ETV Bharat / bharat

ಪ್ರಿಯಕರನ ಜೊತೆ ಸೇರಿ ಪತಿ ಕೊಂದು ಜೈಲು ಸೇರಿರುವ ಹಂತಕಿ 6 ವಾರಗಳ ಗರ್ಭಿಣಿ : ಡಿಎನ್​​​ಎ ಪರೀಕ್ಷೆಗೆ ಕುಟುಂಬಸ್ಥರ ಆಗ್ರಹ - MEERUT MURDER CASE

ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಮಸಣಕ್ಕೆ ಸೇರಿಸಿದ್ದ ಮೀರತ್​ನ ಮುಸ್ಕಾನ್​ ಗರ್ಭಿಣಿ ಆಗಿದ್ದಾಳೆ. ಎರಡು ದಿನಗಳ ಹಿಂದೆ ಆಕೆಯನ್ನು ಪರೀಕ್ಷೆಗೊಳಪಡಿಸಿದಾಗ ಈ ವಿಚಾರ ಖಚಿತವಾಗಿದೆ. ಸದ್ಯ ಭ್ರೂಣದಲ್ಲಿ ಬೆಳೆಯುತ್ತಿರುವ ಶಿಶು ಯಾರದ್ದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಪತಿ ಕೊಂದು ಜೈಲು ಸೇರಿರುವ ಹಂತಕಿ 6 ವಾರಗಳ ಗರ್ಭಿಣಿ
ಪತಿ ಕೊಂದು ಜೈಲು ಸೇರಿರುವ ಹಂತಕಿ 6 ವಾರಗಳ ಗರ್ಭಿಣಿ (ETV Bharat)
author img

By ETV Bharat Karnataka Team

Published : April 13, 2025 at 5:24 PM IST

2 Min Read

ಮೀರತ್​ (ಉತ್ತರ ಪ್ರದೇಶ ) : ಕಳೆದ ಮಾರ್ಚ್​ ತಿಂಗಳಲ್ಲಿ ತನ್ನ ಪ್ರಿಯಕರನೊಂದಿಗೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಭೀಕರವಾಗಿ ಕೊಂದು ಸುದ್ದಿಯಾಗಿದ್ದ ಮಹಿಳೆ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾಳೆ.

ಈಗಾಗಲೇ ಜೈಲಿನ ಕಂಬಿ ಎಣಿಸುತ್ತಿರುವ ಮುಸ್ಕಾನ್​ 50 ದಿನದ ಗರ್ಭಿಣಿ ಎಂದು ವರದಿಯಾಗಿದ್ದು, ಈ ಕುರಿತಂತೆ ಡಿಎನ್​ಎ ಪರೀಕ್ಷೆ ನಡೆಸಬೇಕೆಂದು ಮೃತ ಸೌರಭ್​ ರಜಪುತ್​ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಪತಿ ಕೊಂದು ಜೈಲು ಸೇರಿರುವ ಮುಸ್ಕಾನ್
ಪತಿ ಕೊಂದು ಜೈಲು ಸೇರಿರುವ ಮುಸ್ಕಾನ್ (ETV Bharat)

ಮೀರತ್​ ಪೊಲೀಸ್​ ಸಿಬ್ಬಂದಿ ಆರೋಪಿ ಮುಸ್ಕಾಳನನ್ನು ಏಪ್ರಿಲ್​ 11 ರಂದು ಅಲ್ಟ್ರಾಸೌಂಡ್​ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಮುಸ್ಕಾನ್​ ಆರು ವಾರಗಳ ಗರ್ಭಿಣಿ ಅನ್ನೋದು ತಿಳಿದಿದೆ. ಅಂದಿನಿಂದ ಮುಸ್ಕಾನ್​ ಗೆ ಬಂಧಿಖಾನೆಯಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ.

