ETV Bharat / bharat

ಒಂದೂವರೆ ವರ್ಷಗಳಲ್ಲಿ ಜಮ್ಮು & ಕಾಶ್ಮೀರದ ಮೂಲಕ ಭಾರತದೊಳಗೆ ನುಸುಳಿದ ಉಗ್ರರ ಸಂಖ್ಯೆ 51 - TERRORISTS INFILTRATED INTO INDIA

ಬಾರಾಮುಲ್ಲಾದಲ್ಲಿ ಬುಧವಾರ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದವರ ಬಗ್ಗೆ ತಿಳಿಸಿರುವ ಭದ್ರತಾ ಸಂಸ್ಥೆ ಕಳೆದ ಒಂದೂವರೆ ವರ್ಷಗಳಲ್ಲಿ 51 ವಿದೇಶಿ ಭಯೋತ್ಪಾದಕರು ಕಾಶ್ಮೀರದ ಮೂಲಕ ಭಾರತಕ್ಕೆ ನುಸುಳಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

PAHALGAM TERROR ATTACK  JAMMU AND KASHMIR  51 FOREIGN TERRORISTS  SECURITY AGENCIES
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : April 24, 2025 at 8:43 PM IST

2 Min Read

ನವದೆಹಲಿ: ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಘಟನೆಯ ಒಂದು ದಿನದ ನಂತರ, ಭದ್ರತಾ ಸಂಸ್ಥೆಗಳು ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರೂ ಸಹ, ಕಳೆದ ಒಂದೂವರೆ ವರ್ಷಗಳಲ್ಲಿ 51 ವಿದೇಶಿ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ನುಸುಳಿದ್ದಾರೆ ಎಂದು ಭದ್ರತಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್​​ 2023 ರವರೆಗೆ ವಿದೇಶಿ ಭಯೋತ್ಪಾದಕರ ಸಂಖ್ಯೆ 71 ಆಗಿದ್ದು, ಈ ವರ್ಷ ಅದು 122ಕ್ಕೆ ಏರಿದೆ ಎಂದು ಅಧಿಕಾರಿಗಳು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಕನಿಷ್ಠ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಭೀಕರ ದಾಳಿಯ ನಂತರ ಬಹಿರಂಗವಾಗಿದೆ.

ಈ ಹಿಂದೆ 122 ಭಯೋತ್ಪಾದಕರು ಗಡಿಯಾಚೆಯಿಂದ ಭಾರತದೊಳಗೆ ನುಸುಳಿದ್ದಾರೆ ಮತ್ತು ಅವರು ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿಸ್ತರಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತಾ ಏಜೆನ್ಸಿಗಳು ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಪ್ರಕಾರ, ಅನೇಕ ಭಯೋತ್ಪಾದಕರು ಸಿರಿಯಾದ ಐಸಿಸ್ ಶಿಬಿರಗಳಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದಾರೆ. ಬಂಧಿತ ಕೆಲವು ಭಯೋತ್ಪಾದಕರ ವಿಚಾರಣೆಯ ನಂತರ ಭದ್ರತಾ ಸಂಸ್ಥೆಗಳಿಗೆ ಈ ಮಾಹಿತಿ ಒದಗಿಸಲಾಗಿದೆ.

ಬಾರಾಮುಲ್ಲಾದ ಉರಿ ನಾಲಾ ಸಾಮಾನ್ಯ ಪ್ರದೇಶದ ಸರ್ಜೀವನ್ ಮೂಲಕ ನುಸುಳಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಭಯೋತ್ಪಾದಕರನ್ನು ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹೊಡೆದುರುಳಿಸಿದೆ.

