ETV Bharat / bharat

ಯುನೆಸ್ಕೋ ಪರಂಪರೆಯ ಪಟ್ಟಿಯಲ್ಲಿ ಮುದುಮಲ್​ ಮೆಗಾಲಿಥಿಕ್​ ಕಂಬಗಳು: ಏನು ಇವುಗಳ ವಿಶೇಷತೆ? - MUDUMAL MEGALITHIC PILLARS

ಪ್ರಾಚೀನ ಕಾಲದಲ್ಲಿ ಖಗೋಳದ ಘಟನೆಗಳ ವೀಕ್ಷಣೆಗಾಗಿ ಈ ಕಂಬಗಳನ್ನು ನೇಮಿಸಲಾಗಿದ್ದು, ಇದೀಗ ಇತಿಹಾಸದ ಕುರುಹುಗಳಾಗಿ ಉಳಿದುಕೊಂಡಿದೆ.

mudumal-megalithic-pillars-nominated-for-unesco-recognition
ಮುದುಮಲ್​ ಮೆಗಾಲಿಥಿಕ್​ ಕಂಬಗಳು (ಈಟಿವಿ ಭಾರತ್​)
author img

By ETV Bharat Karnataka Team

Published : March 15, 2025 at 1:11 PM IST

2 Min Read

ನಾರಾಯಣಪೇಟೆ: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲದ ಕೃಷ್ಣಾ ನದಿಯ ದಡದಲ್ಲಿರುವ ಪ್ರಾಚೀನ ಮುದುಮಲ್ ಮೆಗಾಲಿಥಿಕ್ ಕಂಬಗಳು ಪರಿಗಣಿಸುವಂತೆ ಭಾರತ ಪ್ರಸ್ತಾಪ ಸಲ್ಲಿಸಿದೆ. ಭಾರತದ ಆರು ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾರ್ಚ್​ 7ರಂದು ಮನವಿ ಸಲ್ಲಿಸಲಾಗಿದೆ.

ನಾರಾಯಣಪೇಟೆಯ ಈ ಮುದುಮಲ್​ ಮೆಗಾಲಿಥಿಕಲ್​ ಕಂಬಗಳು ನಿಗೂಢ ಕಲ್ಲಿನ ರಚನೆಯಾಗಿದ್ದು, ಇದನ್ನು ಖಗೋಳ ವಿಜ್ಞಾನದ ಅವಶೇಷಗಳು ಎಂದು ನಂಬಲಾಗಿದೆ.

ಯುನೆಸ್ಕೋ ಮಾನ್ಯತೆ ಭಾರತ ಪ್ರಸ್ತಾಪಿಸಿರುವ ಭಾರತದ ಆರು ತಾಣಗಳಿವು:

ಮುದುಮಲ್​ ಮೆಗಾಲಿಥಿಕಲ್​ ಕಂಬದ ಹೊರತಾಗಿ ಐದು ತಾಣಗಳನ್ನು ಕೂಡ ಪಾರಂಪರಿಕೆ ಪಟ್ಟಿಗೆ ಸೇರಿಸುವಂತೆ ಪ್ರಸ್ತಾಪಿಸಲಾಗಿದೆ. ಅವುಗಳೆಂದರೆ,

  • ಛತ್ತೀಸ್​ಗಢದ ಕಂಗೆರ್​ ಕಣಿವೆ ರಾಷ್ಟ್ರೀಯ ಉದ್ಯಾನವನ
  • ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಎರ್ರಗುಡಿಯಲ್ಲಿನ ಅಶೋಕನ ಕಲ್ಲಿನ ಶಾಸನಗಳು
  • ಮಧ್ಯಪ್ರದೇಶ, ಒಡಿಶಾದ ಚೌಸತ್ ಯೋಗಿನಿ ದೇವಾಲಯಗಳ ಸರಣಿ
  • ಉತ್ತರ ಭಾರತದಲ್ಲಿ ಗುಪ್ತರ ಕಾಲದ ದೇಗುಲಗಳು
  • ಮಧ್ಯಪ್ರದೇಶ, ಉತ್ತರ ಪ್ರದೇಶದ ಬುಂದೇಲರ ಅರಮನೆ- ಕೋಟೆಗಳು.

