ETV Bharat / entertainment

70 ವರ್ಷದ ಹಳೇ ಸೀರೆ ಧರಿಸಿ ಸೊಬಗು ಬೀರಿದ ಪೂಜಾ ಹೆಗ್ಡೆ: ಅಜ್ಜಿ, ಮಂಗಳೂರಿನ ನೆನಪಲ್ಲಿ ಬಹುಭಾಷಾ ನಟಿ - POOJA HEGDE

70 ವರ್ಷದ ಹಳೇ ಸೀರೆಯುಟ್ಟು, ನಟಿ ಪೂಜಾ ಹೆಗ್ಡೆ ತಮ್ಮ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ.

Actress Pooja Hegde
ನಟಿ ಪೂಜಾ ಹೆಗ್ಡೆ (Photo: ANI)
author img

By ETV Bharat Entertainment Team

Published : April 28, 2025 at 10:26 AM IST

2 Min Read

ಬಹುಭಾಷಾ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ತಮ್ಮ ಗ್ಲ್ಯಾಮರ್​​​​ನಿಂದೂ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ, ವಿಶೇಷ ಸೀರೆ ಧರಿಸಿ ನೆನಪಿನ ಹಾದಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ತಾರೆಯ ಸೊಬಗಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾನುವಾರ, ತಮ್ಮ ಅಫೀಶಿಯಲ್​ ಇನ್‌ಸ್ಟಾಗ್ರಾಮ್​ನಲ್ಲಿ, 70 ವರ್ಷ ಹಳೆಯ ಹಸಿರು ಕಾಂಜೀವರಂ ಸೀರೆ ಧರಿಸಿ ಫೋಟೋಗಳಿಗೆ ಪೋಸ್ ನೀಡಿರುವ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿರುವ ನಟಿ, ಅದಕ್ಕೆ ತಕ್ಕ ಬಳೆ ಧರಿಸಿ, ಮಲ್ಲಿಗೆ ಮುಡಿದಿದ್ದಾರೆ.

ಸರಣಿ ಫೋಟೋಗಳ ಜೊತೆಗೆ, "ವಿಂಟೇಜ್ ಕ್ಲೋಸೆಟ್‌ನಿಂದ, 70 ವರ್ಷ ಹಳೆಯ ಅದ್ಭುತ ಸೀರೆ. ನನ್ನ ಬ್ಯೂಟಿಫುಲ್ ಅಜ್ಜಿ ಕಾಂಜೀವರಂ ಧರಿಸಿದ ಕ್ಷಣಗಳು ಕಣ್ಮುಂದೆ ಬಂದಿವೆ, ಮದುವೆಗೆ ಹೋಗಲು ರೆಡಿ ಆಗುವಾಗ ಮನೆಯಲ್ಲಿ ಮಲ್ಲಿಗೆಯ ತಾಜಾ ಪರಿಮಳ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರಿನ ಮಣ್ಣಿನ ಸುವಾಸನೆ.... ಓಹ್, ಸರಳವಾದ ವಸ್ತುಗಳಲ್ಲಿ ಸೌಂದರ್ಯ" ಎಂದು ಬರೆದುಕೊಂಡಿದ್ದಾರೆ.

