ETV Bharat / education-and-career

ಈಗ ಮಕ್ಕಳಲ್ಲೂ ಮಧುಮೇಹ; ವಿದ್ಯಾರ್ಥಿಗಳ ರಕ್ಷಣೆಗೆ ಸಕ್ಕರೆ ಮಂಡಳಿ; ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ - SUGAR BOARDS WILL BE OPENED SCHOOLS

ಮಕ್ಕಳನ್ನು ಮಧುಮೇಹದಿಂದ ರಕ್ಷಿಸಲು ಪ್ರತಿ ಶಾಲೆಯಲ್ಲಿ ಸಕ್ಕರೆ ಮಂಡಳಿಗಳನ್ನು ತೆರೆಯಲಾಗುವುದು. ಮಕ್ಕಳಿಗೆ ಸಕ್ಕರೆಯಿಂದ ರಕ್ಷಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಮಧ್ಯಪ್ರದೇಶ ಶಿಕ್ಷಣ ಇಲಾಖೆ ಹೇಳಿದೆ.

jabalpur-sugar-boards-will-be-opened-in-mp-schools-to-protect-children-from-diabetes
ಈಗ ಮಕ್ಕಳಲ್ಲೂ ಮಧುಮೇಹ; ವಿದ್ಯಾರ್ಥಿಗಳ ರಕ್ಷಣೆಗೆ ಸಕ್ಕರೆ ಮಂಡಳಿ; ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ (ETV Bharat)
author img

By ETV Bharat Karnataka Team

Published : April 23, 2025 at 5:16 PM IST

4 Min Read

ಜಬಲ್ಪುರ, ಮಧ್ಯಪ್ರದೇಶ: ಮಧ್ಯಪ್ರದೇಶದ ಶಿಕ್ಷಣ ಇಲಾಖೆ ಪ್ರತಿ ಶಾಲೆಯಲ್ಲಿ ಸಕ್ಕರೆ ಮಂಡಳಿ ಸ್ಥಾಪಿಸಲು ಮುಂದಾಗಿದೆ. ಏನಿದು ಶಾಲೆಗೂ ಈ ಸಕ್ಕರೆ ಮಂಡಳಿಗೂ ಏನು ಸಂಬಂಧ ಎನ್ನುವುದು ನಿಮ್ಮ ಪ್ರಶ್ನೆಯೇ? ಹಾಗಾದರೆ ಇಲ್ಲಿದೆ ಅದಕ್ಕೆ ಉತ್ತರ. ಮಧುಮೇಹವನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಶಾಲಾ ಮಕ್ಕಳಿಗೆ ವಿವರಿಸುವ ಹಾಗೂ ಅದನ್ನು ತಡೆಗಟ್ಟಲು ಈ ಮಂಡಳಿ ರಚನೆ ಮಾಡಲಾಗುತ್ತಿದೆ.

ಈ ಮೂಲಕ ಮಕ್ಕಳಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸಲು ಚಿಂತಿಸಲಾಗುತ್ತಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಮಧ್ಯಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಈ ಬಗ್ಗೆ ಪತ್ರವನ್ನು ಕಳುಹಿಸಿದೆ. ಈಗಿನ ಅತ್ಯಂತ ಕೆಟ್ಟ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚುತ್ತಿರುವ ಮಧುಮೇಹವನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ; ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ ರೋಗಿಗಳ ಬಗ್ಗೆ ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿಯ ಒಂದು ಘಟಕವು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನದ ಪ್ರಕಾರ 1990 ರಲ್ಲಿ ಭಾರತದಲ್ಲಿ ಶೇಕಡಾ 5.5 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದರು. 2016 ರ ಹೊತ್ತಿಗೆ ಈ ಸಂಖ್ಯೆ ಶೇ 7ನ್ನು ತಲುಪಿತು. ಇನ್ನು 2018 ರ ಸಮೀಕ್ಷೆಯಲ್ಲಿ 9.3 ಪ್ರತಿಶತಕ್ಕೆ ಏರಿಕೆ ಕಂಡಿತು. ಆದರೆ ಇದು 2021 ರಲ್ಲಿ 9.7 ಕ್ಕೆ ಹೆಚ್ಚಳವಾಗಿದೆ ಎಂದು ವರದಿಗಳು ಮಾಹಿತಿ ನೀಡಿದೆ.

