ETV Bharat / bharat

ಮುಖಾಮುಖಿ ಡಿಕ್ಕಿ ಹೊಡೆದ ಗೂಡ್ಸ್​ ರೈಲುಗಳು, ಎಂಜಿನ್​ಗಳು ನಜ್ಜುಗುಜ್ಜು, ಇಬ್ಬರು ಸಾವು - RAIL ACCIDENT

Rail Accident: ಝಾರ್ಖಂಡ್​ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ನಿಂತಿದ್ದ ರೈಲಿಗೆ ಮತ್ತೊಂದು ರೈಲು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

GOODS TRAIN COLLISION  RAIL ACCIDENT IN JHARKHAND  RAIL ACCIDENT UPDATE
ಮುಖಾಮುಖಿ ಡಿಕ್ಕಿ ಹೊಡೆದ ಗೂಡ್ಸ್​ ರೈಲುಗಳು (ETV Bharat)
author img

By ETV Bharat Karnataka Team

Published : April 1, 2025 at 10:11 AM IST

2 Min Read

ಸಾಹಿಬ್‌ಗಂಜ್ (ಝಾರ್ಖಂಡ್​): ಝಾರ್ಖಂಡ್​ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಸಾಹಿಬ್​ಗಂಜ್​ನ ಬರ್ಹೆತ್​ನ ಎನ್‌ಟಿಪಿಸಿ ಗೇಟ್ ಬಳಿ ಎರಡು ಸರಕು ರೈಲುಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಈ ಅಪಘಾತದಲ್ಲಿ ಕಾರ್ಮಿಕನೊಬ್ಬ ಕಾರ್ಮಿಕ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ರೈಲು ಎಂಜಿನ್​ಗಳು ಮುಖಾಮುಖಿ ಡಿಕ್ಕಿ: ಈ ಬಗ್ಗೆ ಮಾಹಿತಿ ನೀಡಿದ ಸಾಹಿಬ್‌ಗಂಜ್ ಪ್ರಧಾನ ಕಚೇರಿಯಿಂದ ಆಗಮಿಸಿದ ಅಗ್ನಿಶಾಮಕ ದಳದ ಕೆಲಸಗಾರ ರವಿ, ಈ ಘಟನೆ ಬೆಳಗಿನ ಜಾವ 3:30ಕ್ಕೆ ಸಂಭವಿಸಿದೆ. ಹಳಿ ಮೇಲೆ ಸರಕು ರೈಲು ನಿಂತಿತ್ತು. ಈ ಸಮಯದಲ್ಲಿ ಇನ್ನೊಂದು ಬದಿಯಿಂದ ಬರುತ್ತಿದ್ದ ಸರಕು ರೈಲು ಜೋರಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎಂಜಿನ್ ಮತ್ತು ಕಲ್ಲಿದ್ದಲು ತುಂಬಿದ ಬೋಗಿಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿಯನ್ನು ನಂದಿಸುವ ಕಾರ್ಯ ಮುಂದುವರೆದಿದೆ. ಈ ಅಪಘಾತದಲ್ಲಿ ಎರಡು ರೈಲು ಎಂಜಿನ್‌ಗಳು ಹಳಿತಪ್ಪಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ಹೇಳಿದರು.

GOODS TRAIN COLLISION  RAIL ACCIDENT IN JHARKHAND  RAIL ACCIDENT UPDATE
ಮುಖಾಮುಖಿ ಡಿಕ್ಕಿ ಹೊಡೆದ ಗೂಡ್ಸ್​ ರೈಲುಗಳು (ETV Bharat)

ಇಬ್ಬರು ಸಾವು, ನಾಲ್ವರಿಗೆ ಗಾಯ: ಎಂಜಿನ್‌ನಲ್ಲಿ ಏಳು ಜನರಿದ್ದರು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಕೆಲಸಗಾರನೊಬ್ಬ ಎಂಜಿನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ಗಾಯಾಳುಗಳನ್ನು ಬರ್ಹತ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

