ತಿರುನಲ್ವೇಲಿ (ತಮಿಳುನಾಡು): ಇಲ್ಲೊಬ್ಬ ಮಹಿಳೆ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ಪತಿಯ ಅನಾರೋಗ್ಯದ ಹಿನ್ನೆಲೆ ಮಕ್ಕಳನ್ನು ಸಾಕಲು ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ. ತಿರುನಲ್ವೇಲಿ ಜಿಲ್ಲೆಯ ಬ್ರಹ್ಮದೇಶಂನ ಇಸಕ್ಕಿಯಮ್ಮಳ್ ಕಷ್ಟಪಡುತ್ತಿರುವ ಮಹಿಳೆ.
"ತನಗೆ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು ಜನಿಸಿದ್ದು, ಮಕ್ಕಳ ಜನನದ ಬಳಿಕ ಪತಿ ಪಳನಿನಾಥನ್ಗೆ ಅಪಘಾತವಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ. ಹಾಗಾಗಿ ತನಗೆ ಮಕ್ಕಳ ಪೋಷಣೆ ಕಷ್ಟಕರವಾಗುತ್ತಿದೆ. ಈಗ ಮಕ್ಕಳು ಐದು ವರ್ಷದವರಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಅವರನ್ನು ಶಾಲೆಗೆ ಸೇರಿಸಬೇಕು. ಶಾಲೆಗೆ ಕಳುಹಿಸುವಷ್ಟು ನಾವು ಸಬಲರಿಲ್ಲ. ಹಾಗಾಗಿ ತಮಗೆ ಆರ್ಥಿಕ ಸಹಾಯ ಮಾಡುವಂತೆ ಇಲ್ಲವೇ ತನಗೊಂದು ಉದ್ಯೋಗ ನೀಡುವಂತೆ" ಇಸಕ್ಕಿಯಮ್ಮಳ್ ರಾಜ್ಯ ಸರ್ಕಾರದ ಮೊರೆ ಹೋಗಿದ್ದಾಳೆ. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ತನಗೊಂದು ಉದ್ಯೋಗ ನೀಡುವಂತೆ ಕೋರಿ ತಿರುನಲ್ವೇಲಿ ಜಿಲ್ಲಾಧಿಕಾರಿ ಸುಕುಮಾರ್ ಅವರಿಗೂ ಇಸಕ್ಕಿಯಮ್ಮಳ್ ಮನವಿ ಸಲ್ಲಿಸಿದ್ದಾಳೆ.
ಕುಟುಂಬದ ಹಿನ್ನೆಲೆ: 2019ರಲ್ಲಿ ವಿವಾಹವಾದ ಇಸಕ್ಕಿಯಮ್ಮಳ್ ಮತ್ತು ಪಳನಿನಾಥನ್ ಕೂಲಿ - ನಾಲಿ ಮಾಡುತ್ತಲೇ ಕುಟುಂಬ ಸಾಗಿಸುತ್ತಿದ್ದರು. ಈ ನಡುವೆ ಗರ್ಭಿಣಿಯಾದ ಇಸಕ್ಕಿಯಮ್ಮಳ್ 2020ರಂದು, ಪಳಯಂಕೊಟ್ಟೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ಅದರಲ್ಲಿ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಈ ನಾಲ್ಕು ಮಕ್ಕಳ ಜನನ ಬಹಳ ಅಪರೂಪದ್ದಾಗಿತ್ತು. ಆರಂಭದಲ್ಲಿ ದಂಪತಿಯ ಮುಖದಲ್ಲಿ ಖುಷಿ ಮೂಡಿದ್ದರೂ, ಮನೆಯ ಆರ್ಥಿಕ ಪರಿಸ್ಥಿತಿಯಿಂದ ಬಳಿಕ ಮಾಯೆ ಆಗಿತ್ತು.