ಈ ಮುಂಚೆಯೇ ಮುಸ್ಕಾನ್​ ಗೆ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆ ವೇಳೆ ಗರ್ಭ ಧರಿಸಿರುವ ಸಾಧ್ಯತೆ ಬಗ್ಗೆ ಗೊತ್ತಾಗಿತ್ತು. ಈಗ ಅಲ್ಟ್ರಾಸೌಂಡ್​ ಸ್ಕ್ಯಾನಿಂಗ್​ ಮುಖಾಂತರ ಮುಸ್ಕಾನ್​ ಗರ್ಭಿಣಿ ಅನ್ನೋದು ಖಚಿತವಾಗಿದೆ ಎಂದು ಜೈಲಿನ ಹಿರಿಯ ಸೂಪರಿಂಡೆಂಟ್​ ವಿರೇಶ್​ ರಾಜ್​ ಶರ್ಮಾ ತಿಳಿಸಿದ್ದಾರೆ.

ಕೊಲೆ ಪ್ರಕರಣ ಹಿನ್ನೆಲೆ: ಕಳೆದ ಮಾರ್ಚ್ 4 ರಂದು ತನ್ನ ಪ್ರಿಯಕರ ಸಾಹಿಲ್​ ಜೊತೆ ಪತಿಯನ್ನು ಕೊಂದು ಬಳಿಕ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್​ ಡ್ರಮ್​ನಲ್ಲಿರಿಸಿ್ದ್ದರು. ಬಳಿಕ ಅದರ ಮೇಲೆ ಸಿಮೆಂಟ್​ ಹಾಕಿ ಮುಚ್ಚಿ ಇಬ್ಬರು ಬೇರೆಡೆಗೆ ತೆರಳಿದ್ದರು. ಮಾರ್ಚ್ 18 ರಂದು ಪೊಲೀಸರ ಗಮನಕ್ಕೆ ಈ ವಿಚಾರ ತಿಳಿದಿತ್ತು. ಮಾರ್ಚ್​ 19 ರಂದು ಮುಸ್ಕಾನ್​ ಮತ್ತು ಸಾಹಿಲ್​ ನನ್ನು ಪೊಲೀಸರು ಬಂಧಿಸಿದ್ದರು.

ಸೌರಭ್​ ರಜಪುತ್, ಪ್ರಿಯಕರ ಸಾಹಿಲ್, ಮುಸ್ಕಾನ್  (ಎಡದಿಣದ ಬಲಕ್ಕೆ )
ಸೌರಭ್​ ರಜಪುತ್, ಪ್ರಿಯಕರ ಸಾಹಿಲ್, ಮುಸ್ಕಾನ್ (ಎಡದಿಣದ ಬಲಕ್ಕೆ ) (ETV Bharat)

ಈ ಕುರಿತು ಕೊಲೆಗೀಡಾದ ಸೌರಭ್​ ಅವರ ಸಹೋದರ ರಾಹುಲ್​ ರಜಪುತ್​ ಪ್ರತಿಕ್ರಿಯಿಸಿದ್ದು, ತಮ್ಮ ಮಾಜಿ ಅತ್ತಿಗೆ ಗರ್ಭಿಣಿಯಾಗಿದ್ದು, ಡಿಎನ್​ಎ ಪರೀಕ್ಷೆ ಮೂಲಕ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ತಂದೆ ಯಾರು ಅನ್ನೋದು ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ. ಆ ಮಗು ಕೊಲೆ ಆರೋಪಿ ಸಾಹಿಲ್​ ನದ್ದು ಎಂದಾದರೆ ಅದಕ್ಕು ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಮೀರತ್ ವೈದ್ಯಕೀಯ ಕಾಲೇಜಿಗೆ ಕರೆತಂದಾಗ ಮುಸ್ಕಾನ್​ ಮುಖವನ್ನು ಕೆಂಪು ಸ್ಕಾರ್ಪ್​ಅನ್ನು ಮುಖಕ್ಕೆ ಸುತ್ತಿಕೊಂಡಿದ್ದಳು. ಪೊಲೀಸ್​ ವ್ಯಾನ್​ ನಲ್ಲಿ ಕರೆತಂದಾಗ ಅಲ್ಲಿ ಜನಸಂದಣಿ ಇತ್ತು. ಮುಸ್ಕಾನ್​ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸಾಹಿಲ್​ ಗೆ ಸೇರಿದ್ದಾ ಅಥವಾ ಮೃತ ಸೌರಭ್ ರಜಪುತ್​ ಅವರಿಗೆ ಸಂಬಂಧಿಸಿದ್ದಾ ಎಂಬುದು ಕುತೂಹಲ ಮೂಡಿಸಿದ್ದು ಎಲ್ಲದಕ್ಕೂ ಡಿಎನ್​ಎ ಪರೀಕ್ಷೆಯಲ್ಲಿ ಉತ್ತರ ಸಿಗಲಿದೆ. ​