ಮಧುಮೇಹ ಬರೋದು ಏಕೆ?: ಜಬಲ್ಪುರದ ವೈದ್ಯ ಸುನಿಲ್ ಮಿಶ್ರಾ ಅವರು ಹೇಳುವ ಪ್ರಕಾರ, "ನಮ್ಮ ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿ ಮಧುಮೇಹಕ್ಕೆ ಪ್ರಮುಖ ಕಾರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಹೆಚ್ಚು ಆರಾಮಾಗಿರುವುದನ್ನು ಇಷ್ಟಪಡುತ್ತಾನೆ ಮತ್ತು ಕಡಿಮೆ ಕೆಲಸ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ ಆಹಾರವು ಮೊದಲಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಆಹಾರವು ದೇಹವನ್ನು ತಲುಪುತ್ತಿದೆ. ಇದರಿಂದಾಗಿ ಬಹುತೇಕರಲ್ಲಿ ಬೊಜ್ಜು ಹೆಚ್ಚುತ್ತಿದೆ ಮತ್ತು ಜನರಲ್ಲಿ ಮಧುಮೇಹದ ಸಮಸ್ಯೆಯೂ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತದೆ. ಮಕ್ಕಳು ಜಂಕ್ ಫುಡ್ ಮೊರೆ ಹೋಗುವುದರಿಂದ ಮಕ್ಕಳಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ ಅಂತಾರೆ ಸುನಿಲ್​ ಮಿಶ್ರಾ.

ಜಂಕ್ ಫುಡ್ ಎಂದರೇನು?; ಚಾಕೊಲೇಟ್, ಕ್ಯಾಂಡಿ, ಕೇಕ್, ಬೇಕರಿ ವಸ್ತುಗಳು, ಡೀಪ್ ಫ್ರೈಡ್ ಚಿಪ್ಸ್, ಬರ್ಗರ್, ಪಿಜ್ಜಾ, ಈ ಎಲ್ಲಾ ವಸ್ತುಗಳು ಜಂಕ್ ಫುಡ್ ವರ್ಗಕ್ಕೆ ಬರುತ್ತವೆ. ಈ ಎಲ್ಲಾ ಆಹಾರ ಪದಾರ್ಥಗಳು ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದರೊಂದಿಗೆ ತಂಪು ಪಾನೀಯಗಳು, ಐಸ್ ಕ್ರೀಮ್ ನಂತಹ ಆಹಾರ ಪದಾರ್ಥಗಳು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತಿದ್ದು, ಇವುಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿದೆ. ಇದರಿಂದಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಗರದ ಶಾಲೆಗಳಲ್ಲಿ ಸುತ್ತಮುತ್ತ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗುತ್ತಿದೆ. ಹಳ್ಳಿಯ ಶಾಲೆಗಳ ಸುತ್ತಲೂ ಚಿಪ್ಸ್ ಮತ್ತು ತಂಪು ಪಾನೀಯಗಳಂತಹ ವಸ್ತುಗಳು ಬಹಳ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ.ಹೀಗಾಗಿ ಅತ್ಯಂತ ವೇಗವಾಗಿ ಮಕ್ಕಳು ಅದಕ್ಕೆ ಅಡಿಕ್ಟ್ ಆಗುತ್ತಿದ್ದಾರೆ.

ಮಧುಮೇಹದ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಮಕ್ಕಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯು ತನ್ನ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದೆ. ಅದರಲ್ಲಿ ಅವರು ಶಾಲೆಗಳಲ್ಲಿ ಈ ಸಂಬಂಧ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಹೇಳಿದ್ದಾರೆ. ಸಕ್ಕರೆಯ ಅತಿಯಾದ ಬಳಕೆಯಿಂದ ಯಾವ ರೋಗಗಳು ಬರಬಹುದು, ಯಾವ ವಸ್ತುಗಳಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಜಂಕ್ ಫುಡ್ ಎಂದರೇನು? ಈ ಮಾಹಿತಿಯನ್ನು ಪ್ರತಿಯೊಂದು ಮಗುವಿಗೂ ನೀಡಬೇಕು. ಇದರೊಂದಿಗೆ, ಅತಿಯಾದ ಸಕ್ಕರೆ ಸೇವನೆಯಿಂದ ಉಂಟಾಗುವ ರೋಗಗಳ ಕುರಿತು ಪ್ರತಿ ಶಾಲೆಯಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಈ ಮಾಹಿತಿಯು ಮಕ್ಕಳನ್ನು ತಲುಪಲು ಮತ್ತು ಮಕ್ಕಳಲ್ಲಿ ಮಧುಮೇಹವನ್ನು ತಡೆಗಟ್ಟಲು ಶಿಕ್ಷಕರಿಗೆ ಇದರ ಬಗ್ಗೆ ತಿಳಿಸಬೇಕು ಎಂಬುದು ಅಲ್ಲಿನ ಸರ್ಕಾರದ ಉದ್ದೇಶವಾಗಿದೆ.

