ತಿರುಪತಿ (ಆಂಧ್ರಪ್ರದೇಶ) : ಜಿಲ್ಲೆಯ ಚಿನ್ನಗೊಟ್ಟಿಗಲ್ಲು ಮಂಡಲದ ಚಿಟ್ಟೆಚೆರ್ಲಾದಲ್ಲಿ ಆನೆ ದಾಳಿಗೆ ವೃದ್ಧರೊಬ್ಬರು ದುರಂತ ಸಾವನ್ನಪ್ಪಿದ್ದಾರೆ. ಬಲಿಪಶುವನ್ನು ದಾಸರಿಗುಡೆಮ್ ನಿವಾಸಿ ಸಿದ್ಧಯ್ಯ ಎಂದು ಗುರುತಿಸಲಾಗಿದೆ. ಇಲ್ಲಿನ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಹಿಂಡಿನಿಂದ ದಾರಿ ತಪ್ಪಿ ಬಂದಿದ್ದ ಎರಡು ಆನೆಗಳು ದಾಳಿ ಮಾಡಿವೆ.
ವರದಿಗಳ ಪ್ರಕಾರ, ಆನೆಗಳು ಆರಂಭದಲ್ಲಿ ಚಿಟ್ಟೆಚೆರ್ಲಾ ಬಳಿಯ ಅಪ್ಪಿನಾಯಿನಿ ಟ್ಯಾಂಕ್ ಬಳಿ ಬಂದಿವೆ. ಆನೆಗಳನ್ನು ನೋಡಿದ ಸ್ಥಳೀಯ ರೈತರು ಅವುಗಳನ್ನು ಮತ್ತೆ ಕಾಡಿಗೆ ಓಡಿಸಿದ್ದಾರೆ. ಆದರೆ, ರಾತ್ರಿ ವೇಳೆ ಮತ್ತೆ ಆನೆಗಳು ಊರಿನ ಕಡೆ ಬಂದಿವೆ. ದುರದೃಷ್ಟವಶಾತ್ ಎಂಬಂತೆ ಸಿದ್ದಯ್ಯ ಅವರು ಜಮೀನಿನಿಂದ ಮನೆಗೆ ತೆರಳುತ್ತಿದ್ದಾಗ, ಆನೆಗಳು ಎದುರಾಗಿವೆ.
ರೈತ ಸಿದ್ಧಯ್ಯ ಅವರ ಮೇಲೆ ಎರಡೂ ಆನೆಗಳು ದಾಳಿ ಮಾಡಿ ತುಳಿದು ಕೊಂದಿವೆ. ಅರಣ್ಯ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ. ಆನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಪ್ರಕ್ರಿಯೆ ನಡೆಸಲಾಗಿದೆ. ಸಿದ್ಧಯ್ಯ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಬಂದ ಕಾಡಾನೆ! ಗಜರಾಜನ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು