ETV Bharat / bharat

200 ಪೊಲೀಸರ ಕಣ್ಗಾವಲಿನಲ್ಲಿ 'ಬರಾತ್'​ ಮೆರವಣಿಗೆ ಮಾಡಿಕೊಂಡ ದಲಿತ ವರ! - DALIT GROOM BARAAT

ಕೆಲವೆಡೆ ಮೇಲು-ಕೀಳು ಜಾತಿ ಇನ್ನೂ ನಶಿಸಿಲ್ಲ. ಮೇಲ್ವರ್ಗದ ವಿರೋಧ ಶಂಕಿಸಿ ವಿವಾಹಕ್ಕೂ ಮೊದಲು ದಲಿತ ಯುವಕ ಪೊಲೀಸರ ಭದ್ರತೆ ಕೋರಿದ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಕಣ್ಗಾವಲಿನಲ್ಲಿ 'ಬರಾತ್'​ ಮೆರವಣಿಗೆ ಮಾಡಿಕೊಂಡ ದಲಿತ ವರ
ಪೊಲೀಸರ ಕಣ್ಗಾವಲಿನಲ್ಲಿ 'ಬರಾತ್'​ ಮೆರವಣಿಗೆ ಮಾಡಿಕೊಂಡ ದಲಿತ ವರ (ETV Bharat)
author img

By ETV Bharat Karnataka Team

Published : Jan 22, 2025, 1:30 PM IST

ಜೈಪುರ (ರಾಜಸ್ಥಾನ) : ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ದಲಿತ ಕುಟುಂಬದ ವರನೊಬ್ಬ 200 ಜನ ಪೊಲೀಸ್​ ಸಿಬ್ಬಂದಿಯ ಕಣ್ಗಾವಲಿನಲ್ಲಿ ಕುದುರೆ ಸವಾರಿ (ಬರಾತ್​) ಮೆರವಣಿಗೆ ಮಾಡಿಕೊಂಡ ಕುತೂಹಲಕಾರಿ ಘಟನೆ ರಾಜಸ್ಥಾನದಲ್ಲಿ ಮಂಗಳವಾರ ನಡೆದಿದೆ.

ವಿವಾಹ ಕಾರ್ಯಕ್ರಮಕ್ಕೂ ಮುನ್ನ ವರನನ್ನು ಮೆರವಣಿಗೆ ನಡೆಸುವ 'ಬಿಂದೋಲಿ' ಪದ್ಧತಿ ರಾಜಸ್ಥಾನದಲ್ಲಿದೆ. ಅದರಂತೆ ದಲಿತ ಕುಟುಂಬದ ಯುವಕ ತಾನೂ ಬರಾತ್​​ ಮೆರವಣಿಗೆ ನಡೆಸಲು ಬಯಸಿದ್ದ. ಆದರೆ, ಊರಿನ ಮೇಲ್ವರ್ಗದ ಜನರು ಇದಕ್ಕೆ ವಿರೋಧಿಸುವ ಭಯದಲ್ಲಿ ಪೊಲೀಸರ ರಕ್ಷಣೆ ಪಡೆದಿದ್ದಾನೆ.

Rajasthan: Dalit groom rides mare under huge police presence
ಮೆರವಣಿಗೆ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್​ ಫೋಟೋ ಹಿಡಿದಿರುವುದು (ETV Bharat)

ಏನಿದು ವಿಶೇಷ ಬರಾತ್​? ಇಲ್ಲಿನ ಖೋರ್ವಾಲ್‌ನ ಲಾವೆರಾ ಗ್ರಾಮದ ಅರುಣಾ ಎಂಬ ಯುವತಿಯನ್ನು ವಿಜಯ್ ರೇಗರ್ ಎಂಬುವರ ಜೊತೆ ವಿವಾಹ ನಡೆದಿದೆ. ಇದಕ್ಕೂ ಮೊದಲು ವರ, ವಧುವಿನ ಊರಿಗೆ ಕುದುರೆ ಸವಾರಿಯಲ್ಲಿ ತೆರಳುವ ಬಿಂದೋಲಿ ನಡೆಸಲು ಇಚ್ಛಿಸಿದ್ದ. ಆದರೆ, ಗ್ರಾಮದ ಮೇಲ್ಜಾತಿಯವರಿಂದ ಸಂಭಾವ್ಯ ವಿರೋಧ ನಿರೀಕ್ಷಿಸಿ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರು.

