- ಹುಚ್ಚೇಶ್ವರ ಅಣ್ಣಿಗೇರಿ
Sugarcane Juice And Coconut Water Benefits: ರಾಜ್ಯದ ಬೆಂಗಳೂರು, ದಕ್ಷಿಣ ಕನ್ನಡ, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದೆ. ಬೇಸಿಗೆಯ ಕಾಲದಲ್ಲಿ ಎಳೆ ನೀರು ಮತ್ತು ಕಬ್ಬಿನ ಜ್ಯೂಸ್ ಹೆಚ್ಚು ಬೇಡಿಕೆಯಿರುವ ಪಾನೀಯವಾಗಿವೆ. ಇವೆರಡು ಸಿಹಿ ಜೊತೆಗೆ ಉತ್ತಮ ರುಚಿ ಹೊಂದಿರುತ್ತವೆ. ನಮಗೆ ಬಾಯಾರಿಕೆಯಾದಾಗ ಈ ಪಾನೀಯಗಳು ಸೇವಿಸುವುದು ಉತ್ತಮ.
ಕ್ರೀಡೆಗಳಲ್ಲಿ ಪಾಲ್ಗೊಂಡ ನಂತರ ಎಳನೀರು ಕುಡಿಯುವುದರಿಂದ ಚೆನ್ನಾಗಿ ಹೈಡ್ರೇಟ್ ಮಾಡುವ ಖನಿಜಗಳಿರುವುದರಿಂದ ಆಟಗಾರರಿಗೆ ಸಹಾಯ ಮಾಡಲಿದೆ. ಕಬ್ಬಿನ ರಸವು ತ್ವರಿತ ಶಕ್ತಿ ನೀಡುತ್ತದೆ. ಕಬ್ಬಿನ ಜ್ಯೂಸ್ ಮಧುಮೇಹಗಳಿಗೆ ಒಳ್ಳೆಯದಲ್ಲ. ಆದ್ರೆ, ಎರಡೂ ಪಾನೀಯಗಳಲ್ಲಿ ಒಳ್ಳೆಯ ಅಂಶಗಳನ್ನು ಹೊಂದಿವೆ. ಈ ಪಾನೀಯಗಳು ಕೆಲವು ಜನರಿಗೆ ಅವರ ದೇಹದ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಹೆಚ್ಚು ಸೇವಿಸಬೇಕಾಗುತ್ತದೆ. ಎಳೆನೀರು ಹಾಗೂ ಕಬ್ಬಿನ ರಸವು ಹೇಗೆ ಭಿನ್ನವಾಗಿವೆ? ಎಳೆ ನೀರು ಹಾಗೂ ಕಬ್ಬಿನ ಜ್ಯೂಸ್ನಲ್ಲಿ ಯಾವುದು ದೇಹದ ಆರೋಗ್ಯಕ್ಕೆ ಉತ್ತಮ? ಇವುಗಳಲ್ಲಿ ಯಾವೆಲ್ಲಾ ಪೋಷಕಾಂಶಗಳಿವೆ? ನಮ್ಮ ದೇಹದ ಆರೋಗ್ಯಕ್ಕೆ ಲಭಿಸುವ ಲಾಭಗಳೇನು ಎಂಬುದರ ಬಗ್ಗೆ ಆರೋಗ್ಯ ತಜ್ಞರು ಏನು ತಿಳಿಸುತ್ತಾರೆ ಇಲ್ಲಿವೆ ನೋಡಿ.