jabalpur-sugar-boards-will-be-opened-
ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ (ETV Bharat)

ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುವುದು ಎಂದು ಜಬಲ್ಪುರದ ಜಿಲ್ಲಾ ಶಿಕ್ಷಣ ಅಧಿಕಾರಿ ಘನಶ್ಯಾಮ್ ಸೋನಿ ಹೇಳಿದ್ದಾರೆ. ರಾಜ್ಯ ಶಿಕ್ಷಣ ಇಲಾಖೆಯ ಈ ಪತ್ರಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಮಾತನಾಡಿದ್ದಾರೆ. ಪತ್ರಕ್ಕೆ ಸಂಬಂಧಿಸಿದಂತೆ ಜಬಲ್ಪುರದ ಮುಖ್ಯ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಜಬಲ್ಪುರದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಂಡಳಿಯನ್ನು ಸ್ಥಾಪಿಸಲಾಗುವುದು. ಇದರೊಂದಿಗೆ, ಮಧುಮೇಹಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗುವುದು. ಎಲ್ಲಾ ಶಾಲೆಗಳು 30 ದಿನಗಳಲ್ಲಿ ಮಂಡಳಿಗಳನ್ನು ಸ್ಥಾಪಿಸಬೇಕು ಮತ್ತು ಶಾಲೆ ಪ್ರಾರಂಭವಾದ ತಕ್ಷಣ ಕಾರ್ಯಾಗಾರಗಳನ್ನು ನಡೆಸಬೇಕು ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಘನಶ್ಯಾಮ್ ಸೋನಿ ತಿಳಿಸಿದ್ದಾರೆ.

ಪಿಜ್ಜಾ ಬರ್ಗರ್ ಆರೋಗ್ಯಕ್ಕೆ ಮಾರಕ; ಸರ್ಕಾರಿ ಶಾಲೆಗಳಲ್ಲಿ ಈ ಸಮಸ್ಯೆ ಕಡಿಮೆ. ಸಮಾಜದ ತುಲನಾತ್ಮಕವಾಗಿ ಶ್ರೀಮಂತ ವರ್ಗದ ಮಕ್ಕಳು ಅಧ್ಯಯನ ಮಾಡಲು ಬರುವ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಬೊಜ್ಜು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಶಾಲೆಗಳಲ್ಲಿ ಸಕ್ಕರೆ ಮಂಡಳಿಯ ಅವಶ್ಯಕತೆ ಹೆಚ್ಚು, ಇದರಿಂದ ಮಕ್ಕಳು ದೊಡ್ಡ ಬಟ್ಟಲುಗಳಲ್ಲಿ ತಿನ್ನುವ ಮತ್ತು ಕುಡಿಯುವ ಚಾಕೊಲೇಟ್, ಪಿಜ್ಜಾ, ಬರ್ಗರ್, ಚಿಪ್ಸ್, ತಂಪು ಪಾನೀಯಗಳು ವಾಸ್ತವವಾಗಿ ಮಾರಕ ಅಂತಾರೆ ತಜ್ಞರು.

ಜಬಲ್ಪುರ, ಮಧ್ಯಪ್ರದೇಶ: ಮಧ್ಯಪ್ರದೇಶದ ಶಿಕ್ಷಣ ಇಲಾಖೆ ಪ್ರತಿ ಶಾಲೆಯಲ್ಲಿ ಸಕ್ಕರೆ ಮಂಡಳಿ ಸ್ಥಾಪಿಸಲು ಮುಂದಾಗಿದೆ. ಏನಿದು ಶಾಲೆಗೂ ಈ ಸಕ್ಕರೆ ಮಂಡಳಿಗೂ ಏನು ಸಂಬಂಧ ಎನ್ನುವುದು ನಿಮ್ಮ ಪ್ರಶ್ನೆಯೇ? ಹಾಗಾದರೆ ಇಲ್ಲಿದೆ ಅದಕ್ಕೆ ಉತ್ತರ. ಮಧುಮೇಹವನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಶಾಲಾ ಮಕ್ಕಳಿಗೆ ವಿವರಿಸುವ ಹಾಗೂ ಅದನ್ನು ತಡೆಗಟ್ಟಲು ಈ ಮಂಡಳಿ ರಚನೆ ಮಾಡಲಾಗುತ್ತಿದೆ.

