ETV Bharat / bharat

ನಿಶ್ಚಿತಾರ್ಥದ ಉಂಗುರ ಕಳೆದುಕೊಂಡ ಜೆಕ್​ ರಾಜಕುಮಾರಿ: ಹುಡುಕಿಕೊಟ್ಟು ಪ್ರಾಮಾಣಿಕತೆ ಮೆರೆದ ಮಧ್ಯ ಪ್ರದೇಶದ ಬುಡಕಟ್ಟು ಜನ - TRIBALS SEARCH CZECH PRINCESS RING

ಭಾರತಕ್ಕೆ ಬಂದಿದ್ದ ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್‌ನ ರಾಜಮನೆತನದ ರಾಜಕುಮಾರಿ ಕಳೆದುಕೊಂಡಿದ್ದ ನಿಶ್ಚಿತಾರ್ಥದ ಉಂಗುರವನ್ನು ಮಧ್ಯ ಪ್ರದೇಶದ ಬುಡಕಟ್ಟು ಜನಾಂಗದವರು ಹುಡುಕಿಕೊಟ್ಟಿದ್ದಾರೆ.

TRIBALS SEARCH PRAGUE PRINCESS RING
ರಾಜಕುಮಾರಿಯ ನಿಶ್ಚಿತಾರ್ಥದ ಉಂಗುರ ಹುಡುಕಿಕೊಟ್ಟ ಬುಡಕಟ್ಟು ಜನರು (ETV Bharat)
author img

By ETV Bharat Karnataka Team

Published : April 28, 2025 at 3:39 PM IST

2 Min Read

ಮಧ್ಯ ಪ್ರದೇಶ: 'ಅತಿಥಿ ದೇವೋ ಭವ' ಎಂಬುದು ಭಾರತೀಯ ಪರಂಪರೆಯ ಪ್ರಸಿದ್ಧ ಘೋಷವಾಕ್ಯ. ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯವೂ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಕಾಣಬೇಕೆಂಬುದು ಇದರ ಆಶಯ. ಬೆನ್ನು ನೋವಿನ ಚಿಕಿತ್ಸೆಗೆ ಮಧ್ಯ ಪ್ರದೇಶಕ್ಕೆ ಆಗಮಿಸಿದ್ದ ಜೆಕ್ ಗಣರಾಜ್ಯದ ರಾಜಧಾನಿಯಾದ ಪ್ರೇಗ್‌ನ ರಾಜಮನೆತನದ ರಾಜಕುಮಾರಿ ಇಟ್ಕಾ ಕ್ಲೆಟ್ ಅವರು ಕಳೆದುಕೊಂಡಿದ್ದ ನಿಶ್ಚಿತಾರ್ಥದ ಉಂಗುರವನ್ನು ಇಲ್ಲಿನ ಬುಡಕಟ್ಟು ಜನಾಂಗದವರು ಹುಡುಕಿಕೊಟ್ಟು ಈ ಮಾತನ್ನು ಸಾಬೀತುಪಡಿಸಿದ್ದಾರೆ.

ರಾಜಕುಮಾರಿ ಇಟ್ಕಾ ಕ್ಲೆಟ್ ಅವರು ತಾಮಿಯನ್ ಬೆಟ್ಟದ ಸೌಂದರ್ಯ ಸವಿಯಲು ಮತ್ತು ಪ್ರಸಿದ್ಧ ಆಯುರ್ವೇದ ವೈದ್ಯರೊಬ್ಬರಿಂದ ಬೆನ್ನುಮೂಳೆಯ ಚಿಕಿತ್ಸೆ ಪಡೆಯಲು ಚಿಂದ್ವಾರಕ್ಕೆ ಬಂದಿದ್ದರು. ಚಿಕಿತ್ಸೆಯ ಬಳಿಕ ಚೋಟಾ ಮಹಾದೇವ್ ಬಳಿಯ ಜಲಪಾತವನ್ನು ಕಣ್ತುಂಬಿಕೊಳ್ಳಲು ತೆರಳಿದ್ದರು. ಈ ವೇಳೆ ಅವರ ನಿಶ್ಚಿತಾರ್ಥದ ಉಂಗುರ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದೆ. ಇದರಿಂದಾಗಿ ರಾಜಕುಮಾರಿ ದುಃಖಿತರಾಗಿದ್ದರು. ಆದರೆ ಪಾತಾಳಕೋಟೆಯ ಬುಡಕಟ್ಟು ಜನಾಂಗದವರು ಆ ಉಂಗುರವನ್ನು ಎರಡೇ ದಿನಗಳಲ್ಲಿ ಹುಡುಕಿ ಕೊಟ್ಟು, ರಾಜಕುಮಾರಿಯ ಮೊಗದಲ್ಲಿ ಮಂದಹಾಸ ಮೂಡಿಸಿದರು.

