ETV Bharat / entertainment

ಶಿವರಾಜ್​ಕುಮಾರ್​​ಗೆ ಆ್ಯಕ್ಷನ್​ ಕಟ್ ಹೇಳ್ತಾರಾ ಉಪೇಂದ್ರ? ರಾಮ್​ ಚರಣ್​ ಗುಣಗಾನ ಮಾಡಿದ ಶಿವಣ್ಣ​​ - 45 MOVIE PROMOTION

ಬಹುನಿರೀಕ್ಷಿತ '45' ಚಿತ್ರದ ಪ್ರಮೋಶನ್​​​ ನಡೆಯುತ್ತಿದೆ. ಈವೆಂಟ್​ನಲ್ಲಿ ಶಿವಣ್ಣ, ಉಪ್ಪಿ ತಮ್ಮ ಮನದಾಳ ಹಂಚಿಕೊಳ್ಳುತ್ತಿದ್ದಾರೆ.

Upendra, Shivarajkumar
ಉಪೇಂದ್ರ, ಶಿವರಾಜ್​ಕುಮಾರ್​ (Photo: ANI)
author img

By ETV Bharat Entertainment Team

Published : April 16, 2025 at 4:11 PM IST

2 Min Read

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ '45' ತನ್ನ ಪ್ರಚಾರ ಪ್ರಾರಂಭಿಸಿದೆ. ಚಂದನವನದ ಬಹುಬೇಡಿಕೆ ನಟರು ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿರೋ ಹಿನ್ನೆಲೆ, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿದೆ. ಚಿತ್ರತಂಡ ಬೆಂಗಳೂರು, ಹೈದರಾಬಾದ್​​, ಮುಂಬೈನಂತಹ ದೊಡ್ಡ ನಗರಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದೆ.

ಶಿವಣ್ಣನಿಗೆ ಉಪ್ಪಿ ಆ್ಯಕ್ಷನ್​ ಕಟ್?​ ಓಂ ಚಿತ್ರದ ಮೂಲಕ ಶಿವರಾಜ್​ಕುಮಾರ್​ ಅವರಿಗೆ ಆ್ಯಕ್ಷನ್​ ಕಟ್​ ಹೇಳಿದ್ರಿ, ಮತ್ತೊಮ್ಮೆ ಅವಕಾಶ ಸಿಕ್ಕರೆ ಬಳಸಿಕೊಳ್ಳುತ್ತೀರಾ? ಎಂಬ ಪ್ರಶ್ನೆ ನಟ ಉಪೇಂದ್ರ ಅವರಿಗೆ ಎದುರಾಯಿತು. ಬಹಳ ಖುಷಿಯಿಂದ ಪ್ರತಿಕ್ರಿಯಿಸಿದ ಉಪ್ಪಿ, ಖಂಡಿತವಾಗಿಯೂ ಎಂದು ಉತ್ತರಿಸಿದರು. ಯಾವಾಗಲೂ ಅದಕ್ಕೆ ಎದುರು ನೋಡುತ್ತಿದ್ದೇನೆ. ಒಳ್ಳೆ ಸ್ಟೋರಿ ಸಿಗಬೇಕು. ಆ ಕೂಡಲೇ ನಾನು ಶಿವಣ್ಣನನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದರು.

ರಾಮ್​ ಚರಣ್​​ ಅಮೇಜಿಂಗ್​ ಪರ್ಸನ್​​: ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದುರಾದಾಗ, ಬಹಳ ಚೆನ್ನಾಗಿದ್ದೇನೆ. ಇತ್ತಿಚೆಗಷ್ಟೇ ಶೂಟಿಂಗ್​ ಕೂಡಾ ನಡೆಸಿದ್ದೇನೆ. ಎರಡು ದಿನಗಳ ಚಿತ್ರೀಕರಣವಿತ್ತು. ಬಹಳ ಉತ್ತಮವಾಗಿ ನಡೆದಿದೆ ಎಂದು ಮಾಹಿತಿ ನೀಡಿದರು.

