ETV Bharat / bharat

ಅಧಿಕಾರಿಗಳು ಸವಲತ್ತಿಗೆ ಅಲ್ಲ, ಜನರ ಸೇವೆಗೆ ಕೆಲಸ ಮಾಡಬೇಕು: ಕೇಂದ್ರ ಸಚಿವ ಶೇಖಾವತ್​​ - MUSSOORIE IAS ACADEMY

ಮಸ್ಸೂರಿಯ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಮಾತನಾಡಿದ ಸಚಿವ ಶೇಖಾವತ್, ಜನಸೇವೆಗಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.

union-minister-gajendra-singh-shekhawat-attended-closing-ceremony-of-ias-professional-course-phase-one-in-mussoorie
ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್ (ETV Bharat)
author img

By ETV Bharat Karnataka Team

Published : April 18, 2025 at 3:56 PM IST

2 Min Read

ಮಸ್ಸೂರಿ(ಉತ್ತರಾಖಂಡ): ಅಧಿಕಾರ ಎಂದರೆ ಸವಲತ್ತು ಅಲ್ಲ, ಅದು ಜವಾಬ್ದಾರಿ. ಅಧಿಕಾರಿಯಾಗಿ ಅಲ್ಲದೇ ಜನರ ಸೇವೆಗೆ ಕೆಲಸ ಮಾಡಬೇಕು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ತಿಳಿಸಿದರು.

ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಾಮರ್ಥ್ಯ ಮಾತ್ರವಲ್ಲದೆ ಸೂಕ್ಷ್ಮತೆ, ವಿವೇಚನೆ ಮತ್ತು ನಿರಂತರ ಬದ್ಧತೆಯ ಅಗತ್ಯವಿರುವ ಹಾದಿಯಲ್ಲಿ ಜೀವನ ಆರಂಭಿಸಿದ್ದೀರಿ ಎಂದರು.

ನಿಮ್ಮ ನಿರ್ಧಾರಗಳು ಕೇವಲ ಕಾಗದಗಳಿಗೆ ಸೀಮಿತವಾಗಿರದೆ, ಲಕ್ಷಾಂತರ ಜೀವನಗಳಿಗೆ ನಿರ್ದೇಶನ ನೀಡಬೇಕು. ಕೆಲವೊಮ್ಮೆ ವಿದ್ಯಾರ್ಥಿಯ ಭವಿಷ್ಯ, ಕೆಲವೊಮ್ಮೆ ರೈತನ ಭರವಸೆ ಮತ್ತು ಕೆಲವೊಮ್ಮೆ ಮಹಿಳೆಯ ಸುರಕ್ಷತೆಗೆ ಕೆಲಸ ಮಾಡಬೇಕು. ಇದು ಕೇವಲ ಒಂದು ಕೆಲಸವಲ್ಲ, ರಾಷ್ಟ್ರ ನಿರ್ಮಾಣದ ಸಾಧನೆ ಎಂದು ಬಣ್ಣಿಸಿದರು.

ಸರ್ಕಾರದ ಯೋಜನೆಗಳು ತಳಮಟ್ಟದಲ್ಲಿ ಸರಿಯಾದ ದಿಕ್ಕಿನಲ್ಲಿ ಅನುಷ್ಠಾನಗೊಂಡಾಗ ಮಾತ್ರ ಯಶಸ್ವಿಯಾಗುತ್ತವೆ. ನಾಗರಿಕ ಸೇವಕರು ಆ ದಿಕ್ಕಿನ ನಿರ್ಣಾಯಕರು. ಅವರ ಪಾತ್ರ ನೀತಿ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿದ್ದಾರೆ. ಅವರ ಕೆಲಸಗಳಿಂದ ಜನಸಾಮಾನ್ಯರ ಆಕಾಂಕ್ಷೆಗಳು ನನಸಾಗುತ್ತವೆ. ಸಾರ್ವಜನಿಕರ ವಿಶ್ವಾಸವನ್ನು ಗಳಿಸುವುದು ಕಷ್ಟ. ಆದರೆ ಅದನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಅಧಿಕಾರವನ್ನು ಸವಲತ್ತು ಎಂದು ಪರಿಗಣಿಸದೆ ಜವಾಬ್ದಾರಿಯಾಗಿ ತೆಗೆದುಕೊಂಡಾಗ ಮಾತ್ರ ಇದು ಸಾಧ್ಯ ಎಂದು ತಿಳಿಸಿದರು.