ಕಬ್ಬಿನ ಜ್ಯೂಸ್, ಎಳೆನೀರು ಎರಡೂ ತಂಪಾದ ಹಾಗೂ ಅತ್ಯುತ್ತಮ ಬೇಸಿಗೆ ಒಳ್ಳೆಯ ಪಾನೀಯವಾಗಿವೆ. ರಾಸಾಯನಿಕ ತಂಪುಗಳಿಗಿಂತಲೂ ಇವೆರಡು ಉತ್ತಮವಾಗಿವೆ. ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ, ತೇವಾಂಶದಿಂದ ಪರಿಹಾರ ಪಡೆಯಬೇಕಾದರೆ ಈ ಎರಡೂ ಆರೋಗ್ಯಕರ ಪಾನೀಯಗಳ ಸಾಲಿನಲ್ಲಿ ಬರುತ್ತವೆ.
'ಬೇಸಿಗೆಯ ಸಮಯದಲ್ಲಿ ಕಬ್ಬಿನ ಜ್ಯೂಸ್ ಮತ್ತು ತೆಂಗಿನ ನೀರು ಎರಡೂ ನಮ್ಮ ದೇಹಕ್ಕೆ ಒಳ್ಳೆಯದು. ಕಬ್ಬಿನ ಜ್ಯೂಸ್ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತದೆ. ಆದರೆ, ಇದರಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ, ಇದು ದೇಹದಿಂದ ಗ್ಲೂಕೋಸ್ ಆಗಿ ವಿಭಜನೆಯಾಗುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. 250 ಮಿಲಿ ರಸದಲ್ಲಿ 50 ಗ್ರಾಂ ಸಕ್ಕರೆ ಇರುತ್ತದೆ. ಇದು 12 ಟೀಸ್ಪೂನ್ ಸಕ್ಕರೆ ಸಮವಾಗಿರುತ್ತದೆ. ವಯಸ್ಕ ಮಹಿಳೆಯರು ದಿನಕ್ಕೆ 24 ಗ್ರಾಂಗಿಂತ ಹೆಚ್ಚು ಸೇವಿಸಬಾರದು ಹಾಗೂ ಪುರುಷರು ದಿನಕ್ಕೆ 36 ಗ್ರಾಂಗಿಂತ ಹೆಚ್ಚು ಸೇವಿಸಬಾರದು'.
-ಅರ್ಚನಾ ಕೋಟಾರಿ, ಹಿರಿಯ ವೈದ್ಯೆ
ಕಬ್ಬಿನ ಜ್ಯೂಸ್ನ ಪ್ರಯೋಜನಗಳೇನು?: ವಿಶೇಷವಾಗಿ ಬೇಸಿಗೆಯಲ್ಲಿ ಅತಿಯಾದ ಉಷ್ಣಾಂಶದಿಂದ ಮುಕ್ತಿ ಪಡೆಯಲು ಬಾಯಾರಿಕೆ ತಣಿಸುವ ಅತ್ಯುತ್ತಮ ಪಾನೀಯ. ಕಡಿಮೆ ಕ್ಯಾಲೋರಿ ಹೊಂದಿರುವ ಕಬ್ಬಿನ ಜ್ಯೂಸ್ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ . ಕಬ್ಬಿನ ರಸವು ಜೀರ್ಣಕ್ರಿಯೆಗೆ ಟಾನಿಕ್ ರೀತಿ ಕೆಲಸ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಮೂಳೆ, ಹಲ್ಲುಗಳಿಗೆ ಒಳ್ಳೆಯದು: ಕ್ಯಾಲ್ಸಿಯಂ ಹಾಗೂ ರಂಜಕದಂತಹ ಖನಿಜಗಳು ಕಬ್ಬಿನ ಜ್ಯೂಸ್ನಲ್ಲಿ ಹೇರಳವಾಗಿವೆ. ಮೂಳೆ ಮತ್ತು ಹಲ್ಲಿನ ದಂತಕವಚ ಸದೃಢವಾಗಿಸಲು ಸಹಾಯವಾಗುತ್ತದೆ. ಕಬ್ಬಿನ ರಸವು ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಬಾಯಿಯ ದುರ್ವಾಸನೆ ತಡೆಯಲು ಪರಿಣಾಮಕಾರಿ ಕೆಲಸ ಮಾಡುತ್ತದೆ.

ಕಾಮಾಲೆಗೆ ಉತ್ತಮ: ಕಬ್ಬಿನ ರಸವು ನಿಮ್ಮ ಯಕೃತ್ತಿನ ಆರೋಗ್ಯ ಉತ್ತಮ ಕೊಡುಗೆ ನೀಡುತ್ತದೆ . ಕಾಮಾಲೆ ಬರದಂತೆ ತಡೆಗಟ್ಟುತ್ತದೆ. ಜೊತೆಗೆ ಉತ್ತಮ ಪರಿಹಾರವಾಗಿದೆ. ಯಕೃತ್ತನ್ನು ಸೋಂಕುಗಳನ್ನು ತಗುಲದಂತೆ ಕಾಪಾಡುತ್ತದೆ, ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಕಬ್ಬಿನ ಜ್ಯೂಸ್ ನಿಮ್ಮ ದೇಹಕ್ಕೆ ಅಗತ್ಯ ಇರುವಂತಹ ಪ್ರೋಟೀನ್ಗಳು ಹಾಗೂ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಕಬ್ಬಿನ ರಸವು ಅನಾರೋಗ್ಯದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಪೂರಕವಾಗಿ ಕೆಲಸ ಮಾಡುತ್ತದೆ.

