ETV Bharat / bharat

ಪಹಲ್ಗಾಮ್ ಪೈಶಾಚಿಕ ಕೃತ್ಯದ ಹಿಂದೆ ಇಬ್ಬರು ಪಾಕಿಸ್ತಾನಿ, ಓರ್ವ ಕಾಶ್ಮೀರಿ ಭಾಗಿ ಶಂಕೆ: ಈ ಉಗ್ರರ ಮಾಹಿತಿ ನೀಡಿದವರಿಗೆ ₹20 ಲಕ್ಷ ಬಹುಮಾನ - PAHALGAM ATTACK

ಪಹಲ್ಗಾಮ್‌ನಲ್ಲಿ ರಕ್ತಪಾತ ಹರಿಸಿದವರಲ್ಲಿ ಇಬ್ಬರು ಪಾಕಿಸ್ತಾನದ ಲಷ್ಕರ್ ಭಯೋತ್ಪಾದಕರು, ಓರ್ವ ಜಮ್ಮು ಕಾಶ್ಮೀರದ ಉಗ್ರ ಎಂದು ಪೊಲೀಸರು ಶಂಕಿಸಿದ್ದಾರೆ.

J-K: Two Pakistani Laskhar terrorists, one JK local operative identified as men behind Pahalgam Attack
ಈ ರಕ್ತ ಪಿಪಾಸುಗಳ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ಘೋಷಣೆ (ANI)
author img

By ETV Bharat Karnataka Team

Published : April 24, 2025 at 3:47 PM IST

1 Min Read

ಅನಂತ್‌ನಾಗ್(ಜಮ್ಮು ಮತ್ತು ಕಾಶ್ಮೀರ): ಪಹಲ್ಗಾಮ್ ದಾಳಿಯ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಮೂವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದರು. ಈ ದುಷ್ಕೃತ್ಯದಲ್ಲಿ ಇಬ್ಬರು ಪಾಕಿಸ್ತಾನಿಗಳು ಮತ್ತು ಓರ್ವ ಸ್ಥಳೀಯ ಭಯೋತ್ಪಾದಕ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

J-K: Two Pakistani Laskhar terrorists, one JK local operative identified as men behind Pahalgam Attack
ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ (ANI)

ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಈ ಮೂವರು ಉಗ್ರರು ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿರುವ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ.

ಹಾಶಿಮ್ ಮೂಸಾನನ್ನು ಸುಲೇಮಾನ್ ಎಂದೂ ಗುರುತಿಸಲಾಗಿದೆ. ಮೂಸಾ ಮತ್ತು ಅಲಿ ಭಾಯ್ (ತಲ್ಹಾ ಭಾಯ್​) ಪಾಕಿಸ್ತಾನಿ ಭಯೋತ್ಪಾದಕರೆಂದು ಶಂಕಿಸಲಾಗಿದೆ. ಆದಿಲ್ ಹುಸೇನ್ ಥೋಕರ್ ಕಾಶ್ಮೀರಿ ಮೂಲದವ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಅನಂತನಾಗ್‌ನ ಎಸ್‌ಎಸ್‌ಪಿಯನ್ನು 9596777666 ಅಥವಾ ಅನಂತನಾಗ್‌ನಲ್ಲಿರುವ ಪಿಸಿಆರ್ ಅನ್ನು 9596777666ಗೆ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

J-K: Two Pakistani Laskhar terrorists, one JK local operative identified as men behind Pahalgam Attack
ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ (ANI)

ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಸೇರಿದಂತೆ 26 ನಾಗರಿಕರನ್ನು ಭಯೋತ್ಪಾದಕರು ಕೊಂದುಹಾಕಿದ್ದು, ಇವರ ಬೇಟೆಯಾಡಲು ಬೃಹತ್ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಜೊತೆಗೆ, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ ಮೂರು ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸ್ನೈಫರ್ ಶ್ವಾನಗಳನ್ನು ಬಳಸಿಕೊಂಡು ತಂತ್ರಜ್ಞಾನದ ಸಹಾಯದಿಂದ ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.

J-K: Two Pakistani Laskhar terrorists, one JK local operative identified as men behind Pahalgam Attack
ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ (ANI)

26 ನಾಗರಿಕರನ್ನು ಕೊಂದ ಹಂತಕರನ್ನು ಬೇಟೆಯಾಡದೆ ಬಿಡೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರದ ಮಧುಬನಿಯಲ್ಲಿ ಇಂದು ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಪತ್ತೆ ಹಚ್ಚಿ ಗುರುತಿಸಿ ಶಿಕ್ಷಿಸಲಿದೆ. ಬಿಹಾರದ ಈ ಮಣ್ಣಿನಲ್ಲಿ ನಿಂತು ಇಡೀ ಜಗತ್ತಿಗೆ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ಗುಡುಗಿದ್ದಾರೆ.