ರಾಜ್ಯ ಸರ್ಕಾರದ ಮೊರೆ: "ಮಕ್ಕಳ ಜನನದ ಬಳಿಕ ತಾನು ತನ್ನ ತಾಯಿಯ ಮನೆಗೆ ಹೋದೆ. ಅಲ್ಲಿಯೇ ಮಕ್ಕಳ ಪೋಷಣೆ ನಡೆಯುತ್ತಿತ್ತು. ಆದರೆ, ಒಂದು ತಿಂಗಳು ಕಳೆಯುತ್ತಿದ್ದಂತೆ ಪತಿ ಪಳನಿನಾಥನ್ಗೆ ಅಪಘಾತ ಸಂಭವಿಸಿ ಪ್ರಜ್ಞೆ ಕಳೆದುಕೊಳ್ಳುವಂತಾಯಿತು. ಆತನ ಜೀವನ ಕಷ್ಟವೆಂದು ತಿಳಿದು ಕೆಲವು ದಿನ ಗಂಡನ ಮನೆಯಲ್ಲಿ ಇರಬೇಕಾಯಿತು. ಆದರೆ, ಮಕ್ಕಳನ್ನು ನೋಡಿಕೊಳ್ಳುವುದು ಕ್ರಮೇಣ ಕಷ್ಟಕರ ಅನ್ನಿಸಿತು. ಹಾಗಾಗಿ ತನ್ನ ತಾಯಿ ತನ್ನನ್ನು ತವರು ಮನೆಗೆ ಕರೆದೊಯ್ದಳು. ಅಂದಿನಿಂದ ಈವರೆಗೂ ನಾನು ತವರು ಮನೆಯಲ್ಲೇ ಇರುವೆ. ಕಳೆದ ನಾಲ್ಕು ವರ್ಷಗಳಿಂದ ಪತಿ ಪಳನಿನಾಥನ್ ಕಡೆಯಿಂದ ಯಾರೂ ಮಕ್ಕಳನ್ನು ನೋಡಲು ಬಂದಿಲ್ಲ. ನಮ್ಮ ಕಷ್ಟ-ನಷ್ಟಕ್ಕೂ ಆಗುತ್ತಿಲ್ಲ. ನಾಲ್ಕೂ ಮಕ್ಕಳು ಬಹಳ ಕಷ್ಟದಲ್ಲಿ ಬೆಳೆಸುತ್ತಿದ್ದಾರೆ. ಈಗ ಐದು ಮುಗಿದಿದ್ದು, ಮುಂಬರುವ ವರ್ಷದಿಂದ ಶಾಲೆಗೆ ಸೇರಿಸಬೇಕು. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯ. ಹಾಗಾಗಿ ತಮಗೆ ಯಾವುದರೊಂದು ಸಹಾಯ ಮಾಡಬೇಕು" ಎಂದು ಇಸಕ್ಕಿಯಮ್ಮಳ್ ರಾಜ್ಯ ಸರ್ಕಾರದ ಮೊರೆ ಹೋಗಿದ್ದಾಳೆ.
ದಿನಗೂಲಿ ಕೆಲಸ ಮಾಡಿ ಕುಟುಂಬ ನೋಡಿಕೊಳ್ಳುತ್ತಿರುವ ಇಸಕ್ಕಿಯಮ್ಮಳ್ ತಂದೆ: ಪಥಮದಮಾಡದ ಅಗಸ್ತ್ಯಾರ್ಲ್ಲಿರುವ ಇಸಕ್ಕಿಯಮ್ಮಳ್ ಅವರ ತಾಯಿ ರಾಣಿ ಅವರ ಮನೆಗೆ ಈಟಿವಿ ಭಾರತ ಭೇಟಿ ನೀಡಿದಾಗ ಕುಟುಂಬ ಮತ್ತಷ್ಟು ಕಷ್ಟಗಳನ್ನು ತೋಡಿಕೊಂಡಿತು. "ಸದ್ಯ ತಾವು ಬಾಡಿಗೆ ಮನೆಯಲ್ಲಿದ್ದು, ತಿಂಗಳಿಗೆ 2,000 ರೂ. ನೀಡುತ್ತೇವೆ. ತನ್ನ ತಂದೆ ದಿನಗೂಲಿ ಕೆಲಸ ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ. ತನ್ನ ತಾಯಿ ರಾಣಿ, ಬೀಡಿ ನೂಲುವಿಕೆಯಿಂದ ಬರುವ ಹಣದಿಂದ ತನ್ನ ಮಗಳು ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಸದ್ಯ ನಾಲ್ಕೂ ಮಕ್ಕಳು ಹತ್ತಿರದ ಅಂಗನವಾಡಿಯಲ್ಲಿ ಓದುತ್ತಿವೆ. ತಾನು ತನ್ನ ತಾಯಿಗೆ ಪಾತ್ರೆ ತೊಳೆಯುವ ಮತ್ತು ಮನೆ ಗುಡಿಸುವ ಮೂಲಕ ಸಹಾಯ ಮಾಡುತ್ತಾ ದಿನ ದೂಡುತ್ತಿರುವೆ" ಎಂದು ಇಸಕ್ಕಿಯಮ್ಮಳ್ ತನ್ನ ಕಷ್ಟಗಳನ್ನು ತೋಡಿಕೊಂಡಿತು.
