ಡೆಹ್ರಾಡೂನ್, ಉತ್ತರಾಖಂಡ್ : ಸುಮಾರು ಐದು ವರ್ಷಗಳ ನಂತರ ಜೂನ್ 30 ರಿಂದ ಕೈಲಾಸ ಮಾನಸ ಸರೋವರ ಪ್ರಯಾಣ ಪ್ರಾರಂಭವಾಗಲಿದೆ. ಈ ಬಾರಿ ಕೇವಲ 250 ಭಕ್ತರಿಗೆ ಮಾತ್ರ ಯಾತ್ರೆಗೆ ಹೋಗಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಜೊತೆಗೆ ಉತ್ತರಾಖಂಡ ಸರ್ಕಾರವೂ ಕೈಲಾಸ ಮಾನಸ ಸರೋವರ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭೋಲೆನಾಥನ ಭಕ್ತರು ಉತ್ತರಾಖಂಡದ ಪಿಥೋರಗಢದ ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಹೋಗುತ್ತಾರೆ. ಕೈಲಾಸ ಮಾನಸ ಸರೋವರವು ಸನಾತನಿಗಳಿಗೆ ಮಾತ್ರವಲ್ಲದೇ ಇತರ ಧರ್ಮಗಳಿಗೂ ಬಹಳ ಪ್ರಮುಖವಾದ ಸ್ಥಾನವನ್ನು ಹೊಂದಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಉತ್ತರಾಖಂಡದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯ ಜವಾಬ್ದಾರಿಯನ್ನು ಕೆಎಂವಿಎನ್ ಅಂದರೆ ಕುಮಾವೂನ್ ಮಂಡಲ್ ವಿಕಾಸ್ ನಿಗಮಕ್ಕೆ ವಹಿಸಲಾಗಿದೆ. KMVN 1981 ರಿಂದ ಕೈಲಾಸ ಮಾನಸ ಸರೋವರ ಯಾತ್ರೆಯ ಹೊಣೆ ಹೊತ್ತು ಮುನ್ನಡೆಸುತ್ತಿದೆ. ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣವು ದೆಹಲಿಯಿಂದ ಪ್ರಾರಂಭವಾಗಿ ಪಿಥೋರಗಢ್ ಜಿಲ್ಲೆಯ ಲಿಪುಲೇಖ್ ಪಾಸ್ ಮಾರ್ಗದ ಮೂಲಕ ಪೂರ್ಣಗೊಳ್ಳುತ್ತದೆ. ಈ ಬಾರಿ ಪ್ರಯಾಣಕ್ಕಾಗಿ ತಲಾ 50 ಪ್ರಯಾಣಿಕರ ಐದು ಗುಂಪುಗಳನ್ನು ರಚಿಸಲಾಗಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯ ಧಾರ್ಮಿಕ ನಂಬಿಕೆ ಏನು?: ಕೈಲಾಸ ಮಾನಸ ಸರೋವರವನ್ನು ಶಿವನ ತವರು ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವನು ತಾಯಿ ಪಾರ್ವತಿಯೊಂದಿಗೆ ಕೈಲಾಸ ಪರ್ವತದ ಮೇಲೆ ವಾಸಿಸುತ್ತಾನೆ. ಇದು ಶಿವನ ವಾಸಸ್ಥಾನವೆಂದು ಪರಿಗಣಿಸಲ್ಪಟ್ಟಿರುವುದರಿಂದ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಅಲ್ಲದೇ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಮೋಕ್ಷ ಮತ್ತು ಆಧ್ಯಾತ್ಮಿಕ ವಿಮೋಚನೆಯ ಸಂಕೇತವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ಕೈಲಾಸ ಪರ್ವತವನ್ನು ವಿಶ್ವದ ಕೇಂದ್ರ ಎಂದೂ ಕರೆಯಲಾಗುತ್ತದೆ.

