ETV Bharat / bharat

ಜೀವಜಲಕ್ಕಾಗಿ ಅದೆಂಥಾ ಕಸರತ್ತು! ಪ್ರಾಣದ ಹಂಗು ತೊರೆದು, ಬಾವಿಗಿಳಿದು ನೀರು ಸಂಗ್ರಹಿಸುವ ಮಹಿಳೆಯರು- ವಿಡಿಯೋ - WOMEN FACE HARDSHIPS FOR WATER

ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಉದ್ಭವಿಸಿದೆ. ನಾಶಿಕ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯರು ಪ್ರಾಣವನ್ನೇ ಒತ್ತೆಯಿಟ್ಟು ಬಾವಿಗಿಳಿದು ನೀರು ಸಂಗ್ರಹಿಸುವ ದೃಶ್ಯ ಇಲ್ಲಿದೆ ನೋಡಿ.

ಜೀವಜಲಕ್ಕಾಗಿ ಎಂಥಾ ಕಸರತ್ತು
ಜೀವಜಲಕ್ಕಾಗಿ ಎಂಥಾ ಕಸರತ್ತು (ANI Video Grab)
author img

By ETV Bharat Karnataka Team

Published : April 20, 2025 at 3:44 PM IST

1 Min Read

ನಾಶಿಕ್(ಮಹಾರಾಷ್ಟ್ರ): ಬೇಸಿಗೆ ನೆತ್ತಿ ಸುಡುತ್ತಿದೆ. ಅಲ್ಲಲ್ಲಿ ಬೇಸಿಗೆ ಮಳೆಯೂ ಆಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನೀರಿನ ಅಭಾವ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಮಹಿಳೆಯರು ನೀರಿಗಾಗಿ ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ನಾಶಿಕ್ ಜಿಲ್ಲೆಯ ಬೊರಿಚಿವರಿ ಗ್ರಾಮದಲ್ಲಿ ಮಹಿಳೆಯರು ಬಾವಿಗಿಳಿದು ನೀರು ಸಂಗ್ರಹಿಸಿ ತರುತ್ತಿದ್ದಾರೆ!.

ಕುಡಿಯುವ ನೀರಿಗಾಗಿ ಜನರು ಕಿಲೋ ಮೀಟರ್‌ಗಟ್ಟಲೆ ದೂರ ಹೋಗುವುದು, ನೀರಿನ ಟ್ಯಾಂಕರುಗಳು ಬರುತ್ತಿದ್ದಂತೆ ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗುತ್ತಿವೆ. ಮಹಾನಗರಗಳಲ್ಲಿ ನೀರಿನ ಟ್ಯಾಂಕರ್‌ಗಳು ಓಡಾಡುತ್ತಿರುವುದು ನೀರಿನ ಅಭಾವಕ್ಕೆ ಹಿಡಿದ ಕನ್ನಡಿ. ಇದರ ಜೊತೆ ಜೊತೆಗೇ ಟ್ಯಾಂಕರ್‌ ಮಾಫಿಯಾಗಳು ಕೂಡಾ ತಲೆ ಎತ್ತುತ್ತಿವೆ. ನೀರಿಗೆ ಬೇಕಾಬೆಟ್ಟಿ ದರ ವಿಧಿಸುವುದೆಲ್ಲ ಸಾಮಾನ್ಯವಾಗುತ್ತಿದೆ.

ಇದರ ನಡುವೆ ಈ ಬಾರಿ ವಾಡಿಕೆಗಿಂದ ಹೆಚ್ಚು ಮುಂಗಾರು ಮಳೆ ಸುರಿಯಲಿದೆ ಎಂದು ಇತ್ತೀಚಿಗೆ ಭಾರತೀಯ ಹವಾಮಾನ ಇಲಾಖೆ ಹೇಳಿರುವುದು ಕೊಂಚ ಸಮಾಧಾನದ ಸಂಗತಿ ಎನ್ನಬಹುದು. ಭಾರತ ಕೃಷಿ ಆಧಾರಿತ ದೇಶ. ರೈತರು ತಮ್ಮ ಕೃಷಿಗೆ ಮಳೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಅನೇಕ ಬಾರಿ ಮಳೆ ಕಣ್ಣಾಮುಚ್ಚಾಲೆ ಆಟ ಆಡಿ ಅನ್ನದಾತನನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಈ ನಿಟ್ಟಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ರೈತರನ್ನು ನಿರಾಳರನ್ನಾಗಿಸಿದೆ.

