ETV Bharat / bharat

ನೀಟ್​ ಪರೀಕ್ಷೆ ಅಕ್ರಮ ಪ್ರಕರಣ: ಬೇರೊಬ್ಬರ ಪರವಾಗಿ ಪರೀಕ್ಷೆ ಬರೆದ ವೈದ್ಯ ವಿದ್ಯಾರ್ಥಿಗಳಿಬ್ಬರು ಅಮಾನತು - NEET FRAUD CASE

2024ರ ನೀಟ್​ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರನ್ನು ಸಿಬಿಐ ಪತ್ತೆ ಮಾಡುತ್ತಿದೆ. ರಾಜಸ್ಥಾನದ ಜೋಧ್​​ಪುರ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಗುರುತಿಸಿ ಕ್ರಮಕ್ಕೆ ಸೂಚಿಸಿದೆ.

ನೀಟ್​ ಪರೀಕ್ಷೆ ಅಕ್ರಮ ಪ್ರಕರಣ
ನೀಟ್​ ಪರೀಕ್ಷೆ ಅಕ್ರಮ ಪ್ರಕರಣ (ETV Bharat)
author img

By ETV Bharat Karnataka Team

Published : April 17, 2025 at 7:00 PM IST

2 Min Read

ಜೋಧ್‌ಪುರ (ರಾಜಸ್ಥಾನ) : ಕಳೆದ ವರ್ಷದ (2024) NEET ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ) ಪತ್ತೆ ಮಾಡಿದೆ. ಜೋಧ್​ಪುರದ ಡಾ. ಎಸ್​ಎನ್​​ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಏಜಿನ್ಸಿಯು ಗುರುತಿಸಿದೆ.

ಅಭ್ಯರ್ಥಿಗಳು ನಡೆಸಿದ ವಂಚನೆಯ ಬಗ್ಗೆ ಕಾಲೇಜಿಗೆ ಮಾಹಿತಿ ನೀಡಿದ್ದು, ಕ್ರಮಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲೇ, ತಕ್ಷಣಕ್ಕೆ ಜಾರಿಗೆ ಬರುವಂತೆ ಆರೋಪಿ ವಿದ್ಯಾರ್ಥಿಗಳಾದ ಹರ್ಷಿತ್ ಮೆಹ್ಲಾ ಮತ್ತು ಭಾಗೀರಥರಾಮ್ ಬಿಷ್ಣೋಯ್ ಅವರನ್ನು ಕಾಲೇಜು ಆಡಳಿತ ಮಂಡಳಿಯು ಅಮಾನತು ಮಾಡಿ ಆದೇಶಿಸಿದೆ.

ಬೇರೊಬ್ಬರ ಪರವಾಗಿ ಪರೀಕ್ಷೆ ಬರೆದ 'ಬುದ್ಧಿವಂತರು': ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್​ಟಿಎ) ಕಳೆದ ವರ್ಷ ನಡೆಸಿದ್ದ ಪರೀಕ್ಷೆಯಲ್ಲಿ ಜೋಧ್​ಪುರದ ಡಾ. ಎಸ್​ಎನ್​​ ವೈದ್ಯಕೀಯ ಕಾಲೇಜಿನ 2022ರ ಬ್ಯಾಚ್​​ನ ಹರ್ಷಿತ್ ಮೆಹ್ಲಾ ಮತ್ತು 2023ರ ಬ್ಯಾಚ್​​ನ ಭಾಗೀರಥರಾಮ್ ಬಿಷ್ಣೋಯ್ ಅವರು ಅಕ್ರಮ ಎಸಗಿದ್ದನ್ನು ಸಿಬಿಐ ಪತ್ತೆ ಮಾಡಿದೆ. ಇಬ್ಬರೂ ಬೇರೊಬ್ಬ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದರು.

ತನಿಖೆಯಲ್ಲಿ ಭಾಗೀರಥರಾಮ್ ಬಿಷ್ಣೋಯ್ ಅವರು ತನ್ನ ಸಹೋದರ ಗೋಪಾಲ್ ರಾಮ್ ಬದಲಿಗೆ ಪರೀಕ್ಷೆಗೆ ಹಾಜರಾಗಿದ್ದರು. ವಿನೀತ್ ಗೋದಾರ ಎಂಬವರ ಬದಲಿಗೆ ಹರ್ಷಿತ್ ಮೆಹ್ಲಾ ಪರೀಕ್ಷೆ ಬರೆಯಲು ಬಂದಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ, ಪೊಲೀಸರು ಪರೀಕ್ಷಾ ಕೇಂದ್ರದಿಂದ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರ ಮೇಲಿನ ಆರೋಪ ಸಾಬೀತಾಗಿದೆ. ಎನ್‌ಎಂಸಿ ನಿರ್ದೇಶಕ ಸುಖ್‌ಲಾಲ್ ಮೀನಾ ಅವರು ಡಾ. ಎಸ್‌ಎನ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದರು. ನಂತರ ಇಬ್ಬರನ್ನೂ ಪ್ರಾಂಶುಪಾಲರಾದ ಡಾ. ಬಿ.ಎಸ್. ಜೋಧಾ ಅವರು ಅಮಾನತುಗೊಳಿಸಿದರು.

ಅಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಭಾಗಿ: ಇನ್ನೊಂದು ಪ್ರಕರಣದಲ್ಲಿ, ಜೋಧಪುರದ ಏಮ್ಸ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಹುಕ್ಮಾರಾಮ್ ಎಂಬ ವೈದ್ಯಕೀಯ ವಿದ್ಯಾರ್ಥಿ ಬಿಹಾರದ ಮುಜಫರ್‌ಪುರದಲ್ಲಿ ವೈದ್ಯರೊಬ್ಬರ ಪುತ್ರನ ಪರವಾಗಿ ಪರೀಕ್ಷೆ ಬರೆಯಲು ಆಗಮಿಸಿದ್ದರು. ಈ ವೇಳೆ ಬಯೋಮೆಟ್ರಿಕ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಪರೀಕ್ಷೆಗೆ ಹಾಜರಾಗಲು ಆತನಿಗೆ 4 ಲಕ್ಷ ರೂಪಾಯಿ ಡೀಲ್​ ನಡೆದಿತ್ತು. ಆದರೆ, ಪರೀಕ್ಷೆಗೂ ಮೊದಲು ಆತ ಸಿಕ್ಕಿಬಿದ್ದಿದ್ದಾನೆ. AIIMS ಕೂಡ ಹುಕ್ಮಾರಾಮ್ ಅವರನ್ನು ಅಮಾನತುಗೊಳಿಸಿದೆ. ಇಂಥದ್ದೇ ಹಲವು ಪ್ರಕರಣಗಳನ್ನು ಬೇಧಿಸಿರುವ ಸಿಬಿಐ ವಿವಿಧ ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದೆ. ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​​ ಸಲ್ಲಿಸಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ; ತಮಿಳುನಾಡಿನಲ್ಲಿ ನೀಟ್​ಗೆ ಹೆದರಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ: ಈವರೆಗೆ 19 ಪರೀಕ್ಷಾರ್ಥಿಗಳ ಸಾವು

ನೀಟ್​ UG ಪರೀಕ್ಷಾ ಮಾದರಿಯಲ್ಲಿ ಬದಲಾವಣೆ: 180 ಪ್ರಶ್ನೆಗಳಿಗೆ ಉತ್ತರಿಸಲು 180 ನಿಮಿಷ ಅವಕಾಶ

ಜೋಧ್‌ಪುರ (ರಾಜಸ್ಥಾನ) : ಕಳೆದ ವರ್ಷದ (2024) NEET ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ) ಪತ್ತೆ ಮಾಡಿದೆ. ಜೋಧ್​ಪುರದ ಡಾ. ಎಸ್​ಎನ್​​ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಏಜಿನ್ಸಿಯು ಗುರುತಿಸಿದೆ.

ಅಭ್ಯರ್ಥಿಗಳು ನಡೆಸಿದ ವಂಚನೆಯ ಬಗ್ಗೆ ಕಾಲೇಜಿಗೆ ಮಾಹಿತಿ ನೀಡಿದ್ದು, ಕ್ರಮಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲೇ, ತಕ್ಷಣಕ್ಕೆ ಜಾರಿಗೆ ಬರುವಂತೆ ಆರೋಪಿ ವಿದ್ಯಾರ್ಥಿಗಳಾದ ಹರ್ಷಿತ್ ಮೆಹ್ಲಾ ಮತ್ತು ಭಾಗೀರಥರಾಮ್ ಬಿಷ್ಣೋಯ್ ಅವರನ್ನು ಕಾಲೇಜು ಆಡಳಿತ ಮಂಡಳಿಯು ಅಮಾನತು ಮಾಡಿ ಆದೇಶಿಸಿದೆ.