ಉತ್ತಮ ಆಡಳಿತಗಾರನನ್ನು ಅವರ ನಿರ್ಧಾರಗಳಿಂದ ಗುರುತಿಸಲಾಗುತ್ತದೆ. ಆದರೆ ಉತ್ತಮ ಆಡಳಿತಗಾರನನ್ನು ಅವರ ಕೇಳುವ ಸಾಮರ್ಥ್ಯದಿಂದ ಗುರುತಿಸಲಾಗುತ್ತದೆ. ಒಬ್ಬ ನಾಗರಿಕ ಸೇವಕ ಗ್ರಾಮ ಪಂಚಾಯತ್‌ನಲ್ಲಿ ಕುಳಿತು ವೃದ್ಧ ಮಹಿಳೆಯ ನೋವನ್ನು ಅರ್ಥಮಾಡಿಕೊಂಡಾಗ ಮಾತ್ರ ಅವರನ್ನು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಸೇವಕ ಎಂದು ಕರೆಯಲಾಗುತ್ತದೆ ಎಂದರು.

ರಾಷ್ಟ್ರೀಯ ಆಡಳಿತ ಅಕಾಡೆಮಿಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನು ಇಡಲಾಗಿದೆ. ಅವರ ಆದರ್ಶಗಳಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ. ದೇಶದ ದೊಡ್ಡ ಜವಾಬ್ದಾರಿಗಳನ್ನೂ ಸಹ ಸರಳತೆ, ಸಮಗ್ರತೆ ಮತ್ತು ಸೇವೆಯಿಂದ ಪೂರೈಸಬಹುದು. ಅವರ ಜೀವನದ ಆದರ್ಶಗಳಿಂದ ಪಡೆದ ಸ್ಫೂರ್ತಿಯನ್ನು ಅನುಭವಿಸಿ ಎಂದು ತಿಳಿಸಿದರು.

ಐಎಎಸ್ ಬ್ಯಾಡ್ಜ್ ಅಧಿಕಾರದ ಸಂಕೇತವಲ್ಲ, ಸೇವೆಯ ಸಂಕೇತ. ಇದು ಜನರೊಂದಿಗಿನ ಸೇವೆಯನ್ನು ಬಿಂಬಿಸುತ್ತದೆ ಎಂದರು.

ಇದನ್ನೂ ಓದಿ: '50 ಬಾರಿ ರಕ್ತ ವರ್ಗಾವಣೆಯ ನಂತರ ಸಿಕ್ಕಿತು 5 ನೌಕರಿ': ಜೀವ ಹಿಂಡುವ ಖಾಯಿಲೆಯ ನಡುವೆ ಬಡ ಮಹಿಳೆಯ ಯಶೋಗಾಥೆ

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆ: 30 ಸಾವಿರ ಬೇಸಿಕ್​ ಇದ್ದವರು ನಿವೃತ್ತಿ ಬಳಿಕ ಪ್ರತಿ ತಿಂಗಳು ಎಷ್ಟು ಹಣ ಪಡೀತಾರೆ: ಇದನ್ನು ಲೆಕ್ಕಾಚಾರ ಹಾಕೋದು ಹೇಗೆ?

ಮಸ್ಸೂರಿ(ಉತ್ತರಾಖಂಡ): ಅಧಿಕಾರ ಎಂದರೆ ಸವಲತ್ತು ಅಲ್ಲ, ಅದು ಜವಾಬ್ದಾರಿ. ಅಧಿಕಾರಿಯಾಗಿ ಅಲ್ಲದೇ ಜನರ ಸೇವೆಗೆ ಕೆಲಸ ಮಾಡಬೇಕು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ತಿಳಿಸಿದರು.

ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಾಮರ್ಥ್ಯ ಮಾತ್ರವಲ್ಲದೆ ಸೂಕ್ಷ್ಮತೆ, ವಿವೇಚನೆ ಮತ್ತು ನಿರಂತರ ಬದ್ಧತೆಯ ಅಗತ್ಯವಿರುವ ಹಾದಿಯಲ್ಲಿ ಜೀವನ ಆರಂಭಿಸಿದ್ದೀರಿ ಎಂದರು.

ನಿಮ್ಮ ನಿರ್ಧಾರಗಳು ಕೇವಲ ಕಾಗದಗಳಿಗೆ ಸೀಮಿತವಾಗಿರದೆ, ಲಕ್ಷಾಂತರ ಜೀವನಗಳಿಗೆ ನಿರ್ದೇಶನ ನೀಡಬೇಕು. ಕೆಲವೊಮ್ಮೆ ವಿದ್ಯಾರ್ಥಿಯ ಭವಿಷ್ಯ, ಕೆಲವೊಮ್ಮೆ ರೈತನ ಭರವಸೆ ಮತ್ತು ಕೆಲವೊಮ್ಮೆ ಮಹಿಳೆಯ ಸುರಕ್ಷತೆಗೆ ಕೆಲಸ ಮಾಡಬೇಕು. ಇದು ಕೇವಲ ಒಂದು ಕೆಲಸವಲ್ಲ, ರಾಷ್ಟ್ರ ನಿರ್ಮಾಣದ ಸಾಧನೆ ಎಂದು ಬಣ್ಣಿಸಿದರು.