ಈ ಆರು ತಾಣಗಳನ್ನು ಯುನೆಸ್ಕೋ ಪರಿಗಣಿಸಿದಲ್ಲಿ ಭಾರತದಲ್ಲಿ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ತಾಣಗಳ ಪಟ್ಟಿ ಸಂಖ್ಯೆ 56ಕ್ಕೆ ಏರಲಿದೆ.

ಪ್ರಾಚೀನ ಖಗೋಳ ವೀಕ್ಷಣಾಲಯ: ಈ ಮುದಮಲ್​ ಕಂಬಳನ್ನು ಮೊದಲ ಬಾರಿಗೆ ಹೈದರಾಬಾದ್ ಸೆಂಟ್ರಲ್​ ಯುನಿವರ್ಸಿಟಿಯ ಪ್ರೊ ಕೆ.ಪಿ ರಾವ್​ ಪತ್ತೆ ಮಾಡಿದರು. ಇವುಗಳನ್ನು ಮೆಗಾಲಿಥಿಕ್​ ಮೆನ್ಹಿರ್ಸ್​ (ಕಲ್ಲಿನ ಬೆಂಚು ರೀತಿ ಜೋಡಣೆ) ಎಂದು ಗುರುತಿಸಿದರು. ಇವು 5000 ವರ್ಷದ ಹಳೆವುಗಳಾಗಿವೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಹಿಂದಿನ ಕಾಲದಲ್ಲಿ ಖಗೋಳಶಾಸ್ತ್ರಜ್ಞರು ಖಗೋಳದ ಘಟನೆಗಳ ವೀಕ್ಷಣೆಗಳನ್ನು ಅಧ್ಯಯನಕ್ಕೆ ಬಳಕೆ ಮಾಡುತ್ತಿದ್ದರು ಎಂದು ನಂಬಲಾಗಿದೆ. ಈ ಕಂಬಗಳು ಸೂರ್ಯನ ಚಲನೆ ಮತ್ತು ಋತುಮಾನದ ಲೆಕ್ಕಾಚಾರ, ದಿಕ್ಕುಗಳು ಮತ್ತು ಹವಾಮಾನ ಪರಿಸ್ಥಿತಿ ಪತ್ತೆಗೆ ವ್ಯವಸ್ಥೆ ಮಾಡಲು ಈ ಕಂಬಗಳನ್ನು ಜೋಡಿಸಲಾಗಿತ್ತು.

  • ಈ ತಾಣದಲ್ಲಿ ಮೂಲ 100 ಕಂಬಗಳು ಇದ್ದು, ಇವು 10 ರಿಂದ 14 ಅಡಿ ಎತ್ತರವಿದೆ.
  • ನೈಸರ್ಗಿಕ ಘಟನೆ ಮತ್ತು ಮಾನವ ಚಟವಟಿಕೆಗಳಿಂದ ಇಂದು, ಕೇವಲ ಬೆರಳೆಣಿಕೆಯಷ್ಟು ಕಂಬಗಳು ಇವೆ
  • ಇದರಲ್ಲಿ ಒಂದು ಕಂಬದಲ್ಲಿ ಸಪ್ತಋಷಿ ಮಂಡಲ ಕಾಣಬಹುದಾಗಿದೆ.
  • ಈ ತಾಣವೂ ವೃತ್ತಕಾರದ ಲಕ್ಷಣ ಹೊಂದಿದ್ದು, 50 ಎಕರೆ ಪ್ರದೇಶದಲ್ಲಿ ಹರಡಿದೆ. ಕೆಲವು ಇತಿಹಾಸ ತಜ್ಞರು ಇದನ್ನು ಪ್ರಾಚೀನ ಸಮಾಧಿ ಸ್ಥಳ ಎಂದಿದ್ದಾರೆ.

