ETV Bharat / bharat

ಆಪರೇಷನ್​ ಸಿಂಧೂರ: ಈ ದೇಶಗಳಿಗೇ ಯಾಕೆ ಭಾರತದ ನಿಯೋಗಗಳು ಭೇಟಿ ನೀಡುತ್ತಿವೆ? - INDIAN DELEGATIONS

ಆಪರೇಷನ್​ ಸಿಂಧೂರದ ಬಳಿಕ ವಿಶ್ವದ 33 ದೇಶಗಳಿಗೆ ಭಾರತದ ನಿಯೋಗಗಳು ಭೇಟಿ ನೀಡಲಿವೆ. ಈ ರಾಷ್ಟ್ರಗಳಿಗೇ ಯಾಕೆ ಭೇಟಿ ಎಂಬುದು ತಿಳಿಯಬೇಕೆ? ಇಲ್ಲಿ ಓದಿ.

ವಿಶ್ವ ರಾಷ್ಟ್ರಗಳಿಗೆ ಭೇಟಿ ನೀಡಲಿರುವ ನಿಯೋಗಗಳಲ್ಲಿರುವ ನಾಯಕರು
ವಿಶ್ವ ರಾಷ್ಟ್ರಗಳಿಗೆ ಭೇಟಿ ನೀಡಲಿರುವ ನಿಯೋಗಗಳಲ್ಲಿರುವ ನಾಯಕರು (ETV Bharat)
author img

By ETV Bharat Karnataka Team

Published : May 21, 2025 at 7:01 PM IST

2 Min Read

ನವದೆಹಲಿ: ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ನಡೆದ ಆಪರೇಷನ್​ ಸಿಂಧೂರ ಮತ್ತು ಪಾಕಿಸ್ತಾನದ ಭಯೋತ್ಪಾದನೆಯ ಮುಖವನ್ನು ವಿಶ್ವದ ಮುಂದೆ ಬಯಲು ಮಾಡಲು ಭಾರತ ಸರ್ಕಾರ 7 ತಂಡಗಳ ನಿಯೋಗವನ್ನು ರಚಿಸಿದೆ. ಈ ತಂಡಗಳು ವಿಶ್ವದ ಹಲವು ರಾಷ್ಟ್ರಗಳಿಗೆ ನಾಳೆಯಿಂದ ಪ್ರಯಾಣ ಆರಂಭಿಸಲಿದೆ.

ಸರ್ವಪಕ್ಷಗಳ ಸದಸ್ಯರನ್ನು ಹೊಂದಿರುವ ಏಳು ನಿಯೋಗಗಳಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಅವರು ಆಪರೇಷನ್​ ಸಿಂಧೂರ ಮತ್ತು ಪಾಕಿಸ್ತಾನದ ನಿಜವಾದ ಬಣ್ಣ ಏನೆಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಈ ಏಳು ನಿಯೋಗಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಒಟ್ಟು 33 ದೇಶಗಳಿಗೆ ಪ್ರಯಾಣ ಬೆಳೆಸಲಿದೆ. ಅಲ್ಲಿನ ಮುಖ್ಯಸ್ಥರು ಮತ್ತು ಗಣ್ಯರನ್ನು ಭೇಟಿ ಮಾಡಿ ಪಾಕಿಸ್ತಾನದ ಅನುಸರಿಸುತ್ತಿರುವ ಉಗ್ರ ನೀತಿಯ ಬಗ್ಗೆ ಮನವರಿಕೆ ಮಾಡಿಕೊಡಲಿದೆ.

ಈ ದೇಶಗಳನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಅವರು ಬ್ರೀಫಿಂಗ್ ಸಮಯದಲ್ಲಿ ಯಾದ ಆಧಾರದ ಮೇಲೆ 33 ದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ಆ ಕುರಿತು ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು 15 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆದಿವೆ. ಅದರಲ್ಲಿ 5 ಕಾಯಂ ಸದಸ್ಯತ್ವ ಮತ್ತು ಉಳಿದ 10 ಕಾಯಂ ಅಲ್ಲದೆ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತವೆ. ಈ ದೇಶಗಳಿಗೆ ನಮ್ಮ ನಿಯೋಗಗಳು ತೆರಳಲಿವೆ ಎಂದು ತಿಳಿಸಿದರು.