ರಾಜಕುಮಾರಿಗೆ ಚಿಕಿತ್ಸೆ ನೀಡಿದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ.ಪ್ರಕಾಶ್ ಇಂಡಿಯನ್ ಟಾಟಾ ಮಾತನಾಡಿ, "ಪ್ರೇಗ್ ರಾಜಮನೆತನದ ರಾಜಕುಮಾರಿ ಇಟ್ಕಾ ಕ್ಲೆಟ್ ಅವರಿಗೆ ಮೂಳೆ ಸಂಬಂಧಿತ ಕಾಯಿಲೆ ಇತ್ತು. ಅವರು ಚಿಕಿತ್ಸೆಗಾಗಿ ಹಲವು ದೇಶಗಳಿಗೆ ಹೋಗಿದ್ದರು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಸಾಮಾಜಿಕ ಮಾಧ್ಯಮದ ಮೂಲಕ ಅವರು ಚಿಂದ್ವಾರದಲ್ಲಿ ಗಿಡಮೂಲಿಕೆ ಮೂಲಕ ನೀಡುವ ಆಯುರ್ವೇದ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡು ಭಾರತಕ್ಕೆ ಆಗಮಿಸಿದ್ದರು. ನಂತರ ಚಿಂದ್ವಾರಕ್ಕೆ ಬಂದು ಚಿಕಿತ್ಸೆ ಪಡೆದರು. ಚಿಕಿತ್ಸೆಯ ನಂತರ ಜಲಪಾತ ನೋಡಲು ಹೋದಾಗ ಅಲ್ಲಿ ತಮ್ಮ ನಿಶ್ಚಿತಾರ್ಥದ ಉಂಗುರ ಕಳೆದುಕೊಂಡರು" ಎಂದರು.

"ಎಲ್ಲಾ ಹುಡುಕಾಟ ಪ್ರಯತ್ನಗಳ ನಂತರ ಪಾತಾಲಕೋಟೆಯ ಬುಡಕಟ್ಟು ಜನಾಂಗದವರನ್ನು ಸಂಪರ್ಕಿಸಿ ಉಂಗುರ ಹುಡುಕಿ ಕೊಡುವಂತೆ ವಿನಂತಿಸಿದೆವು. ಬುಡಕಟ್ಟು ಜನಾಂಗದವರು ಉಂಗುರ ಹುಡುಕಿ ಕೊಡಲು ಒಪ್ಪಿ, ದಿನಗೂಲಿ ಕೊಡುವಂತೆ ಕೇಳಿದರು. ದಿನಗೂಲಿ ಕೊಡಲು ಒಪ್ಪಿದ ನಂತರ, ಅವರು ಶ್ರಮಪಟ್ಟು ಜಲಪಾತದ ಕೆಳಗಿನಿಂದ ಮರಳನ್ನು ಹೊರತೆಗೆದು, ಉಂಗುರ ಹುಡುಕಿ ರಾಜಕುಮಾರಿಗೆ ಮರಳಿಸಿದರು" ಎಂದು ಹೇಳಿದರು.

"ರಾಜಕುಮಾರಿಯು ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಕಂಡು ತುಂಬಾ ಸಂತಸಪಟ್ಟರು. ಉಂಗುರ ಹುಡುಕಿಕೊಟ್ಟ ಬುಡಕಟ್ಟು ಜನಾಂಗದವರಿಗೆ 5 ಲಕ್ಷ ರೂ.ಗಳನ್ನು ನೀಡಿದರು. ಆದರೆ ಅವರು ಆ ಹಣ ತೆಗೆದುಕೊಳ್ಳಲು ನಿರಾಕರಿಸಿ, ಕೇವಲ 41 ಸಾವಿರ ರೂ.ಗಳನ್ನು ಮಾತ್ರ ದಿನಗೂಲಿಯಾಗಿ ಪಡೆದರು" ಎಂದು ತಿಳಿಸಿದರು.

"ನಮ್ಮ ಅತಿಥಿಗಳ ಅಸಹಾಯಕತೆಯ ಲಾಭ ಪಡೆಯುವುದು ತಪ್ಪು. ರಾಜಕುಮಾರಿಗೆ ಸಹಾಯ ಮಾಡಿದಕ್ಕೆ ನಮಗೆ ತುಂಬಾ ಸಂತೋಷವಾಗಿದೆ" ಎಂದು ಹೇಳುವ ಮೂಲಕ ಬುಡಕಟ್ಟು ಜನಾಂಗದವರು ಪ್ರಾಮಾಣಿಕತೆ ಮೆರೆದರು.