ನಟಿಯ ಮುಂದಿನ ಸಿನಿಮಾಗಳ ಬಗ್ಗೆ ಗಮನಿಸೋದಾದರೆ, ಪೂಜಾ ಹೆಗ್ಡೆ, ಸೌತ್ ಸೂಪರ್​ ಸ್ಟಾರ್ ಸೂರ್ಯ ಅವರ ಜೊತೆಗೆ 'ರೆಟ್ರೋ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಯರಾಮ್, ಜೋಜು ಜಾರ್ಜ್, ಕರುಣಾಕರನ್, ನಾಸರ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಶ್ರಿಯಾ ಶರಣ್ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಕ್ರಿಸ್ಮಸ್​​​​​ನಲ್ಲಿ, ತಯಾರಕರು ರೆಟ್ರೋ ಟೀಸರ್ ಅನಾವರಣಗೊಳಿಸಿದ್ದರು. ಇದು ಚಿತ್ರದ ಭಾವನಾತ್ಮಕ ಮತ್ತು ಆ್ಯಕ್ಷನ್-ಪ್ಯಾಕ್ಡ್ ಕಥಾಹಂದರದ ಒಂದು ಸಣ್ಣ ನೋಟವನ್ನು ಒದಗಿಸಿತ್ತು. ಟೀಸರ್ ವಾರಣಾಸಿಯ ಸುಂದರವಾದ ಘಾಟ್‌ಗಳಲ್ಲಿ ಪ್ರಾರಂಭವಾಗುತ್ತದೆ, ಸೂರ್ಯ ಮತ್ತು ಪೂಜಾ ಹೆಗ್ಡೆ ಪಾತ್ರಗಳ ನಡುವಿನ ಸುಂದರ ಕ್ಷಣವನ್ನು ತೋರಿಸುತ್ತದೆ. ದೃಶ್ಯದಲ್ಲಿ, ಪೂಜಾ, ಸೂರ್ಯ ಅವರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ನಟ ಹಿಂಸಾತ್ಮಕ ದಿನಗಳನ್ನು ಬಿಟ್ಟು ಪ್ರೀತಿ ಸ್ವೀಕರಿಸುವುದಾಗಿ ಪ್ರತಿಜ್ಞೆ ಮಾಡುವ ಕ್ಷಣಗಳನ್ನೊಳಗೊಂಡಿದೆ.

ಇದನ್ನೂ ಓದಿ: ಶ್ರೀಕಾಳಹಸ್ತಿ ದೇವಾಲಯಕ್ಕೆ ನಟಿ ಪೂಜಾ ಹೆಗ್ಡೆ ಭೇಟಿ: ವಿಡಿಯೋ ನೋಡಿ

ರೆಟ್ರೋ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದು, ಸೂರ್ಯ ಅವರೊಂದಿಗಿನ ಮೊದಲ ಸಿನಿಮಾ ಇದಾಗಿದೆ. ಚಿತ್ರ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ': ಮಿಸ್ ಇಂಡಿಯಾ ನಂದಿನಿ ಗುಪ್ತಾ

ನಟಿ ಇತ್ತೀಚೆಗಷ್ಟೇ ತಿರುಪತಿಯ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ಕೊಟ್ಟಿದ್ದರು. ಕುಟುಂಬಸ್ಥರೊಂದಿಗೆ ರಾಹುಕೇತು ದೋಷ ಪರಿಹಾರ ಮತ್ತು ಸರ್ಪದೋಷ ವಿಧಿ ವಿಧಾನ ಸೇರಿದಂತೆ ವಿಶೇಷ ಪೂಜೆ ಮತ್ತು ಅಭಿಷೇಕಗಳಲ್ಲಿ ಭಾಗಿ ಆಗಿದ್ದರು.

ಬಹುಭಾಷಾ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ತಮ್ಮ ಗ್ಲ್ಯಾಮರ್​​​​ನಿಂದೂ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ, ವಿಶೇಷ ಸೀರೆ ಧರಿಸಿ ನೆನಪಿನ ಹಾದಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ತಾರೆಯ ಸೊಬಗಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾನುವಾರ, ತಮ್ಮ ಅಫೀಶಿಯಲ್​ ಇನ್‌ಸ್ಟಾಗ್ರಾಮ್​ನಲ್ಲಿ, 70 ವರ್ಷ ಹಳೆಯ ಹಸಿರು ಕಾಂಜೀವರಂ ಸೀರೆ ಧರಿಸಿ ಫೋಟೋಗಳಿಗೆ ಪೋಸ್ ನೀಡಿರುವ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿರುವ ನಟಿ, ಅದಕ್ಕೆ ತಕ್ಕ ಬಳೆ ಧರಿಸಿ, ಮಲ್ಲಿಗೆ ಮುಡಿದಿದ್ದಾರೆ.

ಸರಣಿ ಫೋಟೋಗಳ ಜೊತೆಗೆ, "ವಿಂಟೇಜ್ ಕ್ಲೋಸೆಟ್‌ನಿಂದ, 70 ವರ್ಷ ಹಳೆಯ ಅದ್ಭುತ ಸೀರೆ. ನನ್ನ ಬ್ಯೂಟಿಫುಲ್ ಅಜ್ಜಿ ಕಾಂಜೀವರಂ ಧರಿಸಿದ ಕ್ಷಣಗಳು ಕಣ್ಮುಂದೆ ಬಂದಿವೆ, ಮದುವೆಗೆ ಹೋಗಲು ರೆಡಿ ಆಗುವಾಗ ಮನೆಯಲ್ಲಿ ಮಲ್ಲಿಗೆಯ ತಾಜಾ ಪರಿಮಳ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರಿನ ಮಣ್ಣಿನ ಸುವಾಸನೆ.... ಓಹ್, ಸರಳವಾದ ವಸ್ತುಗಳಲ್ಲಿ ಸೌಂದರ್ಯ" ಎಂದು ಬರೆದುಕೊಂಡಿದ್ದಾರೆ.