ಅದರಂತೆ ದಲಿತ ಯುವಕನ ವಿವಾಹ ಕಾರ್ಯಗಳಿಗೆ ಪೊಲೀಸ್​ ಇಲಾಖೆಯು 200 ಸಿಬ್ಬಂದಿಯನ್ನು ನಿಯೋಜಿಸಿತ್ತು. ಭದ್ರತೆ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಪತ್ರ ಕೂಡ ಬರೆಯಲಾಗಿತ್ತು.

ಮೆರವಣಿಗೆಗೆ ಭದ್ರತೆ ನೀಡಿದ ಪೊಲೀಸರು
ಮೆರವಣಿಗೆಗೆ ಭದ್ರತೆ ನೀಡಿದ ಪೊಲೀಸರು (ETV Bharat)

ಮೇಲ್ವರ್ಗದ ವಿರೋಧ ಶಂಕೆ : ಈ ಬಗ್ಗೆ ಮಾಹಿತಿ ನೀಡಿರುವ ಅಜ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ರಾಣಾ, ದಲಿತ ಕುಟುಂಬದ ಯುವಕ ಮದುವೆ ಮೆರವಣಿಗೆ ನಡೆಸಲು ಬಯಸಿದ್ದ. ಗ್ರಾಮದ ಇತರ ವರ್ಗಗಳಿಂದ ವಿರೋಧ ವ್ಯಕ್ತವಾಗುವ ಶಂಕೆಯಲ್ಲಿ ಆತ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ಭದ್ರತೆ ಕೋರಿದ್ದ. ಆಯೋಗದ ಸೂಚನೆ ಮೇರೆಗೆ 200 ಸಿಬ್ಬಂದಿಯನ್ನು ಬರಾತ್​ಗೆ ನಿಯೋಜಿಸಲಾಗಿದೆ ಎಂದರು.

Rajasthan: Dalit groom rides mare under huge police presence
ಪೊಲೀಸರ ಕಣ್ಗಾವಲು (ETV Bharat)

ಈ ಕುರಿತು ಗ್ರಾಮಸ್ಥರ ಜೊತೆಗೂ ಚರ್ಚೆ ನಡೆಸಲಾಗಿದೆ. ಜನರು ಕೂಡ ಸಹಕರಿಸುವ ಭರವಸೆ ನೀಡಿದ್ದರು. ವರನ ಮೆರವಣಿಗೆಯನ್ನು ಪೊಲೀಸ್ ರಕ್ಷಣೆಯಲ್ಲಿ ನಡೆಸಲಾಗಿದೆ. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.

Rajasthan: Dalit groom rides mare under huge police presence
ಮೆರವಣಿಗೆಗೆ ಭದ್ರತೆ ನೀಡಿದ ಪೊಲೀಸರು (ETV Bharat)

ವರನ ತಂದೆ ನಾರಾಯಣ್​ ಮಾತನಾಡಿ, ಈ ಹಿಂದೆ ನಮ್ಮ ಸಮುದಾಯದ ಯುವಕರ ವಿವಾಹ ಮೆರವಣಿಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಆದ್ದರಿಂದ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಾಯ ಕೋರಿದ್ದೆವು. ನಮ್ಮದು ವಿದ್ಯಾವಂತ ಕುಟುಂಬ ಎಂದು ತಿಳಿಸಿದರು.