ಇದನ್ನೂ ಓದಿ: ಒಂದೇ ವರ್ಷದಲ್ಲಿ 175 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 15ರ ಬಾಲಕಿ! ಪುಟ್ಟ ಪೋರಿಯ ಸಂದರ್ಶನ ನಡೆಸಿದ ಡಿಸ್ನಿ

ಇದನ್ನೂ ಓದಿ: ತೃಪ್ತಿ ನೀಡದ ₹1 ಕೋಟಿ ಸಂಬಳದ ಅಮೆರಿಕ ಕೆಲಸ: UPSC ಪರೀಕ್ಷೆ ಬರೆದು 467ನೇ ರ‍್ಯಾಂಕ್ ಪಡೆದ ಯುವತಿ!

ಮಧ್ಯ ಪ್ರದೇಶ: 'ಅತಿಥಿ ದೇವೋ ಭವ' ಎಂಬುದು ಭಾರತೀಯ ಪರಂಪರೆಯ ಪ್ರಸಿದ್ಧ ಘೋಷವಾಕ್ಯ. ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯವೂ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಕಾಣಬೇಕೆಂಬುದು ಇದರ ಆಶಯ. ಬೆನ್ನು ನೋವಿನ ಚಿಕಿತ್ಸೆಗೆ ಮಧ್ಯ ಪ್ರದೇಶಕ್ಕೆ ಆಗಮಿಸಿದ್ದ ಜೆಕ್ ಗಣರಾಜ್ಯದ ರಾಜಧಾನಿಯಾದ ಪ್ರೇಗ್‌ನ ರಾಜಮನೆತನದ ರಾಜಕುಮಾರಿ ಇಟ್ಕಾ ಕ್ಲೆಟ್ ಅವರು ಕಳೆದುಕೊಂಡಿದ್ದ ನಿಶ್ಚಿತಾರ್ಥದ ಉಂಗುರವನ್ನು ಇಲ್ಲಿನ ಬುಡಕಟ್ಟು ಜನಾಂಗದವರು ಹುಡುಕಿಕೊಟ್ಟು ಈ ಮಾತನ್ನು ಸಾಬೀತುಪಡಿಸಿದ್ದಾರೆ.

ರಾಜಕುಮಾರಿ ಇಟ್ಕಾ ಕ್ಲೆಟ್ ಅವರು ತಾಮಿಯನ್ ಬೆಟ್ಟದ ಸೌಂದರ್ಯ ಸವಿಯಲು ಮತ್ತು ಪ್ರಸಿದ್ಧ ಆಯುರ್ವೇದ ವೈದ್ಯರೊಬ್ಬರಿಂದ ಬೆನ್ನುಮೂಳೆಯ ಚಿಕಿತ್ಸೆ ಪಡೆಯಲು ಚಿಂದ್ವಾರಕ್ಕೆ ಬಂದಿದ್ದರು. ಚಿಕಿತ್ಸೆಯ ಬಳಿಕ ಚೋಟಾ ಮಹಾದೇವ್ ಬಳಿಯ ಜಲಪಾತವನ್ನು ಕಣ್ತುಂಬಿಕೊಳ್ಳಲು ತೆರಳಿದ್ದರು. ಈ ವೇಳೆ ಅವರ ನಿಶ್ಚಿತಾರ್ಥದ ಉಂಗುರ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದೆ. ಇದರಿಂದಾಗಿ ರಾಜಕುಮಾರಿ ದುಃಖಿತರಾಗಿದ್ದರು. ಆದರೆ ಪಾತಾಳಕೋಟೆಯ ಬುಡಕಟ್ಟು ಜನಾಂಗದವರು ಆ ಉಂಗುರವನ್ನು ಎರಡೇ ದಿನಗಳಲ್ಲಿ ಹುಡುಕಿ ಕೊಟ್ಟು, ರಾಜಕುಮಾರಿಯ ಮೊಗದಲ್ಲಿ ಮಂದಹಾಸ ಮೂಡಿಸಿದರು.