ಇದನ್ನೂ ಓದಿ : ಮೀರತ್ ಕೊಲೆ ಪ್ರಕರಣ : ಮುಸ್ಕಾನ್​ಳ ವಿವಾಹೇತರ ಸಂಬಂಧ ಸೌರಭ್‌ಗೆ ತಿಳಿದಿತ್ತು - ಕುಟುಂಬಸ್ಥರ ಆರೋಪ

ಮೀರತ್​ (ಉತ್ತರ ಪ್ರದೇಶ ) : ಕಳೆದ ಮಾರ್ಚ್​ ತಿಂಗಳಲ್ಲಿ ತನ್ನ ಪ್ರಿಯಕರನೊಂದಿಗೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಭೀಕರವಾಗಿ ಕೊಂದು ಸುದ್ದಿಯಾಗಿದ್ದ ಮಹಿಳೆ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾಳೆ.

ಈಗಾಗಲೇ ಜೈಲಿನ ಕಂಬಿ ಎಣಿಸುತ್ತಿರುವ ಮುಸ್ಕಾನ್​ 50 ದಿನದ ಗರ್ಭಿಣಿ ಎಂದು ವರದಿಯಾಗಿದ್ದು, ಈ ಕುರಿತಂತೆ ಡಿಎನ್​ಎ ಪರೀಕ್ಷೆ ನಡೆಸಬೇಕೆಂದು ಮೃತ ಸೌರಭ್​ ರಜಪುತ್​ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಪತಿ ಕೊಂದು ಜೈಲು ಸೇರಿರುವ ಮುಸ್ಕಾನ್
ಪತಿ ಕೊಂದು ಜೈಲು ಸೇರಿರುವ ಮುಸ್ಕಾನ್ (ETV Bharat)

ಮೀರತ್​ ಪೊಲೀಸ್​ ಸಿಬ್ಬಂದಿ ಆರೋಪಿ ಮುಸ್ಕಾಳನನ್ನು ಏಪ್ರಿಲ್​ 11 ರಂದು ಅಲ್ಟ್ರಾಸೌಂಡ್​ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಮುಸ್ಕಾನ್​ ಆರು ವಾರಗಳ ಗರ್ಭಿಣಿ ಅನ್ನೋದು ತಿಳಿದಿದೆ. ಅಂದಿನಿಂದ ಮುಸ್ಕಾನ್​ ಗೆ ಬಂಧಿಖಾನೆಯಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ.

ಈ ಮುಂಚೆಯೇ ಮುಸ್ಕಾನ್​ ಗೆ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆ ವೇಳೆ ಗರ್ಭ ಧರಿಸಿರುವ ಸಾಧ್ಯತೆ ಬಗ್ಗೆ ಗೊತ್ತಾಗಿತ್ತು. ಈಗ ಅಲ್ಟ್ರಾಸೌಂಡ್​ ಸ್ಕ್ಯಾನಿಂಗ್​ ಮುಖಾಂತರ ಮುಸ್ಕಾನ್​ ಗರ್ಭಿಣಿ ಅನ್ನೋದು ಖಚಿತವಾಗಿದೆ ಎಂದು ಜೈಲಿನ ಹಿರಿಯ ಸೂಪರಿಂಡೆಂಟ್​ ವಿರೇಶ್​ ರಾಜ್​ ಶರ್ಮಾ ತಿಳಿಸಿದ್ದಾರೆ.

