ಗಣಪತಿ ನಿಮಜ್ಜನ ವೇಳೆ ಚಾಕು ಇರಿತ ವದಂತಿ: ರಾಣೆಬೆನ್ನೂರಿನಲ್ಲಿ ಆತಂಕ ಸೃಷ್ಟಿ

By

Published : Sep 21, 2022, 10:40 AM IST

thumbnail

ಹಾವೇರಿ: ಗಣಪತಿ ನಿಮಜ್ಜನ ವೇಳೆ ಚಾಕು ಇರಿತದ ವದಂತಿ ಕೇಳಿಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ತಡರಾತ್ರಿ ನಡೆದಿದೆ. ದರ್ಗಾ ಸರ್ಕಲ್‌ನಲ್ಲಿ ಜಮಾಯಿಸಿದ ನೂರಾರು ಜನರನ್ನು ಪೊಲೀಸರು ಚದುರಿಸಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಸ್ಥಳಕ್ಕೆ ಎಸ್​ಪಿ ಹನುಮಂತರಾಯ, ಹೆಚ್ಚುವರಿ ಎಸ್​ಪಿ ವಿಜಯಕುಮಾರ ಹಾಗೂ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಯಾವುದೇ ಚಾಕು ಇರಿತ ಆಗಿಲ್ಲ ಎಸ್​ಪಿ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.