ಇದಲ್ಲದೆ, ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗುವ ಇತರ ಐದು ರಾಷ್ಟ್ರಗಳನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಧ್ವನಿಯಾಗುವಂತಹ ಇನ್ನು ಐದು ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ವದ ಈ ಎಲ್ಲ ರಾಷ್ಟ್ರಗಳಿಗೆ ನಮ್ಮ ನಿಯೋಗ ಭೇಟಿ ನೀಡುವ ಮೂಲಕ ಉಗ್ರ ಪೋಷಕ ರಾಷ್ಟ್ರ ಎಂದೇ ಕುಖ್ಯಾತ ಪಡೆದಿರುವ ಪಾಕಿಸ್ತಾನದ ನೀತಿಯನ್ನು ಬಯಲು ಮಾಡಲಾಗುವುದು ಎಂದು ಹೇಳಿದ್ದಾರೆ.

ಜಪಾನ್​ಗೆ ಮೊದಲ ಭೇಟಿ: ಜೆಡಿಯುನ ಸಂಜಯ್​ ಝಾ ಅವರ ನೇತೃತ್ವದ ನಿಯೋಗದಲ್ಲಿ ಸಾರಂಗಿ ಅವರು ಇದ್ದಾರೆ. ಈ ನಿಯೋಗವು, ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್​ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಲಿದೆ. ರಾಜತಾಂತ್ರಿಕ ಭೇಟಿಯ ಮೊದಲ ನಿಯೋಗವಾಗಿ ಪ್ರಯಾಣ ಬೆಳೆಸಲಿದೆ. ಮೊದಲಗೆ ಜಪಾನ್​​ಗೆ ತೆರಳಲಿದೆ.

ಭಾರತ ಸರ್ಕಾರ ಏಳು ನಿಯೋಗಗಳನ್ನು ರಚಿಸಿದ್ದು, ವಿಪಕ್ಷಗಳ ಪ್ರಮುಖ ನಾಯಕರಿಗೂ ಅವಕಾಶ ನೀಡಲಾಗಿದೆ. ಕಾಂಗ್ರೆಸ್​​ನ ಶಶಿ ತರೂರ್​, ಬಿಜೆಪಿಯ ರವಿಶಂಕರ್​ ಪ್ರಸಾದ್​ ಮತ್ತು ಬೈಜಯಂತ್​ ಪಾಂಡಾ, ಜೆಡಿಯುನ ಸಂಜಯ್​ ಕುಮಾರ್​ ಝಾ, ಎನ್​ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆ ಶ್ರೀಕಾತ್​ ಶಿಂಧೆ ಮತ್ತು ಡಿಎಕೆಯ ಕನಿಮೋಳಿ ನೇತೃತ್ವ ವಹಿಸಲಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ 'ಉಗ್ರ ಮುಖ' ವಿಶ್ವದ ಮುಂದೆ ಬಹಿರಂಗಕ್ಕೆ ಸರ್ವಪಕ್ಷಗಳ ನಿಯೋಗ ರಚಿಸಿದ ಕೇಂದ್ರ

ಭಾರತದ ತಂತ್ರ 'ನಕಲು' ಮಾಡಿದ ಪಾಕಿಸ್ತಾನ: ನಮ್ಮಂತೆ 'ರಾಜತಾಂತ್ರಿಕ ನಿಯೋಗ' ರಚಿಸಲು ನಿರ್ಧಾರ

ನವದೆಹಲಿ: ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ನಡೆದ ಆಪರೇಷನ್​ ಸಿಂಧೂರ ಮತ್ತು ಪಾಕಿಸ್ತಾನದ ಭಯೋತ್ಪಾದನೆಯ ಮುಖವನ್ನು ವಿಶ್ವದ ಮುಂದೆ ಬಯಲು ಮಾಡಲು ಭಾರತ ಸರ್ಕಾರ 7 ತಂಡಗಳ ನಿಯೋಗವನ್ನು ರಚಿಸಿದೆ. ಈ ತಂಡಗಳು ವಿಶ್ವದ ಹಲವು ರಾಷ್ಟ್ರಗಳಿಗೆ ನಾಳೆಯಿಂದ ಪ್ರಯಾಣ ಆರಂಭಿಸಲಿದೆ.

ಸರ್ವಪಕ್ಷಗಳ ಸದಸ್ಯರನ್ನು ಹೊಂದಿರುವ ಏಳು ನಿಯೋಗಗಳಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಅವರು ಆಪರೇಷನ್​ ಸಿಂಧೂರ ಮತ್ತು ಪಾಕಿಸ್ತಾನದ ನಿಜವಾದ ಬಣ್ಣ ಏನೆಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಈ ಏಳು ನಿಯೋಗಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಒಟ್ಟು 33 ದೇಶಗಳಿಗೆ ಪ್ರಯಾಣ ಬೆಳೆಸಲಿದೆ. ಅಲ್ಲಿನ ಮುಖ್ಯಸ್ಥರು ಮತ್ತು ಗಣ್ಯರನ್ನು ಭೇಟಿ ಮಾಡಿ ಪಾಕಿಸ್ತಾನದ ಅನುಸರಿಸುತ್ತಿರುವ ಉಗ್ರ ನೀತಿಯ ಬಗ್ಗೆ ಮನವರಿಕೆ ಮಾಡಿಕೊಡಲಿದೆ.

