ಮಧುಬನಿ (ಬಿಹಾರ): "ಇಂದು ಬಿಹಾರದ ಈ ಮಣ್ಣಿನಲ್ಲಿ ನಿಂತು ಇಡೀ ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸಲಿದೆ. ಭಾರತದ ಚೈತನ್ಯವು ಭಯೋತ್ಪಾದನೆಗೆ ಎಂದಿಗೂ ಅಂಜುವುದಿಲ್ಲ. ಭಯೋತ್ಪಾದನೆಗೆ ಶಿಕ್ಷೆಯಾಗದೆ ಬಿಡುವುದಿಲ್ಲ. ಈ ದೇಶದ ಜನರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ, ಇಡೀ ದೇಶವು ಈ ನಿರ್ಣಯದಲ್ಲಿ ದೃಢವಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯು ನಮ್ಮೊಂದಿಗಿದ್ದಾನೆ. ಈ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿರುವ ವಿವಿಧ ದೇಶಗಳ ಜನರು ಮತ್ತು ನಾಯಕರಿಗೆ ನಾನು ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ"... ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಪರಿ ಇದು...
ಬಿಹಾರದ ಮಧುಬನಿಯಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ, ಯಾರೋ ಒಬ್ಬರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ, ಯಾರೋ ಒಬ್ಬರು ತಮ್ಮ ಸಹೋದರನನ್ನು ಕಳೆದುಕೊಂಡಿದ್ದಾರೆ, ಯಾರೋ ಒಬ್ಬರು ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ಬಂಗಾಳಿ, ಕೆಲವರು ಕನ್ನಡಿಗರು, ಕೆಲವರು ಮರಾಠಿಗರು, ಕೆಲವರು ಒಡಿಯಾ, ಕೆಲವರು ಗುಜರಾತಿ, ಕೆಲವರು ಬಿಹಾರದವರು ಇದ್ದಾರೆ. ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬದವರ ದುಃಖ ನಮ್ಮ ದುಃಖವಾಗಿದೆ. ಕಾರ್ಗಿಲ್ನಿಂದ ಕನ್ಯಾಕುಮಾರಿಯವರೆಗೆ ನಮ್ಮೆಲ್ಲರ ಕೋಪ ಒಂದೇ ಆಗಿದೆ. ಈ ದಾಳಿ ನಿರಾಯುಧ ಪ್ರವಾಸಿಗರ ಮೇಲೆ ಮಾತ್ರ ನಡೆದಿಲ್ಲ, ದೇಶದ ಶತ್ರುಗಳು ಭಾರತದ ಆತ್ಮದ ಮೇಲೂ ದಾಳಿಯ ದುಸ್ಸಾಹಸದ ಧೈರ್ಯ ಮಾಡಿದ್ದಾರೆ. ಈ ದಾಳಿಯನ್ನು ನಡೆಸಿದ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸಲಾಗದಷ್ಟು ದೊಡ್ಡ ಶಿಕ್ಷೆಯನ್ನು ನೀಡಲಾಗುವುದು" ಎಂದು ಪ್ರಧಾನಿ ಮೋದಿ ಉಗ್ರರಿಗೆ ಖಡಕ್ ಎಚ್ಚರಿಕೆ ರವಾನಿಸಿದರು.
’𝐈𝐧𝐝𝐢𝐚 𝐰𝐢𝐥𝐥 𝐢𝐝𝐞𝐧𝐭𝐢𝐟𝐲, 𝐭𝐫𝐚𝐜𝐤, 𝐚𝐧𝐝 𝐩𝐮𝐧𝐢𝐬𝐡 𝐞𝐯𝐞𝐫𝐲 𝐭𝐞𝐫𝐫𝐨𝐫𝐢𝐬𝐭 𝐚𝐧𝐝 𝐭𝐡𝐞𝐢𝐫 𝐛𝐚𝐜𝐤𝐞𝐫𝐬...’ pic.twitter.com/hEtWW3Yez7
— BJP (@BJP4India) April 24, 2025
#WATCH | On Pahalgam terror attack, PM Modi says, " today, on the soil of bihar, i say to the whole world, india will identify, trace and punish every terrorist and their backers. we will pursue them to the ends of the earth. india's spirit will never be broken by terrorism.… pic.twitter.com/8SPHOAJIi2
— ANI (@ANI) April 24, 2025
#WATCH | #PahalgamTerrorAttack | Addressing a public meeting in Bihar's Madhubani, Prime Minister Narendra Modi says, " on april 22, terrorists killed innocent people of the country in j&k's pahalgam... the country is sad and in pain after this incident. we stand with the families… pic.twitter.com/rlmr44lSnY
— ANI (@ANI) April 24, 2025
"ಈಗ ಭಯೋತ್ಪಾದಕರ ಉಳಿದ ಭೂಮಿಯನ್ನು ನಾಶಮಾಡುವ ಸಮಯ ಬಂದಿದೆ. 140 ಕೋಟಿ ಭಾರತೀಯರೆಲ್ಲರೂ ಒಗ್ಗಟ್ಟಿನಲ್ಲಿ ಬಂದರೆ ಉಗ್ರರ ಸೊಂಟ ಮುರುಯುವುದು ಕಷ್ಟವಲ್ಲ, ಈ ಭೂಮಿಯಿಂದಲೇ ಅವರನ್ನು ಹೊರಗಟ್ಟಬಹುದು. ಭಯೋತ್ಪಾದನೆ ಎದುರು ಭಾರತ ಎಂದೂ ತಲೆ ಬಾಗುವುದಿಲ್ಲ. ಭಾರತದಿಂದ ಭಯೋತ್ಪಾದನೆ ತೊಲಗಿಸುವವರೆಗೂ ವಿರಮಿಸುವುದಿಲ್ಲ. ನಿರೀಕ್ಷೆಯೇ ಮಾಡಿರದ ಸಾವು ಆ ಉಗ್ರರಿಗೆ ಬರಲಿದೆ'' ಎಂದು ಆಕ್ರೋಶಭರಿತರಾಗಿ ನುಡಿದರು.
#WATCH | On #PahalgamTerroristAttack, PM Modi says, " i want to say in very clear words that these terrorists and those who conspired towards this attack will get a punishment bigger than they can imagine..."
— ANI (@ANI) April 24, 2025
"the entire nation is saddened by the brutality with which terrorists… pic.twitter.com/s7tmCIaHUj
ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಕ್ಕೂ ಮುನ್ನ ಎರಡು ನಿಮಿಷ ಮೌನಾಚರಿಸುವ ಮೂಲಕ ಮೃತರಿಗೆ ಗೌರವ ಸಲ್ಲಿಸಿದರು.
#WATCH | Prime Minister Narendra Modi strongly criticised the Pahalgam terror attack while addressing a public meeting in Bihar's Madhubani
— ANI (@ANI) April 24, 2025
He says, " today, on the soil of bihar, i say to the whole world, india will identify, trace and punish every terrorist and their backers.… pic.twitter.com/216kBwOryv
ಇದನ್ನೂ ಓದಿ: ಉಗ್ರರ ಸದೆಬಡೆಯುವಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ: ಸಿಎಂ ಸಿದ್ದರಾಮಯ್ಯ - PAHALGAM TERROR ATTACK