ಸಂಪೂರ್ಣ ಚಿತ್ರತಂಡ ಅಮೇಜಿಂಗ್. ಡೈರೆಕ್ಟರ್​ ತುಂಬಾ ಚೆನ್ನಾಗಿ ಸಹಕರಿಸಿದರು. ರಾಮ್​ ಚರಣ್​​ ಅಮೇಜಿಂಗ್​ ಪರ್ಸನ್​​. ಅವರ ವರ್ತನೆ, ವ್ಯಕ್ತಿತ್ವ ಬಹಳ ಒಳ್ಳೆದಿದೆ. ನನಗವರು ಬಹಳ ಇಷ್ಟ ಆದ್ರು ಎಂದು ತಿಳಿಸಿದರು. ಪೆದ್ದಿ ಟೀಸರ್​ ಮೈಂಡ್ ಬ್ಲೋಯಿಂಗ್​ ಆಗಿ ಮೂಡಿಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮೈಸೂರು: ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನಟ ಪ್ರಭುದೇವ ಭಾಗಿ

ನಮ್ಮ 45 ಚಿತ್ರವನ್ನು ಜನರು ಬಹಳ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ನಾವು ನಿರ್ವಹಿಸಿದ ಪಾತ್ರಗಳು ಜನರನ್ನು ತಲುಪಲಿ. ಅಲ್ಲಿ ಮನರಂಜನೆ, ಟೆನ್ಷನ್​​, ಭಯ ಸೇರಿ ನಾನಾ ಭಾವನೆಗಳಿವೆ. ಹೆಚ್ಚಿನವರು ಇಷ್ಟ ಪಡಲಿದ್ದಾರೆ ಎಂದು ತಿಳಿಸಿದರು.

ಶಿವಣ್ಣನ ಪಾತ್ರ ಬಹಳ ವಿಶೇಷವಾಗಿದೆ​: 45 ಚಿತ್ರಕ್ಕೆ ಆಕ್ಷನ್​​ ಕಟ್​ ಹೇಳಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಮಾತನಾಡಿ, ಸಿನಿಮಾದ ಪಾತ್ರಗಳು ಬಹಳ ಮಹತ್ವದ್ದಾಗಿದೆ. ಶಿವಣ್ಣನ ಕ್ಯಾರೆಕ್ಟರ್​​ ಬಹಳ ಸ್ಪೆಷಲ್​ ಆಗಿ ಮೂಡಿ ಬಂದಿದೆ. ಭಾರತದಾದ್ಯಂತದ ಅಭಿಮಾನಿಗಳು ಕ್ಲೈಮ್ಯಾಕ್ಸ್​​ ನಲ್ಲಿ ಶಿವಣ್ಣನನ್ನು ನೋಡಿ ಸರ್ಪೈಸ್ ಆಗಲಿದ್ದಾರೆ. ಅವರು ಕಿಮೋ ಚಿಕಿತ್ಸೆ ನಡುವೆಯೂ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಇನ್ನು, ಉಪ್ಪಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಶೀರ್ವಾದ ಅಂತಲೇ ಹೇಳಬಹುದು. ಯಾವುದೇ ಪಾತ್ರವಿರಲಿ, ಮ್ಯಾಜಿಕ್​ ಮಾಡಿಬಿಡುತ್ತಾರೆ. '45' ಅನ್ನೋದು ದಿನಗಳ ಸಂಖ್ಯೆ. ಆ ದಿನಗಳಲ್ಲಿ ಏನಾಗಲಿದೆ ಅನ್ನೋದನ್ನು ಸಿನಿಮಾ ತಿಳಿಸಲಿದೆ ಎಂದರು.