ಈ ದೇಶಗಳನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಅವರು ಬ್ರೀಫಿಂಗ್ ಸಮಯದಲ್ಲಿ ಯಾದ ಆಧಾರದ ಮೇಲೆ 33 ದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ಆ ಕುರಿತು ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು 15 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆದಿವೆ. ಅದರಲ್ಲಿ 5 ಕಾಯಂ ಸದಸ್ಯತ್ವ ಮತ್ತು ಉಳಿದ 10 ಕಾಯಂ ಅಲ್ಲದೆ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತವೆ. ಈ ದೇಶಗಳಿಗೆ ನಮ್ಮ ನಿಯೋಗಗಳು ತೆರಳಲಿವೆ ಎಂದು ತಿಳಿಸಿದರು.

ಇದಲ್ಲದೆ, ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗುವ ಇತರ ಐದು ರಾಷ್ಟ್ರಗಳನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಧ್ವನಿಯಾಗುವಂತಹ ಇನ್ನು ಐದು ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ವದ ಈ ಎಲ್ಲ ರಾಷ್ಟ್ರಗಳಿಗೆ ನಮ್ಮ ನಿಯೋಗ ಭೇಟಿ ನೀಡುವ ಮೂಲಕ ಉಗ್ರ ಪೋಷಕ ರಾಷ್ಟ್ರ ಎಂದೇ ಕುಖ್ಯಾತ ಪಡೆದಿರುವ ಪಾಕಿಸ್ತಾನದ ನೀತಿಯನ್ನು ಬಯಲು ಮಾಡಲಾಗುವುದು ಎಂದು ಹೇಳಿದ್ದಾರೆ.

ಜಪಾನ್​ಗೆ ಮೊದಲ ಭೇಟಿ: ಜೆಡಿಯುನ ಸಂಜಯ್​ ಝಾ ಅವರ ನೇತೃತ್ವದ ನಿಯೋಗದಲ್ಲಿ ಸಾರಂಗಿ ಅವರು ಇದ್ದಾರೆ. ಈ ನಿಯೋಗವು, ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್​ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಲಿದೆ. ರಾಜತಾಂತ್ರಿಕ ಭೇಟಿಯ ಮೊದಲ ನಿಯೋಗವಾಗಿ ಪ್ರಯಾಣ ಬೆಳೆಸಲಿದೆ. ಮೊದಲಗೆ ಜಪಾನ್​​ಗೆ ತೆರಳಲಿದೆ.

ಭಾರತ ಸರ್ಕಾರ ಏಳು ನಿಯೋಗಗಳನ್ನು ರಚಿಸಿದ್ದು, ವಿಪಕ್ಷಗಳ ಪ್ರಮುಖ ನಾಯಕರಿಗೂ ಅವಕಾಶ ನೀಡಲಾಗಿದೆ. ಕಾಂಗ್ರೆಸ್​​ನ ಶಶಿ ತರೂರ್​, ಬಿಜೆಪಿಯ ರವಿಶಂಕರ್​ ಪ್ರಸಾದ್​ ಮತ್ತು ಬೈಜಯಂತ್​ ಪಾಂಡಾ, ಜೆಡಿಯುನ ಸಂಜಯ್​ ಕುಮಾರ್​ ಝಾ, ಎನ್​ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆ ಶ್ರೀಕಾತ್​ ಶಿಂಧೆ ಮತ್ತು ಡಿಎಕೆಯ ಕನಿಮೋಳಿ ನೇತೃತ್ವ ವಹಿಸಲಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ 'ಉಗ್ರ ಮುಖ' ವಿಶ್ವದ ಮುಂದೆ ಬಹಿರಂಗಕ್ಕೆ ಸರ್ವಪಕ್ಷಗಳ ನಿಯೋಗ ರಚಿಸಿದ ಕೇಂದ್ರ

ಭಾರತದ ತಂತ್ರ 'ನಕಲು' ಮಾಡಿದ ಪಾಕಿಸ್ತಾನ: ನಮ್ಮಂತೆ 'ರಾಜತಾಂತ್ರಿಕ ನಿಯೋಗ' ರಚಿಸಲು ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.