List of foods that prevent dehydration: ರಾಜ್ಯದ ರಾಯಚೂರು, ವಿಜಯಪುರ, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಬಿಸಿಲಿನ ಆರ್ಭಟ ಮುಂದುವರಿದಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹೆಚ್ಚಿನವರು ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ದೇಹವು ನಿರ್ಜಲೀಕರಣಗೊಂಡಾಗ ಅದು ದಿನವಿಡೀ ತಲೆತಿರುಗುವಿಕೆ, ವಾಂತಿ, ಮೂರ್ಛೆ ಮತ್ತು ಆಯಾಸ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಂಟಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುವ ಕೆಲವು ನೀರಿನಂಶವಿರುವ ಆಹಾರಗಳ ಬಗ್ಗೆ ಅರಿತುಕೊಳ್ಳೋಣ.

ಸೌತೆಕಾಯಿ: ಸೌತೆಕಾಯಿ ಅತ್ಯಂತ ಜನಪ್ರಿಯವಾದ ನೀರಿನಂಶವಿರುವ ತರಕಾರಿಗಳಲ್ಲಿ ಒಂದು. ಇದು ಸುಮಾರು ಶೇಕಡಾ 95ರಷ್ಟು ನೀರನ್ನು ಹೊಂದಿರುತ್ತದೆ. ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿರುವ ಸೌತೆಕಾಯಿಯು ತೂಕ ನಷ್ಟಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಬೆಳಗಿನ ಉಪಹಾರದಲ್ಲಿ ಸೌತೆಕಾಯಿ ಸೇರಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಸೋರೆಕಾಯಿ: ಸೋರೆಕಾಯಿ ಸಂಪೂರ್ಣವಾಗಿ ನೀರಿನಂಶ ಹೊಂದಿರುವ ತರಕಾರಿ. ಇದು ಸುಮಾರು ಶೇಕಡಾ 92ರಷ್ಟು ನೀರನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ನಿಯಮಿತವಾಗಿ ಸೇರಿಸಿಕೊಳ್ಳುವ ಮೂಲಕ, ದೇಹದಲ್ಲಿ ನಿರ್ಜಲೀಕರಣವನ್ನು ತಡೆಯಬಹುದು.

ಕಲ್ಲಂಗಡಿ: ಶೇಕಡಾ 90ರಿಂದ 99ರಷ್ಟು ನೀರನ್ನು ಹೊಂದಿರುವ ಕಲ್ಲಂಗಡಿಯನ್ನು ಬೇಸಿಗೆಯಲ್ಲಿ ಸೇವನೆ ಮಾಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ತಡೆಯಬಹುದು. ಬೇಸಿಗೆಯ ತಿಂಗಳುಗಳಲ್ಲಿ ಕಲ್ಲಂಗಡಿ ತಿನ್ನುವುದರಿಂದ ದೇಹವು ತಂಪಾಗುತ್ತದೆ ಹಾಗೂ ಆಯಾಸ ನಿವಾರಣೆಯಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಟೊಮೆಟೊ: ನಾವು ಪ್ರತಿದಿನ ಅಡುಗೆಗೆ ಬಳಸುವ ಟೊಮೆಟೊದಲ್ಲಿ ಶೇಕಡಾ 94ರಷ್ಟು ನೀರು ಇರುತ್ತದೆ. ಇದಲ್ಲದೆ, ಇದರಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆದು ಹಾಗೆ ತಿನ್ನಬಹುದು ಅಥವಾ ಸಲಾಡ್ಗಳಿಗೆ ಸೇರಿಸಿ ಸೇವನೆ ಮಾಡಬಹುದು.

ಹಾಲು: ಒಂದು ಲೋಟ ಹಾಲಿನಲ್ಲಿ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಕೊಬ್ಬು ಮತ್ತು ನೀರು ಸಮೃದ್ಧವಾಗಿದೆ. ಬೇಸಿಗೆಯಲ್ಲಿ ದೇಹವನ್ನು ಆರೋಗ್ಯವಾಗಿಡಲು ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಉತ್ತಮ. ಎನ್ಸಿಬಿಐ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಕೊಬ್ಬಿನಂಶವಿಲ್ಲದ ಹಾಲು ಶೇಕಡಾ 90ರಿಂದ 99ರಷ್ಟು ನೀರನ್ನು ಹೊಂದಿರುತ್ತದೆ ಎಂದು ಬಹಿರಂಗಪಡಿಸಿದೆ.
ವಿವಿಧ ಹಸಿರು ಸೊಪ್ಪುಗಳು: ವಿವಿಧ ಹಸಿರು ಸೊಪ್ಪಿನಲ್ಲಿ ಶೇಕಡಾ 91ರಷ್ಟು ನೀರಿನ ಅಂಶವಿದೆ. ಹೆಚ್ಚುವರಿಯಾಗಿ ಅವುಗಳಲ್ಲಿ ಕಬ್ಬಿಣ, ವಿಟಮಿನ್ ಕೆ ಮತ್ತು ಫೋಲೇಟ್ನಂತಹ ಪೋಷಕಾಂಶಗಳು ಹೇರಳವಾಗಿದೆ. ದೇಹದ ಆರೋಗ್ಯ ಬಲಪಡಿಸುತ್ತವೆ. ಬೇಸಿಗೆಯಲ್ಲಿ ಸೇವಿಸಲೇಬೇಕಾದ ಆಹಾರಗಳಲ್ಲಿ ಸೊಪ್ಪು ಕೂಡ ಪ್ರಮುಖವಾಗಿವೆ. ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿಯಾದರೂ ವಿವಿಧ ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ತಜ್ಞರು ತಿಳಿಸುತ್ತಾರೆ.
ಹೀರೆಕಾಯಿ: ಬೇಸಿಗೆಗೆ ಸೂಕ್ತವಾದ ಆಹಾರಗಳಲ್ಲಿ ಹೀರೆಕಾಯಿ ಕೂಡ ಒಂದು. ಇದು ಹೆಚ್ಚಿನ ನೀರಿನ ಅಂಶ ಹೊಂದಿರುವ ತರಕಾರಿಯಾಗಿರುವುದರಿಂದ ಇದು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀರೆಕಾಯಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಖನಿಜಗಳನ್ನು ಒಳಗೊಂಡಿದೆ.
ಮೂಲಂಗಿ: ಮೂಲಂಗಿಯಲ್ಲಿ ಶೇಕಡಾ 95ರಷ್ಟು ನೀರು, ವಿಟಮಿನ್ ಸಿ, ಫೈಬರ್ ಮತ್ತು ಪೊಟ್ಯಾಸಿಯಮ್ ಅಂಶವು ಸಮೃದ್ಧವಾಗಿವೆ. ಆಗಾಗ್ಗೆ ನಿಮ್ಮ ಆಹಾರದಲ್ಲಿ ಮೂಲಂಗಿ ಸೇರಿಸಿಕೊಳ್ಳಬೇಕಾಗುತ್ತದೆ. ಮೂಲಂಗಿಯನ್ನು ಬೇಯಿಸಿ ಸಾಂಬಾರ್ ಅಥವಾ ಚಟ್ನಿಯಂತೆ ಸಿದ್ಧಪಡಿಸಿದ ಸೇವನೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.