ದೇಹಕ್ಕೆ ತ್ವರಿತ ಶಕ್ತಿ ನೀಡುತ್ತೆ: ಕಬ್ಬಿನ ರಸದಲ್ಲಿನ ನೈಸರ್ಗಿಕ ಪ್ರಮಾಣದ ಸುಕ್ರೋಸ್ ದೇಹದಲ್ಲಿ ಗ್ಲೂಕೋಸ್ ಬಿಡುಗಡೆ ನಿಯಂತ್ರಿಸುತ್ತದೆ. ಜೊತೆಗೆ ಸರಿಯಾದ ಪ್ರಮಾಣದ ತ್ವರಿತವಾದ ಶಕ್ತಿ ನೀಡುತ್ತದೆ. ಶುಗರ್ ಲೆವಲ್ ಕಡಿಮೆಯಾಗಿದ್ದರೆ, ಕಬ್ಬಿನ ರಸ ಸೇವನೆಯಿಂದ ಮರಳಿ ಪಡೆಯಬಹುದು. ದೇಹವನ್ನು ರೀಹೈಡ್ರೇಟ್ ಮಾಡಲು ಹಾಗೂ ಆಯಾಸವನ್ನು ತೊಡೆದುಹಾಕಲು ಇದು ಒಳ್ಳೆಯ ಮಾರ್ಗವಾಗಿದೆ.
ಚರ್ಮಕ್ಕೆ ಉತ್ತಮ ಆರೈಕೆ: ಕಬ್ಬಿನ ರಸ ಸೇವನೆ ಮಾಡುವುದರಿಂದ ಮೊಡವೆಗಳು ಹೋಗುತ್ತವೆ. ಕಲೆಗಳನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ವಯಸ್ಸಾಗುವುದನ್ನು ಸ್ವಲ್ಪ ನಿಧಾನಗೊಳಿಸುತ್ತದೆ. ಚರ್ಮವನ್ನು ಮೃದುವಾಗಿಡುವ ಜೊತೆಗೆ ಹಲವು ಅದ್ಭುತ ಪ್ರಯೋಜನಗಳು ಕೂಡಾ ದೊರೆಯುತ್ತವೆ. ಆಲ್ಫಾ ಹೈಡ್ರಾಕ್ಸಿ ಆ್ಯಸಿಡ್ಗಳು ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿವೆ.

ಮೂತ್ರವರ್ಧಕ ಗುಣ: ಮೂತ್ರವರ್ಧಕ ಗುಣಗಳನ್ನು ಕಬ್ಬಿನ ರಸವು ರೋಗಗಳನ್ನು ತಡೆಗಟ್ಟುವಿಕೆಗೆ ಪರಿಣಾಕಾರಿಯಾಗಿ ಕೆಲಸ ಮಾಡುತ್ತವೆ. ಇದು ಮೂತ್ರನಾಳದ ಸೋಂಕು ತಡೆಯುತ್ತದೆ. ವಿಶೇಷವಾಗಿ ಮೂತ್ರ ವಿಸರ್ಜಿಸುವಾಗ ಉರಿಯುವಂತಹ ಸಂವೇದನೆ ಕಂಡಬಂದರೆ, ಇದನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕಬ್ಬಿನ ಜ್ಯೂಸ್ ಮುಖ್ಯವಾಗಿ ಮೂತ್ರಪಿಂಡದ ಕಲ್ಲುಗಳನ್ನು ತಪ್ಪಿಸುತ್ತದೆ.
ಎಳೆ ನೀರಿನ ಆರೋಗ್ಯ ಲಾಭಗಳೇನು?: ಎಳೆನೀರು ಚರ್ಮದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಅನೇಕ ನೈಸರ್ಗಿಕ ಕಿಣ್ವಗಳನ್ನು ಹೊಂದಿದೆ. ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನೂ ತಡೆಯುತ್ತದೆ. ತೀವ್ರವಾಗಿ ನಿರ್ಜಲೀಕರಣಗೊಂಡಂತಹ ಸಮಯದಲ್ಲಿ ರೀಹೈಡ್ರೇಟ್ ಮಾಡಲು ಹಾಗೂ ರೋಗನಿರೋಧಕ ಶಕ್ತಿ ಮರಳಿ ಪಡೆಯಲು ಎಳೆನೀರು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.