ಪುರಾಣಗಳಲ್ಲಿ ಕೈಲಾಸ ಮಾನಸ ಸರೋವರದ ಉಲ್ಲೇಖ: ಮತ್ಸ್ಯ ಪುರಾಣ, ಸ್ಕಂದ ಪುರಾಣ ಮತ್ತು ಶಿವ ಪುರಾಣಗಳು ಕೈಲಾಸ ಖಂಡ ಎಂಬ ಪ್ರತ್ಯೇಕ ಅಧ್ಯಾಯಗಳನ್ನು ಹೊಂದಿದ್ದು, ಅವುಗಳಲ್ಲಿ ಕೈಲಾಸ ಪರ್ವತದ ವೈಭವವನ್ನು ವಿವರಿಸಲಾಗಿದೆ. ಕೈಲಾಸ ಪರ್ವತದ ಮೇಲೆ ಸ್ವರ್ಗವಿದೆ ಮತ್ತು ಅದರ ಕೆಳಗೆ ಮರ್ತ್ಯ ಲೋಕವಿದೆ ಎಂಬುದು ಹಿಂದೂಗಳ ಬಲವಾದ ನಂಬಿಕೆ ಆಗಿದೆ. ಅಂದರೆ ಕೈಲಾಸ ಪರ್ವತದ ಮೇಲೆ ಈ ಸ್ವರ್ಗದ ದ್ವಾರವಿದೆ ಎಂಬುದು ಪ್ರತೀತಿ.

ಸಪ್ತ ಋಷಿಗಳ ಗುಹೆಗಳು: ಏತನ್ಮಧ್ಯೆ, ಈಟಿವಿ ಭಾರತ್ ಜೊತೆ ಮಾತನಾಡಿರುವ ಇತಿಹಾಸಕಾರ ಪ್ರೊ. ಎಂ.ಎಸ್. ಗುಸೇನ್, ಕೈಲಾಸ ಪರ್ವತದ ಮೇಲೆ ಸಪ್ತ ಋಷಿಗಳ ಗುಹೆಗಳಿವೆ ಎಂದು ಹೇಳಿದ್ದಾರೆ. ಈ ಏಳು ಋಷಿಗಳಲ್ಲಿ ಭಾರದ್ವಾಜ, ಭೃಗು, ಗೌತಮ, ಅತ್ರಿ, ಕಶ್ಯಪ, ವಿಶ್ವಾಮಿತ್ರ ಮತ್ತು ವಸಿಷ್ಠರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸನಾತನ ಧರ್ಮದ ನಾಲ್ಕು ವೇದಗಳಲ್ಲಿ, ಋಗ್ವೇದವನ್ನು ವಿಶ್ವದ ಅತ್ಯಂತ ಹಳೆಯ ಗ್ರಂಥವೆಂದು ಪರಿಗಣಿಸಲಾಗಿದೆ. ಇದು ಒಟ್ಟು 10 ಮಂಡಲಗಳನ್ನು ಹೊಂದಿದ್ದು, ಎರಡರಿಂದ 8 ನೇ ಮಂಡಲಗಳ ಸೃಷ್ಟಿಕರ್ತರು ಸಹ ಈ ಸಪ್ತ ಋಷಿಗಳೇ ಆಗಿದ್ದಾರೆ. ಕೈಲಾಸ ಮಾನಸ ಸರೋವರದ ಇತಿಹಾಸವು ವೇದಗಳ ಕಾಲದ ಉತ್ತರಾರ್ಧಕ್ಕೆ ಹೋಗುತ್ತದೆ. ವೈದಿಕ ಕಾಲದ ಅಂತ್ಯವನ್ನು ಕ್ರಿಸ್ತಪೂರ್ವ 1000 ರಿಂದ 600 ರ ನಡುವೆ ಬರುತ್ತದೆ ಎಂದು ಇತಿಹಾಸಕಾರರು ಪರಿಗಣಿಸಿದ್ದಾರೆ ಎಂದು ಅವರು ವಿವರಣೆ ನೀಡಿದರು.