ಈ ಮೂಲಕ ಮಕ್ಕಳಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸಲು ಚಿಂತಿಸಲಾಗುತ್ತಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಮಧ್ಯಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಈ ಬಗ್ಗೆ ಪತ್ರವನ್ನು ಕಳುಹಿಸಿದೆ. ಈಗಿನ ಅತ್ಯಂತ ಕೆಟ್ಟ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚುತ್ತಿರುವ ಮಧುಮೇಹವನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ; ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ ರೋಗಿಗಳ ಬಗ್ಗೆ ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿಯ ಒಂದು ಘಟಕವು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನದ ಪ್ರಕಾರ 1990 ರಲ್ಲಿ ಭಾರತದಲ್ಲಿ ಶೇಕಡಾ 5.5 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದರು. 2016 ರ ಹೊತ್ತಿಗೆ ಈ ಸಂಖ್ಯೆ ಶೇ 7ನ್ನು ತಲುಪಿತು. ಇನ್ನು 2018 ರ ಸಮೀಕ್ಷೆಯಲ್ಲಿ 9.3 ಪ್ರತಿಶತಕ್ಕೆ ಏರಿಕೆ ಕಂಡಿತು. ಆದರೆ ಇದು 2021 ರಲ್ಲಿ 9.7 ಕ್ಕೆ ಹೆಚ್ಚಳವಾಗಿದೆ ಎಂದು ವರದಿಗಳು ಮಾಹಿತಿ ನೀಡಿದೆ.

ಮಧುಮೇಹ ಬರೋದು ಏಕೆ?: ಜಬಲ್ಪುರದ ವೈದ್ಯ ಸುನಿಲ್ ಮಿಶ್ರಾ ಅವರು ಹೇಳುವ ಪ್ರಕಾರ, "ನಮ್ಮ ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿ ಮಧುಮೇಹಕ್ಕೆ ಪ್ರಮುಖ ಕಾರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಹೆಚ್ಚು ಆರಾಮಾಗಿರುವುದನ್ನು ಇಷ್ಟಪಡುತ್ತಾನೆ ಮತ್ತು ಕಡಿಮೆ ಕೆಲಸ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ ಆಹಾರವು ಮೊದಲಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಆಹಾರವು ದೇಹವನ್ನು ತಲುಪುತ್ತಿದೆ. ಇದರಿಂದಾಗಿ ಬಹುತೇಕರಲ್ಲಿ ಬೊಜ್ಜು ಹೆಚ್ಚುತ್ತಿದೆ ಮತ್ತು ಜನರಲ್ಲಿ ಮಧುಮೇಹದ ಸಮಸ್ಯೆಯೂ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತದೆ. ಮಕ್ಕಳು ಜಂಕ್ ಫುಡ್ ಮೊರೆ ಹೋಗುವುದರಿಂದ ಮಕ್ಕಳಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ ಅಂತಾರೆ ಸುನಿಲ್​ ಮಿಶ್ರಾ.

ಜಂಕ್ ಫುಡ್ ಎಂದರೇನು?; ಚಾಕೊಲೇಟ್, ಕ್ಯಾಂಡಿ, ಕೇಕ್, ಬೇಕರಿ ವಸ್ತುಗಳು, ಡೀಪ್ ಫ್ರೈಡ್ ಚಿಪ್ಸ್, ಬರ್ಗರ್, ಪಿಜ್ಜಾ, ಈ ಎಲ್ಲಾ ವಸ್ತುಗಳು ಜಂಕ್ ಫುಡ್ ವರ್ಗಕ್ಕೆ ಬರುತ್ತವೆ. ಈ ಎಲ್ಲಾ ಆಹಾರ ಪದಾರ್ಥಗಳು ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದರೊಂದಿಗೆ ತಂಪು ಪಾನೀಯಗಳು, ಐಸ್ ಕ್ರೀಮ್ ನಂತಹ ಆಹಾರ ಪದಾರ್ಥಗಳು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತಿದ್ದು, ಇವುಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿದೆ. ಇದರಿಂದಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಗರದ ಶಾಲೆಗಳಲ್ಲಿ ಸುತ್ತಮುತ್ತ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗುತ್ತಿದೆ. ಹಳ್ಳಿಯ ಶಾಲೆಗಳ ಸುತ್ತಲೂ ಚಿಪ್ಸ್ ಮತ್ತು ತಂಪು ಪಾನೀಯಗಳಂತಹ ವಸ್ತುಗಳು ಬಹಳ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ.ಹೀಗಾಗಿ ಅತ್ಯಂತ ವೇಗವಾಗಿ ಮಕ್ಕಳು ಅದಕ್ಕೆ ಅಡಿಕ್ಟ್ ಆಗುತ್ತಿದ್ದಾರೆ.