ಇದನ್ನೂ ಓದಿ: ಸೆಟ್ಟೇರಿತು ಅಭಿನಯ ಚಕ್ರವರ್ತಿಯ 'ಬಿಲ್ಲ ರಂಗ ಭಾಷಾ': ಸುದೀಪ್​ ಫಸ್ಟ್ ಲುಕ್​ ರಿಲೀಸ್

ಚಿತ್ರವನ್ನು ಉಮಾ ರಮೇಶ್​​ ರೆಡ್ಡಿ ನಿರ್ಮಿಸಿದ್ದಾರೆ. ಅರ್ಜುನ್​ ಜನ್ಯ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಗೀತವನ್ನೂ ನಿರ್ವಹಿಸಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಆಗಸ್ಟ್​ 15ರಂದು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ '45' ತನ್ನ ಪ್ರಚಾರ ಪ್ರಾರಂಭಿಸಿದೆ. ಚಂದನವನದ ಬಹುಬೇಡಿಕೆ ನಟರು ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿರೋ ಹಿನ್ನೆಲೆ, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿದೆ. ಚಿತ್ರತಂಡ ಬೆಂಗಳೂರು, ಹೈದರಾಬಾದ್​​, ಮುಂಬೈನಂತಹ ದೊಡ್ಡ ನಗರಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದೆ.

ಶಿವಣ್ಣನಿಗೆ ಉಪ್ಪಿ ಆ್ಯಕ್ಷನ್​ ಕಟ್?​ ಓಂ ಚಿತ್ರದ ಮೂಲಕ ಶಿವರಾಜ್​ಕುಮಾರ್​ ಅವರಿಗೆ ಆ್ಯಕ್ಷನ್​ ಕಟ್​ ಹೇಳಿದ್ರಿ, ಮತ್ತೊಮ್ಮೆ ಅವಕಾಶ ಸಿಕ್ಕರೆ ಬಳಸಿಕೊಳ್ಳುತ್ತೀರಾ? ಎಂಬ ಪ್ರಶ್ನೆ ನಟ ಉಪೇಂದ್ರ ಅವರಿಗೆ ಎದುರಾಯಿತು. ಬಹಳ ಖುಷಿಯಿಂದ ಪ್ರತಿಕ್ರಿಯಿಸಿದ ಉಪ್ಪಿ, ಖಂಡಿತವಾಗಿಯೂ ಎಂದು ಉತ್ತರಿಸಿದರು. ಯಾವಾಗಲೂ ಅದಕ್ಕೆ ಎದುರು ನೋಡುತ್ತಿದ್ದೇನೆ. ಒಳ್ಳೆ ಸ್ಟೋರಿ ಸಿಗಬೇಕು. ಆ ಕೂಡಲೇ ನಾನು ಶಿವಣ್ಣನನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದರು.

ರಾಮ್​ ಚರಣ್​​ ಅಮೇಜಿಂಗ್​ ಪರ್ಸನ್​​: ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದುರಾದಾಗ, ಬಹಳ ಚೆನ್ನಾಗಿದ್ದೇನೆ. ಇತ್ತಿಚೆಗಷ್ಟೇ ಶೂಟಿಂಗ್​ ಕೂಡಾ ನಡೆಸಿದ್ದೇನೆ. ಎರಡು ದಿನಗಳ ಚಿತ್ರೀಕರಣವಿತ್ತು. ಬಹಳ ಉತ್ತಮವಾಗಿ ನಡೆದಿದೆ ಎಂದು ಮಾಹಿತಿ ನೀಡಿದರು.