ಸಂರಕ್ಷಣಾ ಪ್ರಯತ್ನ: ಈ ಐತಿಹಾಸಿಕ ಕಂಬಗಳ ರಕ್ಷಣೆಯ ಹೊಣೆಯನ್ನು ಡೆಕ್ಕನ್​ ಹೆರಿಟೇಜ್​ ಅಕಾಡೆಮಿ ಟ್ರಸ್ಟ್​ ಹೊಂದಿದ್ದು, ಇದಕ್ಕೆ ಸರ್ಕಾರದ ಬೆಂಬಲ ಕೂಡ ಇದೆ. ಇದರ ಸುತ್ತಲೂ ರಕ್ಷಣೆಗಾಗಿ ಕಬ್ಬಿಣದ ಬೇಲಿಯನ್ನು ಹಾಕಿ, ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಭದ್ರತೆಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು.

ಟಿಐಟಿಎ ಗ್ಲೋಬಲ್​​ ಟ್ರಸ್ಟ್​ ಸಂಸ್ಥಾಪಕರಾದ ಸಂದೀಪ್​ ಮಕ್ಟಲ ಅವರ ನಾಯಕತ್ವದಲ್ಲಿ ಈ ತಾಣದ ಮಹತ್ವ ಸಾರಲು ಅನೇಕ ಡಾಕ್ಯುಮೆಂಟರಿ ಮತ್ತು ಜಾಗೃತಿ ಅಭಿಯಾನ ನಡೆಸಲಾಗಿದೆ.

ಈ ತಾಣಕ್ಕೆ ಯುನೆಸ್ಕೋ ವಿಶ್ವ ಪರಂಪರೆ ಸ್ಥಾನ ನೀಡಿದಲ್ಲಿ, ಇದು ಅಂತಾರಾಷ್ಟ್ರೀಯ ಸ್ಥಾನಮಾನ ಪಡೆಯಲಿದ್ದು, ವಿಶಿಷ್ಟ ಪ್ರಾಚೀನ ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪರಂಪರೆಯನ್ನು ಸುರಕ್ಷಿಸುವ ಕೆಲಸ ಮತ್ತಷ್ಟು ಉತ್ತಮಗೊಳ್ಳಲಿದೆ.

ಇದನ್ನೂ ಓದಿ : ಕೈಗೆ ಸಿಗದಂತೆ ಏರಿಕೆ ಕಾಣುತ್ತಿದೆ ಬಂಗಾರ: ಇದೇ ಮೊದಲ ಬಾರಿಗೆ 90 ಸಾವಿರದ ಗಡಿದಾಟಿದ ಚಿನ್ನ: ಬೆಂಗಳೂರಲ್ಲಿ ಇಂದಿನ ದರ ಎಷ್ಟು?

ಇದನ್ನೂ ಓದಿ: ಯುನೆಸ್ಕೊ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಭಾರತದ 6 ತಾಣಗಳು ಸೇರ್ಪಡೆ; ಯಾವವು ಆ ಸ್ಥಳಗಳು?

ನಾರಾಯಣಪೇಟೆ: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲದ ಕೃಷ್ಣಾ ನದಿಯ ದಡದಲ್ಲಿರುವ ಪ್ರಾಚೀನ ಮುದುಮಲ್ ಮೆಗಾಲಿಥಿಕ್ ಕಂಬಗಳು ಪರಿಗಣಿಸುವಂತೆ ಭಾರತ ಪ್ರಸ್ತಾಪ ಸಲ್ಲಿಸಿದೆ. ಭಾರತದ ಆರು ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾರ್ಚ್​ 7ರಂದು ಮನವಿ ಸಲ್ಲಿಸಲಾಗಿದೆ.

ನಾರಾಯಣಪೇಟೆಯ ಈ ಮುದುಮಲ್​ ಮೆಗಾಲಿಥಿಕಲ್​ ಕಂಬಗಳು ನಿಗೂಢ ಕಲ್ಲಿನ ರಚನೆಯಾಗಿದ್ದು, ಇದನ್ನು ಖಗೋಳ ವಿಜ್ಞಾನದ ಅವಶೇಷಗಳು ಎಂದು ನಂಬಲಾಗಿದೆ.

