ETV Bharat / bharat

ಶಾಹಿ ಪನೀರ್ ಬಡಿಸಲಿಲ್ಲ ಎಂದು ಹೋಟೆಲ್ ಮಾಲೀಕ- ಉದ್ಯೋಗಿಗಳಿಗೆ ಥಳಿಸಿದ ಗೂಂಡಾಗಳು - HOTEL OWNER BEATEN UP

ನೋಯ್ಡಾದ ಹೋಟೆಲ್​ವೊಂದರಲ್ಲಿ ಕೆಲ ಯುವಕರು ರಾತ್ರಿ ಒಂದು ಗಂಟೆಗೆ ಶಾಹಿ ಪನೀರ್‌ಗೆ ಬೇಡಿಕೆ ಇಟ್ಟಿದ್ದು, ನೀಡದಿದ್ದಾಗ ಹೋಟೆಲ್​ ಮಾಲೀಕರು ಹಾಗೂ ಸಿಬ್ಬಂದಿಯನ್ನ ಅಮಾನುಷವಾಗಿ ಥಳಿಸಿದ್ದಾರೆ.

Hotel-owner-and-his-employees-beaten-up-for-not-serving-shahi-paneer-in-noida
ಹೋಟೆಲ್ ಮಾಲೀಕ - ಉದ್ಯೋಗಿಗಳಿಗೆ ಥಳಿಸಿದ ಗೂಂಡಾಗಳು (ETV Bharat)
author img

By ETV Bharat Karnataka Team

Published : April 11, 2025 at 1:35 PM IST

1 Min Read

ನವದೆಹಲಿ /ನೋಯ್ಡಾ: ನೋಯ್ಡಾದ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಹೋಶಿಯಾಪುರ್ ಗ್ರಾಮದಲ್ಲಿ ಶಾಹಿ ಪನೀರ್ ನೀಡದಿದ್ದಕ್ಕಾಗಿ ದುಷ್ಕರ್ಮಿಗಳು ಹೋಟೆಲ್ ಮಾಲೀಕರು ಮತ್ತು ಉದ್ಯೋಗಿಗಳಿಗೆ ಥಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಶಾಹಿ ಪನೀರ್​ ವಿಚಾರಕ್ಕೆ ಜಗಳ ನಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇತರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೋಟೆಲ್ ಮಾಲೀಕ ಮೋಹನ್ ಶಾ ಅವರು ಮಾತನಾಡಿದ್ದು, 'ಕಳೆದ 6-7 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ತಡರಾತ್ರಿ ನಾವು ಊಟ ಮಾಡುತ್ತಿದ್ದಾಗ ಹುಡುಗರು ಹೋಟೆಲ್‌ಗೆ ಬಂದಿದ್ದರು. ಆ ಹುಡುಗರು ಶಾಹಿ ಪನೀರ್‌ ಇದೆಯೇ ಎಂದು ಕೇಳಿದರು. ಆಗ ನಾನು ಹೋಟೆಲ್ ಮುಚ್ಚಲಾಗಿದೆ ಎಂದು ಹೇಳಿದೆ. ತದನಂತರ ಅವರು ನನ್ನನ್ನು ನಿಂದಿಸಿ, ಹೊಡೆಯಲು ಪ್ರಾರಂಭಿಸಿದರು. ಅಲ್ಲದೇ, ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಈ ಇಬ್ಬರು ಹುಡುಗರು ಈ ಹಿಂದೆಯೂ ಇದೇ ರೀತಿ ಜನರನ್ನು ಬೆದರಿಸಿ ಉಚಿತವಾಗಿ ಆಹಾರ ಸೇವಿಸಿದ್ದಾರೆ. ಈ ಘಟನೆಯ ನಂತರ ನಾನು ಮತ್ತು ನನ್ನ ಸಿಬ್ಬಂದಿ ತುಂಬಾ ಭಯಗೊಂಡಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.

'ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳಲ್ಲಿ ಒಬ್ಬನಾದ ರವಿ ಯಾದವ್​ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಇತರ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ಮುಂದುವರಿದಿದೆ' ಎಂದು ನೋಯ್ಡಾ ಪೊಲೀಸ್ ಠಾಣೆ ಉಸ್ತುವಾರಿ ಕೊತ್ವಾಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೌಟುಂಬಿಕ ಕಲಹ: ರಸ್ತೆಯಲ್ಲೇ ಗರ್ಭಿಣಿ ಪತ್ನಿಯ ಮೇಲೆ ಪತಿಯ ಕ್ರೌರ್ಯ - HUSBAND MURDER ATTEMPT ON WIFE

ನವದೆಹಲಿ /ನೋಯ್ಡಾ: ನೋಯ್ಡಾದ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಹೋಶಿಯಾಪುರ್ ಗ್ರಾಮದಲ್ಲಿ ಶಾಹಿ ಪನೀರ್ ನೀಡದಿದ್ದಕ್ಕಾಗಿ ದುಷ್ಕರ್ಮಿಗಳು ಹೋಟೆಲ್ ಮಾಲೀಕರು ಮತ್ತು ಉದ್ಯೋಗಿಗಳಿಗೆ ಥಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಶಾಹಿ ಪನೀರ್​ ವಿಚಾರಕ್ಕೆ ಜಗಳ ನಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇತರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೋಟೆಲ್ ಮಾಲೀಕ ಮೋಹನ್ ಶಾ ಅವರು ಮಾತನಾಡಿದ್ದು, 'ಕಳೆದ 6-7 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ತಡರಾತ್ರಿ ನಾವು ಊಟ ಮಾಡುತ್ತಿದ್ದಾಗ ಹುಡುಗರು ಹೋಟೆಲ್‌ಗೆ ಬಂದಿದ್ದರು. ಆ ಹುಡುಗರು ಶಾಹಿ ಪನೀರ್‌ ಇದೆಯೇ ಎಂದು ಕೇಳಿದರು. ಆಗ ನಾನು ಹೋಟೆಲ್ ಮುಚ್ಚಲಾಗಿದೆ ಎಂದು ಹೇಳಿದೆ. ತದನಂತರ ಅವರು ನನ್ನನ್ನು ನಿಂದಿಸಿ, ಹೊಡೆಯಲು ಪ್ರಾರಂಭಿಸಿದರು. ಅಲ್ಲದೇ, ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಈ ಇಬ್ಬರು ಹುಡುಗರು ಈ ಹಿಂದೆಯೂ ಇದೇ ರೀತಿ ಜನರನ್ನು ಬೆದರಿಸಿ ಉಚಿತವಾಗಿ ಆಹಾರ ಸೇವಿಸಿದ್ದಾರೆ. ಈ ಘಟನೆಯ ನಂತರ ನಾನು ಮತ್ತು ನನ್ನ ಸಿಬ್ಬಂದಿ ತುಂಬಾ ಭಯಗೊಂಡಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.

'ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳಲ್ಲಿ ಒಬ್ಬನಾದ ರವಿ ಯಾದವ್​ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಇತರ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ಮುಂದುವರಿದಿದೆ' ಎಂದು ನೋಯ್ಡಾ ಪೊಲೀಸ್ ಠಾಣೆ ಉಸ್ತುವಾರಿ ಕೊತ್ವಾಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೌಟುಂಬಿಕ ಕಲಹ: ರಸ್ತೆಯಲ್ಲೇ ಗರ್ಭಿಣಿ ಪತ್ನಿಯ ಮೇಲೆ ಪತಿಯ ಕ್ರೌರ್ಯ - HUSBAND MURDER ATTEMPT ON WIFE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.