GOODS TRAIN COLLISION  RAIL ACCIDENT IN JHARKHAND  RAIL ACCIDENT UPDATE
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು (ETV Bharat)

ಅಪಘಾತದ ಮಾಹಿತಿ ಬಂದ ತಕ್ಷಣ ರೈಲ್ವೆ ಆಡಳಿತವು ಸ್ಥಳಕ್ಕೆ ತಲುಪಿತ್ತು. ಬರ್ಹತ್ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದು, ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆ ಈ ಹಿಂದೆಯೂ ಎನ್‌ಟಿಪಿಸಿಯ ರೈಲ್ವೆ ಹಳಿಯಲ್ಲಿ ನಡೆದಿರುವುದು ಗಮನಾರ್ಹ. ಇತ್ತೀಚೆಗೆ ಕೆಲವು ಅಪರಾಧಿಗಳು ಬಾಂಬ್ ಸ್ಫೋಟಿಸುವ ಮೂಲಕ ರೈಲ್ವೆ ಹಳಿಯನ್ನು ಸ್ಫೋಟಿಸಿದ್ದರು. ಆಗ ಕಲ್ಲಿದ್ದಲು ತುಂಬಿದ್ದ ರೈಲೊಂದು ಹಳಿ ತಪ್ಪಿತ್ತು.

ದುರಸ್ತಿ ಕಾರ್ಯಕ್ಕೆ ಮೂರು ದಿನ: ಇಂದು ಬೆಳಗಿನ ಜಾವ 3:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಪಘಾತದ ನಂತರ, ಸರಕು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದು, ಈ ಮಾರ್ಗವನ್ನು ಮುಚ್ಚಲಾಗಿದೆ. ಇದನ್ನು ಸರಿಪಡಿಸಲು 2 ರಿಂದ 3 ದಿನಗಳು ಬೇಕಾಗಬಹುದು. ಪ್ರಸ್ತುತ ರೈಲು ಮಾರ್ಗದ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ರೈಲ್ವೆ ಇಲಾಖೆ ಅಪಘಾತದ ತನಿಖೆ ನಡೆಸುತ್ತಿದೆ. ಎರಡೂ ರೈಲುಗಳು ಒಂದೇ ಹಳಿಯಲ್ಲಿ ಹೇಗೆ ಬಂದವು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ? ಅಪಘಾತದ ನಂತರ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು, ರೈಲ್ವೆ ನೌಕರರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಿದರು.

ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ: 3 ಮಕ್ಕಳು ಸೇರಿ 6 ಮಂದಿ ದುರ್ಮರಣ

ಸಾಹಿಬ್‌ಗಂಜ್ (ಝಾರ್ಖಂಡ್​): ಝಾರ್ಖಂಡ್​ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಸಾಹಿಬ್​ಗಂಜ್​ನ ಬರ್ಹೆತ್​ನ ಎನ್‌ಟಿಪಿಸಿ ಗೇಟ್ ಬಳಿ ಎರಡು ಸರಕು ರೈಲುಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಈ ಅಪಘಾತದಲ್ಲಿ ಕಾರ್ಮಿಕನೊಬ್ಬ ಕಾರ್ಮಿಕ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ರೈಲು ಎಂಜಿನ್​ಗಳು ಮುಖಾಮುಖಿ ಡಿಕ್ಕಿ: ಈ ಬಗ್ಗೆ ಮಾಹಿತಿ ನೀಡಿದ ಸಾಹಿಬ್‌ಗಂಜ್ ಪ್ರಧಾನ ಕಚೇರಿಯಿಂದ ಆಗಮಿಸಿದ ಅಗ್ನಿಶಾಮಕ ದಳದ ಕೆಲಸಗಾರ ರವಿ, ಈ ಘಟನೆ ಬೆಳಗಿನ ಜಾವ 3:30ಕ್ಕೆ ಸಂಭವಿಸಿದೆ. ಹಳಿ ಮೇಲೆ ಸರಕು ರೈಲು ನಿಂತಿತ್ತು. ಈ ಸಮಯದಲ್ಲಿ ಇನ್ನೊಂದು ಬದಿಯಿಂದ ಬರುತ್ತಿದ್ದ ಸರಕು ರೈಲು ಜೋರಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎಂಜಿನ್ ಮತ್ತು ಕಲ್ಲಿದ್ದಲು ತುಂಬಿದ ಬೋಗಿಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿಯನ್ನು ನಂದಿಸುವ ಕಾರ್ಯ ಮುಂದುವರೆದಿದೆ. ಈ ಅಪಘಾತದಲ್ಲಿ ಎರಡು ರೈಲು ಎಂಜಿನ್‌ಗಳು ಹಳಿತಪ್ಪಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ಹೇಳಿದರು.