ಮಧುಮೇಹದ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಮಕ್ಕಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯು ತನ್ನ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದೆ. ಅದರಲ್ಲಿ ಅವರು ಶಾಲೆಗಳಲ್ಲಿ ಈ ಸಂಬಂಧ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಹೇಳಿದ್ದಾರೆ. ಸಕ್ಕರೆಯ ಅತಿಯಾದ ಬಳಕೆಯಿಂದ ಯಾವ ರೋಗಗಳು ಬರಬಹುದು, ಯಾವ ವಸ್ತುಗಳಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಜಂಕ್ ಫುಡ್ ಎಂದರೇನು? ಈ ಮಾಹಿತಿಯನ್ನು ಪ್ರತಿಯೊಂದು ಮಗುವಿಗೂ ನೀಡಬೇಕು. ಇದರೊಂದಿಗೆ, ಅತಿಯಾದ ಸಕ್ಕರೆ ಸೇವನೆಯಿಂದ ಉಂಟಾಗುವ ರೋಗಗಳ ಕುರಿತು ಪ್ರತಿ ಶಾಲೆಯಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಈ ಮಾಹಿತಿಯು ಮಕ್ಕಳನ್ನು ತಲುಪಲು ಮತ್ತು ಮಕ್ಕಳಲ್ಲಿ ಮಧುಮೇಹವನ್ನು ತಡೆಗಟ್ಟಲು ಶಿಕ್ಷಕರಿಗೆ ಇದರ ಬಗ್ಗೆ ತಿಳಿಸಬೇಕು ಎಂಬುದು ಅಲ್ಲಿನ ಸರ್ಕಾರದ ಉದ್ದೇಶವಾಗಿದೆ.

jabalpur-sugar-boards-will-be-opened-
ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ (ETV Bharat)

ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುವುದು ಎಂದು ಜಬಲ್ಪುರದ ಜಿಲ್ಲಾ ಶಿಕ್ಷಣ ಅಧಿಕಾರಿ ಘನಶ್ಯಾಮ್ ಸೋನಿ ಹೇಳಿದ್ದಾರೆ. ರಾಜ್ಯ ಶಿಕ್ಷಣ ಇಲಾಖೆಯ ಈ ಪತ್ರಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಮಾತನಾಡಿದ್ದಾರೆ. ಪತ್ರಕ್ಕೆ ಸಂಬಂಧಿಸಿದಂತೆ ಜಬಲ್ಪುರದ ಮುಖ್ಯ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಜಬಲ್ಪುರದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಂಡಳಿಯನ್ನು ಸ್ಥಾಪಿಸಲಾಗುವುದು. ಇದರೊಂದಿಗೆ, ಮಧುಮೇಹಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗುವುದು. ಎಲ್ಲಾ ಶಾಲೆಗಳು 30 ದಿನಗಳಲ್ಲಿ ಮಂಡಳಿಗಳನ್ನು ಸ್ಥಾಪಿಸಬೇಕು ಮತ್ತು ಶಾಲೆ ಪ್ರಾರಂಭವಾದ ತಕ್ಷಣ ಕಾರ್ಯಾಗಾರಗಳನ್ನು ನಡೆಸಬೇಕು ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಘನಶ್ಯಾಮ್ ಸೋನಿ ತಿಳಿಸಿದ್ದಾರೆ.

ಪಿಜ್ಜಾ ಬರ್ಗರ್ ಆರೋಗ್ಯಕ್ಕೆ ಮಾರಕ; ಸರ್ಕಾರಿ ಶಾಲೆಗಳಲ್ಲಿ ಈ ಸಮಸ್ಯೆ ಕಡಿಮೆ. ಸಮಾಜದ ತುಲನಾತ್ಮಕವಾಗಿ ಶ್ರೀಮಂತ ವರ್ಗದ ಮಕ್ಕಳು ಅಧ್ಯಯನ ಮಾಡಲು ಬರುವ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಬೊಜ್ಜು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಶಾಲೆಗಳಲ್ಲಿ ಸಕ್ಕರೆ ಮಂಡಳಿಯ ಅವಶ್ಯಕತೆ ಹೆಚ್ಚು, ಇದರಿಂದ ಮಕ್ಕಳು ದೊಡ್ಡ ಬಟ್ಟಲುಗಳಲ್ಲಿ ತಿನ್ನುವ ಮತ್ತು ಕುಡಿಯುವ ಚಾಕೊಲೇಟ್, ಪಿಜ್ಜಾ, ಬರ್ಗರ್, ಚಿಪ್ಸ್, ತಂಪು ಪಾನೀಯಗಳು ವಾಸ್ತವವಾಗಿ ಮಾರಕ ಅಂತಾರೆ ತಜ್ಞರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.