ಯುನೆಸ್ಕೋ ಮಾನ್ಯತೆ ಭಾರತ ಪ್ರಸ್ತಾಪಿಸಿರುವ ಭಾರತದ ಆರು ತಾಣಗಳಿವು:

ಮುದುಮಲ್​ ಮೆಗಾಲಿಥಿಕಲ್​ ಕಂಬದ ಹೊರತಾಗಿ ಐದು ತಾಣಗಳನ್ನು ಕೂಡ ಪಾರಂಪರಿಕೆ ಪಟ್ಟಿಗೆ ಸೇರಿಸುವಂತೆ ಪ್ರಸ್ತಾಪಿಸಲಾಗಿದೆ. ಅವುಗಳೆಂದರೆ,

  • ಛತ್ತೀಸ್​ಗಢದ ಕಂಗೆರ್​ ಕಣಿವೆ ರಾಷ್ಟ್ರೀಯ ಉದ್ಯಾನವನ
  • ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಎರ್ರಗುಡಿಯಲ್ಲಿನ ಅಶೋಕನ ಕಲ್ಲಿನ ಶಾಸನಗಳು
  • ಮಧ್ಯಪ್ರದೇಶ, ಒಡಿಶಾದ ಚೌಸತ್ ಯೋಗಿನಿ ದೇವಾಲಯಗಳ ಸರಣಿ
  • ಉತ್ತರ ಭಾರತದಲ್ಲಿ ಗುಪ್ತರ ಕಾಲದ ದೇಗುಲಗಳು
  • ಮಧ್ಯಪ್ರದೇಶ, ಉತ್ತರ ಪ್ರದೇಶದ ಬುಂದೇಲರ ಅರಮನೆ- ಕೋಟೆಗಳು.

ಈ ಆರು ತಾಣಗಳನ್ನು ಯುನೆಸ್ಕೋ ಪರಿಗಣಿಸಿದಲ್ಲಿ ಭಾರತದಲ್ಲಿ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ತಾಣಗಳ ಪಟ್ಟಿ ಸಂಖ್ಯೆ 56ಕ್ಕೆ ಏರಲಿದೆ.

ಪ್ರಾಚೀನ ಖಗೋಳ ವೀಕ್ಷಣಾಲಯ: ಈ ಮುದಮಲ್​ ಕಂಬಳನ್ನು ಮೊದಲ ಬಾರಿಗೆ ಹೈದರಾಬಾದ್ ಸೆಂಟ್ರಲ್​ ಯುನಿವರ್ಸಿಟಿಯ ಪ್ರೊ ಕೆ.ಪಿ ರಾವ್​ ಪತ್ತೆ ಮಾಡಿದರು. ಇವುಗಳನ್ನು ಮೆಗಾಲಿಥಿಕ್​ ಮೆನ್ಹಿರ್ಸ್​ (ಕಲ್ಲಿನ ಬೆಂಚು ರೀತಿ ಜೋಡಣೆ) ಎಂದು ಗುರುತಿಸಿದರು. ಇವು 5000 ವರ್ಷದ ಹಳೆವುಗಳಾಗಿವೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಹಿಂದಿನ ಕಾಲದಲ್ಲಿ ಖಗೋಳಶಾಸ್ತ್ರಜ್ಞರು ಖಗೋಳದ ಘಟನೆಗಳ ವೀಕ್ಷಣೆಗಳನ್ನು ಅಧ್ಯಯನಕ್ಕೆ ಬಳಕೆ ಮಾಡುತ್ತಿದ್ದರು ಎಂದು ನಂಬಲಾಗಿದೆ. ಈ ಕಂಬಗಳು ಸೂರ್ಯನ ಚಲನೆ ಮತ್ತು ಋತುಮಾನದ ಲೆಕ್ಕಾಚಾರ, ದಿಕ್ಕುಗಳು ಮತ್ತು ಹವಾಮಾನ ಪರಿಸ್ಥಿತಿ ಪತ್ತೆಗೆ ವ್ಯವಸ್ಥೆ ಮಾಡಲು ಈ ಕಂಬಗಳನ್ನು ಜೋಡಿಸಲಾಗಿತ್ತು.