ಸಂಪೂರ್ಣ ಚಿತ್ರತಂಡ ಅಮೇಜಿಂಗ್. ಡೈರೆಕ್ಟರ್​ ತುಂಬಾ ಚೆನ್ನಾಗಿ ಸಹಕರಿಸಿದರು. ರಾಮ್​ ಚರಣ್​​ ಅಮೇಜಿಂಗ್​ ಪರ್ಸನ್​​. ಅವರ ವರ್ತನೆ, ವ್ಯಕ್ತಿತ್ವ ಬಹಳ ಒಳ್ಳೆದಿದೆ. ನನಗವರು ಬಹಳ ಇಷ್ಟ ಆದ್ರು ಎಂದು ತಿಳಿಸಿದರು. ಪೆದ್ದಿ ಟೀಸರ್​ ಮೈಂಡ್ ಬ್ಲೋಯಿಂಗ್​ ಆಗಿ ಮೂಡಿಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮೈಸೂರು: ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನಟ ಪ್ರಭುದೇವ ಭಾಗಿ

ನಮ್ಮ 45 ಚಿತ್ರವನ್ನು ಜನರು ಬಹಳ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ನಾವು ನಿರ್ವಹಿಸಿದ ಪಾತ್ರಗಳು ಜನರನ್ನು ತಲುಪಲಿ. ಅಲ್ಲಿ ಮನರಂಜನೆ, ಟೆನ್ಷನ್​​, ಭಯ ಸೇರಿ ನಾನಾ ಭಾವನೆಗಳಿವೆ. ಹೆಚ್ಚಿನವರು ಇಷ್ಟ ಪಡಲಿದ್ದಾರೆ ಎಂದು ತಿಳಿಸಿದರು.

ಶಿವಣ್ಣನ ಪಾತ್ರ ಬಹಳ ವಿಶೇಷವಾಗಿದೆ​: 45 ಚಿತ್ರಕ್ಕೆ ಆಕ್ಷನ್​​ ಕಟ್​ ಹೇಳಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಮಾತನಾಡಿ, ಸಿನಿಮಾದ ಪಾತ್ರಗಳು ಬಹಳ ಮಹತ್ವದ್ದಾಗಿದೆ. ಶಿವಣ್ಣನ ಕ್ಯಾರೆಕ್ಟರ್​​ ಬಹಳ ಸ್ಪೆಷಲ್​ ಆಗಿ ಮೂಡಿ ಬಂದಿದೆ. ಭಾರತದಾದ್ಯಂತದ ಅಭಿಮಾನಿಗಳು ಕ್ಲೈಮ್ಯಾಕ್ಸ್​​ ನಲ್ಲಿ ಶಿವಣ್ಣನನ್ನು ನೋಡಿ ಸರ್ಪೈಸ್ ಆಗಲಿದ್ದಾರೆ. ಅವರು ಕಿಮೋ ಚಿಕಿತ್ಸೆ ನಡುವೆಯೂ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಇನ್ನು, ಉಪ್ಪಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಶೀರ್ವಾದ ಅಂತಲೇ ಹೇಳಬಹುದು. ಯಾವುದೇ ಪಾತ್ರವಿರಲಿ, ಮ್ಯಾಜಿಕ್​ ಮಾಡಿಬಿಡುತ್ತಾರೆ. '45' ಅನ್ನೋದು ದಿನಗಳ ಸಂಖ್ಯೆ. ಆ ದಿನಗಳಲ್ಲಿ ಏನಾಗಲಿದೆ ಅನ್ನೋದನ್ನು ಸಿನಿಮಾ ತಿಳಿಸಲಿದೆ ಎಂದರು.

ಇದನ್ನೂ ಓದಿ: ಸೆಟ್ಟೇರಿತು ಅಭಿನಯ ಚಕ್ರವರ್ತಿಯ 'ಬಿಲ್ಲ ರಂಗ ಭಾಷಾ': ಸುದೀಪ್​ ಫಸ್ಟ್ ಲುಕ್​ ರಿಲೀಸ್

ಚಿತ್ರವನ್ನು ಉಮಾ ರಮೇಶ್​​ ರೆಡ್ಡಿ ನಿರ್ಮಿಸಿದ್ದಾರೆ. ಅರ್ಜುನ್​ ಜನ್ಯ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಗೀತವನ್ನೂ ನಿರ್ವಹಿಸಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಆಗಸ್ಟ್​ 15ರಂದು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.