ಬೆಂಗಳೂರು: ದೂರದರ್ಶನದಲ್ಲಿ ಖಾಲಿ ಇರುವ ಸ್ಟ್ರಿಂಜರ್ (ಅರೆಕಾಲಿಕ ವರದಿಗಾರ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ 29 ಜಿಲ್ಲೆಗಳಿಂದಲೂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಾರ ಭಾರತಿ ನಿಯಮಾವಳಿಯಂತೆ 2 ವರ್ಷದ ಅವಧಿಗೆ ನೇಮಕಾತಿ ಮಾಡಲಾಗುತ್ತದೆ.
ಗೌರವಧನ: ಸೂಚಿತ ಸ್ಥಳೀಯ ಸುದ್ದಿ ಪ್ರಸಾರಕ್ಕೆ 1,500, 2ನೇ ಸುದ್ದಿಗೆ 1,000 ಮತ್ತು ಹೊರ ಕೇಂದ್ರದ ಕವರೇಜ್ಗೆ 1,800 ರೂ ನೀಡಲಾಗುತ್ತದೆ. ಬೆಂಗಳೂರು ಕೇಂದ್ರದಲ್ಲಿ ವರ್ಷಕ್ಕೆ 5 ಲಕ್ಷ ರೂ ಹಾಗೂ ಜಿಲ್ಲಾ ಕೇಂದ್ರದಲ್ಲಿ 4 ಲಕ್ಷ ರೂ. ಒಳಗೆ ಗೌರವಧನ ಮಿತಿ ಮೀರದಂತೆ ಪಾವತಿ ನಿಗದಿಸಲಾಗಿದೆ.
ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಯಾಮೆರಾ ಮತ್ತು ಅಗತ್ಯ ತಂತ್ರಜ್ಞಾನವನ್ನು ಹೊಂದಿರಬೇಕು. ಎಚ್ಡಿ/4ಕೆ/ಯುಎಚ್ಡಿ/ಎನ್ಎಕ್ಸ್ ಫಾರ್ಮೆಟ್ ವಿಡಿಯೋ ಕ್ಯಾಮೆರಾ ಹೊಂದಿರುವ ಜೊತೆಗೆ ಸುದ್ದಿ ಕಳುಹಿಸಲು ಬೇಕಾದ ಎಲ್ಲಾ ಸೌಲಭ್ಯ ಹೊಂದಿರಬೇಕು.
ವಿದ್ಯಾರ್ಹತೆ: ಪತ್ರಿಕೋದ್ಯಮದ ಅನುಭವ ಹೊಂದಿರಬೇಕು. ಸುದ್ದಿ ನೀಡುವ ಜೊತೆಗೆ ಉತ್ತಮ ಕ್ಯಾಮರಾ ಕೌಶಲ್ಯ ಹೊಂದಿರಬೇಕು.

ಆಯ್ಕೆ: ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಬಳಿಕ ಟೆಸ್ಟ್ ಕವರೇಜ್ ನಡೆಸಲಾಗುವುದು. ಬಳಿಕ ಸಂದರ್ಶನ ಮಾಡಲಾಗುವುದು. ಇದರ ಜೊತೆಗೆ ಸಾಧನ ಮತ್ತು ದಾಖಲಾತಿ ಪರಿಶೀಲನೆ ಮಾಡಿ, ಅಂತಿಮ ಪಟ್ಟಿ ಹೊರಡಿಸಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಯಾವ ಜಿಲ್ಲೆಗಳಿಗೆ ತಾವು ಹುದ್ದೆ ನಿರ್ವಹಣೆಗೆ ಇಚ್ಛಿಸುವುದಾಗಿ ಸ್ಪಷ್ಟವಾಗಿ ನಮೂದಿಸಬೇಕು.
ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂತಿಮ ದಿನಾಂಕಕ್ಕೆ ಮುನ್ನ ಸಲ್ಲಿಸಬೇಕು. ನಿರ್ದೇಶಕರು, ಪ್ರಾದೇಶಿಯ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ.ಸಿ.ನಗರ, ಬೆಂಗಳೂರು, 56006.
1,180 ರೂ ಡಿಡಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುವ ವಿಳಾಸಕ್ಕೆ ಪಾವತಿಸಿ, ಅರ್ಜಿ ಸಲ್ಲಿಸಬೇಕಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 16.
ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ prasarbharati.gov.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಬಿಎಂಆರ್ಸಿಎಲ್ನಲ್ಲಿ ಸಿವಿಲ್ ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ
ಇದನ್ನೂ ಓದಿ: ಅಗ್ನಿವೀರ್ ನೇಮಕಾತಿ: ರಾಜ್ಯದ ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