ಇದನ್ನೇ ಏಕೆ ಮಾನವ ಸರೋವರ ಎಂದು ಏಕೆ ಕರೆಯಲಾಗಿದೆ?: ಕೈಲಾಸ ಮಾನಸ ಸರೋವರವನ್ನು ಮಾನವ ಸರೋವರ ಎಂದೂ ಕರೆಯುತ್ತಾರೆ. ನಂಬಿಕೆಯ ಪ್ರಕಾರ ಕೈಲಾಸ ಮಾನಸ ಸರೋವರವು ಬ್ರಹ್ಮನ ಮನಸ್ಸಿನಿಂದ ಸೃಷ್ಟಿಯಾಗಿದೆ ಎಂದು ಪರಿಗಣಿಸಲಾಗಿದೆ. ಕೈಲಾಸ ಮಾನಸ ಸರೋವರ ಯಾತ್ರೆಯ ಮಹತ್ವವು ಸನಾತನ ಧರ್ಮ ಮಾತ್ರವಲ್ಲ, ಬೌದ್ಧ ಧರ್ಮ ಮತ್ತು ಜೈನ ಧರ್ಮದಲ್ಲೂ ಇದೆ ಅಂತಾರೆ ಇತಿಹಾಸಕಾರ ಗುಸೇನ್.ಕೈಲಾಸ ಮಾನಸ ಸರೋವರವನ್ನು ಅತ್ಯಂತ ಪವಿತ್ರ ಹಾಗೂ ಮೋಕ್ಷವನ್ನು ಪಡೆದುಕೊಳ್ಳುವ ಸ್ಥಳವೆಂದು ಪರಿಗಣಿಸಲಾಗಿದೆ.

ಬೌದ್ಧ ಧರ್ಮದವರಿಗೂ ಇದು ಪರಮ ಶ್ರೇಷ್ಠ ಪೂಜ್ಯನೀಯ ಸ್ಥಳ: "ಡೆಮ್ಚೋಕ್" ಬೌದ್ಧ ಧರ್ಮದ ಜನರಿಗೆ ಇದು ಪೂಜ್ಯ ಸ್ಥಳವಾಗಿದೆ. ಗೌತಮ ಬುದ್ಧ ಕೈಲಾಸ ಮಾನಸ ಸರೋವರದಲ್ಲಿ ತಪಸ್ಸು ಮಾಡಿದ್ದ ಎಂಬ ಉಲ್ಲೇಖವಿದೆ. ಬುದ್ಧನ ತಾಯಿ ಇಲ್ಲಿಗೆ ಭೇಟಿ ನೀಡಿದ್ದಳು ಎಂದು ಹೇಳಲಾಗುತ್ತದೆ. ಬೌದ್ಧ ಮೂಲಗಳ ಪ್ರಕಾರ ಈ ಸ್ಥಳದ ಸತ್ಯಾಸತ್ಯತೆ ಕ್ರಿ.ಪೂ. 600 ರಷ್ಟು ಹಿಂದಿನದು. ಅದೇ ರೀತಿ, ಬೌನ್ ಪಂಥದ ಜನರು ಸಹ ಇದನ್ನು ತಮ್ಮ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ.
ಜೈನ ಸಂತರಿಗೂ ಇದುವೇ ಪವಿತ್ರ ಸ್ಥಳ: ಜೈನರು ಈ ಸ್ಥಳವನ್ನು ತಮ್ಮ ಮೊದಲ ತೀರ್ಥಂಕರ ಋಷಭದೇವನ ನಿರ್ವಾಣ ಸ್ಥಳವೆಂದು ಪರಿಗಣಿಸುತ್ತಾರೆ. ಸನಾತನ ಧರ್ಮದಲ್ಲಿ, ದ್ವಾಪರ ಯುಗದಲ್ಲಿ ಮಹಾಭಾರತದ ನಂತರ, ಪಾಂಡವರು ಸ್ವರ್ಗಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಕೊನೆಗೆ ಧರ್ಮರಾಜ ಯುಧಿಷ್ಠಿರನು ಕೈಲಾಸ ಪರ್ವತದಿಂದ ಸ್ವರ್ಗಕ್ಕೆ ಮೆಟ್ಟಿಲುಗಳನ್ನು ಹತ್ತಿದನು ಎಂಬ ನಂಬಿಕೆ ಕೂಡಾ ಇದೆ.