ಮಕ್ಕಳನ್ನು ಬೆಳೆಸುವುದು ತುಂಬಾ ಕಷ್ಟ: "ಈ ದುಬಾರಿ ಯುಗದಲ್ಲಿ ಮಗುವನ್ನು ಹೆರುವುದು ಮತ್ತು ಬೆಳೆಸುವುದು ತುಂಬಾ ಕಷ್ಟ. ನನಗೆ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಾಗಿವುದರಿಂದ ನಾನು ತುಂಬಾ ಕಷ್ಟಗಳನ್ನು ಎದುರಿಸುತ್ತಿದ್ದೇನೆ. ನನಗೆ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿದ್ದಾಗ, ಹಳ್ಳಿಯ ಎಲ್ಲ ಜನರು ಆಶ್ಚರ್ಯಚಕಿತರಾದರು. ಈಗ ನಾವು ಸರ್ಕಾರ ನೀಡುವ ಪಡಿತರ ಅಕ್ಕಿಯಲ್ಲಿ ಬದುಕುತ್ತಿದ್ದೇವೆ. ನಾನು ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸುತ್ತೇನೆ. ಆದ್ದರಿಂದ, ಸರ್ಕಾರ ನನಗೆ ಅಂಗನವಾಡಿ ಕಾರ್ಯಕರ್ತೆಯ ಕೆಲಸವನ್ನು ನೀಡಿದರೆ, ನಾನು ಅದರ ಮೂಲಕ ನನ್ನ ಜೀವನವನ್ನು ನಡೆಸುವೆ. ಅಲ್ಲದೇ ನನ್ನ ಮಕ್ಕಳಿಗೆ ಉತ್ತಮ ಭವಿಷ್ಯ ಕೂಡ ಕಟ್ಟಿಕೊಡುವೆ. ಹಾಗಾಗಿ ಸರ್ಕಾರ ಯಾವುದಾದರೊಂದು ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ" ಎನ್ನುತ್ತಾಳೆ ಇಸಕ್ಕಿಯಮ್ಮಳ್.
"ಇಜಕಿಯಮ್ಮಾಳ್ ತಮ್ಮ ನಾಲ್ಕೂ ಮಕ್ಕಳನ್ನು ಬಹಳ ಕಷ್ಟದಿಂದ ಬೆಳೆಸುತ್ತಿದ್ದಾರೆ. ಅವರ ಪತಿ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಆದ್ದರಿಂದ ಸರ್ಕಾರ ಅವರಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ" ಎನ್ನುತ್ತಾರೆ ನೆರೆಮನೆಯವರಾದ ಸುಮತಿ.
ಇಜಕಿಯಮ್ಮಾಳ್ ಅವರ ತಾಯಿ ರಾಣಿ ಮಾತನಾಡಿ, "ನನ್ನ ಅಳಿಯ ಅಪಘಾತಕ್ಕೀಡಾದ ಕಾರಣ, ನಾನು ನನ್ನ ಮೊಮ್ಮಕ್ಕಳನ್ನು ನನ್ನೊಂದಿಗೆ ಬೆಳೆಸುತ್ತಿದ್ದೇನೆ. ನಾವು ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ನಾಲ್ಕು ಮಕ್ಕಳನ್ನು ಸಾಕುವುದು ತುಂಬಾ ಕಷ್ಟ ಅಂತ ಅನ್ನಿಸುತ್ತದೆ. ಆದ್ದರಿಂದ ಸರ್ಕಾರ ನನ್ನ ಮಗಳಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ" ಎಂದು ಹೇಳಿದರು.