ಕಂಠಪೂರ್ತಿ ಕುಡಿದು ಶಾಲೆಗೆ ಬಂದ ಪ್ರಾಂಶುಪಾಲ: ಗ್ರಾಮಸ್ಥರ ಛೀಮಾರಿ

By

Published : Aug 12, 2022, 6:42 PM IST

thumbnail

ದುಮ್ಕಾ(ಜಾರ್ಖಂಡ್​): ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕೆಲಸ ಮಹತ್ವದ್ದು. ಆದರೆ, ಕೆಲವು ಶಿಕ್ಷಕರ ದುಶ್ಚಟಗಳು ಪವಿತ್ರ ವೃತ್ತಿಗೆ ಕಳಂಕ ತರುತ್ತಿವೆ. ಇಂತಹದ್ದೇ ಘಟನೆ ಜಾರ್ಖಂಡ್​ನಲ್ಲಿ ನಡೆಯಿತು. ಇಲ್ಲೊಬ್ಬ ಪ್ರಾಂಶುಪಾಲ ಕಂಠಪೂರ್ತಿ ಮದ್ಯ ಸೇವಿಸಿ ಶಾಲೆಗೆ ಆಗಮಿಸಿದ್ದಾನೆ. ಸರಿಯಾಗಿ ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಆತ ಶಾಲಾವರಣದಲ್ಲಿಯೇ ಬಿದ್ದು ಹೊರಳಾಡಿದ್ದಾನೆ. ದುಮ್ಕಾ ಜಿಲ್ಲೆಯ ಶಿಕಾರಿಪಾಡಾ ಬ್ಲಾಕ್​ನ ದರ್ಬಾರ್​ಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲ ಆಂಡ್ರಿಯಾಸ್ ಮರಾಂಡಿ ವರ್ತನೆಗೆ ಗ್ರಾಮಸ್ಥರು ಕೋಪಗೊಂಡು ಛೀಮಾರಿ ಹಾಕಿದ್ದಾರೆ. ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.