ರಾಜಕುಮಾರಿಗೆ ಚಿಕಿತ್ಸೆ ನೀಡಿದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ.ಪ್ರಕಾಶ್ ಇಂಡಿಯನ್ ಟಾಟಾ ಮಾತನಾಡಿ, "ಪ್ರೇಗ್ ರಾಜಮನೆತನದ ರಾಜಕುಮಾರಿ ಇಟ್ಕಾ ಕ್ಲೆಟ್ ಅವರಿಗೆ ಮೂಳೆ ಸಂಬಂಧಿತ ಕಾಯಿಲೆ ಇತ್ತು. ಅವರು ಚಿಕಿತ್ಸೆಗಾಗಿ ಹಲವು ದೇಶಗಳಿಗೆ ಹೋಗಿದ್ದರು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಸಾಮಾಜಿಕ ಮಾಧ್ಯಮದ ಮೂಲಕ ಅವರು ಚಿಂದ್ವಾರದಲ್ಲಿ ಗಿಡಮೂಲಿಕೆ ಮೂಲಕ ನೀಡುವ ಆಯುರ್ವೇದ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡು ಭಾರತಕ್ಕೆ ಆಗಮಿಸಿದ್ದರು. ನಂತರ ಚಿಂದ್ವಾರಕ್ಕೆ ಬಂದು ಚಿಕಿತ್ಸೆ ಪಡೆದರು. ಚಿಕಿತ್ಸೆಯ ನಂತರ ಜಲಪಾತ ನೋಡಲು ಹೋದಾಗ ಅಲ್ಲಿ ತಮ್ಮ ನಿಶ್ಚಿತಾರ್ಥದ ಉಂಗುರ ಕಳೆದುಕೊಂಡರು" ಎಂದರು.

"ಎಲ್ಲಾ ಹುಡುಕಾಟ ಪ್ರಯತ್ನಗಳ ನಂತರ ಪಾತಾಲಕೋಟೆಯ ಬುಡಕಟ್ಟು ಜನಾಂಗದವರನ್ನು ಸಂಪರ್ಕಿಸಿ ಉಂಗುರ ಹುಡುಕಿ ಕೊಡುವಂತೆ ವಿನಂತಿಸಿದೆವು. ಬುಡಕಟ್ಟು ಜನಾಂಗದವರು ಉಂಗುರ ಹುಡುಕಿ ಕೊಡಲು ಒಪ್ಪಿ, ದಿನಗೂಲಿ ಕೊಡುವಂತೆ ಕೇಳಿದರು. ದಿನಗೂಲಿ ಕೊಡಲು ಒಪ್ಪಿದ ನಂತರ, ಅವರು ಶ್ರಮಪಟ್ಟು ಜಲಪಾತದ ಕೆಳಗಿನಿಂದ ಮರಳನ್ನು ಹೊರತೆಗೆದು, ಉಂಗುರ ಹುಡುಕಿ ರಾಜಕುಮಾರಿಗೆ ಮರಳಿಸಿದರು" ಎಂದು ಹೇಳಿದರು.

"ರಾಜಕುಮಾರಿಯು ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಕಂಡು ತುಂಬಾ ಸಂತಸಪಟ್ಟರು. ಉಂಗುರ ಹುಡುಕಿಕೊಟ್ಟ ಬುಡಕಟ್ಟು ಜನಾಂಗದವರಿಗೆ 5 ಲಕ್ಷ ರೂ.ಗಳನ್ನು ನೀಡಿದರು. ಆದರೆ ಅವರು ಆ ಹಣ ತೆಗೆದುಕೊಳ್ಳಲು ನಿರಾಕರಿಸಿ, ಕೇವಲ 41 ಸಾವಿರ ರೂ.ಗಳನ್ನು ಮಾತ್ರ ದಿನಗೂಲಿಯಾಗಿ ಪಡೆದರು" ಎಂದು ತಿಳಿಸಿದರು.

"ನಮ್ಮ ಅತಿಥಿಗಳ ಅಸಹಾಯಕತೆಯ ಲಾಭ ಪಡೆಯುವುದು ತಪ್ಪು. ರಾಜಕುಮಾರಿಗೆ ಸಹಾಯ ಮಾಡಿದಕ್ಕೆ ನಮಗೆ ತುಂಬಾ ಸಂತೋಷವಾಗಿದೆ" ಎಂದು ಹೇಳುವ ಮೂಲಕ ಬುಡಕಟ್ಟು ಜನಾಂಗದವರು ಪ್ರಾಮಾಣಿಕತೆ ಮೆರೆದರು.

ಇದನ್ನೂ ಓದಿ: ಒಂದೇ ವರ್ಷದಲ್ಲಿ 175 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 15ರ ಬಾಲಕಿ! ಪುಟ್ಟ ಪೋರಿಯ ಸಂದರ್ಶನ ನಡೆಸಿದ ಡಿಸ್ನಿ

ಇದನ್ನೂ ಓದಿ: ತೃಪ್ತಿ ನೀಡದ ₹1 ಕೋಟಿ ಸಂಬಳದ ಅಮೆರಿಕ ಕೆಲಸ: UPSC ಪರೀಕ್ಷೆ ಬರೆದು 467ನೇ ರ‍್ಯಾಂಕ್ ಪಡೆದ ಯುವತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.