ಇದನ್ನೂ ಓದಿ: ಈ ಮಾನ್ಸೂನ್​ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ, ಎಲ್​ ನಿನೊ ಪ್ರಭಾವ ಇಲ್ಲ: ಹವಾಮಾನ ಇಲಾಖೆ - IMD WEATHER FORECAST

ನಾಶಿಕ್(ಮಹಾರಾಷ್ಟ್ರ): ಬೇಸಿಗೆ ನೆತ್ತಿ ಸುಡುತ್ತಿದೆ. ಅಲ್ಲಲ್ಲಿ ಬೇಸಿಗೆ ಮಳೆಯೂ ಆಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನೀರಿನ ಅಭಾವ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಮಹಿಳೆಯರು ನೀರಿಗಾಗಿ ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ನಾಶಿಕ್ ಜಿಲ್ಲೆಯ ಬೊರಿಚಿವರಿ ಗ್ರಾಮದಲ್ಲಿ ಮಹಿಳೆಯರು ಬಾವಿಗಿಳಿದು ನೀರು ಸಂಗ್ರಹಿಸಿ ತರುತ್ತಿದ್ದಾರೆ!.

ಕುಡಿಯುವ ನೀರಿಗಾಗಿ ಜನರು ಕಿಲೋ ಮೀಟರ್‌ಗಟ್ಟಲೆ ದೂರ ಹೋಗುವುದು, ನೀರಿನ ಟ್ಯಾಂಕರುಗಳು ಬರುತ್ತಿದ್ದಂತೆ ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗುತ್ತಿವೆ. ಮಹಾನಗರಗಳಲ್ಲಿ ನೀರಿನ ಟ್ಯಾಂಕರ್‌ಗಳು ಓಡಾಡುತ್ತಿರುವುದು ನೀರಿನ ಅಭಾವಕ್ಕೆ ಹಿಡಿದ ಕನ್ನಡಿ. ಇದರ ಜೊತೆ ಜೊತೆಗೇ ಟ್ಯಾಂಕರ್‌ ಮಾಫಿಯಾಗಳು ಕೂಡಾ ತಲೆ ಎತ್ತುತ್ತಿವೆ. ನೀರಿಗೆ ಬೇಕಾಬೆಟ್ಟಿ ದರ ವಿಧಿಸುವುದೆಲ್ಲ ಸಾಮಾನ್ಯವಾಗುತ್ತಿದೆ.

ಇದರ ನಡುವೆ ಈ ಬಾರಿ ವಾಡಿಕೆಗಿಂದ ಹೆಚ್ಚು ಮುಂಗಾರು ಮಳೆ ಸುರಿಯಲಿದೆ ಎಂದು ಇತ್ತೀಚಿಗೆ ಭಾರತೀಯ ಹವಾಮಾನ ಇಲಾಖೆ ಹೇಳಿರುವುದು ಕೊಂಚ ಸಮಾಧಾನದ ಸಂಗತಿ ಎನ್ನಬಹುದು. ಭಾರತ ಕೃಷಿ ಆಧಾರಿತ ದೇಶ. ರೈತರು ತಮ್ಮ ಕೃಷಿಗೆ ಮಳೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಅನೇಕ ಬಾರಿ ಮಳೆ ಕಣ್ಣಾಮುಚ್ಚಾಲೆ ಆಟ ಆಡಿ ಅನ್ನದಾತನನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಈ ನಿಟ್ಟಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ರೈತರನ್ನು ನಿರಾಳರನ್ನಾಗಿಸಿದೆ.

ಇದನ್ನೂ ಓದಿ: ಈ ಮಾನ್ಸೂನ್​ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ, ಎಲ್​ ನಿನೊ ಪ್ರಭಾವ ಇಲ್ಲ: ಹವಾಮಾನ ಇಲಾಖೆ - IMD WEATHER FORECAST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.