1981 ರಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಅಂದಿನ ರಾಜ್ಯ ಸರ್ಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯ ಆಯೋಜಿಸುತ್ತಿತ್ತು ಎಂದು ಇತಿಹಾಸಕಾರ ಪ್ರೊ. ಎಂ.ಎಸ್. ಗೋಸೈನ್ ನೆನಪು ಮಾಡಿಕೊಟ್ಟರು. ಪೌರಾಣಿಕ ಮತ್ತು ಐತಿಹಾಸಿಕ ದೃಷ್ಟಿಕೋನದಿಂದ ನೋಡಿದರೆ, ಪೌರಾಣಿಕ ಪ್ರಯಾಣವು ಸನಾತನ ಧರ್ಮದ ಅವಿಭಾಜ್ಯ ಅಂಗವಾಗಿದೆ ಎನ್ನುವುದು ಅವರ ವಾದವಾಗಿದೆ.
ಕೈಲಾಸ ಮಾನಸ ಸರೋವರದ ಪ್ರಯಾಣವು 1981 ರಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುವುದಿಲ್ಲ, ಬದಲಿಗೆ ಈ ಪ್ರಯಾಣವು ವೇದಗಳ ಕಾಲದಿಂದಲೂ ನಡೆಯುತ್ತಿದೆ. ಕೈಲಾಸ ಯಾತ್ರೆಯ 52 ಕಿ.ಮೀ. ಉದ್ದದ ಸುತ್ತಳತೆಯನ್ನು ಪೂರ್ಣಗೊಳಿಸಲು ಸರಿಸುಮಾರು ಎರಡರಿಂದ ಮೂರು ದಿನಗಳು ಬೇಕಾಗುತ್ತದೆ. ಸುಮಾರು 320 ಚದರ ಮೀಟರ್ಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ ಕೈಲಾಸ ಮಾನಸ ಸರೋವರವು ಬ್ರಹ್ಮನ ಮನಸ್ಸಿನಿಂದ ಅಂದರೆ ಮಾನವ ಸರೋವರದಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಲು ಬರುವ ಭಕ್ತರಲ್ಲಿ ಉತ್ಸಾಹ ಹೆಚ್ಚಿರುತ್ತದೆ.

ಧಾರ್ಮಿಕ ವ್ಯವಹಾರಗಳ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಿಷ್ಟು: ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಧಾರ್ಮಿಕ ವ್ಯವಹಾರಗಳ ಸಚಿವ ಸತ್ಪಾಲ್ ಮಹಾರಾಜ್, ಕೈಲಾಸ ಮಾನಸ ಸರೋವರ ಪ್ರಯಾಣವು ಜನರ ಭಾವನೆಗಳಿಗೆ ಸಂಬಂಧಿಸಿದ ಪ್ರಯಾಣವಾಗಿದೆ ಎಂದು ಹೇಳಿದರು. ಕೈಲಾಸ ಮಾನಸ ಸರೋವರ ಯಾತ್ರೆಯು ಜೂನ್ 30, 2025 ರಿಂದ ಪ್ರಾರಂಭವಾಗಲಿದ್ದು, ಇದನ್ನು ಕುಮಾವೂನ್ ಮಂಡಲ್ ವಿಕಾಸ್ ನಿಗಮ್ ನಿರ್ವಹಿಸುತ್ತದೆ.