ಕೊಲೆ ಪ್ರಕರಣ ಹಿನ್ನೆಲೆ: ಕಳೆದ ಮಾರ್ಚ್ 4 ರಂದು ತನ್ನ ಪ್ರಿಯಕರ ಸಾಹಿಲ್​ ಜೊತೆ ಪತಿಯನ್ನು ಕೊಂದು ಬಳಿಕ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್​ ಡ್ರಮ್​ನಲ್ಲಿರಿಸಿ್ದ್ದರು. ಬಳಿಕ ಅದರ ಮೇಲೆ ಸಿಮೆಂಟ್​ ಹಾಕಿ ಮುಚ್ಚಿ ಇಬ್ಬರು ಬೇರೆಡೆಗೆ ತೆರಳಿದ್ದರು. ಮಾರ್ಚ್ 18 ರಂದು ಪೊಲೀಸರ ಗಮನಕ್ಕೆ ಈ ವಿಚಾರ ತಿಳಿದಿತ್ತು. ಮಾರ್ಚ್​ 19 ರಂದು ಮುಸ್ಕಾನ್​ ಮತ್ತು ಸಾಹಿಲ್​ ನನ್ನು ಪೊಲೀಸರು ಬಂಧಿಸಿದ್ದರು.

ಸೌರಭ್​ ರಜಪುತ್, ಪ್ರಿಯಕರ ಸಾಹಿಲ್, ಮುಸ್ಕಾನ್  (ಎಡದಿಣದ ಬಲಕ್ಕೆ )
ಸೌರಭ್​ ರಜಪುತ್, ಪ್ರಿಯಕರ ಸಾಹಿಲ್, ಮುಸ್ಕಾನ್ (ಎಡದಿಣದ ಬಲಕ್ಕೆ ) (ETV Bharat)

ಈ ಕುರಿತು ಕೊಲೆಗೀಡಾದ ಸೌರಭ್​ ಅವರ ಸಹೋದರ ರಾಹುಲ್​ ರಜಪುತ್​ ಪ್ರತಿಕ್ರಿಯಿಸಿದ್ದು, ತಮ್ಮ ಮಾಜಿ ಅತ್ತಿಗೆ ಗರ್ಭಿಣಿಯಾಗಿದ್ದು, ಡಿಎನ್​ಎ ಪರೀಕ್ಷೆ ಮೂಲಕ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ತಂದೆ ಯಾರು ಅನ್ನೋದು ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ. ಆ ಮಗು ಕೊಲೆ ಆರೋಪಿ ಸಾಹಿಲ್​ ನದ್ದು ಎಂದಾದರೆ ಅದಕ್ಕು ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಮೀರತ್ ವೈದ್ಯಕೀಯ ಕಾಲೇಜಿಗೆ ಕರೆತಂದಾಗ ಮುಸ್ಕಾನ್​ ಮುಖವನ್ನು ಕೆಂಪು ಸ್ಕಾರ್ಪ್​ಅನ್ನು ಮುಖಕ್ಕೆ ಸುತ್ತಿಕೊಂಡಿದ್ದಳು. ಪೊಲೀಸ್​ ವ್ಯಾನ್​ ನಲ್ಲಿ ಕರೆತಂದಾಗ ಅಲ್ಲಿ ಜನಸಂದಣಿ ಇತ್ತು. ಮುಸ್ಕಾನ್​ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸಾಹಿಲ್​ ಗೆ ಸೇರಿದ್ದಾ ಅಥವಾ ಮೃತ ಸೌರಭ್ ರಜಪುತ್​ ಅವರಿಗೆ ಸಂಬಂಧಿಸಿದ್ದಾ ಎಂಬುದು ಕುತೂಹಲ ಮೂಡಿಸಿದ್ದು ಎಲ್ಲದಕ್ಕೂ ಡಿಎನ್​ಎ ಪರೀಕ್ಷೆಯಲ್ಲಿ ಉತ್ತರ ಸಿಗಲಿದೆ. ​

ಇದನ್ನೂ ಓದಿ : ಮೀರತ್ ಕೊಲೆ ಪ್ರಕರಣ : ಮುಸ್ಕಾನ್​ಳ ವಿವಾಹೇತರ ಸಂಬಂಧ ಸೌರಭ್‌ಗೆ ತಿಳಿದಿತ್ತು - ಕುಟುಂಬಸ್ಥರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.