ಘಟನಾ ಸ್ಥಳದಿಂದ ಎರಡು AK ಸರಣಿ ರೈಫಲ್‌ಗಳು, 5 ಮ್ಯಾಗಜೀನ್‌ಗಳು, 1 ಪಿಸ್ತೂಲ್, 10 ಕೆಜಿ ಆರ್‌ಸಿಐಡಿ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಹಲ್ಗಾಮ್​ ದಾಳಿಯನ್ನು ನಡೆಸುವಲ್ಲಿ ವಿದೇಶಿ ಭಯೋತ್ಪಾದಕರಿಗೆ, ಸ್ಥಳೀಯ ಭಯೋತ್ಪಾದಕರು ಮತ್ತು ವಿವಿಧ ಭಯೋತ್ಪಾದಕ ಸಂಘಟನೆಗಳ ನಾಯಕರು ಬೆಂಬಲ ನೀಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ದಕ್ಷಿಣದ ರಾಜ್ಯಗಳತ್ತಲೂ ಉಗ್ರರ ಚಿತ್ತ: ಇನ್ನು ಉಗ್ರರು ಭಾರತಕ್ಕೆ ಪ್ರವೇಶಿಸಿದ ನಂತರ ತಮ್ಮ ನೆಲೆಗಳನ್ನು ದೇಶದ ಇತರ ಭಾಗಗಳಿಗೆ, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ಸ್ಥಳಾಂತರಿಸಿದ್ದಾರೆ ಎಂಬ ಮಾಹಿತಿಯು ಭದ್ರತಾ ಏಜೆನ್ಸಿಗಳನ್ನು ಚಿಂತೆಗೀಡು ಮಾಡಿದೆ. "ಐಸಿಸ್ ಮಾಡ್ಯೂಲ್‌ಗಳನ್ನು ಉತ್ತೇಜಿಸುವುದು ಮತ್ತು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವುದು ಅವರ ಉದ್ದೇಶವಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಿ ಭಾರತ ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮ ಉಲ್ಲೇಖಿಸಿದ ಮೇಜರ್ ಜನರಲ್ ಸಿನ್ಹಾ ಅವರು ಪಾಕಿಸ್ತಾನ ಮುಂಬರುವ ದಿನಗಳಲ್ಲಿ ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.

"ಯೇ ತು ಟ್ರೈಲರ್ ಹೇ, ಚಿತ್ರ ಅಭಿ ಬಾಕಿ ಹೈ (ಇದು ಕೇವಲ ಟ್ರೈಲರ್, ನಿಜವಾದ ಚಿತ್ರ ಇನ್ನೂ ಬರಬೇಕಿದೆ)" ಎಂದು ಸೇನಾ ಯೋಧ ಹೇಳಿದ್ದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಸಂಭವನೀಯ ಸೇನಾ ದಾಳಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಪಹಲ್ಗಾಮ್ ಪೈಶಾಚಿಕ ಕೃತ್ಯದ ಹಿಂದೆ ಇಬ್ಬರು ಪಾಕಿಸ್ತಾನಿ, ಓರ್ವ ಕಾಶ್ಮೀರಿ ಭಾಗಿ ಶಂಕೆ: ಈ ಉಗ್ರರ ಮಾಹಿತಿ ನೀಡಿದವರಿಗೆ ₹20 ಲಕ್ಷ ಬಹುಮಾನ

ಇದನ್ನೂ ಓದಿ: ಪಂಜಾಬ್​ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನದ ರೇಂಜರ್ಸ್‌

ನವದೆಹಲಿ: ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಘಟನೆಯ ಒಂದು ದಿನದ ನಂತರ, ಭದ್ರತಾ ಸಂಸ್ಥೆಗಳು ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರೂ ಸಹ, ಕಳೆದ ಒಂದೂವರೆ ವರ್ಷಗಳಲ್ಲಿ 51 ವಿದೇಶಿ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ನುಸುಳಿದ್ದಾರೆ ಎಂದು ಭದ್ರತಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್​​ 2023 ರವರೆಗೆ ವಿದೇಶಿ ಭಯೋತ್ಪಾದಕರ ಸಂಖ್ಯೆ 71 ಆಗಿದ್ದು, ಈ ವರ್ಷ ಅದು 122ಕ್ಕೆ ಏರಿದೆ ಎಂದು ಅಧಿಕಾರಿಗಳು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಕನಿಷ್ಠ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಭೀಕರ ದಾಳಿಯ ನಂತರ ಬಹಿರಂಗವಾಗಿದೆ.

ಈ ಹಿಂದೆ 122 ಭಯೋತ್ಪಾದಕರು ಗಡಿಯಾಚೆಯಿಂದ ಭಾರತದೊಳಗೆ ನುಸುಳಿದ್ದಾರೆ ಮತ್ತು ಅವರು ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿಸ್ತರಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತಾ ಏಜೆನ್ಸಿಗಳು ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಪ್ರಕಾರ, ಅನೇಕ ಭಯೋತ್ಪಾದಕರು ಸಿರಿಯಾದ ಐಸಿಸ್ ಶಿಬಿರಗಳಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದಾರೆ. ಬಂಧಿತ ಕೆಲವು ಭಯೋತ್ಪಾದಕರ ವಿಚಾರಣೆಯ ನಂತರ ಭದ್ರತಾ ಸಂಸ್ಥೆಗಳಿಗೆ ಈ ಮಾಹಿತಿ ಒದಗಿಸಲಾಗಿದೆ.