ಬೇರೊಬ್ಬರ ಪರವಾಗಿ ಪರೀಕ್ಷೆ ಬರೆದ 'ಬುದ್ಧಿವಂತರು': ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್​ಟಿಎ) ಕಳೆದ ವರ್ಷ ನಡೆಸಿದ್ದ ಪರೀಕ್ಷೆಯಲ್ಲಿ ಜೋಧ್​ಪುರದ ಡಾ. ಎಸ್​ಎನ್​​ ವೈದ್ಯಕೀಯ ಕಾಲೇಜಿನ 2022ರ ಬ್ಯಾಚ್​​ನ ಹರ್ಷಿತ್ ಮೆಹ್ಲಾ ಮತ್ತು 2023ರ ಬ್ಯಾಚ್​​ನ ಭಾಗೀರಥರಾಮ್ ಬಿಷ್ಣೋಯ್ ಅವರು ಅಕ್ರಮ ಎಸಗಿದ್ದನ್ನು ಸಿಬಿಐ ಪತ್ತೆ ಮಾಡಿದೆ. ಇಬ್ಬರೂ ಬೇರೊಬ್ಬ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದರು.

ತನಿಖೆಯಲ್ಲಿ ಭಾಗೀರಥರಾಮ್ ಬಿಷ್ಣೋಯ್ ಅವರು ತನ್ನ ಸಹೋದರ ಗೋಪಾಲ್ ರಾಮ್ ಬದಲಿಗೆ ಪರೀಕ್ಷೆಗೆ ಹಾಜರಾಗಿದ್ದರು. ವಿನೀತ್ ಗೋದಾರ ಎಂಬವರ ಬದಲಿಗೆ ಹರ್ಷಿತ್ ಮೆಹ್ಲಾ ಪರೀಕ್ಷೆ ಬರೆಯಲು ಬಂದಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ, ಪೊಲೀಸರು ಪರೀಕ್ಷಾ ಕೇಂದ್ರದಿಂದ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರ ಮೇಲಿನ ಆರೋಪ ಸಾಬೀತಾಗಿದೆ. ಎನ್‌ಎಂಸಿ ನಿರ್ದೇಶಕ ಸುಖ್‌ಲಾಲ್ ಮೀನಾ ಅವರು ಡಾ. ಎಸ್‌ಎನ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದರು. ನಂತರ ಇಬ್ಬರನ್ನೂ ಪ್ರಾಂಶುಪಾಲರಾದ ಡಾ. ಬಿ.ಎಸ್. ಜೋಧಾ ಅವರು ಅಮಾನತುಗೊಳಿಸಿದರು.

ಅಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಭಾಗಿ: ಇನ್ನೊಂದು ಪ್ರಕರಣದಲ್ಲಿ, ಜೋಧಪುರದ ಏಮ್ಸ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಹುಕ್ಮಾರಾಮ್ ಎಂಬ ವೈದ್ಯಕೀಯ ವಿದ್ಯಾರ್ಥಿ ಬಿಹಾರದ ಮುಜಫರ್‌ಪುರದಲ್ಲಿ ವೈದ್ಯರೊಬ್ಬರ ಪುತ್ರನ ಪರವಾಗಿ ಪರೀಕ್ಷೆ ಬರೆಯಲು ಆಗಮಿಸಿದ್ದರು. ಈ ವೇಳೆ ಬಯೋಮೆಟ್ರಿಕ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಪರೀಕ್ಷೆಗೆ ಹಾಜರಾಗಲು ಆತನಿಗೆ 4 ಲಕ್ಷ ರೂಪಾಯಿ ಡೀಲ್​ ನಡೆದಿತ್ತು. ಆದರೆ, ಪರೀಕ್ಷೆಗೂ ಮೊದಲು ಆತ ಸಿಕ್ಕಿಬಿದ್ದಿದ್ದಾನೆ. AIIMS ಕೂಡ ಹುಕ್ಮಾರಾಮ್ ಅವರನ್ನು ಅಮಾನತುಗೊಳಿಸಿದೆ. ಇಂಥದ್ದೇ ಹಲವು ಪ್ರಕರಣಗಳನ್ನು ಬೇಧಿಸಿರುವ ಸಿಬಿಐ ವಿವಿಧ ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದೆ. ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​​ ಸಲ್ಲಿಸಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ; ತಮಿಳುನಾಡಿನಲ್ಲಿ ನೀಟ್​ಗೆ ಹೆದರಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ: ಈವರೆಗೆ 19 ಪರೀಕ್ಷಾರ್ಥಿಗಳ ಸಾವು

ನೀಟ್​ UG ಪರೀಕ್ಷಾ ಮಾದರಿಯಲ್ಲಿ ಬದಲಾವಣೆ: 180 ಪ್ರಶ್ನೆಗಳಿಗೆ ಉತ್ತರಿಸಲು 180 ನಿಮಿಷ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.