಲ್ಲ.

ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್​ ತಂಡ 10 ಓವರ್​ಗಳಲ್ಲೆ ಗೆಲುವಿನ ದಡ ಸೇರಿತು. ತಂಡದ ಪರ ಸುನಿಲ್​ ನರೈನೆ (44) ಆಲ್​ರೌಂಡರ್​ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಸಿಎಸ್​ಕೆ ತಂಡ ಆಡಿದ ಆರು ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ 5 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.

ಇದನ್ನೂ ಓದಿ: 'ನಾಯಕನಾಗಿ ಧೋನಿ ಕಮ್​ಬ್ಯಾಕ್'​: ಮಾಹಿ ನಿರ್ಮಿಸಿರುವ ಈ ದಾಖಲೆಗಳು ಮುರಿಯುವುದು ಅಸಾಧ್ಯ!

Ruturaj Gaikwad on MS Dhoni: ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಇದರ ನಡುವೆಯೇ ನಾಯಕ ರುತುರಾಜ್​ ಗಾಯಕ್ವಾಡ್​ ಐಪಿಎಲ್​ನಿಂದ ಹೊರಬಿದ್ದಿರುವುದು ಮತ್ತೊಂದು ಹೊಡೆತ ಬಿದ್ದಂತಾಗಿದೆ. 2023 ರಿಂದ ಸಿಎಸ್​ಕೆ ತಂಡದ ಖಾಯಂ ನಾಯಕನಾಗಿರುವ ರುತುರಾಜ್​ ಮೊಣಕೈ ಗಾಯದಿಂದಾಗಿ ಈ ರುತುವಿನಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೆ ಹಿರಿಯ ಮತ್ತು ಅನುಭವಿ ಆಟಗಾರ ಎಮ್​ಎಸ್​ ಧೋನಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಇದರಿಂದ ಫ್ಯಾನ್ಸ್​ಗಳು ಮತ್ತೊಮ್ಮೆ ಧೋನಿ ಅವರನ್ನು ನಾಯಕನಾಗಿ ನೋಡುತ್ತಿರುವುದಕ್ಕೆ ಸಂಭ್ರಮಿಸಿದ್ದಾರೆ. ಏತನ್ಮಧ್ಯೆ, ಐಪಿಎಲ್​ ಟೂರ್ನಿಯಿಂದ ಹೊರ ಬಿದ್ದಿರುವ ನಾಯಕ ರುತುರಾಜ್​ ಗಾಯಕ್ವಾಡ್​ ಮೊದಲ ಪ್ರತಿಕ್ರಿಯೆ ನೀಡಿದ್ದು ಧೋನಿ ಬಗ್ಗೆಯೂ ಮಾತನಾಡಿದ್ದಾರೆ.

ರುತುರಾಜ್​ ಗಾಯಕ್ವಾಡ್​ ಫಸ್ಟ್​ ರಿಯಾಕ್ಷನ್​: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರುತುರಾಜ್​ ಗಾಯಕವಾಡ್ ಮಾತನಾಡಿರುವ ಅವರ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, "ಮೊಣಕೈ ಗಾಯಕ್ಕೆ ತುತ್ತಾಗಿ ಐಪಿಎಲ್‌ನಿಂದ ಹೊರಬಿದ್ದಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಈ ವರೆಗೂ ನೀವೂ ನೀಡಿರುವ ಬೆಂಬಲಕ್ಕೆ ಧನ್ಯವಾದಗಳು.

ಈ ಋತುವಿನಲ್ಲಿ ನಮ್ಮ ತಂಡ ಸಾಮಾನ್ಯ ಪ್ರದರ್ಶನ ನೀಡುತ್ತಿದೆ. ಇದೀಗ ತಂಡವನ್ನು ಯುವ ವಿಕೆಟ್​ ಕೀಪರ್​ (ಎಮ್​ಎಸ್​ ಧೋನಿ) ಮುನ್ನಡೆಸುತ್ತಾರೆ. ಪರಿಸ್ಥಿತಿ ಬದಲಾಗುತ್ತದೆ ಎಂದು ಆಶಿಸುತ್ತೇವೆ. ನಾನು ತಂಡದೊಂದಿಗೆ ಇರುತ್ತೇನೆ ಮತ್ತು ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ" ಎಂದಿದ್ದಾರೆ.

ನಾಯಕ ಬದಲಾದರೂ ಸಿಎಸ್​ಕೆಗೆ ಒಲಿಯದ ಗೆಲುವು

ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತಂಡ ಕೆಕೆಆರ್​ ವಿರುದ್ಧ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ತವರು ಮೈದಾನ ಚೆಪಾಕ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಚೆನ್ನೈ ತಂಡ 20 ಓವರ್​ಗಳಲ್ಲಿ 103ರನ್​ ಮಾತ್ರ ಕಲೆಹಾಕಿತು. ತಂಡದ ಪರ ವಿಜಯ್​ ಶಂಕರ್​ (29) ಮತ್ತು ಶಿವಂ ದುಬೆ (31) ಹೊರತು ಪಡಿಸಿ ಉಳಿದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಲಿಲ್ಲ.

ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್​ ತಂಡ 10 ಓವರ್​ಗಳಲ್ಲೆ ಗೆಲುವಿನ ದಡ ಸೇರಿತು. ತಂಡದ ಪರ ಸುನಿಲ್​ ನರೈನೆ (44) ಆಲ್​ರೌಂಡರ್​ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಸಿಎಸ್​ಕೆ ತಂಡ ಆಡಿದ ಆರು ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ 5 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.

ಇದನ್ನೂ ಓದಿ: 'ನಾಯಕನಾಗಿ ಧೋನಿ ಕಮ್​ಬ್ಯಾಕ್'​: ಮಾಹಿ ನಿರ್ಮಿಸಿರುವ ಈ ದಾಖಲೆಗಳು ಮುರಿಯುವುದು ಅಸಾಧ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.