GOODS TRAIN COLLISION  RAIL ACCIDENT IN JHARKHAND  RAIL ACCIDENT UPDATE
ಮುಖಾಮುಖಿ ಡಿಕ್ಕಿ ಹೊಡೆದ ಗೂಡ್ಸ್​ ರೈಲುಗಳು (ETV Bharat)

ಇಬ್ಬರು ಸಾವು, ನಾಲ್ವರಿಗೆ ಗಾಯ: ಎಂಜಿನ್‌ನಲ್ಲಿ ಏಳು ಜನರಿದ್ದರು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಕೆಲಸಗಾರನೊಬ್ಬ ಎಂಜಿನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ಗಾಯಾಳುಗಳನ್ನು ಬರ್ಹತ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

GOODS TRAIN COLLISION  RAIL ACCIDENT IN JHARKHAND  RAIL ACCIDENT UPDATE
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು (ETV Bharat)

ಅಪಘಾತದ ಮಾಹಿತಿ ಬಂದ ತಕ್ಷಣ ರೈಲ್ವೆ ಆಡಳಿತವು ಸ್ಥಳಕ್ಕೆ ತಲುಪಿತ್ತು. ಬರ್ಹತ್ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದು, ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆ ಈ ಹಿಂದೆಯೂ ಎನ್‌ಟಿಪಿಸಿಯ ರೈಲ್ವೆ ಹಳಿಯಲ್ಲಿ ನಡೆದಿರುವುದು ಗಮನಾರ್ಹ. ಇತ್ತೀಚೆಗೆ ಕೆಲವು ಅಪರಾಧಿಗಳು ಬಾಂಬ್ ಸ್ಫೋಟಿಸುವ ಮೂಲಕ ರೈಲ್ವೆ ಹಳಿಯನ್ನು ಸ್ಫೋಟಿಸಿದ್ದರು. ಆಗ ಕಲ್ಲಿದ್ದಲು ತುಂಬಿದ್ದ ರೈಲೊಂದು ಹಳಿ ತಪ್ಪಿತ್ತು.

ದುರಸ್ತಿ ಕಾರ್ಯಕ್ಕೆ ಮೂರು ದಿನ: ಇಂದು ಬೆಳಗಿನ ಜಾವ 3:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಪಘಾತದ ನಂತರ, ಸರಕು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದು, ಈ ಮಾರ್ಗವನ್ನು ಮುಚ್ಚಲಾಗಿದೆ. ಇದನ್ನು ಸರಿಪಡಿಸಲು 2 ರಿಂದ 3 ದಿನಗಳು ಬೇಕಾಗಬಹುದು. ಪ್ರಸ್ತುತ ರೈಲು ಮಾರ್ಗದ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ರೈಲ್ವೆ ಇಲಾಖೆ ಅಪಘಾತದ ತನಿಖೆ ನಡೆಸುತ್ತಿದೆ. ಎರಡೂ ರೈಲುಗಳು ಒಂದೇ ಹಳಿಯಲ್ಲಿ ಹೇಗೆ ಬಂದವು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ? ಅಪಘಾತದ ನಂತರ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು, ರೈಲ್ವೆ ನೌಕರರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಿದರು.

ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ: 3 ಮಕ್ಕಳು ಸೇರಿ 6 ಮಂದಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.