  • ಈ ತಾಣದಲ್ಲಿ ಮೂಲ 100 ಕಂಬಗಳು ಇದ್ದು, ಇವು 10 ರಿಂದ 14 ಅಡಿ ಎತ್ತರವಿದೆ.
  • ನೈಸರ್ಗಿಕ ಘಟನೆ ಮತ್ತು ಮಾನವ ಚಟವಟಿಕೆಗಳಿಂದ ಇಂದು, ಕೇವಲ ಬೆರಳೆಣಿಕೆಯಷ್ಟು ಕಂಬಗಳು ಇವೆ
  • ಇದರಲ್ಲಿ ಒಂದು ಕಂಬದಲ್ಲಿ ಸಪ್ತಋಷಿ ಮಂಡಲ ಕಾಣಬಹುದಾಗಿದೆ.
  • ಈ ತಾಣವೂ ವೃತ್ತಕಾರದ ಲಕ್ಷಣ ಹೊಂದಿದ್ದು, 50 ಎಕರೆ ಪ್ರದೇಶದಲ್ಲಿ ಹರಡಿದೆ. ಕೆಲವು ಇತಿಹಾಸ ತಜ್ಞರು ಇದನ್ನು ಪ್ರಾಚೀನ ಸಮಾಧಿ ಸ್ಥಳ ಎಂದಿದ್ದಾರೆ.

ಸಂರಕ್ಷಣಾ ಪ್ರಯತ್ನ: ಈ ಐತಿಹಾಸಿಕ ಕಂಬಗಳ ರಕ್ಷಣೆಯ ಹೊಣೆಯನ್ನು ಡೆಕ್ಕನ್​ ಹೆರಿಟೇಜ್​ ಅಕಾಡೆಮಿ ಟ್ರಸ್ಟ್​ ಹೊಂದಿದ್ದು, ಇದಕ್ಕೆ ಸರ್ಕಾರದ ಬೆಂಬಲ ಕೂಡ ಇದೆ. ಇದರ ಸುತ್ತಲೂ ರಕ್ಷಣೆಗಾಗಿ ಕಬ್ಬಿಣದ ಬೇಲಿಯನ್ನು ಹಾಕಿ, ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಭದ್ರತೆಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು.

ಟಿಐಟಿಎ ಗ್ಲೋಬಲ್​​ ಟ್ರಸ್ಟ್​ ಸಂಸ್ಥಾಪಕರಾದ ಸಂದೀಪ್​ ಮಕ್ಟಲ ಅವರ ನಾಯಕತ್ವದಲ್ಲಿ ಈ ತಾಣದ ಮಹತ್ವ ಸಾರಲು ಅನೇಕ ಡಾಕ್ಯುಮೆಂಟರಿ ಮತ್ತು ಜಾಗೃತಿ ಅಭಿಯಾನ ನಡೆಸಲಾಗಿದೆ.

ಈ ತಾಣಕ್ಕೆ ಯುನೆಸ್ಕೋ ವಿಶ್ವ ಪರಂಪರೆ ಸ್ಥಾನ ನೀಡಿದಲ್ಲಿ, ಇದು ಅಂತಾರಾಷ್ಟ್ರೀಯ ಸ್ಥಾನಮಾನ ಪಡೆಯಲಿದ್ದು, ವಿಶಿಷ್ಟ ಪ್ರಾಚೀನ ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪರಂಪರೆಯನ್ನು ಸುರಕ್ಷಿಸುವ ಕೆಲಸ ಮತ್ತಷ್ಟು ಉತ್ತಮಗೊಳ್ಳಲಿದೆ.

ಇದನ್ನೂ ಓದಿ : ಕೈಗೆ ಸಿಗದಂತೆ ಏರಿಕೆ ಕಾಣುತ್ತಿದೆ ಬಂಗಾರ: ಇದೇ ಮೊದಲ ಬಾರಿಗೆ 90 ಸಾವಿರದ ಗಡಿದಾಟಿದ ಚಿನ್ನ: ಬೆಂಗಳೂರಲ್ಲಿ ಇಂದಿನ ದರ ಎಷ್ಟು?

ಇದನ್ನೂ ಓದಿ: ಯುನೆಸ್ಕೊ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಭಾರತದ 6 ತಾಣಗಳು ಸೇರ್ಪಡೆ; ಯಾವವು ಆ ಸ್ಥಳಗಳು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.