ಕೈಲಾಸ ಮಾನಸ ಸರೋವರ ಯಾತ್ರೆಯ ಸಮಯದಲ್ಲಿ, ಭಕ್ತರು ಓಂ ಪರ್ವತ ಮತ್ತು ನಾಭಿ ಧಂಗ್ ಪ್ರದೇಶಗಳನ್ನೂ ಸಹ ನೋಡುತ್ತಾರೆ. ಇಬ್ಬರೂ ಸಾಕಷ್ಟು ಗುರುತಿಸಲ್ಪಟ್ಟಿದ್ದಾರೆ. ಮುಖ್ಯವಾಗಿ ಕೈಲಾಸ ಪರ್ವತವು ಏಷ್ಯಾದ ಹವಾಮಾನ ನಿಯಂತ್ರಿಸುತ್ತದೆ. ಇದನ್ನು ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ. ಇನ್ನು ಶಾಸ್ತ್ರಗಳಲ್ಲಿ ಇದನ್ನು ಹೊಕ್ಕುಳ ಅಂದರೆ ಕೇಂದ್ರಬಿಂದು ಎಂದು ಪರಿಗಣಿಸಲಾಗಿದೆ. ಇದಲ್ಲದೇ ಈ ಪ್ರದೇಶದಲ್ಲಿ ಮಾನವ ಶರೀರದ ಮೇಲೆ ಪರಿಣಾಮ ಬೀರುವ ಅತಿ ಹೆಚ್ಚಿನ ಕಾಂತೀಯ ಶಕ್ತಿಗಳಿವೆ ಎಂದು ಹೇಳಲಾಗುತ್ತಿದೆ. ಕೈಲಾಸ ಮಾನಸ ಸರೋವರವು ಸ್ವತಃ ಪಿರಮಿಡ್ನಂತೆ ನಿರ್ಮಿಸಲ್ಪಟ್ಟಿದೆ. ಇದು ಕಾಸ್ಮಿಕ್ ಕಿರಣಗಳನ್ನು ಕೇಂದ್ರೀಕರಿಸುತ್ತದೆ ಎಂದೂ ನಂಬಲಾಗಿದೆ.- ಸತ್ಪಾಲ್ ಮಹಾರಾಜ್, ಧಾರ್ಮಿಕ ವ್ಯವಹಾರಗಳ ಸಚಿವ, ಉತ್ತರಾಖಂಡ ಸರ್ಕಾರ
ಕೈಲಾಸ ಮಾನಸ ಸರೋವರದ ವೈಜ್ಞಾನಿಕ ಅಂಶಗಳೇನು?: ಕೈಲಾಸ ಮಾನಸಸರೋವರಕ್ಕೆ ಸಂಬಂಧಿಸಿದ ವೈಜ್ಞಾನಿಕ ಅಂಶಗಳ ಬಗ್ಗೆ ಹೇಳುವುದಾದರೆ, ಕೈಲಾಸ ಮಾನಸಸರೋವರದಲ್ಲಿ ಅನಿಯಮಿತ ಕಾಂತಕ್ಷೇತ್ರದ ಹರಿವು ಇದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಅಲ್ಲಿ ಸಾಮಾನ್ಯ ವ್ಯಕ್ತಿ ಬದುಕಲು ಸಾಧ್ಯವಿಲ್ಲ. ಈ ಪ್ರದೇಶದಲ್ಲಿ ಅಲೌಕಿಕ ಶಕ್ತಿಗಳಿವೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಅಲ್ಲದೇ ಓಂ ಶಬ್ದವು ಅಲ್ಲಿಂದ ಹೊರಹೊಮ್ಮುತ್ತದೆ, ಅದನ್ನು ಜನರು ಸ್ಪಷ್ಟವಾಗಿ ಕೇಳಬಹುದು. ಇಷ್ಟೇ ಅಲ್ಲ, ವಿಜ್ಞಾನಿಗಳು ಕೈಲಾಸ ಪರ್ವತವು ವಿಶ್ವದ ಕೇಂದ್ರ ಬಿಂದುವಾಗಿದೆ, ಅದರ ಒಂದು ಬದಿಯಲ್ಲಿ ಉತ್ತರ ಧ್ರುವ ಮತ್ತು ಇನ್ನೊಂದು ಬದಿಯಲ್ಲಿ ದಕ್ಷಿಣ ಧ್ರುವವಿದೆ ಎಂಬ ಬಲವಾದ ನಂಬಿಕೆ ಕೂಡಾ ಇದೆ.
ವಿಜ್ಞಾನಿಗಳ ಪ್ರಕಾರ, ಸುಮಾರು 100 ಮಿಲಿಯನ್ ವರ್ಷಗಳ ಹಿಂದೆ, ಭೂವೈಜ್ಞಾನಿಕ ಚಟುವಟಿಕೆಗಳಿಂದಾಗಿ, ಕೈಲಾಸ ಮಾನಸ ಸರೋವರ ನಿರ್ಮಾಣವಾಗಿದೆ.