ಖನಿಜಗಳ ಆಗರ: ತಾಜಾ ಎಳೆನೀರು ಖನಿಜಗಳನ್ನು ಒದಗಿಸುತ್ತದೆ. ಕಾರ್ಬೋಹೈಡ್ರೇಟ್ ಮುಕ್ತವಾಗಿರುವಂತಹ ತಾಜಾ ಎಳೆನೀರು ಎಲೆಕ್ಟ್ರೋಲೈಟ್ಗಳನ್ನು ಒಳಗೊಂಡಿರುತ್ತವೆ. ಶುಗರ್ ಪಾನೀಯಗಳು, ಕ್ರೀಡಾ ಪಾನೀಯಗಳು ಹಾಗೂ ಬಾಟಲ್ಗಳಲ್ಲಿರುವ ತಂಪು ಪಾನೀಯಗಳಿಗಿಂತ ಎಳೆನೀರು ಆರೋಗ್ಯಕರವಾದ ಪಾನೀಯ.
ಜೀರ್ಣಕ್ರಿಯೆಗೆ ಒಳ್ಳೆಯದು: ಅಜೀರ್ಣ, ಹೊಟ್ಟೆ ಜ್ವರ, ಮೂತ್ರನಾಳದ ಸೋಂಕುಗಳಂತಹ ಜೀರ್ಣಕಾರಿ, ಮೂತ್ರನಾಳಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಎಳೆನೀರನ್ನು ಹಿಂದಿನಿಂದಲೂ ಚಿಕಿತ್ಸೆಯಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ಹೆಚ್ಚಿನ ಪೊಟ್ಯಾಸಿಯಮ್ ಹೃದಯ, ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಸಮಸ್ಯೆಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
'ತೆಂಗಿನ ನೀರಿನಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಎಲೆಕ್ಟ್ರೋಲೈಟ್ಗಳು ಸಮೃದ್ಧವಾಗಿವೆ. ಇದರಲ್ಲಿ ಸಕ್ಕರೆ ಪ್ರಮಾಣ ತುಂಬಾ ಕಡಿಮೆ ಮತ್ತು ಕಾರ್ಬೋಹೈಡ್ರೇಟ್ಗಳು ಕಡಿಮೆ ಇದೆ. ದಿನವಿಡೀ ನಿಮ್ಮನ್ನು ಹೈಡ್ರೀಕರಿಸಿಡಲು ದಿನಕ್ಕೆ ಒಂದರಿಂದ ಎರಡು ಕಪ್ ತೆಂಗಿನ ನೀರು ಸೇವಿಸಿದರೆ ಸಾಕು'.
-ಅರ್ಚನಾ ಕೋಟಾರಿ, ಹಿರಿಯ ವೈದ್ಯೆ

ಎಳೆನೀರಿನ ಮತ್ತಷ್ಟು ಉಪಯೋಗಗಳು:
- ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಂದರೆ ಆಗುತ್ತಿದ್ದರೆ, ಎಳೆನೀರು ಪರಿಹಾರದ ಮೂಲವಾಗಿದೆ. ಇದರಲ್ಲಿ ಫೈಬರ್ ಅಂಶವಿದ್ದು, ಅಜೀರ್ಣ ತಡೆಯುತ್ತದೆ.
- ವ್ಯಾಯಾಮದ ಬಳಿಕ ತೆಂಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ಲಭಿಸುತ್ತದೆ. ನಿಮ್ಮನ್ನು ಹೈಡ್ರೇಟ್ ಆಗಿಡುತ್ತದೆ.
- ಎಳೆನೀರು ದೇಹವನ್ನು ಹೈಡ್ರೇಟ್ ಆಗಿಡುವುದು ಮಾತ್ರವಲ್ಲದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
- ಸಕ್ಕರೆ ಕಾಯಿಲೆ ಇರುವವರು ಮಿತವಾಗಿ ಎಳೆನೀರನ್ನು ಕುಡಿಯುವುದರಿಂದ ಶುಗರ್ ನಿಯಂತ್ರಣ ಮಾಡಬಹುದು.

- ಇತ್ತೀಚಿನ ದಿನಗಳಲ್ಲಿ ಬಹುತೇಕರು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಎಳೆ ನೀರು ಕುಡಿಯುವುದರಿಂದ ಒತ್ತಡದಿಂದ ಮುಕ್ತಿ ಪಡೆಯಲು ಸಾಧ್ಯವಿದೆ.
- ಎಳೆನೀರನ್ನು ನಿಯಮಿತವಾಗಿ ಸೇವಿಸುವುದು ಯಕೃತ್ತಿಗೆ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಲಿವರ್ ರಕ್ಷಣೆ ಮಾಡುತ್ತದೆ. ಯಕೃತ್ತಿನ ಜೀವಕೋಶಗಳು ಮೃತಪಡುವುದನ್ನು ತಡೆಯುತ್ತದೆ.
- ಎಳೆನೀರಿನಲ್ಲಿ ಹಲವು ಪೋಷಕಾಂಶಗಳು ತ್ವಚೆಯ ಸಮಸ್ಯೆಗಳನ್ನು ತಡೆಯುತ್ತದೆ. ಯುವಕರಂತೆ ಕಾಣಲು ಸಾಧ್ಯವಾಗುತ್ತದೆ. ವಯಸ್ಸಾಗುವುದನ್ನು ತಡೆಯುವ ಗುಣಗಳನ್ನು ಹೊಂದಿದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಿ:
- https://pmc.ncbi.nlm.nih.gov/articles/PMC3880661/
- https://www.sciencedirect.com/topics/agricultural-and-biological-sciences/sugarcane-juice
- https://pubmed.ncbi.nlm.nih.gov/22449517/
- https://pubmed.ncbi.nlm.nih.gov/24835026/
ಓದುಗರಿಗೆ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.