ಇದನ್ನೂ ಓದಿ: ಒಬ್ಬೊಬ್ಬ ಉಗ್ರ ಮತ್ತು ಅವರ ಹಿಂದಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ: ಪ್ರಧಾನಿ ಮೋದಿ ಎಚ್ಚರಿಕೆ - TERROR ATTACK

ಅನಂತ್‌ನಾಗ್(ಜಮ್ಮು ಮತ್ತು ಕಾಶ್ಮೀರ): ಪಹಲ್ಗಾಮ್ ದಾಳಿಯ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಮೂವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದರು. ಈ ದುಷ್ಕೃತ್ಯದಲ್ಲಿ ಇಬ್ಬರು ಪಾಕಿಸ್ತಾನಿಗಳು ಮತ್ತು ಓರ್ವ ಸ್ಥಳೀಯ ಭಯೋತ್ಪಾದಕ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

J-K: Two Pakistani Laskhar terrorists, one JK local operative identified as men behind Pahalgam Attack
ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ (ANI)

ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಈ ಮೂವರು ಉಗ್ರರು ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿರುವ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ.

ಹಾಶಿಮ್ ಮೂಸಾನನ್ನು ಸುಲೇಮಾನ್ ಎಂದೂ ಗುರುತಿಸಲಾಗಿದೆ. ಮೂಸಾ ಮತ್ತು ಅಲಿ ಭಾಯ್ (ತಲ್ಹಾ ಭಾಯ್​) ಪಾಕಿಸ್ತಾನಿ ಭಯೋತ್ಪಾದಕರೆಂದು ಶಂಕಿಸಲಾಗಿದೆ. ಆದಿಲ್ ಹುಸೇನ್ ಥೋಕರ್ ಕಾಶ್ಮೀರಿ ಮೂಲದವ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಅನಂತನಾಗ್‌ನ ಎಸ್‌ಎಸ್‌ಪಿಯನ್ನು 9596777666 ಅಥವಾ ಅನಂತನಾಗ್‌ನಲ್ಲಿರುವ ಪಿಸಿಆರ್ ಅನ್ನು 9596777666ಗೆ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

J-K: Two Pakistani Laskhar terrorists, one JK local operative identified as men behind Pahalgam Attack
ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ (ANI)

ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಸೇರಿದಂತೆ 26 ನಾಗರಿಕರನ್ನು ಭಯೋತ್ಪಾದಕರು ಕೊಂದುಹಾಕಿದ್ದು, ಇವರ ಬೇಟೆಯಾಡಲು ಬೃಹತ್ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಜೊತೆಗೆ, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ ಮೂರು ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸ್ನೈಫರ್ ಶ್ವಾನಗಳನ್ನು ಬಳಸಿಕೊಂಡು ತಂತ್ರಜ್ಞಾನದ ಸಹಾಯದಿಂದ ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.

J-K: Two Pakistani Laskhar terrorists, one JK local operative identified as men behind Pahalgam Attack
ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ (ANI)

26 ನಾಗರಿಕರನ್ನು ಕೊಂದ ಹಂತಕರನ್ನು ಬೇಟೆಯಾಡದೆ ಬಿಡೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರದ ಮಧುಬನಿಯಲ್ಲಿ ಇಂದು ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಪತ್ತೆ ಹಚ್ಚಿ ಗುರುತಿಸಿ ಶಿಕ್ಷಿಸಲಿದೆ. ಬಿಹಾರದ ಈ ಮಣ್ಣಿನಲ್ಲಿ ನಿಂತು ಇಡೀ ಜಗತ್ತಿಗೆ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ಗುಡುಗಿದ್ದಾರೆ.

ಇದನ್ನೂ ಓದಿ: ಒಬ್ಬೊಬ್ಬ ಉಗ್ರ ಮತ್ತು ಅವರ ಹಿಂದಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ: ಪ್ರಧಾನಿ ಮೋದಿ ಎಚ್ಚರಿಕೆ - TERROR ATTACK

ETV Bharat Logo

Copyright © 2025 Ushodaya Enterprises Pvt. Ltd., All Rights Reserved.