ಸರ್ಕಾರದ ಯೋಜನೆಗಳು ತಳಮಟ್ಟದಲ್ಲಿ ಸರಿಯಾದ ದಿಕ್ಕಿನಲ್ಲಿ ಅನುಷ್ಠಾನಗೊಂಡಾಗ ಮಾತ್ರ ಯಶಸ್ವಿಯಾಗುತ್ತವೆ. ನಾಗರಿಕ ಸೇವಕರು ಆ ದಿಕ್ಕಿನ ನಿರ್ಣಾಯಕರು. ಅವರ ಪಾತ್ರ ನೀತಿ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿದ್ದಾರೆ. ಅವರ ಕೆಲಸಗಳಿಂದ ಜನಸಾಮಾನ್ಯರ ಆಕಾಂಕ್ಷೆಗಳು ನನಸಾಗುತ್ತವೆ. ಸಾರ್ವಜನಿಕರ ವಿಶ್ವಾಸವನ್ನು ಗಳಿಸುವುದು ಕಷ್ಟ. ಆದರೆ ಅದನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಅಧಿಕಾರವನ್ನು ಸವಲತ್ತು ಎಂದು ಪರಿಗಣಿಸದೆ ಜವಾಬ್ದಾರಿಯಾಗಿ ತೆಗೆದುಕೊಂಡಾಗ ಮಾತ್ರ ಇದು ಸಾಧ್ಯ ಎಂದು ತಿಳಿಸಿದರು.

ಉತ್ತಮ ಆಡಳಿತಗಾರನನ್ನು ಅವರ ನಿರ್ಧಾರಗಳಿಂದ ಗುರುತಿಸಲಾಗುತ್ತದೆ. ಆದರೆ ಉತ್ತಮ ಆಡಳಿತಗಾರನನ್ನು ಅವರ ಕೇಳುವ ಸಾಮರ್ಥ್ಯದಿಂದ ಗುರುತಿಸಲಾಗುತ್ತದೆ. ಒಬ್ಬ ನಾಗರಿಕ ಸೇವಕ ಗ್ರಾಮ ಪಂಚಾಯತ್‌ನಲ್ಲಿ ಕುಳಿತು ವೃದ್ಧ ಮಹಿಳೆಯ ನೋವನ್ನು ಅರ್ಥಮಾಡಿಕೊಂಡಾಗ ಮಾತ್ರ ಅವರನ್ನು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಸೇವಕ ಎಂದು ಕರೆಯಲಾಗುತ್ತದೆ ಎಂದರು.

ರಾಷ್ಟ್ರೀಯ ಆಡಳಿತ ಅಕಾಡೆಮಿಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನು ಇಡಲಾಗಿದೆ. ಅವರ ಆದರ್ಶಗಳಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ. ದೇಶದ ದೊಡ್ಡ ಜವಾಬ್ದಾರಿಗಳನ್ನೂ ಸಹ ಸರಳತೆ, ಸಮಗ್ರತೆ ಮತ್ತು ಸೇವೆಯಿಂದ ಪೂರೈಸಬಹುದು. ಅವರ ಜೀವನದ ಆದರ್ಶಗಳಿಂದ ಪಡೆದ ಸ್ಫೂರ್ತಿಯನ್ನು ಅನುಭವಿಸಿ ಎಂದು ತಿಳಿಸಿದರು.

ಐಎಎಸ್ ಬ್ಯಾಡ್ಜ್ ಅಧಿಕಾರದ ಸಂಕೇತವಲ್ಲ, ಸೇವೆಯ ಸಂಕೇತ. ಇದು ಜನರೊಂದಿಗಿನ ಸೇವೆಯನ್ನು ಬಿಂಬಿಸುತ್ತದೆ ಎಂದರು.

ಇದನ್ನೂ ಓದಿ: '50 ಬಾರಿ ರಕ್ತ ವರ್ಗಾವಣೆಯ ನಂತರ ಸಿಕ್ಕಿತು 5 ನೌಕರಿ': ಜೀವ ಹಿಂಡುವ ಖಾಯಿಲೆಯ ನಡುವೆ ಬಡ ಮಹಿಳೆಯ ಯಶೋಗಾಥೆ

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆ: 30 ಸಾವಿರ ಬೇಸಿಕ್​ ಇದ್ದವರು ನಿವೃತ್ತಿ ಬಳಿಕ ಪ್ರತಿ ತಿಂಗಳು ಎಷ್ಟು ಹಣ ಪಡೀತಾರೆ: ಇದನ್ನು ಲೆಕ್ಕಾಚಾರ ಹಾಕೋದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.