ಯುವಕನ ವಿವಾಹ ಬರಾತ್​ನಲ್ಲಿ ಕುಟುಂಬಸ್ಥರು ಸದ್ದು ಮಾಡುವ ಡಿಜೆ ಮತ್ತು ಪಟಾಕಿಗಳನ್ನು ಬಳಸದೆ, ಪರಿಸರ ಸ್ನೇಹಿ ಕಾರ್ಯಕ್ರಮ ಜರುಗಿಸಿದೆ.

ಇದನ್ನೂ ಓದಿ: ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು!: ವಿಡಿಯೋ

ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ.. ಗಮನ ಸೆಳೆದ ವಿವಾಹ ಮೆರವಣಿಗೆ

ಜೈಪುರ (ರಾಜಸ್ಥಾನ) : ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ದಲಿತ ಕುಟುಂಬದ ವರನೊಬ್ಬ 200 ಜನ ಪೊಲೀಸ್​ ಸಿಬ್ಬಂದಿಯ ಕಣ್ಗಾವಲಿನಲ್ಲಿ ಕುದುರೆ ಸವಾರಿ (ಬರಾತ್​) ಮೆರವಣಿಗೆ ಮಾಡಿಕೊಂಡ ಕುತೂಹಲಕಾರಿ ಘಟನೆ ರಾಜಸ್ಥಾನದಲ್ಲಿ ಮಂಗಳವಾರ ನಡೆದಿದೆ.

ವಿವಾಹ ಕಾರ್ಯಕ್ರಮಕ್ಕೂ ಮುನ್ನ ವರನನ್ನು ಮೆರವಣಿಗೆ ನಡೆಸುವ 'ಬಿಂದೋಲಿ' ಪದ್ಧತಿ ರಾಜಸ್ಥಾನದಲ್ಲಿದೆ. ಅದರಂತೆ ದಲಿತ ಕುಟುಂಬದ ಯುವಕ ತಾನೂ ಬರಾತ್​​ ಮೆರವಣಿಗೆ ನಡೆಸಲು ಬಯಸಿದ್ದ. ಆದರೆ, ಊರಿನ ಮೇಲ್ವರ್ಗದ ಜನರು ಇದಕ್ಕೆ ವಿರೋಧಿಸುವ ಭಯದಲ್ಲಿ ಪೊಲೀಸರ ರಕ್ಷಣೆ ಪಡೆದಿದ್ದಾನೆ.

Rajasthan: Dalit groom rides mare under huge police presence
ಮೆರವಣಿಗೆ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್​ ಫೋಟೋ ಹಿಡಿದಿರುವುದು (ETV Bharat)

ಏನಿದು ವಿಶೇಷ ಬರಾತ್​? ಇಲ್ಲಿನ ಖೋರ್ವಾಲ್‌ನ ಲಾವೆರಾ ಗ್ರಾಮದ ಅರುಣಾ ಎಂಬ ಯುವತಿಯನ್ನು ವಿಜಯ್ ರೇಗರ್ ಎಂಬುವರ ಜೊತೆ ವಿವಾಹ ನಡೆದಿದೆ. ಇದಕ್ಕೂ ಮೊದಲು ವರ, ವಧುವಿನ ಊರಿಗೆ ಕುದುರೆ ಸವಾರಿಯಲ್ಲಿ ತೆರಳುವ ಬಿಂದೋಲಿ ನಡೆಸಲು ಇಚ್ಛಿಸಿದ್ದ. ಆದರೆ, ಗ್ರಾಮದ ಮೇಲ್ಜಾತಿಯವರಿಂದ ಸಂಭಾವ್ಯ ವಿರೋಧ ನಿರೀಕ್ಷಿಸಿ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರು.