ಬಾರಾಮುಲ್ಲಾದ ಉರಿ ನಾಲಾ ಸಾಮಾನ್ಯ ಪ್ರದೇಶದ ಸರ್ಜೀವನ್ ಮೂಲಕ ನುಸುಳಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಭಯೋತ್ಪಾದಕರನ್ನು ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹೊಡೆದುರುಳಿಸಿದೆ.

ಘಟನಾ ಸ್ಥಳದಿಂದ ಎರಡು AK ಸರಣಿ ರೈಫಲ್‌ಗಳು, 5 ಮ್ಯಾಗಜೀನ್‌ಗಳು, 1 ಪಿಸ್ತೂಲ್, 10 ಕೆಜಿ ಆರ್‌ಸಿಐಡಿ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಹಲ್ಗಾಮ್​ ದಾಳಿಯನ್ನು ನಡೆಸುವಲ್ಲಿ ವಿದೇಶಿ ಭಯೋತ್ಪಾದಕರಿಗೆ, ಸ್ಥಳೀಯ ಭಯೋತ್ಪಾದಕರು ಮತ್ತು ವಿವಿಧ ಭಯೋತ್ಪಾದಕ ಸಂಘಟನೆಗಳ ನಾಯಕರು ಬೆಂಬಲ ನೀಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ದಕ್ಷಿಣದ ರಾಜ್ಯಗಳತ್ತಲೂ ಉಗ್ರರ ಚಿತ್ತ: ಇನ್ನು ಉಗ್ರರು ಭಾರತಕ್ಕೆ ಪ್ರವೇಶಿಸಿದ ನಂತರ ತಮ್ಮ ನೆಲೆಗಳನ್ನು ದೇಶದ ಇತರ ಭಾಗಗಳಿಗೆ, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ಸ್ಥಳಾಂತರಿಸಿದ್ದಾರೆ ಎಂಬ ಮಾಹಿತಿಯು ಭದ್ರತಾ ಏಜೆನ್ಸಿಗಳನ್ನು ಚಿಂತೆಗೀಡು ಮಾಡಿದೆ. "ಐಸಿಸ್ ಮಾಡ್ಯೂಲ್‌ಗಳನ್ನು ಉತ್ತೇಜಿಸುವುದು ಮತ್ತು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವುದು ಅವರ ಉದ್ದೇಶವಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಿ ಭಾರತ ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮ ಉಲ್ಲೇಖಿಸಿದ ಮೇಜರ್ ಜನರಲ್ ಸಿನ್ಹಾ ಅವರು ಪಾಕಿಸ್ತಾನ ಮುಂಬರುವ ದಿನಗಳಲ್ಲಿ ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.

"ಯೇ ತು ಟ್ರೈಲರ್ ಹೇ, ಚಿತ್ರ ಅಭಿ ಬಾಕಿ ಹೈ (ಇದು ಕೇವಲ ಟ್ರೈಲರ್, ನಿಜವಾದ ಚಿತ್ರ ಇನ್ನೂ ಬರಬೇಕಿದೆ)" ಎಂದು ಸೇನಾ ಯೋಧ ಹೇಳಿದ್ದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಸಂಭವನೀಯ ಸೇನಾ ದಾಳಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಪಹಲ್ಗಾಮ್ ಪೈಶಾಚಿಕ ಕೃತ್ಯದ ಹಿಂದೆ ಇಬ್ಬರು ಪಾಕಿಸ್ತಾನಿ, ಓರ್ವ ಕಾಶ್ಮೀರಿ ಭಾಗಿ ಶಂಕೆ: ಈ ಉಗ್ರರ ಮಾಹಿತಿ ನೀಡಿದವರಿಗೆ ₹20 ಲಕ್ಷ ಬಹುಮಾನ

ಇದನ್ನೂ ಓದಿ: ಪಂಜಾಬ್​ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನದ ರೇಂಜರ್ಸ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.