ನಟಿಯ ಮುಂದಿನ ಸಿನಿಮಾಗಳ ಬಗ್ಗೆ ಗಮನಿಸೋದಾದರೆ, ಪೂಜಾ ಹೆಗ್ಡೆ, ಸೌತ್ ಸೂಪರ್​ ಸ್ಟಾರ್ ಸೂರ್ಯ ಅವರ ಜೊತೆಗೆ 'ರೆಟ್ರೋ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಯರಾಮ್, ಜೋಜು ಜಾರ್ಜ್, ಕರುಣಾಕರನ್, ನಾಸರ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಶ್ರಿಯಾ ಶರಣ್ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಕ್ರಿಸ್ಮಸ್​​​​​ನಲ್ಲಿ, ತಯಾರಕರು ರೆಟ್ರೋ ಟೀಸರ್ ಅನಾವರಣಗೊಳಿಸಿದ್ದರು. ಇದು ಚಿತ್ರದ ಭಾವನಾತ್ಮಕ ಮತ್ತು ಆ್ಯಕ್ಷನ್-ಪ್ಯಾಕ್ಡ್ ಕಥಾಹಂದರದ ಒಂದು ಸಣ್ಣ ನೋಟವನ್ನು ಒದಗಿಸಿತ್ತು. ಟೀಸರ್ ವಾರಣಾಸಿಯ ಸುಂದರವಾದ ಘಾಟ್‌ಗಳಲ್ಲಿ ಪ್ರಾರಂಭವಾಗುತ್ತದೆ, ಸೂರ್ಯ ಮತ್ತು ಪೂಜಾ ಹೆಗ್ಡೆ ಪಾತ್ರಗಳ ನಡುವಿನ ಸುಂದರ ಕ್ಷಣವನ್ನು ತೋರಿಸುತ್ತದೆ. ದೃಶ್ಯದಲ್ಲಿ, ಪೂಜಾ, ಸೂರ್ಯ ಅವರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ನಟ ಹಿಂಸಾತ್ಮಕ ದಿನಗಳನ್ನು ಬಿಟ್ಟು ಪ್ರೀತಿ ಸ್ವೀಕರಿಸುವುದಾಗಿ ಪ್ರತಿಜ್ಞೆ ಮಾಡುವ ಕ್ಷಣಗಳನ್ನೊಳಗೊಂಡಿದೆ.

ಇದನ್ನೂ ಓದಿ: ಶ್ರೀಕಾಳಹಸ್ತಿ ದೇವಾಲಯಕ್ಕೆ ನಟಿ ಪೂಜಾ ಹೆಗ್ಡೆ ಭೇಟಿ: ವಿಡಿಯೋ ನೋಡಿ

ರೆಟ್ರೋ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದು, ಸೂರ್ಯ ಅವರೊಂದಿಗಿನ ಮೊದಲ ಸಿನಿಮಾ ಇದಾಗಿದೆ. ಚಿತ್ರ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ': ಮಿಸ್ ಇಂಡಿಯಾ ನಂದಿನಿ ಗುಪ್ತಾ

ನಟಿ ಇತ್ತೀಚೆಗಷ್ಟೇ ತಿರುಪತಿಯ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ಕೊಟ್ಟಿದ್ದರು. ಕುಟುಂಬಸ್ಥರೊಂದಿಗೆ ರಾಹುಕೇತು ದೋಷ ಪರಿಹಾರ ಮತ್ತು ಸರ್ಪದೋಷ ವಿಧಿ ವಿಧಾನ ಸೇರಿದಂತೆ ವಿಶೇಷ ಪೂಜೆ ಮತ್ತು ಅಭಿಷೇಕಗಳಲ್ಲಿ ಭಾಗಿ ಆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.