ಅದರಂತೆ ದಲಿತ ಯುವಕನ ವಿವಾಹ ಕಾರ್ಯಗಳಿಗೆ ಪೊಲೀಸ್​ ಇಲಾಖೆಯು 200 ಸಿಬ್ಬಂದಿಯನ್ನು ನಿಯೋಜಿಸಿತ್ತು. ಭದ್ರತೆ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಪತ್ರ ಕೂಡ ಬರೆಯಲಾಗಿತ್ತು.

ಮೆರವಣಿಗೆಗೆ ಭದ್ರತೆ ನೀಡಿದ ಪೊಲೀಸರು
ಮೆರವಣಿಗೆಗೆ ಭದ್ರತೆ ನೀಡಿದ ಪೊಲೀಸರು (ETV Bharat)

ಮೇಲ್ವರ್ಗದ ವಿರೋಧ ಶಂಕೆ : ಈ ಬಗ್ಗೆ ಮಾಹಿತಿ ನೀಡಿರುವ ಅಜ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ರಾಣಾ, ದಲಿತ ಕುಟುಂಬದ ಯುವಕ ಮದುವೆ ಮೆರವಣಿಗೆ ನಡೆಸಲು ಬಯಸಿದ್ದ. ಗ್ರಾಮದ ಇತರ ವರ್ಗಗಳಿಂದ ವಿರೋಧ ವ್ಯಕ್ತವಾಗುವ ಶಂಕೆಯಲ್ಲಿ ಆತ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ಭದ್ರತೆ ಕೋರಿದ್ದ. ಆಯೋಗದ ಸೂಚನೆ ಮೇರೆಗೆ 200 ಸಿಬ್ಬಂದಿಯನ್ನು ಬರಾತ್​ಗೆ ನಿಯೋಜಿಸಲಾಗಿದೆ ಎಂದರು.

Rajasthan: Dalit groom rides mare under huge police presence
ಪೊಲೀಸರ ಕಣ್ಗಾವಲು (ETV Bharat)

ಈ ಕುರಿತು ಗ್ರಾಮಸ್ಥರ ಜೊತೆಗೂ ಚರ್ಚೆ ನಡೆಸಲಾಗಿದೆ. ಜನರು ಕೂಡ ಸಹಕರಿಸುವ ಭರವಸೆ ನೀಡಿದ್ದರು. ವರನ ಮೆರವಣಿಗೆಯನ್ನು ಪೊಲೀಸ್ ರಕ್ಷಣೆಯಲ್ಲಿ ನಡೆಸಲಾಗಿದೆ. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.

Rajasthan: Dalit groom rides mare under huge police presence
ಮೆರವಣಿಗೆಗೆ ಭದ್ರತೆ ನೀಡಿದ ಪೊಲೀಸರು (ETV Bharat)

ವರನ ತಂದೆ ನಾರಾಯಣ್​ ಮಾತನಾಡಿ, ಈ ಹಿಂದೆ ನಮ್ಮ ಸಮುದಾಯದ ಯುವಕರ ವಿವಾಹ ಮೆರವಣಿಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಆದ್ದರಿಂದ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಾಯ ಕೋರಿದ್ದೆವು. ನಮ್ಮದು ವಿದ್ಯಾವಂತ ಕುಟುಂಬ ಎಂದು ತಿಳಿಸಿದರು.

ಯುವಕನ ವಿವಾಹ ಬರಾತ್​ನಲ್ಲಿ ಕುಟುಂಬಸ್ಥರು ಸದ್ದು ಮಾಡುವ ಡಿಜೆ ಮತ್ತು ಪಟಾಕಿಗಳನ್ನು ಬಳಸದೆ, ಪರಿಸರ ಸ್ನೇಹಿ ಕಾರ್ಯಕ್ರಮ ಜರುಗಿಸಿದೆ.

ಇದನ್ನೂ ಓದಿ: ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು!: ವಿಡಿಯೋ

ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ.. ಗಮನ ಸೆಳೆದ ವಿವಾಹ ಮೆರವಣಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.